Tuesday, 26 March 2013

KAS Interview 2013 How to Face it - Article in Udayavani Josh 26 March 2013














Udayavani
  • KAS ಐಎಎಸ್‌ ಸ್ಪೆಷಲ್‌ ಆಫ‌ರ್‌: ಕಂಕಣ ಭಾಗ್ಯ ಸ್ಕೀಂ, ಆಶೀರ್ವಾದ ಸ್ಕೀಂ

  • ಕರ್ನಾಟಕ ಲೋಕಸೇವಾ ಆಯೋಗವು ಕಳೆದ ಡಿಸೆಂಬರ್‌-ಜನವರಿಯಲ್ಲಿ ನಡೆಸಿದ ಗೆಝೆಟೆಡ್‌ ಪೊ›ಬೆಷನರ್‌ಗಳ ಮುಖ್ಯ ಪರೀಕ್ಷೆಯಲ್ಲಿ ಅಭ

    • Udayavani | Mar 25, 2013
      ಕರ್ನಾಟಕ ಲೋಕಸೇವಾ ಆಯೋಗವು ಕಳೆದ ಡಿಸೆಂಬರ್‌-ಜನವರಿಯಲ್ಲಿ ನಡೆಸಿದ ಗೆಝೆಟೆಡ್‌ ಪೊ›ಬೆಷನರ್‌ಗಳ ಮುಖ್ಯ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸಿದ ಅಂಕಗಳನ್ನು ಕಳೆದವಾರ ಪ್ರಕಟಿಸಿದೆ. ಒಟ್ಟು 362 ಹು¨ªೆಗಳಿಗೆ ನಡೆಸಲಾದ ಮುಖ್ಯ ಪರೀಕ್ಷೆಯಲ್ಲಿ ಯಶಸ್ವಿಯಾದ 5574 ಅಭ್ಯರ್ಥಿಗಳ ಅಂಕಗಳನ್ನು ವಿಷಯವಾರು ಕೋಡ್‌ ಸಹಿತ ಪ್ರಕಟಿಸಲಾಗಿದೆ. ಅತ್ಯಂತ ಹೆಚ್ಚು ಅಂಕ 1109 ಇದ್ದರೆ, ಅತಿ ಕಡಿಮೆ ಅಂಕ 152 ಇದೆ. 1000ಕ್ಕೂ ಹೆಚ್ಚು ಅಂಕಗಳಿಸಿದವರು 108 ಅಭ್ಯರ್ಥಿಗಳಿದ್ದರೆ, 950ಕ್ಕೂ ಹೆಚ್ಚು ಗಳಿಸಿದವರು 293. 900 ಕ್ಕೂ ಹೆಚ್ಚು ಗಳಿಸಿದವರು 600 ಮತ್ತು 850ಕ್ಕೂ ಹೆಚ್ಚು ಅಂಕಗಳಿಸಿದವರು 1103 ಜನ ಇ¨ªಾರೆ. ಕನ್ನಡ ಮತ್ತು ಇಂಗ್ಲಿಷ್‌ ಕಡ್ಡಾಯ ಅರ್ಹತಾ ಪರೀಕ್ಷೆಯಲ್ಲಿ 309 ಜನ ಫೇಲಾಗಿ¨ªಾರೆ! ಕೆಲವರು ಕನ್ನಡದಲ್ಲಿ ಕನಿಷ್ಠ ಅಂಕ ಗಳಿಸಿದ್ದರೆ ಒಂದಿಬ್ಬರು ಸೊನ್ನೆ ಗಳಿಸಿ¨ªಾರೆ! ಕನ್ನಡದಲ್ಲಿ 118ಕ್ಕೂ ಹೆಚ್ಚು ಅಂಕಗಳಿಸಿ ಇಂಗ್ಲಿಷ್‌ನಲ್ಲಿ ಕನಿಷ್ಠ ಅಂಕಗಳಿಸಲಾರದೇ ಹೋಗಿರುವವರ ಜೊತೆ ಇಂಗ್ಲಿಷ್‌ನಲ್ಲಿ ಶೂನ್ಯ ಸಂಪಾದನೆ ಮಾಡಿದವರೂ ಎರಡಂಕಿಯಷ್ಟಿ¨ªಾರೆ! 54 ಅಭ್ಯರ್ಥಿಗಳ ಫ‌ಲಿತಾಂಶವನ್ನು ವಿವಿಧ ಕಾರಣಗಳಿಗಾಗಿ ತಡೆಹಿಡಿಯಲಾಗಿದೆ. ಅಂಕಗಳ ಮರು ಎಣಿಕೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನ ಮಾರ್ಚ್‌ 27. ಸದ್ಯಕ್ಕೆ ರಾಜ್ಯದಲ್ಲಿ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಅಂತಿಮ ಫ‌ಲಿತಾಂಶ ಪಟ್ಟಿಯ ಪ್ರಕಟಣೆ ಮತ್ತು ಸಂದರ್ಶನ ನಡೆಸಲು ಚುನಾವಣಾ ನೀತಿ ಸಂಹಿತೆಯ ಅಡಿಯಲ್ಲಿ ಅವಕಾಶವಿದೆಯೇ ಎಂದು ಪರಿಶೀಲಿಸಲಾಗುತ್ತಿದೆ. ಸಧ್ಯ ಜಾರಿಯಲ್ಲಿರುವ ಮೀಸಲಾತಿ ಪ್ರಮಾಣ ಮತ್ತು ಹು¨ªೆಗಳ ಸಂಖ್ಯೆಗೆ ಅನುಗುಣವಾಗಿ 1:3 ಅನುಪಾತದಲ್ಲಿ ಸಂದರ್ಶನಕ್ಕೆ ಕರೆಪತ್ರ ಕಳಿಸಲಾಗುತ್ತದೆ. 

      ಮಾತೃಭಾಷಾ ಪ್ರೇಮಕ್ಕೆ ಹೆಚ್ಚು ಅಂಕ! 
      ಮುಖ್ಯ ಪರೀಕ್ಷೆಯ ಐಚ್ಛಿಕ ವಿಷಯ ಆಯ್ಕೆಯಲ್ಲಿ ಈ ಬಾರಿ ಉರ್ದು ಭಾಷೆಯ ಸಾಹಿತ್ಯ ಆರಿಸಿಕೊಂಡಿದ್ದ ಸುಮಾರು 9 ಅಭ್ಯರ್ಥಿಗಳಲ್ಲಿ ಒಬ್ಬರು ಅತ್ಯಂತ ಹೆಚ್ಚು ಅಂದರೆ 441 ಗಳಿಸಿದ್ದರೆ ಮೂವರು 400ಕ್ಕೂ ಹೆಚ್ಚು ಅಂಕಗಳಿಸಿ¨ªಾರೆ! ಕನ್ನಡ ಸಾಹಿತ್ಯ ತೆಗೆದುಕೊಂಡವರಲ್ಲಿ ಹೆಚ್ಚು ಗಳಿಸಿದವರು 432.5 ತೆಗೆಯಲಷ್ಟೇ ಸಮರ್ಥರಾಗಿ¨ªಾರೆ. ಭಾಷಾ ಸಾಹಿತ್ಯ ಪತ್ರಿಕೆಯ ಆಯ್ಕೆಯ ಬಗ್ಗೆ ಸಂಸತ್ತಿನಲ್ಲಿ ಕೋಲಾಹಲ ನಡೆಯುತ್ತಿರುವ ಈ ದಿನಗಳಲ್ಲಿ ಮಾತೃಭಾಷಾ ಪ್ರೇಮಿಗಳು ಯಾವರೀತಿ ಅನುಕೂಲ ಪಡೆಯುತ್ತಾರೆ ಎಂಬುದಕ್ಕೆ ಇದಕ್ಕಿಂತಲೂ ಒಳ್ಳೆಯ ಉದಾಹರಣೆ ಇನ್ನೆಲ್ಲಿ ಸಿಗಬಹುದು ಹೇಳಿ? 
      ಉಳಿದ ವಿಷಯಗಳಲ್ಲಿ ಭೂಗೋಳ 427.5, ಮನಃಶಾಸ್ತ್ರ 413.5, ಸಮಾಜಶಾಸ್ತ್ರ 405 ಅಂಕಗಳೇ ಅತಿ ಹೆಚ್ಚು ಎಂಬುದು ಸದ್ಯಕ್ಕೆ ತಿಳಿದು ಬಂದಿರುವ ಅಂಶ. ಅಂದಹಾಗೆ ಈ ಎÇÉಾ ವಿಷಯಗಳೂ ಎಲ್ಲಿ ಬಹಿರಂಗಗೊಳ್ಳುತ್ತಿವೆ ಎಂಬ ಕುತೂಹಲ ಇದೆ ಅಲ್ಲವೇ? ಕರ್ನಾಟಕ ಲೋಕ ಸೇವಾ ಆಯೋಗದ ಪರೀûಾರ್ಥಿಗಳು ತಮ್ಮದೇ ಒಂದು ಗ್ರೂಪ್‌ ಅನ್ನು ಫೇಸ್‌ಬುಕ್‌ನಲ್ಲಿ ರಚಿಸಿಕೊಂಡಿದ್ದು ಅದರಲ್ಲಿ ಈ ಅಂಶಗಳನ್ನು ಮೊಗೆದು ತೆಗೆದು ಅಂಟಿಸುತ್ತಿ¨ªಾರೆ. ಇಂತಹದೇ ಇನ್ನೊಂದು ಗುಂಪು ಬ್ಲಾಗ್‌ನ ಕೆಎಎಸ್‌ ಪ್ರಶ್ನೆ ಪತ್ರಿಕೆ- ಮಾದರಿ ಉತ್ತರಗಳ ಕೊಂಡಿಯಲ್ಲಿ ಸೇರಿಕೊಂಡಿದ್ದು ಅಲ್ಲಿಯೂ ಪರಸ್ಪರ ಚರ್ಚೆ ನಡೆಯುತ್ತಿದೆ. ಎಲ್ಲಿಂದಲೋ ಹಾರಿ ಬರುವ ಸುದ್ದಿಗಳು ಅನೇಕವೇಳೆ ನೈಜ ಮಾಹಿತಿ ಮತ್ತು ಅಧಿಕೃತ ಅಂಕಿ-ಅಂಶಗಳನ್ನು ತಿಳಿಸುತ್ತಿವೆ. ಹೆಸರನ್ನು ಹಲವು ವೇಳೆ ಗೌಪ್ಯವಾಗಿಡಲಾಗುತ್ತದೆ. ಪರಸ್ಪರ ದೋಷಾರೋಪಗಳೂ, ಜಗಳಗಳೂ ಇರುತ್ತವೆ ಅನ್ನಿ. 

      ಕಂಕಣ ಭಾಗ್ಯ ಸ್ಕೀಂ- ಆಶೀರ್ವಾದ ಸ್ಕೀಂ- ಶಿಫಾರಸ್ಸು ಸ್ಕೀಂ 
      ಕೇಂದ್ರ ಲೋಕಸೇವಾ ಆಯೋಗ ನಡೆಸುವ ಸಂದರ್ಶನದಂತೆಯೇ ಕರ್ನಾಟಕ ಲೋಕಸೇವಾ ಆಯೋಗದ ಸಂದರ್ಶನವೂ ಇರುತ್ತದೆ. ವಸ್ತುನಿಷ್ಠವಾಗಿ ಸಂದರ್ಶನ ನಡೆದಲ್ಲಿ ನಿಜಕ್ಕೂ ಪ್ರತಿಭಾವಂತರಿಗೆ ಮಾತ್ರ ಅವಕಾಶ ಸಿಗುತ್ತದೆ. ಆದರೆ ಈ ಫೇಸ್‌ಬುಕ್‌ ಗ್ರೂಪ್‌ಗ್ಳಲ್ಲಿ ನಡೆಯುತ್ತಿರುವ ಚರ್ಚೆಯ ಜಾಡನ್ನು ಹಿಡಿದು ಹೋದಲ್ಲಿ ಪ್ರತಿಭೆಗಿಂತ ಇರಬೇಕೆಂಬ ಅಂಶ ಗೋಚರಿಸುತ್ತಿದೆ. ಹಾಗೆಯೇ ವಿವಿಧ ಸ್ಕೀಂಗಳ ಪರಿಚಯವೂ ಆಗುತ್ತಿದೆ. ಕಂಕಣ ಭಾಗ್ಯ ಸ್ಕೀಂ ತುಂಬಾ ಜನಪ್ರಿಯವಾಗಿದೆ. ಸಂದರ್ಶನಕ್ಕೆ ಹಾಜರಾಗುತ್ತಿರುವ ಅರ್ಹ ಅವಿವಾಹಿತ ಯುವಕನಿಗೆ ತಮ್ಮ ಮಗಳನ್ನು ಧಾರೆ ಎರೆದು ಕೊಡಲು ಸಿದ್ಧರಾಗುವ ಕನ್ಯಾಪಿತೃಗಳು ಹೇಗಾದರೂ ಮಾಡಿ ಆಯ್ಕೆ ಮಾಡಿಸಿ ಕೆಲಸ ಕೊಡಿಸುವ ಜವಾಬ್ದಾರಿ ಹೊತ್ತು, ನಿಭಾಯಿಸಿ, ಸಂದರ್ಶನ ಸಮಿತಿಯ ಸದಸ್ಯರನ್ನು ನಯವಿನಯಗಳಿಂದ ಒಲಿಸಿ, ಕಾಣಿಕೆ ಸಲ್ಲಿಸಿ ಯಶಸ್ವಿಯಾಗಿ ಕೆಲಸ ಗಿಟ್ಟಿಸಿ ಕನ್ಯೆಯನ್ನು ದಾಟಿಸುವ ಈ ಕಂಕಣಭಾಗ್ಯ ಸ್ಕೀಂಗೆ ಅನೇಕರು ಹೆಸರು ಹಚ್ಚಿ¨ªಾರೆ, ಹಲವರು ಫ‌ಲಾನುಭವಿಗಳೂ ಇ¨ªಾರೆ. ಪ್ರಭಾವಶಾಲಿ ಮಠಮಾನ್ಯಗಳ ಸ್ವಾಮೀಜಿಗಳು, ರಾಜಕೀಯ ನೇತಾರರು, ಉನ್ನತ ಅಧಿಕಾರಿಗಳ ಶಿಫಾರಸ್ಸು ಒಂದಷ್ಟು ಜನರಿಗೆ ಶ್ರೀರಕ್ಷೆ ನೀಡಿದರೆ ಮತ್ತಷ್ಟು ಜನರು ಸೂಟ್‌ಕೇಸ್‌ಗಟ್ಟಲೇ ಕಪ್ಪಕಾಣಿಕೆಗಳನ್ನು ಸಲ್ಲಿಸಿ ಆಶೀರ್ವಾದ ಪಡೆಯಲು ಸಿದ್ಧರಾಗಿರುತ್ತಾರೆ. ಪ್ರೇಮ ಮತ್ತು ಯುದ್ಧದಲ್ಲಿ ಎಲ್ಲವೂ ಸಮ್ಮತ ಎಂಬಂತೆ ಸಂದರ್ಶನಗಳಲ್ಲಿಯೂ ಶತಾಯ-ಗತಾಯ ಲಾಭ ಪಡೆದೇ ತೀರಬೇಕೆಂಬ ಹಠ ಅಭ್ಯರ್ಥಿಗಳನ್ನು ಎಂತಹ ಕನಿಷ್ಠ ಮಟ್ಟಕ್ಕೂ ಇಳಿಸಿಬಿಡುತ್ತದೆ! 
      15 ರಿಂದ 60 ಲಕ್ಷ ರೂಪಾಯಿಗಳವರೆಗೆ ವಹಿವಾಟು ನಡೆಯುತ್ತಿದೆ ಎನ್ನುವುದು ಫೇಸ್‌ಬುಕ್‌ ಗ್ರೂಪ್‌ನಲ್ಲಿ ಮೂಡಿಬರುತ್ತಿರುವ ಕರ್ಣಾಕರ್ಣಿ. ಮೇಲುನೋಟಕ್ಕೆ ಇವೆಲ್ಲ ಸುಳ್ಳು. ಅರ್ಹತೆ ಇರುವವರಿಗೆ, ಪ್ರತಿಭಾವಂತರಿಗೆ ಅವಕಾಶ ಇದ್ದೇ ಇದೆ ಎನ್ನುವುದು ಲೋಕಸೇವಾ ಆಯೋಗದ ಸದಸ್ಯರ ಅನ್ನಿಸಿಕೆಯಾದರೂ ವಿವಿಧ ರಾಜಕೀಯ ಪಕ್ಷಗಳು ಮತ್ತು ಜಾತಿ-ಪಂಗಡಗಳನ್ನು ಪ್ರತಿನಿಧಿಸುತ್ತಿರುವ ಈ ಸದಸ್ಯರು ಅವರವರ ಸ್ಥಾಪಿತ ಹಿತಾಸಕ್ತಿಗಳನ್ನು ಸಾಧಿಸಿಕೊಳ್ಳದೇ ಹೊರಗೆ ಹೋಗುವಂತಿಲ್ಲ. ಅವರು ಪ್ರಾಮಾಣಿಕರಾಗಿದ್ದರೂ ಅವರ ಮೇಲೆ ಪಕ್ಷ, ಪಂಗಡಗಳು ಹೇರುವ ಒತ್ತಡಕ್ಕೆ ಮಣಿಯಲೇಬೇಕಾದ, ಋಣ ತೀರಿಸಬೇಕಾದ, ಅನಿವಾರ್ಯತೆ ಇದ್ದೇ ಇದೆ. ಇದಕ್ಕೆ ಅಪವಾದಗಳೂ ಇಲ್ಲದೇ ಇಲ್ಲ. ಈ ವಿಷಯಗಳೆÇÉಾ ಒಂದು ರೀತಿಯ ಬಹಿರಂಗ ಸತ್ಯ. ಫೇಸ್‌ಬುಕ್‌ನಲ್ಲಿ ಓಡಾಡುತ್ತಲಿದೆ ನಿತ್ಯ! 

      ಹತಾಶೆ ಬೇಡ- ಸಂದರ್ಶನ ಎದುರಿಸಿ 
      ಎಲ್ಲಾ ಸಂದರ್ಶನಗಳೂ ಕೇವಲ ಕಣ್ಣೊರೆಸುವ ತಂತ್ರ, ಕೇವಲ ಬೂಟಾಟಿಕೆ, ಮೊದಲಿಗೇ ತಮಗೆ ಬೇಕಾದವರನ್ನು ನೇಮಿಸಿಕೊಂಡು ಉಳಿದವರಿಗೆ ಸುಮ್ಮನೇ ತೊಂದರೆ ಕೊಡುವ ಪ್ರಕ್ರಿಯೆ. ತಮ್ಮ ಯೋಗ್ಯತೆ ಗಿಂತಲೂ ಕಡಿಮೆ ಅರ್ಹತೆ ಇರುವವರಿಗೆ ಕೆಲಸ ಕೊಡುವ ಇಂತಹ ಸಂದರ್ಶನಗಳಿಗೆ ಹೋಗುವುದೇ ವ್ಯರ್ಥ. ಎಲ್ಲಾ ಕಡೆಯೂ ಹಣವೇ ಹಣ. ಹಣ ಕೊಟ್ಟು ಹು¨ªೆ ಕೊಳ್ಳುತ್ತಿರುವುದರಿಂದ ಸಂದರ್ಶನಕ್ಕೆ ಹೋಗುವುದರಲ್ಲಿ ಅರ್ಥವಿಲ್ಲ. ಎಲ್ಲವೂ ಮೋಸ ಎಂಬ ಮಾತುಗಳು ಆಗಾಗ್ಗೆ ಅಲ್ಲಲ್ಲಿ ಕೇಳಿಬರುತ್ತವೆ. ಈ ಮಾತುಗಳಲ್ಲಿ ಹುರುಳಿದೆಯೋ, ಇಲ್ಲವೋ ಎಂಬುದರ ಬಗ್ಗೆ ಅಭ್ಯರ್ಥಿಗಳು ಚಿಂತಿಸಬೇಕಾದ ಅಗತ್ಯ ಇಲ್ಲ. ಕೆಲವೊಮ್ಮೆ ಇದು ಕೆಲಸ ಸಿಗದ ಹತಾಶ ಅಭ್ಯರ್ಥಿಗಳು ಹಬ್ಬಿಸಿದ ಗಾಳಿ ಸುದ್ದಿಯೂ ಆಗಿರಬಹುದು. ಎಟುಕದ ದ್ರಾಕ್ಷಿ ಹುಳಿ ಎನ್ನುವಂತಹ ಹುಳಿಹುಳಿ ಅನುಭವದ ಸಂತರ್ಪಣೆಯೂ ಆಗಿರಬಹುದು! ನಿಜವಾದ ಅರ್ಹತೆ ಇರುವ ಅಭ್ಯರ್ಥಿಗಳು ನಮ್ಮ ದೇಶದ ಆಸ್ತಿ. ಅರ್ಹರಿಗೆ ಒಂದಿÇÉಾ ಒಂದು ಕಡೆ ಒಳ್ಳೆಯ ಉದ್ಯೋಗ ಸಿಕ್ಕೇ ಸಿಗುತ್ತದೆ. ಕಾಯುವ, ಪ್ರಯತ್ನಿಸುವ ಮತ್ತು ಗೆಲ್ಲುವ ತಾಳ್ಮೆ ಮತ್ತು ಛಲ ಇರಬೇಕು, ಅಷ್ಟೇ! 

      ಮಾದರಿ ಸಂದರ್ಶನ ಹೀಗಿರುತ್ತದೆ 
      ಕರ್ನಾಟಕ ಲೋಕಸೇವಾ ಆಯೋಗ 2005-06ರಲ್ಲಿ ನಡೆಸಿದ ಯಶಸ್ವಿ ಕೆಎಎಸ್‌ ಅಭ್ಯರ್ಥಿಗಳ ಸಂದರ್ಶನದಲ್ಲಿ ಭಾಗವಹಿಸಿ ಸೂಪರಿಂಟೆಂಡೆಂಟ್‌ ಆಫ್ ಪ್ರಿಸನ್ಸ್‌ ಆಗಿ ಆಯ್ಕೆಯಾದ ರಮೇಶ್‌ ಅವರಿಗೆ ಕೌಟುಂಬಿಕ ಹಿನ್ನೆಲೆ, ವಿದ್ಯಾಭ್ಯಾಸ, ಸಬ್‌ ಇನ್ಸ್‌ಪೆಕ್ಟರ್‌ ಆಗಿ ಕಾರ್ಯನಿರ್ವಹಿಸುವಾಗಿನ ಅನುಭವಗಳು ಕುರಿತು ತುಂಬಾ ಸರಳವಾದ ಪ್ರಶ್ನೆಗಳನ್ನು ಮಾತ್ರ ಕೇಳಿದ್ದರಂತೆ! ತುಂಬಾ ಕಷ್ಟವಾದ ಪ್ರಶ್ನೆಗಳನ್ನು ಕೇಳುತ್ತಾರೆ ಎಂದು ಕಷ್ಟಪಟ್ಟು ಓದಿಕೊಂಡು, ಹೆದರುತ್ತಲೇ ಹಾಜರಾದವರು ಹಕ್ಕಿಯಂತೆ ಹಗುರಾಗಿ ಹಾರುತ್ತಾ ಬಂದರಂತೆ!
      ಇದೇ ಸರಣಿಯಲ್ಲಿ ಸಂದರ್ಶನ ಎದುರಿಸಿದ ಡಾ.ನೆಲ್ಲಿಕಟ್ಟೆ ಎಸ್‌. ಸಿದ್ದೇಶ್‌ ಅವರಿಗೆ ಅವರ ವಿದ್ಯಾಭ್ಯಾಸ, ಹಿನ್ನೆಲೆ, ಅನುಭವ ವಿವರಿಸುವಂತೆ ಕೇಳಿದರಂತೆ. ದಲಿತ ಕುಟುಂಬದಿಂದ ಕಡು ಬಡತನದಲ್ಲಿ ಬೆಂದುಬಂದಿದ್ದ ಡಾ. ಸಿದ್ದೇಶ್‌ ಅವರಿಗೆ ಸಂಶೋಧನೆಗಾಗಿ ಆಯ್ದುಕೊಂಡಿದ್ದ ಅಭಿನವ ಕಾಳಿದಾಸ ವಿದ್ವಾನ್‌ ಬಸವಪ್ಪ ಶಾಸಿŒಗಳ ಬಗ್ಗೆ, ಕನ್ನಡ ಸಾಹಿತ್ಯದ ಬಗ್ಗೆ, ಸಾಹಿತ್ಯ ಸಂದರ್ಭದ ಬಗ್ಗೆ, ಮೆಚ್ಚಿನ ಲೇಖಕರ ಬಗ್ಗೆ ಮತ್ತು ತೀರಾ ಮುಖ್ಯವಾಗಿ ಅಂಬೇಡ್ಕರ್‌ ಅವರ ವಿಚಾರಧಾರೆಯ ಬಗ್ಗೆ ಹಾಗೂ ಅದರ ಪ್ರಭಾವ ಜನರ ಮೇಲೆ, ಸಿದ್ದೇಶ್‌ ಅವರ ಬದುಕಿನ ಮೇಲೆ ಆಗಿರುವ ಬಗ್ಗೆ ಸುದೀರ್ಘ‌ವಾಗಿ ಕೇಳಿದರಂತೆ. ಕೇಳಿದ 20 ಪ್ರಶ್ನೆಗಳಲ್ಲಿ 19 ಪ್ರಶ್ನೆಗಳಿಗೆ ಅತ್ಯುತ್ತಮ ರೀತಿಯಲ್ಲಿ ಉತ್ತರಿಸಿದ್ದಕ್ಕಾಗಿ ಶಹಭಾಸ್‌ಗಿರಿ ಸಿಕ್ಕಿದರೂ ಡಾ. ಸಿದ್ದೇಶ್‌ ಅವರು ಆ ಸಂದರ್ಶನದಲ್ಲಿ ಆಯ್ಕೆಯಾಗಲಿಲ್ಲ! 
      ಕಳೆದ ಕೆಲವು ವರ್ಷಗಳ ಹಿಂದೆ ಇದೇ ಕೆಎಎಸ್‌ ಸಂದರ್ಶನದಲ್ಲಿ ಭಾಗವಹಿಸಿದ್ದ ಖಜಾನೆ ಅಧಿಕಾರಿ ಅ.ನಾ. ಪ್ರಾಣೇಶ್‌ ಅವರು ಕಲೆ ಮತ್ತು ಕಾನೂನು ಅಭ್ಯಾಸ ಮಾಡಿದ ಅಭ್ಯರ್ಥಿಯಾಗಿದ್ದರೂ ಅವರಿಗೆ ಥರ್ಮಲ್‌ ಪವರ್‌ ಜನರೇಶನ್‌ ವಿಧಾನ ಕುರಿತು ತಿಳಿಸಿ ಎಂದು ಕೇಳಲಾಗಿತ್ತು! ಕಲಾ ವಿದ್ಯಾರ್ಥಿಗೆ ವಿಜ್ಞಾನದ ವಿಷಯದ ಪ್ರಶ್ನೆ ಎಂದು ಮೂಗಿನಮೇಲೆ ಬೆರಳಿಡಬೇಡಿ. ಆಂಗ್ಲ ಉಪನ್ಯಾಸಕರ ಹು¨ªೆಗೆ ಹಾಜರಾದ ಈ ಲೇಖಕನಿಗೆ ಬಯಾಪ್ಸಿ ಎಂದರೇನು? ಎಂದು ಜೀವವಿಜ್ಞಾನ, ಅದರಲ್ಲೂ ವೈದ್ಯಕೀಯ ವಿಜ್ಞಾನದ, ಪ್ರಶ್ನೆ ಕೇಳಲಾಗಿತ್ತು. ಜೊತೆಗೆ ಬಾಹ್ಯಾಂತರೀಕ್ಷಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು, ವಾಣಿಜ್ಯ ಮತ್ತು ಅಂತಾರಾಷ್ಟ್ರೀಯ ವ್ಯಾಪಾರ ಕುರಿತ ಪ್ರಶ್ನೆಗಳನ್ನೂ ಕೇಳಲಾಗಿತ್ತು! ಇಬ್ಬರೂ ಕ್ವಿಜ್‌ ಸ್ಪರ್ಧೆಗಳಲ್ಲಿ ಛಾಂಪಿಯನ್‌ ಆಗಿದ್ದರಿಂದ ಆ ಪ್ರಶ್ನೆಗಳಿಗೆ ಸೂಕ್ತರೀತಿಯಲ್ಲಿ ಉತ್ತರಿಸಿದರೂ ಆ ಹು¨ªೆಗಳು ಮಾತ್ರ ಸಿಗಲಿಲ್ಲ. 

      ಯಶಸ್ವೀ ಸಂದರ್ಶನ ಹೀಗಿತ್ತು 
      ಕೇಂದ್ರ ಲೋಕಸೇವಾ ಆಯೋಗ ನಡೆಸಿದ 2005ರ ಅಖೀಲ ಭಾರತ ನಾಗರೀಕ ಸೇವಾ ಪರೀಕ್ಷೆಗಳಲ್ಲಿ ಯಶಸ್ವಿಯಾದವರ ರ್‍ಯಾಂಕ್‌ ಪಟ್ಟಿ 2006ರ ಮೇ 12ರಂದು ಪ್ರಕಟವಾದಾಗ ಕರ್ನಾಟಕದ ಸುಮಾರು 18 ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ರಾಷ್ಟ್ರಮಟ್ಟದಲ್ಲಿ 9ನೇ ರ್‍ಯಾಂಕ್‌ಗಳಿಸಿ ರಾಜ್ಯಕ್ಕೆ ಮೊದಲಿಗರಾದ ಚಿತ್ರದುರ್ಗ ಜಿÇÉೆ ಚಳ್ಳಕೆರೆ ತಾಲೂಕಿನ ಪರಶುರಾಂಪುರದ ಡಾ.ಎಸ್‌. ರಘುರಾಂ ಅವರನ್ನು ಸಂದರ್ಶಿಸಿ ನಿಮ್ಮ ವ್ಯಕ್ತಿತ್ವ ಪರೀಕ್ಷೆ (ಸಂದರ್ಶನ) ಹೇಗಿತ್ತು? ಎಂದು ಪ್ರಶ್ನಿಸಿದಾಗ, ತುಂಬಾ ಆತ್ಮೀಯವಾಗಿತ್ತು. ಸಂದರ್ಶನ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ನಗುಮುಖದಿಂದ ಮಾತಾಡಿಸಿದರು. ನಾನು ಓದಿದ ವಿಷಯಗಳು, ನನ್ನ ಕುಟುಂಬದ ವಿವರಗಳು, ನನ್ನ ಆಯ್ಕೆಯ ವಿಷಯಗಳ ಕುರಿತು ಪ್ರಶ್ನೆಗಳನ್ನು ಕೇಳಿದರು. ನಾನು ಐಎಫ್ಎಸ್‌ ಆಯ್ಕೆ ಮಾಡಿಕೊಳ್ಳುವ ಉತ್ಸುಕತೆಯಲ್ಲಿದ್ದುದರಿಂದ ನಮ್ಮ ನೆರೆಹೊರೆಯ ದೇಶಗಳೊಂದಿಗೆ ನಮ್ಮ ದೇಶದ ಸಂಬಂಧ, ಅಂತಾರಾಷ್ಟ್ರೀಯ ಸಂಬಂಧ ಇವುಗಳ ಬಗ್ಗೆಯೇ ಹೆಚ್ಚು ಒತ್ತು ನೀಡಲಾಗಿತ್ತು. ಇಲ್ಲಿ ನೀವು ಕೇಳಲಾದ ಪ್ರಶ್ನೆಗೆ ಏನು ಉತ್ತರ ಹೇಳುತ್ತೀರಿ ಎನ್ನುವುದಕ್ಕಿಂತ ಎಷ್ಟು ಪ್ರಾಮಾಣಿಕವಾಗಿ ನಿಮಗೆ ಗೊತ್ತಿರುವುದನ್ನು ಹೇಳುತ್ತೀರಿ, ಸ್ಪಷ್ಟವಾಗಿ ನಿಮ್ಮ ನಿಲುವನ್ನು ವ್ಯಕ್ತಗೊಳಿಸುತ್ತೀರಿ ಎನ್ನುವುದು ಮುಖ್ಯವಾಗುತ್ತದೆ. ಹತ್ತು ಪ್ರಶ್ನೆಗಳಿಗೆ ನೀವು ಒಂಬತ್ತಕ್ಕೆ ಸರಿ ಉತ್ತರ ನೀಡುವಲ್ಲಿ ಅಸಫ‌ಲರಾದರೂ ನೀಡುವ ಒಂದೇ ಪ್ರಶ್ನೆಯ ಉತ್ತರ ನಿಮ್ಮ ಧನಾತ್ಮಕ ಆಲೋಚನೆ, ನಿಮ್ಮ ವ್ಯಕ್ತಿತ್ವದ ಅನಾವರಣಗೊಳಿಸುವಂತಿದ್ದರೆ ಖಂಡಿತಾ ನೀವು ಆಯ್ಕೆಯಾಗುತ್ತೀರಿ. ನಿಮಗೆ ಕೇಳುವ ಪ್ರಶ್ನೆಗಳು ನಿಮ್ಮ ಸ್ವ-ವಿವರದೊಂದಿಗೆ ಲಗತ್ತಿಸಿರುವ ವಿವರಗಳನ್ನು ಆಧರಿಸಿಯೇ ಇರುತ್ತವೆ ಆದ್ದರಿಂದ ಅದಕ್ಕೆ ಪೂರಕವಾಗುವಂತೆ ನೀವು ನಿಮ್ಮ ಸಿದ್ಧತೆ ನಡೆಸಿದ್ದರೆ ಸಾಕು. ಕೇವಲ ಕ್ವಿಜ್‌ ರೀತಿಯಲ್ಲಿ ಸಂದರ್ಶನ ಇರುವುದಿಲ್ಲ. ನಿಮ್ಮ ವ್ಯಕ್ತಿಗತ ನಿಲುವುಗಳು, ಆಸಕ್ತಿ, ಅಭಿವ್ಯಕ್ತಿಗಳು, ನಿಮ್ಮ ಪ್ರಾಮಾಣಿಕ ವರ್ತನೆ ಎಲ್ಲವೂ ಇಲ್ಲಿ ಲೆಕ್ಕಕ್ಕೆ ಬರುವುದರಿಂದ ಯಾವುದೇ ಗಡಿಬಿಡಿಗೆ ಒಳಗಾಗದೆ ಸಂದರ್ಶನ ಎದುರಿಸಿ ಯಶಸ್ವಿಯಾಗಬಹುದು ಎಂದರು. 
      ಅದೇ ವರ್ಷ ಐಎಎಸ್‌ನಲ್ಲಿ 32ನೇ ಸ್ಥಾನ ಪಡೆದಿರುವ ಆರ್‌. ಸಂಗೀತಾ ಕಂಪ್ಯೂಟರ್‌ ಸೈನ್ಸ್‌ ಪದವೀಧರೆ. ಜೊತೆಗೆ ಹಣಕಾಸು ವಿಷಯದಲ್ಲಿ ಎಂಬಿಎ ಮತ್ತು ಕಾನೂನು ವ್ಯಾಸಂಗವನ್ನೂ ಮಾಡಿದವರು. ಇವರಿಗೆ ಸಂದರ್ಶನದಲ್ಲಿ ಕೇಳಿದ ಮೊದಲ ಪ್ರಶ್ನೆ ಇಷ್ಟೊಂದು ವಿವಿಧ ಕ್ಷೇತ್ರಗಳ ವ್ಯಾಸಂಗ ಯಾಕೆ ಮಾಡಿದ್ದು? ಅಂತ. ಉಳಿದಂತೆ ಅವರ ಸ್ವ-ವಿವರ, ಹಿನ್ನೆಲೆ, ಊರು, ರಾಜ್ಯದ ಪ್ರಶ್ನೆಗಳಿದ್ದವಂತೆ. ನಾಲ್ಕನೆಯ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದರಿಂದ ಆ ಎÇÉಾ ಪ್ರಯತ್ನಗಳಲ್ಲಿಯೂ ಒಂದೇ ವಿಷಯಗಳನ್ನು ಆಯ್ದಕೊಂಡಿದ್ದರೆ? ಎಂದು ಕೇಳಿದರಂತೆ. ಕೊನೆಯದಾಗಿ ಈಶಾನ್ಯ ರಾಜ್ಯಗಳ ಜಿÇÉೆಯೊಂದರ ಜಿÇÉಾಧಿಕಾರಿಯಾಗಿ ನೇಮಕವಾದರೆ ಅಲ್ಲಿನ ಜನರಲ್ಲಿ ಪ್ರಚಲಿತವಿರುವ ಪರಿವರ್ತಿತ ಬೇಸಾಯ ಪದ್ಧತಿಯನ್ನು ಬದಲಾಯಿಸಲು ಏನು ಪ್ರಯತ್ನ ಮಾಡುವಿರಿ? ಎಂಬುದಾಗಿತ್ತಂತೆ. 
      2003ರಲ್ಲಿ 6ನೇ ರ್‍ಯಾಂಕ್‌ ಗಳಿಸಿದ ಮಯೂರ್‌ ಮಾಹೇಶ್ವರಿಯವರಿಗೆ ಮಾತ್ರ ಕೇಳಿದ ಪ್ರಶ್ನೆಗಳು ಸಾಮಾನ್ಯ ಜ್ಞಾನದ ಎಲ್ಲ ಕ್ಷೇತ್ರಗಳನ್ನು ಆವರಿಸಿದ್ದವು. ಮೊದಲ ಪ್ರಶ್ನೆ ಭಾರತದ ಜವಳಿ ಉದ್ಯಮ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಈ ಉದ್ಯಮ ಬೀರುತ್ತಿರುವ ಪ್ರಭಾವ, ಅದರ ಸಾಧಕ-ಬಾಧಕ ಗಳನ್ನು ಕುರಿತು ಇತ್ತು. ಸಂವಿಧಾನದ 356 ನೇ ವಿಧಿ ಮತ್ತು ಅದರ ಸದುಪಯೋಗ, ದುರುಪಯೋಗ ಕುರಿತು ಸದಸ್ಯರೊಬ್ಬರು ಪ್ರಶ್ನೆ ಮಾಡಿದರಂತೆ. ಹಿಂದುಳಿದ ರಾಜ್ಯಗಳಲ್ಲಿ ಹೆಣ್ಣು ಶಿಶುಗಳ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿರುವ ಸಮಸ್ಯೆಯ ಬಗ್ಗೆ ಮಹಿಳಾ ಸದಸ್ಯರೊಬ್ಬರು ಪ್ರಶ್ನೆ ಕೇಳಿದರು. ಆಗ ನಡೆಯುತ್ತಿದ್ದ ಅಮೇರಿಕಾ ಮತ್ತು ಇರಾಕ್‌ ಕೊಲ್ಲಿ ಯುದ್ಧದ ಕುರಿತು ಪ್ರಶ್ನೆ ಇತ್ತು. ಹೆಚ್ಚುತ್ತಿರುವ ಪರಿಸರ ಮಾಲಿನ್ಯ, ಅಸಮತೋಲನ, ಕೊಳ್ಳುಬಾಕ ಸಂಸ್ಕೃತಿ, ಜಾಗತೀಕರಣದ ಬಗ್ಗೆಯೂ ಪ್ರಶ್ನೆಗಳನ್ನು ಕೇಳಲಾಗಿತ್ತು. ಕೊನೆಯಲ್ಲಿ ಹಿಂದುಳಿದ ರಾಜ್ಯಗಳಾದ ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳ ನಡುವೆ ಇರುವ ಸಾಮ್ಯತೆ ಮತ್ತು ವ್ಯತ್ಯಾಸ ಕುರಿತು ವಿವರಿಸಲು ಕೇಳಿದರಂತೆ.(ಆಗ ಆ ಎರಡೂ ರಾಜ್ಯಗಳಲ್ಲಿ ಮಹಿಳಾ ಮುಖ್ಯಮಂತ್ರಿಗಳಿದ್ದರು.)
      ಈ ಮಾತುಗಳನ್ನು ಓದುವಾಗ ರಾಷ್ಟ್ರದಲ್ಲಿಯೇ ಉನ್ನತ ಹು¨ªೆಗೆ ನಡೆಸಲಾದ ವ್ಯಕ್ತಿತ್ವ ಪರೀಕ್ಷೆಯ(ಸಂದರ್ಶನದ) ಸ್ಪಷ್ಟ ಚಿತ್ರಣ ದೊರೆತಂತಾಗುತ್ತದೆ, ಅಲ್ಲವೇ? ಬಹುಶಃ ಇದೇ ಮಾದರಿಯಲ್ಲಿಯೇ ನಮ್ಮ ದೇಶದ ಎÇÉಾ ರಾಜ್ಯಗಳ ಲೋಕಸೇವಾ ಆಯೋಗಗಳು ನಡೆಸುವ ಸಂದರ್ಶನಗಳು ಇರುತ್ತವೆ ಎನಿಸುತ್ತದೆ. ಸಂದರ್ಶಕರ ಸಮಿತಿಯು ವಿವಿಧ ಕ್ಷೇತ್ರಗಳ ದಿಗ್ಗಜರನ್ನು ಪ್ರತಿನಿಧಿಸುವುದರಿಂದ, ಆಯ್ಕೆಯ ಮಾನದಂಡಗಳೂ ಪೂರ್ವ ನಿರ್ಧಾರಿತವಾಗಿರುವುದರಿಂದ, ವಸ್ತುನಿಷ್ಟವಾಗಿಯೂ ವ್ಯಕ್ತಿನಿಷ್ಟವಾಗಿಯೂ ನಡೆಯುತ್ತವೆ. ಇಂಗ್ಲೆಂಡಿನ ಸ್ಕಾಟ್ಲೆಂಡ್‌ಯಾರ್ಡ್‌, ಅಮೇರಿಕಾದ ಪೆಂಟಗನ್‌ ಮತ್ತು ರಷ್ಯಾದ ಕೆಜಿಬಿಗಳಿಗೆ ನಡೆಯುವ ನೇಮಕಾತಿ ಸಂದರ್ಶನಗಳ ಸಾಲಿನಲ್ಲಿಯೇ ಭಾರತದ ಕೇಂದ್ರ ಲೋಕ ಸೇವಾ ಆಯೋಗ ನಡೆಸುವ ಸಂದರ್ಶನಗಳು ನಿಲ್ಲುತ್ತಿವೆ, ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಅನುಗುಣವಾಗಿ ನಡೆಯುತ್ತಿದ್ದು ವಿಶ್ವಾಸಾರ್ಹತೆಗಳಿಸಿವೆ. ಯಶಸ್ವಿ ಅಭ್ಯರ್ಥಿಗಳೇ, ಗುಡ್‌ಲಕ್‌! 
      ಹೆಚ್ಚಿನ ಮಾಹಿತಿಗೆ ನೋಡಿ: ಸಂದರ್ಶನ- ವ್ಯಕ್ತಿತ್ವದ ಸಮಗ್ರ ದರ್ಶನ, ನವಕರ್ನಾಟಕ ಪ್ರಕಾಶನ, ಬೆಂಗಳೂರು.

      ಬಾಕ್ಸ್‌ 
      ಭಾಷಾ ಮಾಧ್ಯಮ ಆಯ್ಕೆಗೆ ಇದ್ದ ತಡೆಗಳೆಲ್ಲ ನಿವಾರಣೆ 

      ಕಳೆದ ಗುರುವಾರ ಮಧ್ಯಾಹ್ನ ಲೋಕಸಭೆಯಲ್ಲಿ ಸಿಬ್ಬಂದಿ ಖಾತೆ ಸಚಿವ ವಿ. ನಾರಾಯಣ ಸ್ವಾಮಿಯವರು ಚರ್ಚೆಯೊಂದಕ್ಕೆ ಉತ್ತರಿಸುತ್ತಾ ಕೇಂದ್ರ ಲೋಕಸೇವಾ ಆಯೋಗ ನಡೆಸುವ ಗೆಝೆಟೆಡ್‌ ಪೊ›ಬೆಷನರ್‌ಗಳ ನೇಮಕಾತಿ ಮುಖ್ಯ ಪರೀಕ್ಷೆಯ ಪ್ರಶ್ನೆಪತ್ರಿಕೆಗಳ ಮಾದರಿಯಲ್ಲಿ ಪ್ರಾದೇಶಿಕ ಭಾಷಾ ಮಾಧ್ಯಮ ಮತ್ತು ಭಾಷಾ ಸಾಹಿತ್ಯ ಪತ್ರಿಕೆಯ ಆಯ್ಕೆಯ ವಿಷಯದಲ್ಲಿ ತಂದಿರುವ ಕಟ್ಟುನಿಟ್ಟಿನ ಬದಲಾವಣೆಯನ್ನು ಮರುಪರಿಶೀಲನೆಗೆ ಒಳಪಡಿಸುವಂತೆ ಮಾರ್ಚ್‌ 15ರಂದು ನಡೆದ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಸಂಬಂಧಿಸಿದ ಆಯೋಗದೊಂದಿಗೆ ಚರ್ಚಿಸಿ ಈ ಕೆಳಕಂಡ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು. 
      - ಅಭ್ಯರ್ಥಿಯು ಸಂವಿಧಾನದ 8ನೇ ಅನುಚ್ಛೇದದಲ್ಲಿರುವ ಯಾವುದೇ ಭಾಷೆಯಲ್ಲಿ ಅಥವಾ ಇಂಗ್ಲಿಷ್‌ನಲ್ಲಿ ಪರೀಕ್ಷೆ ಬರೆಯಬಹುದು. 
      - ಭಾಷಾ ಮಾಧ್ಯಮದ ಮೇಲೆ ವಿಧಿಸಲಾಗಿದ್ದ 25 ಅಭ್ಯರ್ಥಿಗಳ ನಿಗದಿತ ಸಂಖ್ಯೆಯ ಮಿತಿಯನ್ನು ಹಾಗೂ ಪದವಿಯಲ್ಲಿ ಅದೇ ಭಾಷಾ ಮಾಧ್ಯದಲ್ಲಿ ಓದಿರಬೇಕು ಎಂಬ ನಿಬಂಧನೆಯನ್ನು ತೆಗೆದುಹಾಕಲಾಗಿದ್ದು ಹಳೆಯ ಪದ್ಧತಿಯಂತೆಯೇ ಭಾಷಾ ಮಾಧ್ಯಮದ ಆಯ್ಕೆಯನ್ನು ಅಭ್ಯರ್ಥಿಗಳ ಇಚ್ಛೆಗೆ ಬಿಡಲಾಗಿದೆ. 
      - ಹಿಂದಿನಂತೆಯೇ ಅಭ್ಯರ್ಥಿಯು ಪದವಿಯಲ್ಲಿ ಯಾವುದೇ ಐಚ್ಛಿಕ ವಿಷಯ ತೆಗೆದುಕೊಂಡು ಓದಿದ್ದರೂ ಮುಖ್ಯ ಪರೀಕ್ಷೆಯಲ್ಲಿ ಪ್ರಾದೇಶಿಕ ಭಾಷಾ ಸಾಹಿತ್ಯ(22 ಸಂವಿಧಾನ ಅನುಮೋದಿಸಿದ ಭಾಷೆಗಳು ಮತ್ತು ಇಂಗ್ಲಿಷ್‌) ಇವುಗಳಲ್ಲಿ ಯಾವುದೇ ಒಂದನ್ನು ಆಯ್ದುಕೊಳ್ಳಬಹುದು. ಪದವಿಯಲ್ಲಿ ಓದಿದ ಭಾಷಾ ಸಾಹಿತ್ಯ ಓದಿದ್ದರೆ ಅದೇ ವಿಷಯವನ್ನು ಆಯ್ದುಕೊಳ್ಳಬೇಕು ಎಂಬ ನಿಬಂಧನೆ ಇಲ್ಲ. 
      - ಕಡ್ಡಾಯ ಪ್ರಬಂಧ ಪತ್ರಿಕೆಯ ಜೊತೆ 100 ಅಂಕಗಳಿಗೆ ಸೇರಿಸಲಾಗಿದ್ದ ಕಡ್ಡಾಯ ಇಂಗ್ಲಿಷ್‌ ಕಾಂಪ್ರಹೆನÒನ್‌ ಮತ್ತು ಪ್ರಸಿ(ಸಂಕ್ಷೇಪೀಕರಣ) ಭಾಗವನ್ನು ಕೈಬಿಡಲಾಗಿದೆ. ಇನ್ನು ಮುಂದೆ ಪ್ರಬಂಧ 200 ಅಂಕಗಳಿಗೆ ಬದಲಾಗಿ 250 ಅಂಕಗಳಿಗೆ ಇರುತ್ತದೆ. ಹಾಗೆಯೇ ಈ ಮೊದಲು ಇದ್ದ ಅರ್ಹತಾ ಸ್ವರೂಪದ ಕಡ್ಡಾಯ ಕನ್ನಡ ಅಥವಾ ಭಾರತೀಯ ಭಾಷೆ ಮತ್ತು ಇಂಗ್ಲಿಷ್‌ ಪತ್ರಿಕೆಗಳು ಮತ್ತೆ ಹಾಜರಾಗಲಿವೆ. ಇವುಗಳ ಅಂಕಗಳನ್ನು ಅರ್ಹತಾ ಮಟ್ಟಕ್ಕೆ ಮಾತ್ರ ಪರಿಗಣಿಸಲಾಗುತ್ತದೆಯೇ ವಿನಃ ಮುಖ್ಯ ಪರೀಕ್ಷೆಯ ಅಂಕಗಳೊಂದಿಗೆ ಸೇರಿಸುವುದಿಲ್ಲ. 
      ಅಂತೂ ಗುಡ್ಡ ಅಗೆದು ಇಲಿ ಹಿಡಿದರು ಎಂಬಂತೆ ವರ್ಷಗಟ್ಟಲೇ ಉನ್ನತ ಅಧ್ಯಯನ ಸಮಿತಿ ನಡೆಸಿದ ಸಂಶೋಧನೆಯ ಫ‌ಲಶೃತಿಯನ್ನು ಭಾವನಾತ್ಮಕ ಒತ್ತಡಗಳಿಗೆ ಬಲಿಕೊಟ್ಟು ಉನ್ನತ ಶಿಕ್ಷಣದ ಆಶಯವನ್ನೇ ಅಣಕಿಸುವ ಕಾರ್ಯ ನಡೆದಿದೆ. ಎರಡು ಐಚ್ಛಿಕ ವಿಷಯಗಳ ಬದಲಿಗೆ ಒಂದೇ ಐಚ್ಛಿಕ ವಿಷಯ ಮತ್ತು ಎರಡು ಸಾಮಾನ್ಯ ಅಧ್ಯಯನ ಪತ್ರಿಕೆಗಳ ಬದಲಿಗೆ ನಾಲ್ಕು ಪತ್ರಿಕೆಗಳು ಎಂಬುದಷ್ಟೇ ಹೊಸ ಬದಲಾವಣೆಯ ಹೂರಣ! 
      ಅದಕ್ಕಾಗಿ ಕೋಟಿ ಕೋಟಿ ಹಣ ವ್ಯಯಿಸಬೇಕಿತ್ತೇ?

KAS Interview 2013 How to Face it - Article in Udayavani Josh 26 March 2013

Monday, 25 March 2013

UPSC Mains 2013 Syllabus Changed - Article in Prajavani Shikshana 25 March 2013




 
ಕೇಂದ್ರ ನಾಗರಿಕ ಸೇವೆ

ಬದಲಾಗಲಿದೆ ಪರೀಕ್ಷಾ ಮಾದರಿ

ಕೇಂದ್ರ ಲೋಕಸೇವಾ ಆಯೋಗವು ಗೆಜೆಟೆಡ್ ಪ್ರೊಬೆಷನರ್‌ಗಳ (ಕೇಂದ್ರ ನಾಗರಿಕ ಸೇವೆ) ನೇಮಕಾತಿಗಾಗಿ ನಡೆಸುವ ಮುಖ್ಯ ಪರೀಕ್ಷೆಯ ಪ್ರಶ್ನೆಪತ್ರಿಕೆಗಳ ಮಾದರಿ ಈ ವರ್ಷದಿಂದ ಬದಲಾಗಲಿದೆ. ಆದರೆ ಈ ಬದಲಾವಣೆಯ ಕೆಲವು ಅಂಶಗಳ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ಅದರಲ್ಲಿ ಕೊಂಚ ಮಾರ್ಪಾಡುಗಳನ್ನು ತರಲು ಸರ್ಕಾರ ಚಿಂತನೆ ನಡೆಸಿದೆ.
ವಿಶ್ವವಿದ್ಯಾಲಯ ಧನಸಹಾಯ ಆಯೋಗದ ನಿವೃತ್ತ ಅಧ್ಯಕ್ಷ ಪ್ರೊ. ಅರುಣ್ ಎಸ್. ನಿಗವೇಕರ್ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸಮಿತಿಯು, ಮುಖ್ಯ ಪರೀಕ್ಷೆಯ ಸುಧಾರಣಾ ಕ್ರಮಗಳಿಗೆ ಸಂಬಂಧಿಸಿದಂತೆ ಸಲ್ಲಿಸಿದ್ದ ಶಿಫಾರಸುಗಳಿಗೆ ಪ್ರಧಾನಿ ಮನಮೋಹನ್ ಸಿಂಗ್ ಫೆ. 27ರಂದು ಒಪ್ಪಿಗೆ ಸೂಚಿಸಿದ್ದರು. ಈ ಶಿಫಾರಸುಗಳಿಗೆ ಪೂರಕವಾಗಿಯೇ ಈ ಬಾರಿಯ ಮುಖ್ಯ ಪರೀಕ್ಷೆಯನ್ನು ನಡೆಸಲು ತೀರ್ಮಾನಿಸಲಾಗಿತ್ತು. ಅದರಂತೆ, ಪೂರ್ವಭಾವಿ ಪರೀಕ್ಷೆಗಾಗಿ ಮಾರ್ಚ್ 4ರಂದು ಆಯೋಗ ಅಧಿಸೂಚನೆಯನ್ನೂ ಹೊರಡಿಸಿದೆ.
ಆದರೆ, ಹೊಸ ಶಿಫಾರಸುಗಳ ಅನ್ವಯ ಪ್ರಾದೇಶಿಕ ಭಾಷಾ ಮಾಧ್ಯಮ ಮತ್ತು ಭಾಷಾ ಸಾಹಿತ್ಯ ಪತ್ರಿಕೆಯ ಆಯ್ಕೆ ವಿಷಯದಲ್ಲಿ ತರಲು ಹೊರಟಿದ್ದ ಕಟ್ಟುನಿಟ್ಟಿನ ಬದಲಾವಣೆಗಳು ಪರೀಕ್ಷೆ ಆಕಾಂಕ್ಷಿಗಳಿಗೆ ಆಘಾತ ಉಂಟು ಮಾಡಿವೆ. ನೂತನ ಬದಲಾವಣೆಗಳನ್ನು ಮರುಪರಿಶೀಲನೆಗೆ ಒಳಪಡಿಸುವಂತೆ ಆಗ್ರಹಿಸಿ ಮಾರ್ಚ್ 15ರಂದು ಹಲವೆಡೆ ಪ್ರತಿಭಟನೆಗಳು ನಡೆದಿದ್ದವು. ಈ ಹಿನ್ನೆಲೆಯಲ್ಲಿ `ಹೊಸ ಪಠ್ಯಕ್ರಮದಲ್ಲಿ ಕೆಲ ಬದಲಾವಣೆಗಳನ್ನು ತರಲು ಉದ್ದೇಶಿಸಲಾಗಿದೆ' ಎಂದು ಸಿಬ್ಬಂದಿ ಖಾತೆ ಸಚಿವ ವಿ.ನಾರಾಯಣ ಸ್ವಾಮಿ ಇತ್ತೀಚೆಗೆ ಲೋಕಸಭೆಗೆ ತಿಳಿಸಿದ್ದಾರೆ. ಆದರೆ ಈ ಸಂಬಂಧ ಆಯೋಗ ಇನ್ನಷ್ಟೇ ಅಧಿಕೃತ ಪ್ರಕಟಣೆ ಹೊರಡಿಸಬೇಕಾಗಿದೆ.
ಹೀಗಾಗಿ ಇತ್ತೀಚೆಗೆ ಆಯೋಗ ಪ್ರಕಟಿಸಿರುವ ಹೊಸ ತೀರ್ಮಾನಗಳು ಮತ್ತು ಅದರಲ್ಲಿ ಆಗಬಹುದಾದ ಪರಿಷ್ಕೃತ ಬದಲಾವಣೆಗಳನ್ನು ಕೆಳಗೆ ಕೊಡಲಾಗಿದೆ. (ಆಯೋಗದಿಂದ ಪ್ರಕಟಣೆ ಹೊರಬಿದ್ದ ನಂತರವಷ್ಟೇ ಪರಿಷ್ಕೃತ ಬದಲಾವಣೆಗಳು ಅಧಿಕೃತಗೊಳ್ಳಲಿವೆ. ಈ ಲೇಖನ ಪ್ರಕಟವಾಗುವ ಹೊತ್ತಿಗೆ ಈ ಸಂಬಂಧ ಅಧಿಕೃತ ಪ್ರಕಟಣೆ ಹೊರಬೀಳುವ ಸಾಧ್ಯತೆ ಇದೆ)
ಅಸಮಾಧಾನಕ್ಕೆ ಕಾರಣವಾಗಿರುವ ಹೊಸ ತೀರ್ಮಾನಗಳು ಹೀಗಿವೆ
1. ಅರ್ಹತಾ ಪರೀಕ್ಷೆಯಾಗಿದ್ದ ಕನ್ನಡ ಅಥವಾ ಸಂವಿಧಾನದ 8ನೇ ಅನುಚ್ಛೇದದಲ್ಲಿರುವ ಯಾವುದೇ ಒಂದು ಭಾರತೀಯ ಭಾಷೆ ಮತ್ತು ಕಡ್ಡಾಯ ಇಂಗ್ಲಿಷ್ ಪತ್ರಿಕೆಗಳನ್ನು ತೆಗೆದುಹಾಕಲಾಗಿದೆ.
2. ಕಡ್ಡಾಯ ಪ್ರಬಂಧ ಪತ್ರಿಕೆಯ ಜೊತೆ ಇಂಗ್ಲಿಷ್ ಕಾಂಪ್ರಿಹೆನ್ಷನ್ ಮತ್ತು ಪ್ರೆಸಿ (ಸಂಕ್ಷೇಪೀಕರಣ) ವಿಷಯವನ್ನು ಕಡ್ಡಾಯ ಮಾಡಲಾಗಿದೆ.
3. ಎರಡು ಐಚ್ಛಿಕ ವಿಷಯಗಳ ಬದಲಿಗೆ ಕೇವಲ ಒಂದನ್ನು ಆಯ್ದುಕೊಳ್ಳುವ ಅವಕಾಶ ಇದೆ.
4.ಸಾಮಾನ್ಯ ಅಧ್ಯಯನದ ಎರಡು ಪತ್ರಿಕೆಗಳ ಬದಲಿಗೆ ನಾಲ್ಕು ಪತ್ರಿಕೆಗಳನ್ನು ಬರೆಯಬೇಕು.
5. ಪದವಿ ಹಂತದಲ್ಲಿ ಓದಿರುವ ಭಾಷಾ ಸಾಹಿತ್ಯ ವಿಷಯವನ್ನು ಇಲ್ಲೂ ಆಯ್ದುಕೊಳ್ಳಬಹುದು. ಇತರ ಪದವಿಯವರು ಭಾಷಾ ಸಾಹಿತ್ಯ ಪತ್ರಿಕೆಯನ್ನು ಆಯ್ಕೆ ಮಾಡಿಕೊಳ್ಳುವಂತಿಲ್ಲ.
6. ಪದವಿ ಹಂತದಲ್ಲಿ ಕನ್ನಡ ಅಥವಾ ಪ್ರಾದೇಶಿಕ ಭಾಷೆಯಲ್ಲಿ ಅಧ್ಯಯನ ಮಾಡಿದ್ದರೆ ಮಾತ್ರ ಆ ಭಾಷಾ ಮಾಧ್ಯಮದಲ್ಲಿ ಪರೀಕ್ಷೆ ಎದುರಿಸಬಹುದು.  ಕನಿಷ್ಠ 25 ಅಭ್ಯರ್ಥಿಗಳು ಹೀಗೆ ಒಂದು ಭಾಷೆಯ ಮಾಧ್ಯಮವನ್ನು ತೆಗೆದುಕೊಂಡಲ್ಲಿ ಮಾತ್ರ ಅವಕಾಶ ಕೊಡಲಾಗುತ್ತದೆ. ಇಲ್ಲದಿದ್ದಲ್ಲಿ ಅವರು ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಪರೀಕ್ಷೆ ಬರೆಯಬೇಕಾಗುತ್ತದೆ.
7. ಇಂಗ್ಲಿಷ್ ಹೊರತುಪಡಿಸಿ ವಿದೇಶಿ ಭಾಷಾ ಸಾಹಿತ್ಯ ಪತ್ರಿಕೆಗಳನ್ನು ರದ್ದು ಮಾಡಲಾಗಿದೆ. ಹಾಗೆಯೇ ಅತ್ಯಂತ ಸುಲಭವಾಗಿದ್ದ `ಪಾಲಿ ಭಾಷಾ ಸಾಹಿತ್ಯ' ಪತ್ರಿಕೆ ಕೂಡ ರದ್ದಾಗಿದೆ.
8. ಸಂದರ್ಶನಕ್ಕೆ 1: 3ರ ಪ್ರಮಾಣದ ಬದಲು ಇನ್ನು ಮುಂದೆ 1: 2 ಪ್ರಮಾಣದಲ್ಲಿ ಕರೆ ಪತ್ರ ಕಳುಹಿಸಲಾಗುತ್ತದೆ.
ಸಂಭವನೀಯ ಪರಿಷ್ಕೃತ ಬದಲಾವಣೆಗಳ ವಿವರ
1. ಸಂವಿಧಾನದ 8ನೇ ಅನುಚ್ಛೇದದಲ್ಲಿರುವ ಯಾವುದೇ ಭಾಷೆಯಲ್ಲಿ ಅಥವಾ ಇಂಗ್ಲಿಷ್‌ನಲ್ಲಿ ಪರೀಕ್ಷೆ ಬರೆಯಬಹುದು.
2. ಭಾಷಾ ಮಾಧ್ಯಮದ ಮೇಲೆ ವಿಧಿಸಲಾಗಿದ್ದ 25 ಅಭ್ಯರ್ಥಿಗಳ ನಿಗದಿತ ಸಂಖ್ಯೆಯ ಮಿತಿ ಹಾಗೂ ಪದವಿಯಲ್ಲಿ ಅದೇ ಭಾಷಾ ಮಾಧ್ಯಮದಲ್ಲಿ ಓದಿರಬೇಕು ಎಂಬ ನಿಬಂಧನೆಯನ್ನು ತೆಗೆದುಹಾಕಲಾಗಿದೆ. ಹಳೆಯ ಪದ್ಧತಿಯಂತೆಯೇ ಭಾಷಾ ಮಾಧ್ಯಮದ ಆಯ್ಕೆಯನ್ನು ಅಭ್ಯರ್ಥಿಗಳ ಇಚ್ಛೆಗೆ ಬಿಡಲಾಗಿದೆ. 
3. ಹಿಂದಿನಂತೆಯೇ ಅಭ್ಯರ್ಥಿಯು ಪದವಿಯಲ್ಲಿ ಯಾವುದೇ ಐಚ್ಛಿಕ ವಿಷಯ ತೆಗೆದುಕೊಂಡು ಓದಿದ್ದರೂ ಮುಖ್ಯ ಪರೀಕ್ಷೆಯಲ್ಲಿ ಪ್ರಾದೇಶಿಕ ಭಾಷಾ ಸಾಹಿತ್ಯ (ಸಂವಿಧಾನ ಅನುಮೋದಿಸಿದ 22 ಭಾಷೆಗಳು ಮತ್ತು ಇಂಗ್ಲಿಷ್) ಇವುಗಳಲ್ಲಿ ಯಾವುದಾದರೂ ಒಂದನ್ನು ಆಯ್ದುಕೊಳ್ಳಬಹುದು. ಪದವಿಯಲ್ಲಿ ಭಾಷಾ ಸಾಹಿತ್ಯ ಓದಿದ್ದರೆ ಅದೇ ವಿಷಯವನ್ನು ಆಯ್ದುಕೊಳ್ಳಬೇಕು ಎಂಬ ನಿಬಂಧನೆ ಇಲ್ಲ.
4. ಕಡ್ಡಾಯ ಪ್ರಬಂಧ ಪತ್ರಿಕೆಯ ಜೊತೆ 100 ಅಂಕಗಳಿಗೆ ಸೇರಿಸಲಾಗಿದ್ದ ಕಡ್ಡಾಯ ಇಂಗ್ಲಿಷ್ ಕಾಂಪ್ರಿಹೆನ್ಷನ್ ಮತ್ತು ಪ್ರೆಸಿ (ಸಂಕ್ಷೇಪೀಕರಣ) ಭಾಗವನ್ನು ಕೈಬಿಡಲಾಗಿದೆ. ಇನ್ನು ಮುಂದೆ ಪ್ರಬಂಧ 200 ಅಂಕಗಳಿಗೆ ಬದಲಾಗಿ 250 ಅಂಕಗಳಿಗೆ ಇರುತ್ತದೆ. ಈ ಮೊದಲು ಇದ್ದ ಅರ್ಹತಾ ಸ್ವರೂಪದ ಕಡ್ಡಾಯ ಕನ್ನಡ ಅಥವಾ ಭಾರತೀಯ ಭಾಷೆ ಮತ್ತು ಇಂಗ್ಲಿಷ್ ಪತ್ರಿಕೆಗಳು ಮತ್ತೆ ಹಾಜರಾಗಲಿವೆ. ಇವುಗಳ ಅಂಕಗಳನ್ನು ಅರ್ಹತಾ ಮಟ್ಟಕ್ಕೆ ಮಾತ್ರ ಪರಿಗಣಿಸಲಾಗುತ್ತದೆ ವಿನಃ ಮುಖ್ಯ ಪರೀಕ್ಷೆಯ ಅಂಕಗಳೊಂದಿಗೆ ಸೇರಿಸುವುದಿಲ್ಲ. 
ಒಂದು ವೇಳೆ ಮೇಲಿನ ಈ ಎಲ್ಲ ಉದ್ದೇಶಿತ ಬದಲಾವಣೆಗಳು ಜಾರಿಗೆ ಬಂದಿದ್ದೇ ಆದಲ್ಲಿ, ಪರೀಕ್ಷೆ ಬರೆಯುವ ಭಾಷಾ ಮಾಧ್ಯಮ ಆಯ್ಕೆಗೆ ಇದ್ದ ಅಡೆತಡೆಗಳು ನಿವಾರಣೆಯಾಗಲಿವೆ.
ಪೂರ್ವಭಾವಿ ಪರೀಕ್ಷೆ
2013ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯ ಪೂರ್ವಭಾವಿ ಪರೀಕ್ಷೆಗಳಿಗೆ ಇದೇ ಮಾರ್ಚ್ 5ರಂದು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು. ಕೇಂದ್ರ ಗೆಜೆಟ್‌ನಲ್ಲಿ ಈ ಕುರಿತು ಪ್ರಕಟಣೆ ಹೊರಬಿದ್ದಿದೆ. ಪರೀಕ್ಷೆಗಳು ಮೇ 26ರಂದು ನಡೆಯಲಿವೆ. ಪೂರ್ವಭಾವಿ ಪರೀಕ್ಷೆಯ ಮಾದರಿ ಎರಡು ವರ್ಷಗಳ ಹಿಂದಷ್ಟೇ ಬದಲಾಗಿರುವ ಹಿನ್ನೆಲೆಯಲ್ಲಿ, ಯಾವುದೇ ಹೊಸ ಮಾರ್ಪಾಡುಗಳು ಈ ಪರೀಕ್ಷೆಗೆ ಅನ್ವಯಿಸುವುದಿಲ್ಲ.
ಇಂಡಿಯನ್ ಫಾರೆಸ್ಟ್ ಸರ್ವೀಸ್ ಪರೀಕ್ಷೆ ತೆಗೆದುಕೊಳ್ಳುವವರು ಈ ಬಾರಿ ಸಿವಿಲ್ ಸರ್ವೀಸಸ್ ಪ್ರಿಲಿಮಿನರಿ ಪರೀಕ್ಷೆಗೆ ಕರೆದಿರುವ ಅರ್ಜಿಯನ್ನೇ ಸಲ್ಲಿಸಬೇಕು. ಅಭ್ಯರ್ಥಿಗಳು ಸಿವಿಲ್ ಸರ್ವೀಸಸ್ (ಸುಮಾರು 1000+ ಹುದ್ದೆಗಳು) ಮತ್ತು ಐಎಫ್‌ಎಸ್‌ನಲ್ಲಿ (ಸುಮಾರು 85 ಹುದ್ದೆಗಳು) ಯಾವುದಾದರೂ ಒಂದನ್ನು ಅಥವಾ ಎರಡನ್ನೂ ಆಯ್ಕೆ ಮಾಡಿಕೊಳ್ಳಬಹುದು.  ಎರಡನ್ನೂ ಆಯ್ಕೆ ಮಾಡಿಕೊಳ್ಳುವ ಅಭ್ಯರ್ಥಿಗಳ ಅನುಕೂಲಕ್ಕಾಗಿ ಸಿವಿಲ್ ಸರ್ವೀಸಸ್ ಮತ್ತು ಫಾರೆಸ್ಟ್ ಸರ್ವೀಸಸ್ ಮುಖ್ಯ ಪರೀಕ್ಷೆಗಳನ್ನು ಪ್ರತ್ಯೇಕ ದಿನಾಂಕಗಳಂದು ನಡೆಸಲಾಗುತ್ತದೆ.
ಪೂರ್ವಭಾವಿ ಪರೀಕ್ಷೆಯ ಪಠ್ಯಕ್ರಮ
ಪತ್ರಿಕೆ 1: ಸಾಮಾನ್ಯ ಜ್ಞಾನ- 200 ಅಂಕಗಳು- ಅವಧಿ ಎರಡು ಗಂಟೆ

*ಪ್ರಸಕ್ತ ವಿದ್ಯಮಾನ- ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಗತಿಗಳು.
*ಭಾರತದ ಇತಿಹಾಸ ಮತ್ತು ಭಾರತೀಯ ಸ್ವಾತಂತ್ರ್ಯ ಸಂಗ್ರಾಮ.
*ಭಾರತ ಮತ್ತು ಪ್ರಪಂಚದ ಭೌಗೋಳಿಕ, ಸಾಮಾಜಿಕ, ಆರ್ಥಿಕ ಅಂಶ.
*ಭಾರತದ ರಾಜಕೀಯ ವ್ಯವಸ್ಥೆ ಮತ್ತು ಆಡಳಿತ ವ್ಯವಸ್ಥೆ- ಸಂವಿಧಾನ, ರಾಜಕೀಯ ಪದ್ಧತಿ, ಪಂಚಾಯತ್ ರಾಜ್, ಸಾರ್ವಜನಿಕ ಯೋಜನೆಗಳು, ಹಕ್ಕುಗಳು, ಪ್ರಚಲಿತ ಸಂಗತಿಗಳು ಇತ್ಯಾದಿ.
*ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ- ಸುಸ್ಥಿರ ಅಭಿವೃದ್ಧಿ, ಬಡತನ ನಿರ್ಮೂಲನೆ, ಜನಸಂಖ್ಯೆ, ವಿವಿಧ ಯೋಜನೆಗಳು ಇತ್ಯಾದಿ.
*ಪರಿಸರ ಅಧ್ಯಯನ, ಜೈವಿಕ ವೈವಿಧ್ಯ, ಹವಾಮಾನ ವೈಪರೀತ್ಯ ಮುಂತಾದ ಸಂಗತಿಗಳು, ಸಮಸ್ಯೆಗಳು ಇತ್ಯಾದಿ. (ಈ ವಿಷಯಗಳಲ್ಲಿ ತುಂಬಾ ಆಳವಾದ ಪರಿಣತಿಯ ಅಗತ್ಯ ಇಲ್ಲ.)
*ಸಾಮಾನ್ಯ ವಿಜ್ಞಾನ.
ಪತ್ರಿಕೆ 2: ಸಿವಿಲ್ ಸರ್ವೀಸ್ ಆ್ಯಪ್ಟಿಟ್ಯೂಡ್- ಅಂಕ 200 - ಅವಧಿ ಎರಡು ಗಂಟೆ
*ಮಾಹಿತಿಯನ್ನು ಅರ್ಥೈಸಿಕೊಂಡು ಉತ್ತರಿಸುವುದು (ಕಾಂಪ್ರಿಹೆನ್ಷನ್)
*ಸಂವಹನ ಕೌಶಲ ಮತ್ತು ವೈಯಕ್ತಿಕ ಕೌಶಲ (ಇಂಟರ್‌ಪರ‌್ಸನಲ್ ಸ್ಕಿಲ್ಸ್)
*ತಾರ್ಕಿಕ ಆಲೋಚನೆ, ತುಲನಾತ್ಮಕ ಸಾಮರ್ಥ್ಯ
*ತೀರ್ಮಾನ ಕೈಗೊಳ್ಳುವ ಸಾಮರ್ಥ್ಯ
*ಸಾಮಾನ್ಯ ಬೌದ್ಧಿಕ ಸಾಮರ್ಥ್ಯ
*ಸಂಖ್ಯಾ ಮೂಲಾಂಶಗಳು (ಸಂಖ್ಯೆಗಳು ಮತ್ತು ಅವುಗಳಿಗಿರುವ ಸಂಬಂಧ, ಏರಿಕೆ ಮತ್ತು ಇಳಿಕೆ ಕ್ರಮ, ಇತ್ಯಾದಿ), ದತ್ತಾಂಶ ವಿಶ್ಲೇಷಣೆ (ಚಾರ್ಟ್, ಗ್ರಾಫ್, ಟೇಬಲ್, ದತ್ತಾಂಶ ಇತ್ಯಾದಿ - ಹತ್ತನೇ ತರಗತಿಯ ಮಟ್ಟದ್ದು)
*ಇಂಗ್ಲಿಷ್ ಭಾಷೆಯ ಮಾಹಿತಿಯನ್ನು ಅರ್ಥೈಸಿಕೊಂಡು ಉತ್ತರಿಸುವ ಕೌಶಲ.
*ಇಂಗ್ಲಿಷ್ ಕಾಂಪ್ರಿಹೆನ್ಷನ್
ಪರೀಕ್ಷೆ ಇಲ್ಲಿ ನಡೆಯಲಿದೆ
ಕೇಂದ್ರ ನಾಗರಿಕ ಸೇವಾ ಪೂರ್ವಭಾವಿ ಪರೀಕ್ಷೆ ನಡೆಯಲಿರುವ ಕೇಂದ್ರಗಳು ಬೆಂಗಳೂರು ಮತ್ತು ಧಾರವಾಡ. ಅಂಧ ಅಭ್ಯರ್ಥಿಗಳು ಚೆನ್ನೈ, ದೆಹಲಿ, ಹೈದರಾಬಾದ್, ಕೋಲ್ಕತ್ತ, ಲಖನೌ, ಡಿಸ್‌ಪುರ್ ಮತ್ತು ಮುಂಬೈ ಕೇಂದ್ರಗಳಲ್ಲಿ ಯಾವುದಾದರೂ ಒಂದನ್ನು ಆಯ್ದುಕೊಳ್ಳಬೇಕು.
 
ಹೆಚ್ಚಿನ ವಿವರಗಳಿಗೆ ನೋಡಿ: www.upsc.gov.in/exams/exams.htm
                                  www.upsconline.nic.in
 UPSC Mains 2013 Syllabus Changed - Article in Prajavani Shikshana 25 March 2013

Saturday, 23 March 2013

Belagere Krishna Shastri (22.05.1918 - 22.03.2013)





Belagere Krishna Shastri (22.05.1918 - 22.03.2013)
 
Let the The Great Soul Rest in Peace.
We Miss You Sir, Really.
Sri Shastriji's body will be kept at Tumkur (Till 12.30 PM), Hiriyuru (Till 4 PM), Challakere (Till 6 PM), Belagere-Narayanapura (Till 10.30 AM on 24.03.2013)
Cremation will be at Belagere-Narayanapura, Challkere Taluk, at 10.30 AM
The Mentor finds a place with his Mentor.

Monday, 18 March 2013

Pareeksha Mitra of Hassan - Article in Prajavani Shikshana 18 March 2013

ಇಲ್ಲಿದ್ದಾನೆ ಪರೀಕ್ಷಾ ಮಿತ್ರ
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸುವ ಹಂಬಲ ಹಲವರಿಗಿದ್ದರೆ, ಕನಿಷ್ಠ ಅಂಕಗಳನ್ನಾದರೂ ತೆಗೆದುಕೊಂಡು ಪಾಸಾದರೆ ಸಾಕು ಎನ್ನುವ ಕೆಲವರಾದರೂ ಇದ್ದಾರೆ. ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳು, ಕೂಲಿ ಮಾಡಿಕೊಂಡೇ ಓದಲಿಕ್ಕೆ ಬರುವ ಕಷ್ಟಜೀವಿಗಳು `ಹೇಗಾದರೂ ಸರಿ ಎಸ್ಸೆಸ್ಸೆಲ್ಸಿ ಮುಗಿಸಿಕೊಂಡರೆ ಮುಂದೆ ಏನಾದರೂ ಮಾಡಬಹುದು' ಎಂದು ಕನಸು ಕಾಣುತ್ತಿರುತ್ತಾರೆ. ಇಂತಹವರ ನೆರವಿಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಹಾಸನ ಘಟಕವು ವಿವಿಧ ವಿಷಯಗಳ ಶಿಕ್ಷಕರ ಕ್ಲಬ್‌ಗಳು ಮತ್ತು ಮುಖ್ಯೋಪಾಧ್ಯಾಯರ ಸಂಘದ ಸಹಕಾರದೊಂದಿಗೆ `ಪರೀಕ್ಷಾ ಮಿತ್ರ' ಹೆಸರಿನ ಪ್ರಶ್ನೆ ಕೋಠಿಗಳನ್ನು ಹೊರತಂದಿದೆ.
ಪರೀಕ್ಷೆಗೆ ನಿಗದಿಪಡಿಸಿರುವ ನೀಲಿ ನಕ್ಷೆ ಆಧಾರದಲ್ಲಿ ಎಸ್ಸೆಸ್ಸೆಲ್ಸಿಯ ಆರು ವಿಷಯಗಳಲ್ಲಿ `ಪರೀಕ್ಷಾ ಮಿತ್ರ' ಪ್ರಶ್ನೆ ಕೋಠಿಗಳನ್ನು ಮತ್ತು ಆರು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ತಯಾರಿಸಿ ಶಾಲೆಗಳಿಗೆ ನೀಡಲಾಗಿದೆ. ಅವುಗಳನ್ನು ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳ ಉಪಯೋಗಕ್ಕಾಗಿ ಅಂತರ್ಜಾಲದಿಂದಲೂ ಪಡೆದುಕೊಳ್ಳುವಂತೆ ಬ್ಲಾಗ್‌ಗಳಲ್ಲಿ ಅಳವಡಿಸಲಾಗಿದೆ. ಆಸಕ್ತರು ಮೇಲಿನ ವಿಳಾಸದ ಬ್ಲಾಗ್‌ಗಳಿಂದ ಪರೀಕ್ಷಾ ಮಿತ್ರ ಕೈಪಿಡಿಗಳನ್ನು, ಪ್ರಶ್ನೆಪತ್ರಿಕೆ ಮತ್ತು ಮಾದರಿ ಉತ್ತರ ಪತ್ರಿಕೆಗಳನ್ನು, ವರ್ಕ್‌ಬುಕ್‌ಗಳನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
-ಬಿ.ಎಂ. Bedre Manjunath
Pareeksha Mitra of Hassan - Article in Prajavani Shikshana 18 March 2013

Doodle - Google Uncle Jothe Maathu-Kathe - Informative Literature for Children - A Faction

New Year - New Book - New Look - Thank you Navakarnataka Publications , Late Sri R.S. Rajaram, Sri Ramesh Udupa, Sri Sathyanarayana Alevoora...