Friday 1 August, 2008

KALPANE - POEM BY BEDRE MANJUNATH - MAYURA MONTHLY 2008 AUGUST


KALPANE - POEM

BEDRE MANJUNATH

MAYURA MONTHLY

2008 AUGUST

ಬದುಕಿನ ಪಾಠ ನಡೆದಿದೆ

ಪ್ರಕೃತಿಯ ಮಡಿಲಲ್ಲಿ
ಭೂದೇವಿ ಗುಡಿಯಲ್ಲಿ
ಮಣ್ಣ ಕಣ ಕಣದಲ್ಲಿ.

ಅಕ್ಷರ ತಿದ್ದುವ ಕೈಗಳು
ನೇಗಿಲ ಹಿಡಿದಿವೆ ಇಲ್ಲಿ
ಜೋಡೆತ್ತಿನ ಜೊತೆಯಲ್ಲಿ
ಉತ್ತು ಬಿತ್ತುವ ಕಾಯಕದಲ್ಲಿ.

ಬೆಳೆವ ಸಿರಿ ಮೊಳಕೆಯಲ್ಲಿ
ಭವ್ಯ ಭವಿಷ್ಯದ ಬಯಕೆಯಲ್ಲಿ
ಸವಿಗನಸುಗಳ ಸಾಕ್ಷಾತ್ಕಾರದಲ್ಲಿ
ಮಣ್ಣ ಮಕ್ಕಳು ತೊಡಗಿಹರಿಲ್ಲಿ.

ಅನ್ನದಾತ ಚಿಣ್ಣರೇ, ಕೇಳಿರಿ ಇಲ್ಲಿ
ಮಣ್ಣ ಕಾಯಕದ ಜೊತೆ ಜೊತೆಯಲ್ಲಿ
ಓದು ಬರಹ ಕಲಿಯಿರಿ ಶಾಲೆಗಳಲ್ಲಿ
ಶ್ರಮಿಸಿರಿ ಸಾಕ್ಷರ ನಾಡನು ಕಟ್ಟುವಲ್ಲಿ.

ದೇಶದ ಭವ್ಯ ಭವಿಷ್ಯವೇ ನೀವು
ಮೇಟಿ ವಿದ್ಯೆ ಕಲಿಯದಿರೆ ಸಾವು
ಬಿತ್ತಿರಿ ಸುಖ ಸಮೃದ್ಧಿಯ ಕನಸುಗಳನೀಗ
ಪಡೆಯಿರಿ ಶಾಂತಿ ನೆಮ್ಮದಿಯ ಫಸಲು ಬೇಗ.

(ಮಯೂರ ಮಾಸಿಕದ ಕಲ್ಪನೆ ಕವನ - ಜೂನ್ 2008) 

ಕಲ್ಪನೆ : ಬೇದ್ರೆ ಮಂಜುನಾಥ

08 Kinder Katha Books for Children (Senior) - Introduction by Bedre Manjunath in Vishwavani 26.02.2023

    08 Kinder Katha Books for Children (Senior) - Introduction by Bedre Manjunath in Vishwavani 26.02.2023 - Thank you Editors, Shashidhara...