Tuesday 29 January, 2013

LEAD Prayana 2013 - Article in Udayavani Josh 29 Jan 2013


LEAD Prayana 2013 - Article in Udayavani Josh 29 Jan 2013
Udayavani
  • ಮಹಾ ಪ್ರಯಾಣ: 2000 ಕಿಲೋಮೀಟರ್‌ಗಳ ಸುತ್ತಾಟ

  • ದೇಶದ ವಿವಿಧ ರಾಜ್ಯಗಳಿಂದ ಬಂದ 100 ಉತ್ಸಾಹಿ ಯುವಜನರು.

    • Udayavani | Jan 28, 2013
      ದೇಶದ ವಿವಿಧ ರಾಜ್ಯಗಳಿಂದ ಬಂದ 100 ಉತ್ಸಾಹಿ ಯುವಜನರು. 
      14 ದಿನಗಳು. 
      12 ಸಾಧಕರ(ರೋಲ್‌ಮಾಡೆಲ್‌) ಭೇಟಿ. 
      ಆಂಧ್ರ ಕರ್ನಾಟಕ ಸೇರಿ 9 ಆಯ್ದ ಸಾಧನಾ ಕ್ಷೇತ್ರಗಳು. 
      ಒಂದು ಮಹಾ ಪ್ರಯಾಣ! 

      ಇದೇ ಜನವರಿ 17ರಿಂದ ಆರಂಭಗೊಂಡು 30ರಂದು ಮುಕ್ತಾಯಗೊಳ್ಳುತ್ತಿರುವ ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಶನ್‌ ಆಯೋಜಿಸಿರುವ ಲೀಡ್‌ ಪ್ರಯಾಣ 2013 ಯುವನಾಯಕತ್ವವನ್ನು ಉತ್ತೇಜಿಸಿ ಬೆಳೆಸುವ, ನೋಡಿ-ಕಲಿಯುವ, ಮಾಡಿ-ತಿಳಿಯುವ, ಕನಸನ್ನು ಸಾಕಾರಗೊಳಿಸುವ ಅವಕಾಶವಾಗಿದೆ. 

      ಲೀಡ್‌ ಪ್ರಯಾಣ ಎಲ್ಲಿಗೆ? 
      ಜನವರಿ 17- ಹುಬ್ಬಳ್ಳಿಯಲ್ಲಿ ದೇಶಪಾಂಡೆ ಫೌಂಡೇಶನ್ನಿನ ಸಹಸ್ಥಾಪಕಿ ಜಯಶ್ರೀ ದೇಶಪಾಂಡೆಯಿಂದ ಲೀಡ್‌ ಪಯಣ 2013ಕ್ಕೆ ಚಾಲನೆ, ಸಾಧಕರ ಭೇಟಿಯ ಪ್ರಯಾಣ ಆರಂಭ 
      ಜನವರಿ 18- ಆಂಧ್ರದ ಕುಪ್ಪಂನಲ್ಲಿ ಅಗಸ್ತÂ ಇಂಟರ್‌ನ್ಯಾಷನಲ್‌ ಫೌಂಡೇಶನ್‌ಗೆ ಭೇಟಿ, ಶ್ರಮದಾನದ ಮೂಲಕ ಕಲಿಕೆ 
      ಜನವರಿ 19- ಕುಪ್ಪಂನಲ್ಲಿ ಪರಿಸರ ಪಯಣ- ಇಕೊ ವಾಕ್‌- ಅಗಸ್ತÂ ಇಂಟರ್‌ನ್ಯಾಷನಲ್‌ ಫೌಂಡೇಶನ್‌ ಸ್ಥಾಪಕ ರಾಮ್‌ಜಿ ರಾಘವನ್‌ ಜೊತೆ ಸಂವಾದ- ಬೆಂಗಳೂರಿಗೆ ಪಯಣ 
      ಜನವರಿ 20- ಬೆಂಗಳೂರಿನಲ್ಲಿ ಉದ್ಯಮಿಗಳಾದ ಮ್ಯಾಗ್ಸೆàಸೆ ಪ್ರಶಸ್ತಿ ಪುರಸ್ಕತ ಸೆಲ್ಕೊ ಸೋಲಾರ್‌ನ ಹರೀಶ್‌ ಹಂದೆ, ಅಘÂìಂ ಸಂಸ್ಥಾಪಕಿ ರೋಹಿಣಿ ನಿಲೇಕಣಿ, ದೇಶಪಾಂಡೆ ಫೌಂಡೇಶನ್ನಿನ ಸಿಇಓ ನವೀನ್‌ ಝಾ, ಸಂಕಲ್ಪ$ಸೆಮಿಕಂಡಕ್ಟರ್ನ ವಿವೇಕ್‌ ಪವಾರ್‌, ರೆಡ್‌ಬಸ್‌ ಸಂಸ್ಥೆಯ ಫ‌ಣೀಂದ್ರ ಸಮಾ ಮತ್ತು ಐಎಎಸ್‌ ಅಧಿಕಾರಿ ಪಿ.ಮಣಿವಣ್ಣನ್‌ ಮೊದಲಾದ ಸಾಧಕರೊಂದಿಗೆ ಸಂವಾದ, ಗುಂಪು ಚರ್ಚೆ 
      ಜನವರಿ 21- ದೊಡ್ಡಬಳ್ಳಾಪುರಕ್ಕೆ ಭೇಟಿ- ಸಾವಯವ ಕೃಷಿಯ ಪ್ರಾತ್ಯಕ್ಷಿಕೆ, ಪರಿಚಯ, ಪ್ರಯೋಗಾನುಭವ, ಕಾರ್ಯಾನುಭವ, ಹಿರಿಯ ಕೃಷಿತಜ್ಞ ಡಾ.ಎಲ್‌. ನಾರಾಯಣ ರೆಡ್ಡಿಯವರೊಂದಿಗೆ ಸಂವಾದ- ಮೈಸೂರಿನೆಡೆಗೆ ಪಯಣ 
      ಜನವರಿ 22- ಮೈಸೂರಿನಲ್ಲಿ ಸುತ್ತೂರು ಮಹಾಸಂಸ್ಥಾನದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರೊಂದಿಗೆ ಸಂವಾದ, ಜೆಎಸ್‌ಎಸ್‌ ಕೃಷಿ ವಿಜ್ಞಾನ ಕೇಂದ್ರ, ಜೆಎಸ್‌ಎಸ್‌ ವೈದ್ಯಕೀಯ ವಿಶ್ವವಿದ್ಯಾಲಯ, ಭೇಟಿ, ಕಲಿಕೆ, ಸಂವಾದ 
      ಜನವರಿ 23- ಮೈಸೂರಿನ ಇನ್‌ಫೋಸಿಸ್‌ ಕ್ಯಾಂಪಸ್‌ ಭೇಟಿ, ಸಾಧಕರ ಭೇಟಿ, ಸಂವಾದ, ಮಣಿಪಾಲದೆಡೆ ಪಯಣ 
      ಜನವರಿ 24- ಮಣಿಪಾಲ ವಿಶ್ವವಿದ್ಯಾಲಯಕ್ಕೆ ಭೇಟಿ, ಪೊ›-ಚಾನ್ಸಲರ್‌ ಡಾ.ಎಚ್‌.ಎಸ್‌. ಬÇÉಾಳ್‌ ಮತ್ತು ವೈಸ್‌ ಪೊ›-ಚಾನ್ಸಲರ್‌ ಡಾ.ಎಚ್‌. ವಿನೋದ್‌ ಭಟ್‌ ಅವರೊಂದಿಗೆ ಸಂವಾದ, ಗುಂಪು ಚರ್ಚೆ, ಮಂಗಳೂರಿಗೆ ಪಯಣ 
      ಜನವರಿ 25- ಮಂಗಳೂರಿನಲ್ಲಿ ಐಓಬಿ ಮುಖ್ಯ ವ್ಯವಸ್ಥಾಪಕ ಎಂ. ನರೇಂದ್ರ ಅವರೊಂದಿಗೆ ಸಂವಾದ, ಕ್ಯಾಂಪಸ್‌ ಭೇಟಿ, ಸಣ್ಣ ಕೈಗಾರಿಕೆಗಳಿಗೆ ಭೇಟಿ, ನ್ಯಾನೋಪಿಕ್ಸ್‌ಗೆ ಭೇಟಿ, ಧರ್ಮಸ್ಥಳಕ್ಕೆ ಪಯಣ 
      ಜನವರಿ 26- ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರೊಂದಿಗೆ ಸಂವಾದ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಪ್ರಾಜೆಕ್ಟ್ಗೆ ಭೇಟಿ, ಗ್ರಾಮೀಣಾಭಿವೃದ್ಧಿ ಚಟುವಟಿಕೆಗಳ ಪರಿಚಯ, ಭಾಗವಹಿಸುವಿಕೆಯ ಮೂಲಕ ಕಲಿಕೆ 
      ಜನವರಿ 27- ಹುಬ್ಬಳ್ಳಿ ಕಡೆಗೆ ಮರುಪ್ರಯಾಣ, ಮಾರ್ಗದಲ್ಲಿನ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ, ಚಟುವಟಿಕೆಗಳು
      ಜನವರಿ 28- ಹುಬ್ಬಳ್ಳಿಯಲ್ಲಿ ಇನ್‌ಫೋಸಿಸ್‌ನ ಸುಧಾಮೂರ್ತಿ ಅವರೊಂದಿಗೆ ಸಂವಾದ, ಕಲಕೇರಿಯ ಸಂಗೀತ ವಿದ್ಯಾಲಯಕ್ಕೆ ಭೇಟಿ, ವರೂರಿನ ವಿಆರ್‌ಎಲ್‌ ಕ್ಯಾಂಪಸ್‌ಗೆ ಭೇಟಿ, ಅಕ್ಷಯಪಾತ್ರ ಖ್ಯಾತಿಯ ಇಸ್ಕಾನ್‌ಗೆ ಭೇಟಿ, ಸಾಧಕರೊಂದಿಗೆ ಸಂವಾದ, ಚರ್ಚೆ, ಧಾರವಾಡಕ್ಕೆ ಪಯಣ 
      ಜನವರಿ 29- ಹುಬ್ಬಳ್ಳಿ-ಧಾರವಾಡದಲ್ಲಿನ ದೇಶಪಾಂಡೆ ಸಾಮಾಜಿಕ ಉದ್ಯಮಶೀಲತಾ ಕೇಂದ್ರಕ್ಕೆ ಮತ್ತು ಮಾರ್ಕೊಪೋಲೊ ಘಟಕಕ್ಕೆ ಭೇಟಿ, ದೇಶಪಾಂಡೆ ಫೌಂಡೇಶನ್ನಿನ ಗುರುರಾಜ ದೇಶಪಾಂಡೆ ಅವರೊಂದಿಗೆ ಸಂವಾದ, ವಿಚಾರ ವಿನಿಮಯ, ಚರ್ಚೆ 
      ಜನವರಿ 30- ಹುಬ್ಬಳ್ಳಿಯಲ್ಲಿ ದೇಶಪಾಂಡೆ ಫೌಂಡೇಶನ್‌ ಆಯೋಜಿಸಿರುವ ಯುವ ಸಮ್ಮೇಳನದಲ್ಲಿ ಭಾಗವಹಿಸಿ ಟಾಟಾ ಸಮೂಹದ ರತನ್‌ ಟಾಟಾ, ಇನ್‌ಫೋಸಿಸ್‌ನ ನಾರಾಯಣ ಮೂರ್ತಿ, ಡಾ. ರಫ‌ುನಾಥ ಮಾಶೆಲ್ಕರ್‌ ಅವರೊಂದಿಗೆ ಸಂವಾದ. ಪಯಣದ ಸಮಾರೋಪ. 

      ಲೀಡ್‌ ಪ್ರಯಾಣ ಏತಕ್ಕೆ? 
      ನೈಜಪರಿಸರದಲ್ಲಿ ಸಾಧಕರ ಅಂಗಳದಲ್ಲಿಯೇ ಸಾಧನೆಯ ಪರಿಚಯ, ಸಾಧನೆಯ ಹಾದಿಯ ಪ್ರತ್ಯಕ್ಷ ಅನುಭವ, ವೈವಿಧ್ಯಮಯ ಪರಿಸರ, ವಿವಿಧ ರಾಜ್ಯಗಳಿಂದ ಬಂದ ಪ್ರತಿಭಾವಂತರೊಂದಿಗೆ ಬೆರೆತು ಕಲಿಯುವುದು, ನಾಯಕತ್ವದ ಪರಿಚಯ ಮಾಡಿಕೊಂಡು ಭವಿಷ್ಯದ ನಾಯಕತ್ವದ ಜವಾಬ್ದಾರಿ ನಿರ್ವಹಿಸಲು ಬೇಕಾದ ತರಬೇತಿ ಪಡೆದುಕೊಳ್ಳುವುದು, ಪ್ರಾತ್ಯಕ್ಷಿಕೆಗಳಿಂದ ಕಲಿಯುವುದಕ್ಕೆ 2011ರಿಂದ ಪ್ರತಿ ವರ್ಷವೂ ಲೀಡ್‌ ಪಯಣ ನಡೆಯುತ್ತಲೇ ಬಂದಿದೆ. 
      ನಾಯಕತ್ವದ ಹೊಣೆಗಾರಿಕೆಯನ್ನು ಪರಿಚಯಿಸುವುದರ ಮೂಲಕ ಪ್ರತಿಯೊಬ್ಬರೂ ನಾಯಕರಾಗಿ ಹೊರಹೊಮ್ಮುವಂತೆ ಮಾಡುವ ದೂರದೃಷ್ಟಿಯಿಂದ ಯುವಜನರಲ್ಲಿ ವಿನೂತನ ಆಲೋಚನೆಗಳನ್ನು ಬೆಳೆಸುವ, ಹುರಿದುಂಬಿಸುವ, ಹೊಸತನ್ನು ಹುಡುಕಿ ತೆಗೆಯುವ ಆಸಕ್ತಿ ಕೆರಳಿಸುವ ಉದ್ದೇಶದೊಂದಿಗೆ ಕಲಿಕೆ, ಮುನ್ನುಗ್ಗುವಿಕೆ, ನಾಯಕತ್ವ ವಹಿಸಿಕೊಳ್ಳುವಿಕೆಯನ್ನು ಸಾಧಿಸಿ ತೋರಿಸುವ ಈ ಲೀಡರ್ ಆಕ್ಸಿಲರೇಟಿಂಗ್‌ ಡೆವಲಪ್‌ಮೆಂಟ್‌ ಪ್ರಯಾಣ ದೇಶದ ವಿವಿಧ ಪ್ರಾಂತ್ಯಗಳ ಜನರನ್ನು ಒಟ್ಟಿಗೆ ಸೇರಿಸಿ ಬಾಂಧವ್ಯ ಬೆಸೆಯುವುದರ ಜೊತೆ ಅರಿವಿನ ಹರಹನ್ನು ವಿಸ್ತರಿಸುವುದಾಗಿದೆ. 

      ಲೀಡ್‌ ಪ್ರಯಾಣದ ತಂಡ 
      ಜಯಶ್ರೀ ಮತ್ತು ಗುರುರಾಜ ದೇಶಪಾಂಡೆ ಅವರ ಮಾರ್ಗದರ್ಶನದಲ್ಲಿ ನವೀನ್‌ ಝಾ, ಅಜಯ್‌ ಸುಮನ್‌ ಶುಕ್ಲಾ ಅವರ ನಾಯಕತ್ವದಲ್ಲಿನ ಲೀಡ್‌ ತಂಡದ ಮ್ಯಾನೇಜರ್‌ಗಳಾಗಿ ದೀಪಶ್ರೀ ರಾಮ್‌ಮೋಹನ್‌, ರಾಧಾಕೃಷ್ಣ ನಾಯಕ್‌, ಪ್ರಶಾಂತ್‌ ದೇಶಪಾಂಡೆ, ಗೀತಾ ಹೆಗಡೆ, ಕವಿತಾ ಕೌಲಗಿ, ಅಮೃತ್‌ ಪಾಟೀಲ್‌, ಅಭಿನಂದನ್‌ ಕೆ, ವಿನೋದ್‌ ಕುಮಾರ್‌ ಮಾರ್ಗದರ್ಶನ ಮಾಡುತ್ತಿದ್ದು, ದೀಪಕ್‌ ಗಿರಿಯಾಪುರ ಅವರು ಮಾಸ್ಟರ್‌ ಲೀಡರ್‌ಶಿಪ್‌ ಅಡಿ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿ¨ªಾರೆ. ದೇಶದ 10 ರಾಜ್ಯಗಳಿಂದ 100 ಯುವಜನರನ್ನು ಮಾತ್ರ ಈ ಪ್ರಯಾಣಕ್ಕೆ ಆಯ್ಕೆಮಾಡಿ ಮೂರು ಬಸ್‌ಗಳಲ್ಲಿ ಸಂಚಾರಕ್ಕೆ ಕಳುಹಿಸಿಕೊಡಲಾಗಿದೆ. 

      ಏನಿದು ಲೀಡ್‌? 
      2008ರ ಆಗಸ್ಟ್‌ 15ರಂದು ಆರಂಭವಾದ ಲೀಡ್‌ ಕಾರ್ಯಕ್ರಮ ಯುವಜನರು, ಅದರಲ್ಲೂ ಮುಖ್ಯವಾಗಿ ತಾಂತ್ರಿಕ ಶಿಕ್ಷಣ ಪಡೆಯುವ ಯುವಜನರು ನಿರ್ಮಿಸುವ, ಸಂಘಟಿಸುವ ಪ್ರಾಜೆಕ್ಟ್ಗಳನ್ನು ಪ್ರೋತ್ಸಾಹಿಸುವ ಕಾರ್ಯಕ್ರಮವಾಗಿದ್ದು, ದೇಶಪಾಂಡೆ ಫೌಂಡೇಶನ್‌ ಈ ವಿಶೇಷ ಪ್ರಾಜೆಕ್ಟ್ಗಳನ್ನು ಬೆಂಬಲಿಸುವ, ನೆರವು ನೀಡುವ, ಉತ್ತಮ ಪಡಿಸುವ ಮತ್ತು ಹೆಚ್ಚಿನ ಅವಕಾಶ ಕಲ್ಪಿಸುವ ಕಾರ್ಯಕ್ರಮವಾಗಿದೆ. ಲೀಡ್‌ನ‌ ಹಣಕಾಸಿನ ನೆರವು ಮತ್ತು ಬೆಂಬಲದಿಂದ ಯುವನಾಯಕತ್ವವನ್ನು ಹುರಿದುಂಬಿಸುವ ಕನಸು ಮತ್ತು ಅದನ್ನು ಸಾಕಾರಗೊಳಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಜವಾಬ್ದಾರಿ ಇದರಲ್ಲಿದೆ. ಉತ್ತರ ಕರ್ನಾಟಕ ಭಾಗದ ಹಲವು ತಾಂತ್ರಿಕ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳು ಈ ಪ್ರಾಜೆಕ್ಟ್‌ನ ಪ್ರಯೋಜನ ಪಡೆದುಕೊಳ್ಳುತ್ತಿ¨ªಾರೆ ಮತ್ತು ಲೀಡ್‌ ಕಾರ್ಯಕ್ರಮಕ್ಕೆ ಹೆಸರು ನೊಂದಾಯಿಸಿ¨ªಾರೆ. 

      ಲೀಡ್‌ನ‌ಲ್ಲಿ ಯಾರು ಭಾಗವಹಿಸಬಹುದು? 
      ಸೇವಾ ಮನೋಭಾವ ಇರುವ, ಕ್ರಿಯೇಟಿವ್‌ ಐಡಿಯಾಗಳ ಸಾಕಾರಕ್ಕಾಗಿ ಕಾತರಿಸುತ್ತಿರುವ, ನಾಯಕತ್ವ ಗುಣಗಳಿರುವ, ತಾನೂ ಬೆಳೆಯುತ್ತಾ ತನ್ನ ತಂಡವನ್ನು ಬೆಳೆಸಲು ಉತ್ಸುಕನಾಗಿರುವ ಯಾವುದೇ ಕಾಲೇಜು ಅಥವಾ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ವಿದ್ಯಾರ್ಥಿ ಈ ಪ್ರಾಜೆಕ್ಟ್ಗಳನ್ನು ಪ್ರಸ್ತುತಪಡಿಸಲು ಮತ್ತು ಲೀಡ್‌ ಸದಸ್ಯತ್ವ ತೆಗೆದುಕೊಳ್ಳಲು ಅರ್ಹನಾಗಿರುತ್ತಾನೆ. ತನ್ನ ಸುತ್ತಲಿನ ಸಮಾಜದ ಉಪಯೋಗಕ್ಕೆ ಬರುವಂತಹ ಯಾವುದಾದರೂ ಒಂದು ಪ್ರಾಜೆಕ್ಟನ್ನು ಹಾಕಿಕೊಂಡು, ತನ್ನೊಂದಿಗೆ ಐದು ಮಂದಿಯ ತಂಡವನ್ನು ಕಟ್ಟಿಕೊಂಡು, ಕನಿಷ್ಟ ವಾರಕ್ಕೆ 4-5 ಗಂಟೆಗಳಷ್ಟು ಸಮಯ ಕಾರ್ಯನಿರ್ವಹಿಸಲು ಸಿದ್ಧವಿರುವವರು ಈ ಲೀಡ್‌ ಕಾರ್ಯಕ್ರಮದ ನೆರವು ಪಡೆಯಬಹುದು. 
      ಈಗಾಗಲೇ ಲೀಡ್‌ ಐಡಿಯಾ ಬ್ಯಾಂಕಿನಲ್ಲಿ 178ಕ್ಕೂ ಹೆಚ್ಚು ಐಡಿಯಾಗಳ ಪಟ್ಟಿಯೇ ಇದ್ದು ದಿನದಿನವೂ ಇದು ಬೆಳೆಯುತ್ತಿದೆ. ಇವುಗಳ ಜೊತೆಗೆ ತಮ್ಮದೇ ಹೊಸ ಐಡಿಯಾಗಳನ್ನು ಸೇರಿಸಲು ವಿದ್ಯಾರ್ಥಿಗಳಿಗೆ ಅವಕಾಶ ಇದ್ದೇ ಇದೆ. 

      ಯುವ ಸಮಾವೇಶ- 2013 
      ಲೀಡ್‌ ಮೇಳ ಎಂದು ಪ್ರಚಲಿತವಿದ್ದ ಈ ಯುವ ಉತ್ಸಾಹಿಗಳ ವಾರ್ಷಿಕ ಸಮಾವೇಶ 2011 ರಿಂದ ಯುವ ಮೇಳವಾಗಿ(ಯೂತ್‌ ಸಮಿಟ್‌) ಆಯೋಜಿತಗೊಳ್ಳುತ್ತಿದ್ದು, 2012ರ ಜನವರಿ 15 ರಂದು 2ನೇ ಯುವಮೇಳ ನಡೆದಿತ್ತು. ಇದೀಗ 2013ರ ಜನವರಿ 30ರಂದು ಹುಬ್ಬಳ್ಳಿಯ ವಿದ್ಯಾನಗರದ ಬಿವಿಬಿ ಇಂಜಿನಿಯರಿಂಗ್‌ ಕಾಲೇಜ್‌ ಕ್ಯಾಂಪಸ್‌ನಲ್ಲಿನ ದೇಶಪಾಂಡೆ ಫೌಂಡೇಶನ್ನಿನ ಲೀಡ್‌ ಕೇಂದ್ರದಲ್ಲಿ 3ನೇ ಯುವಮೇಳ ಆಯೋಜಿತವಾಗಿದ್ದು 2000ಕ್ಕೂ ಹೆಚ್ಚು ಯುವ ಉತ್ಸಾಹಿಗಳು ಭಾಗವಹಿಸುತ್ತಿ¨ªಾರೆ. ಟಾಟಾ ಸಂಸ್ಥೆಗಳ ನಿವೃತ್ತ ಛೇರ¾ನ್‌ ರತನ್‌ ಟಾಟಾ ಅವರು ಪ್ರಧಾನ ಭಾಷಣ ಮಾಡಲಿದ್ದು, ಇನ್‌ಫೊಸಿಸ್‌ನ ಎನ್‌.ಆರ್‌. ನಾರಾಯಣ ಮೂರ್ತಿ, ಸುಧಾ ಮೂರ್ತಿ, ಡಾ. ರಘುನಾಥ್‌ ಮಾಶೆಲ್ಕರ್‌, ಡಾ. ಗುರುರಾಜ ದೇಶ್‌ ದೇಶಪಾಂಡೆ, ಲಕ್ಷಿ¾à ಪ್ರಾಚುರಿ, ರಮೇಶ್‌ ರಾಸ್ಕರ್‌ ಮೊದಲಾದವರು ಈ ಸಮಾವೇಶದಲ್ಲಿ ಯುವ ಉತ್ಸಾಹಿಗಳಿಗೆ ಮಾರ್ಗದರ್ಶನ ಮಾಡಲಿ¨ªಾರೆ, ಸಂವಾದ, ಚರ್ಚೆಗಳಲ್ಲಿ ಭಾಗವಹಿಸಲಿ¨ªಾರೆ. 

      ದೇಶಪಾಂಡೆ ಪ್ರತಿಷ್ಠಾನ 
      ಸುಧಾ ಮೂರ್ತಿಯವರ ಸಹೋದರಿ ಜಯಶ್ರೀ ದೇಶಪಾಂಡೆ ಮತ್ತು ಗುರುರಾಜ ದೇಶಪಾಂಡೆ ಅವರು ದೇಶಪಾಂಡೆ ಪ್ರತಿಷ್ಠಾನವನ್ನು 1996ರಲ್ಲಿ ಸ್ಥಾಪಿಸಿದರು. ವಿದೇಶಗಳಲ್ಲಿ ಮಾತ್ರವಲ್ಲದೇ ಭಾರತದಲ್ಲಿಯೂ ಸಂಶೋಧನೆ, ಕೌಶಲ್ಯ ಮತ್ತು ಸಾಮಾಜಿಕ ಕಳಕಳಿ ಇರುವ ಉದ್ಯಮಶೀಲ ಯುವಜನರನ್ನು ಸಂಘಟಿಸಲು 2007ರಲ್ಲಿ ಹುಬ್ಬಳ್ಳಿ-ಧಾರವಾಡ ವಲಯದ ದೇಶಪಾಂಡೆ ಸಾಮಾಜಿಕ ಉದ್ಯಮಶೀಲತಾ ಕೇಂದ್ರವನ್ನು ಆರಂಭಿಸಿದರು. ಲೀಡ್‌ ಕಾರ್ಯಕ್ರಮವು ಈ ಸಾಮಾಜಿಕ ನಾಯಕತ್ವದ ಭಾಗವಾಗಿ ಉತ್ತರಕರ್ನಾಟಕದ ಜಿÇÉೆಗಳಲ್ಲಿನ ವಿದ್ಯಾರ್ಥಿಗಳನ್ನು ಸೆಳೆಯುತ್ತಿದೆ. ದೇಶಪಾಂಡೆ ಫೌಂಡೇಶನ್ನಿನ ಸಮರ್ಥ ಮಾರ್ಗದರ್ಶನ ಮತ್ತು ಸ್ಟೈಫ‌ಂಡ್‌ನ‌ ನೆರವಿನಿಂದ ಹಲವು ಹೊಸ ಸಂಶೋಧನೆಗಳು, ಪ್ರಾಜೆಕ್ಟ್ಗಳು ನಿರ್ಮಾಣಗೊಳ್ಳುತ್ತಿವೆ. ಲೀಡ್‌ ಕಾರ್ಯಕ್ರಮದ ಸದಸ್ಯತ್ವ ಪಡೆಯುವ ವಿದ್ಯಾರ್ಥಿಗಳಿಗೆ ಅವರಿಗೆ ಜಗತ್ತಿನ ಹಲವು ಸಾಧಕರನ್ನು (ರೋಲ್‌ಮಾಡೆಲ್‌) ಭೇಟಿಯಾಗುವ, ಅವರೊಡನೆ ಸಂವಾದ ನಡೆಸುವ ಅವಕಾಶ ಲಭಿಸುತ್ತಿದೆ. ಅವರಲ್ಲಿರುವ ಐಡಿಯಾಗಳನ್ನು ಕಾರ್ಯರೂಪಕ್ಕೆ ತರಲು, ಪ್ರಾಜೆಕ್ಟ್ಗಳನ್ನು ಹಮ್ಮಿಕೊಳ್ಳಲು, ಸ್ಥಳೀಯ ಸಮುದಾಯಗಳೊಂದಿಗೆ ಸಂವಾದ ನಡೆಸಿ ಅವರ ಅಗತ್ಯಗಳಿಗೆ, ಅನುಕೂಲಗಳಿಗೆ ಸರಿಹೊಂದುವ ಸಾರ್ವಜನಿಕ ಸೌಕರ್ಯಗಳನ್ನು ನಿರ್ಮಿಸಲು, ಸಂವಹನ ಕೌಶಲಗಳನ್ನು ಹೆಚ್ಚಿಸಿಕೊಳ್ಳಲು, ಪ್ರಾತ್ಯಕ್ಷಿಕೆ ಮತ್ತು ಪ್ರತ್ಯಕ್ಷÂ ಕಲಿಕೆ, ಅನುಭವ ಗಳಿಸಿಕೊಳ್ಳಲು, ನಾಯಕತ್ವ ವಹಿಸಲು ಉತ್ತಮ ಅವಕಾಶಗಳು ಸಿಗುತ್ತಿವೆ. 

      ಐಎಎಸ್‌, ಐಪಿಎಸ್‌ ಪೂರ್ವಭಾವಿ ಪರೀಕ್ಷೆ 
      ಕೇಂದ್ರ ಲೋಕಸೇವಾ ಆಯೋಗ ನಡೆಸುವ ಗೆಝೆಟೆಡ್‌ ಪೊ›ಬೆಷನರ್‌ಗಳ ನೇಮಕಾತಿ ಪೂರ್ವಭಾವಿ (ಪ್ರಿಲಿಮಿನರಿ) ಪರೀಕ್ಷೆಯ 2013ರ ವೇಳಾಪಟ್ಟಿಯನ್ನು ಈಗಾಗಲೇ ಪ್ರಕಟಿಸಿದ್ದು ಇದೇ ಫೆಬ್ರವರಿ 02ರಂದು ಲೋಕಸೇವಾ ಆಯೋಗದ ವೆಬ್‌ಸೈಟ್‌, ಎಂಪ್ಲಾಯ್‌ಮೆಂಟ್‌ ನ್ಯೂಸ್‌ ವಾರಪತ್ರಿಕೆ ಮತ್ತು ಪ್ರಮುಖ ಸುದ್ದಿ ಪತ್ರಿಕೆಗಳಲ್ಲಿ ವಿವರವಾದ ಪ್ರಕಟಣೆ ಹೊರಡಿಸಲಿದೆ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನ 2013ರ ಮಾರ್ಚ್‌ 4 ಆಗಿದ್ದು, ಪೂರ್ವಭಾವಿ ಪರೀಕ್ಷೆ ನಡೆಯುವ ದಿನ 2012ರ ಮೇ 19 ಆಗಿರುತ್ತದೆ. ಹಾಗೆಯೇ ಮುಖ್ಯ ಪರೀಕ್ಷೆಗಳು 2013ರ ನವೆಂಬರ್‌ 08 ರಿಂದ ಆರಂಭಗೊಂಡು 21 ದಿನಗಳ ಕಾಲ ನಡೆಯುತ್ತವೆ. 
      ಕರ್ನಾಟಕದಲ್ಲಿ ಪರೀûಾ ಕೇಂದ್ರಗಳು: ಬೆಂಗಳೂರು ಮತ್ತು ಧಾರವಾಡ. ವಿವರವಾದ ಸಿಲಬಸ್‌ ಮತ್ತು ಸೂಚನೆಗಳಿಗಾಗಿ ಬರುವ ವಾರದ ಎಂಪ್ಲಾಯ್‌ಮೆಂಟ್‌ ನ್ಯೂಸ್‌ ವಾರಪತ್ರಿಕೆ ನೋಡಿ. ಗುಡ್‌ಲಕ್‌! ಹೆಚ್ಚಿನ ಮಾಹಿತಿ ಹಾಗು ಮಾದರಿ ಪತ್ರಿಕೆಗಳಿಗಾಗಿ ಈ ಕೆಲವು ಜಾಲತಾಣಗಳನ್ನು ಸಂಪರ್ಕಿಸಬಹುದು: 

      ಕಂಬೈನ್‌x ಗ್ರಾಜುಯೆಟ್‌ ಲೆವೆಲ್‌ ಪರೀಕ್ಷೆ 2013 
      ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ವಿವಿಧ ಹು¨ªೆಗಳಿಗಾಗಿ ಸ್ಟಾಫ್ ಸೆಲೆಕ್ಷನ್‌ ಕಮಿಷನ್‌ ನಡೆಸುವ ಕಂಬೈನ್‌x ಗ್ರಾಜುಯೆಟ್‌ ಲೆವೆಲ್‌ ಪ್ರಥಮ ಹಂತದ (ಟೈರ್‌-1) ಪರೀಕ್ಷೆಯ 2013ರ ವೇಳಾಪಟ್ಟಿಯನ್ನು ಈಗಾಗಲೇ ಪ್ರಕಟವಾಗಿದೆ. ಇದೇ ಜನವರಿ 19 ರಿಂದ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದ್ದು ಫೆಬ್ರವರಿ 15 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಟೈರ್‌-1 ಪರೀಕ್ಷೆಗಳು ಏಪ್ರಿಲ್‌ 14 ಮತ್ತು 21ರಂದು ನಡೆಯಲಿದ್ದು ಇದರಲ್ಲಿ ಆಯ್ಕೆಯಾದವರಿಗಾಗಿ ಟೈರ್‌-2 ಪರೀಕ್ಷೆಗಳು ಜುಲೈ 21 ಮತ್ತು ಸೆಪ್ಟೆಂಬರ್‌ 20 ರಂದು ನಡೆಯಲಿವೆ. ಅಂತಿಮವಾಗಿ ಸ್ಕಿಲ್‌ಟೆಸ್ಟ್‌, ಕಂಪ್ಯೂಟರ್‌ ಪರೀಕ್ಷೆ, ಆಯ್ಕೆ ಸಂದರ್ಶನವೂ ಕೆಲವು ಹು¨ªೆಗಳಿಗೆ ನಿಗದಿಯಾಗಿದೆ. ಕರ್ನಾಟಕದಲ್ಲಿ ಪರೀûಾ ಕೇಂದ್ರಗಳು : ಬೆಂಗಳೂರು, ಮಂಗಳೂರು, ಗುಲ್ಬರ್ಗಾ ಮತ್ತು ಧಾರವಾಡ. ವಿವರವಾದ ಸಿಲಬಸ್‌ ಮತ್ತು ಸೂಚನೆಗಳಿಗಾಗಿ ಎಂಪ್ಲಾಯ್‌ಮೆಂಟ್‌ ನ್ಯೂಸ್‌ ವಾರಪತ್ರಿಕೆ ನೋಡಿ. ಗುಡ್‌ಲಕ್‌!

08 Kinder Katha Books for Children (Senior) - Introduction by Bedre Manjunath in Vishwavani 26.02.2023

    08 Kinder Katha Books for Children (Senior) - Introduction by Bedre Manjunath in Vishwavani 26.02.2023 - Thank you Editors, Shashidhara...