Monday 17 June, 2013

Income Tax Returns eFiling is easy - Article in Udayavani Isiri 17 June 2013


Income Tax Returns eFiling is easy - Article in Udayavani Isiri 17 June 2013
http://www.udayavani.com/news/314030L15-%E0%B2%90%E0%B2%9F--%E0%B2%88%E0%B2%97-E%E0%B2%9D-.html

Udayavani
  • ಐಟಿ ಈಗ Eಝೀ

  • ಇ-ಫೈಲಿಂಗ್‌ ಮಾಡೋದು ಹೀಗೆ? ಇನ್‌ಕಮ್‌ಟ್ಯಾಕ್ಸ್‌ ರಿಟರ್ನ್ ನೀವೇ ಫೈಲ್‌ ಮಾಡಬಹುದು

    • Udayavani | Jun 16, 2013
      ಇ-ಫೈಲಿಂಗ್‌ ಮಾಡೋದು ಹೀಗೆ? ಇನ್‌ಕಮ್‌ಟ್ಯಾಕ್ಸ್‌ ರಿಟರ್ನ್ ನೀವೇ ಫೈಲ್‌ ಮಾಡಬಹುದು 


      ಜೂನ್‌ ಬಂದಾಗಿದೆ. ತೆರಿಗೆ ಪಾವತಿ ಮಾಡಲು ಕೊನೇವಾರ, ಕೊನೇ ದಿನದ ತನಕ ಕಾಯಬೇಡಿ. ಸರತಿಯಲ್ಲಿ ನಿಂತು ಪಾವತಿ ಮಾಡುವ ಬದಲು, ಮನೆಯಲ್ಲೇ ಕೂತು ಇ-ಫೈಲಿಂಗ್‌ ಮಾಡಿ. ಸಮಯ, ಹಣ ಎಲ್ಲವೂ ಉಳಿಯುತ್ತೆ. 



      ಜೂನ್‌ ಬಂತಲ್ಲ. ಇನ್ನು ಆದಾಯ ತೆರಿಗೆ ಕಟ್ಟಲು ಎಲ್ಲರೂ ಸಿದ್ಧರಾಗಬೇಕು. ಪ್ರತಿ ವರ್ಷ ಜೂನ್‌ ಮೊದಲ ವಾರದಿಂದಲೇ ಆದಾಯ ತೆರಿಗೆ ಪಾವತಿಯ (ಐ.ಟಿ.ರಿಟರ್ನ್ಸ್) ಫಾರಂಗಳನ್ನು ಸಲ್ಲಿಸುವ ಅವಕಾಶ ಇದೆ. ಆದರೆ ನಮ್ಮ ಪಾವತಿದಾರರು ಕೊನೆಯ ದಿನ ಜುಲೈ 31 ರ ತನಕ ಕಾಯುತ್ತಾರೆ. ಮೈಲುದ್ದ ಸರತಿ ಸಾಲಿನಲ್ಲಿ ನಿಂತು, ಆ ಐ.ಟಿ. ಕಚೇರಿಯ ಕ್ಲರ್ಕ್‌ ಬಳಿ ತಮ್ಮ ಎಲ್ಲಾ ದಾಖಲೆಗಳನ್ನು ತೋರಿಸಿ, ಸ್ವೀಕೃತಿ ಪತ್ರ ಪಡೆಯುವ ಪರಿಪಾಠ ಬೆಳೆಸಿಕೊಂಡಿರುವುದು ಏಕೆಂದು ಅರ್ಥವಾಗುತ್ತಿಲ್ಲ. ಇದನ್ನು ಸರಳಗೊಳಿಸಲು ಆದಾಯ ತೆರಿಗೆ ಇಲಾಖೆ ಇ-ಫೈಲಿಂಗ್‌ ಎಂಬ ಅಂತರಜಾಲದ ಮೂಲಕವೇ ಪಾವತಿ ದಾಖಲೆಗಳನ್ನು ಸಲ್ಲಿಸುವ ವಿಧಾನ ಜಾರಿಗೆ ತಂದಿದೆ. 
      ಇದು ಬಹಳ ಸುಲಭ. ಒಂದರ್ಥದಲ್ಲಿ ನೀವು ಗ್ಯಾಸ್‌ ಬುಕ್‌ ಮಾಡುವಷ್ಟೇ ಸುಲಭ. ಒಂದೆರಡು ವರ್ಷ ಮಾಡಿದರೆ ನೀರು ಕುಡಿದಷ್ಟೇ ಸರಾಗ. 
      ನಿಮಗೆ ಅಗತ್ಯವಿರುವ ದಾಖಲೆ ಇಷ್ಟಿದ್ದರೆ ಸಾಕು. ನಿಮ್ಮ ಹೆಸರು, ವಿಳಾಸ, ಪ್ಯಾನ್‌ ಸಂಖ್ಯೆ, ವಾರ್ಷಿಕ ಆದಾಯ, ತೆರಿಗೆಗೆ ಒಳಪಡುವ ಆದಾಯ, ತೆರಿಗೆ ಪಾವತಿ ವಿವರ ಇಷ್ಟೇ ವಿವರಗಳು ಬೇಕಿರುವುದು. ಐದೇ ನಿಮಿಷದಲ್ಲಿ ನಿಮ್ಮ ಕೆಲಸ ಫಿನಿಷ್‌! 2013-14ನೇ ಘೋಷಿತ ವರ್ಷಕ್ಕೆ ಸಂಬಂಧಿಸಿದ ಆದಾಯ ತೆರಿಗೆ ಪಾವತಿಯ (ಐ.ಟಿ.ರಿಟರ್ನ್ಸ್) ಫಾರಂಗಳನ್ನು ಸಲ್ಲಿಸುವ ಸಹಜ್‌ (ಐಟಿಆರ್‌-1) ಸುಗಮ್‌ (ಐಟಿಆರ್‌-2,3,4) ಫಾರಂಗಳು ಇದೀಗ ಆದಾಯ ತೆರಿಗೆ ಇಲಾಖೆಯ ಅಂತರಜಾಲ ತಾಣದಲ್ಲಿ ಲಭ್ಯ. ಇದನ್ನು ಸರಿಯಾಗಿ ಬಳಸಿ ಕೊಂಡರೆ ಸರತಿ ಸಾಲಿನಲ್ಲಿ ನಿಂತು ಸಮಯ ಹಾಳು ಮಾಡಿಕೊಳ್ಳುವುದು ತಪ್ಪುತ್ತದೆ. 

      ಫಾರಂ - 16 ಆಧರಿಸಿ ಭರ್ತಿಮಾಡಿ 
      2012-13 ನೇ ಸಾಲಿನಲ್ಲಿ ಸರ್ಕಾರಿ ನೌಕರರು ಪಡೆದಿರುವ ಸಂಬಳ, ಭತ್ಯೆ, ಬೋನಸ್‌ ಇತ್ಯಾದಿ ಒಟ್ಟು ಮೊತ್ತದಲ್ಲಿ ಪಾವತಿಸಿದ ವಿವಿಧ ರೀತಿಯ ತೆರಿಗೆಗಳು, ಉಳಿತಾಯ, ಮನೆ ಸಾಲದ ಮೇಲಿನ ಬಡ್ಡಿ, ಅಸಲು, ಇತ್ಯಾದಿ ಖರ್ಚು ಕಳೆದು, ತೆರಿಗೆ ಪಾವತಿ ಕಟ್ಟಿರುವ ವಿವರಗಳನ್ನು ದಾಖಲಿಸಿದ ಫಾರಂ - 16 ಈಗಾಗಲೇ ಎಲ್ಲರ ಬಳಿ ಇರುತ್ತದೆ. ಅಲ್ಲಿ ನಮೂದಾಗಿರುವ ಅಂಕಿ ಅಂಶಗಳನ್ನು ಆಧಾರವಾಗಿಟ್ಟುಕೊಂಡು ವ್ಯಕ್ತಿಗತ ಆದಾಯ ತೆರಿಗೆ ಪಾವತಿಸಲು ITR-1 (SAHAJ) ಎಂಬ ಅರ್ಜಿ ನಮೂನೆಯಲ್ಲಿ ನೀಡಿರುವ ವಿವಿಧ ಕಾಲಂಗಳಲ್ಲಿ ವಿವರಗಳನ್ನು ಭರ್ತಿಮಾಡಿ ಕಚೇರಿಗೆ ಸಲ್ಲಿಸಬಹುದು. ಇದರ ಬದಲಿಗೆ ಅಂತರಜಾಲದ ಮೂಲಕ ಮನೆಯಿಂದಲೇ ಪಾವತಿ ಸಲ್ಲಿಸಬಹುದು. ಇತರೆ ಆದಾಯ ಮೂಲಗಳನ್ನು ಹೊಂದಿರುವವರು ತಮ್ಮ ಅಗತ್ಯಕ್ಕೆ ತಕ್ಕ ITR-3 ITR-4, ITR4S (SUGAM), ITR-5 and ITR-6  ಗಳನ್ನು ತುಂಬಿ ಸಲ್ಲಿಸಬೇಕು. 

      ITR1_2013.zip  ಫೈಲ್‌ ಡೌನ್‌ಲೋಡ್‌ ಮಾಡಿ 

      ಆದಾಯ ತೆರಿಗೆ ಇಲಾಖೆಯ ww.incometaxindia.gov.in ಅಂತರಜಾಲ ತಾಣಕ್ಕೆ ಭೇಟಿನೀಡಿ. ಅದರ ಎಡಬದಿಯಲ್ಲಿ ನೀಡಲಾಗಿರುವ ಇ-ಫೈಲಿಂಗ್‌ ಕೊಂಡಿಯನ್ನು ಕ್ಲಿಕ್‌ ಮಾಡಿ. ಅಲ್ಲಿ ಮೂಡುವ ತೆರೆಯ ಬಲಬದಿಯಲ್ಲಿ ನೋಂದಣಿಯ ಕೊಂಡಿ ಇದೆ. ಅಲ್ಲಿ ಕ್ಲಿಕ್‌ ಮಾಡಿ ನಿಮ್ಮ ಪಾನ್‌ ನಂಬರ್‌ ನಮೂದಿಸಿ, ಗುಪ್ತ ಸಂಕೇತವೊಂದನ್ನು ನೀಡಿ ನೋಂದಾಯಿಸಬೇಕು. ನಂತರ ಬಲಬದಿಯಲ್ಲಿರುವ ಡೌನ್‌ಲೋಡ್‌ ವಿಭಾಗದಲ್ಲಿನ 2012-13 ನೇ ಸಾಲಿನ ತೆರಿಗೆ ಪಾವತಿ ಸಲ್ಲಿಕೆಯ ಕೊಂಡಿಯನ್ನು ಒತ್ತಿದರೆITR1_2013.zip ಫೈಲ್‌ ಡೌನ್‌ಲೋಡ್‌ ಆಗುತ್ತದೆ. ಅದನ್ನು ತೆರೆದಾಗ ಆದಾಯ ತೆರಿಗೆ ಪಾವತಿಯ ITR-1   ಅರ್ಜಿ ಎಕ್ಸೆಲ್‌ ತಂತ್ರಾಂಶದಲ್ಲಿ ಮೂಡಿಬರುತ್ತದೆ. ಅದರಲ್ಲಿನ ಹಸಿರು ಬಣ್ಣದ ಮನೆಗಳಲ್ಲಿ ನಿಮ್ಮ ಬಳಿ ಇರುವ ಫಾರಂ - 16 ಆಧರಿಸಿ ವಿವರಗಳನ್ನು ಭರ್ತಿಮಾಡಬೇಕು. ಇಲ್ಲಿ ಪಾನ್‌ ನಂಬರ್‌ ಕಡ್ಡಾಯ. 
      ಕೆಂಪು ಗುರುತು ಇರುವ ಮನೆಗಳನ್ನು ಕಡ್ಡಾಯವಾಗಿ ತುಂಬಬೇಕು. ಕೊನೆಯಲ್ಲಿ ನೀಡಿರುವ Validateಸಂಪರ್ಕ ಕೊಂಡಿ ಒತ್ತಿ. ನಂತರ ತುಂಬಿಸಿರುವ ಎಲ್ಲ ವಿವರಗಳನ್ನು ಒಮ್ಮೆ ಪರೀಕ್ಷಿಸಿ ನೋಡಬೇಕು. ಎಲ್ಲವೂ ಸರಿಯಾಗಿದೆ ಎಂದು ಅದು ವರದಿ ನೀಡಿದ ಮೇಲೆ ಅದರ ಪಕ್ಕದಲ್ಲಿರುವ Generate ಎಂಬ ಕೊಂಡಿಯನ್ನು ಕ್ಲಿಕ್ಕಿಸಿದರೆ ಅಂತಿಮ ವರದಿ ಇರುವ ಎಕ್ಸೆಲ್‌ ತಂತ್ರಾಂಶದ XML file  ಸಿದ್ಧವಾಗುತ್ತದೆ. 
      ತೆರಿಗೆ ಪಾವತಿ ಮಾಡಿ ಸ್ವೀಕೃತಿ ಪತ್ರ ಪಡೆಯಿರಿ 
      ಅಂತರಜಾಲ ತಾಣದ ಬಲಬದಿಯಲ್ಲಿರುವ Submit Return ಎಂಬ ಗುಂಡಿ ಒತ್ತಿದಾಗ ಮೂಡಿಬರುವ ಕಿಟಕಿಯಲ್ಲಿ ನಿಮ್ಮ ನೋಂದಾವಣೆ (ಪಾನ್‌) ಸಂಖ್ಯೆ ಮತ್ತು ಗುಪ್ತ ಸಂಕೇತ ಬಳಸಿ ಪ್ರವೇಶ ಮಾಡಿದರೆ ಪಾವತಿ ಸಲ್ಲಿಕೆಯ ಕಿಟಕಿ ತೆರೆಯುತ್ತದೆ. ಅಲ್ಲಿ ನಿಮ್ಮ XML file ಅನ್ನು ಸೇರ್ಪಡೆಗೊಳಿಸಿ ಅಪ್‌ಲೋಡ್‌ ಗುಂಡಿ ಒತ್ತಿದರೆ ಒಂದೆರಡು ನಿಮಿಷಗಳ ಒಳಗಾಗಿ ನಿಮ್ಮ ಪಾವತಿ ಸಲ್ಲಿಸಲ್ಪಟ್ಟು ನಿಮ್ಮ ಇ-ಮೇಲ್‌ ವಿಳಾಸಕ್ಕೆ ಒಂದು ಪತ್ರ ಬರುತ್ತದೆ. ಅದರಲ್ಲಿ ಸ್ವೀಕೃತಿಯ ITR-V Form  ಫಾರಂ ಇದ್ದು ಅದನ್ನು ಅಡೋಬ್‌ ಆಕ್ರೋಬಾಟ್‌ ರೀಡರ್‌ನಲ್ಲಿ ತೆಗೆದು ಓದಲು ನಿಮ್ಮ ಪಾನ್‌ ನಂಬರ್‌ ಮತ್ತು ಜನ್ಮದಿನಾಂಕವನ್ನು ಸಂಕೇತವಾಗಿ ಸಣ್ಣ ಅಕ್ಷರಗಳಲ್ಲಿ ನಮೂದಿಸಬೇಕು. ನಂತರ ಅದರ ಮುದ್ರಿತ ಪ್ರತಿ ತೆಗೆದು ನಿಮ್ಮ ತೆರಿಗೆ ಪಾವತಿಯ ಕಡತಕ್ಕೆ ಸೇರಿಸಿಕೊಳ್ಳಬಹುದು. 
      ಹೀಗೆ ತೆಗೆದ ಮುದ್ರಿತ ITR-V Form ಫಾರಂನ ಒಂದು ಪ್ರತಿಯನ್ನು ಇ-ಫೈಲಿಂಗ್‌ ಮಾಡಿದ ಒಂದು ತಿಂಗಳೊಳಗಾಗಿ Income Tax Department – CPC, Post Bag No - 1, Electronic City Post Office, Bangalore - 560 100  ಈ ವಿಳಾಸಕ್ಕೆ ಸಾಧಾರಣ ಅಂಚೆಯ ಮೂಲಕ ಕಳಿಸಿಕೊಡಬೇಕು. ಇಲ್ಲಿಗೆ ನಿಮ್ಮ ಇ-ಫೈಲಿಂಗ್‌ ಯಶಸ್ವಿಯಾಗುತ್ತದೆ. 
      ಹೆಚ್ಚಿನ ಮಾಹಿತಿಗಾಗಿ ಈ ತಾಣಗಳಿಗೆ ಭೇಟಿ ನೀಡಿ : 
      www.incometaxindia.gov.in/home.asp
      https://incometaxindiaefiling.gov.in/portal/indexp
      https://incometaxindiaefiling.gov.in/portal/individual_huf.do

      ಎಷ್ಟೊಂದು ಸರಳ, ಸುಲಭ ವಿಧಾನ! ನಾನಂತೂ ಫೈಲ್‌ಮಾಡಿದ್ದೇನೆ. ಆನ್‌ಲೈನ್‌ ಸ್ವೀಕೃತಿ ಪತ್ರವೂ ಬಂದಿದೆ. ನೀವೂ ಪ್ರಯತ್ನಿಸಿ. ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಿ. 

      ಬೇದ್ರೆ ಮಂಜುನಾಥ

Monday 10 June, 2013

English from 1st Standard Ready Steady Go - Article in Prajavani Shikshana 10 June 2013


 
English from 1st Standard Ready Steady Go - Article in Prajavani Shikshana 10 June 2013
http://www.prajavani.net/article/%E0%B2%87%E0%B2%82%E0%B2%97%E0%B3%8D%E0%B2%B2%E0%B2%BF%E0%B2%B7%E0%B3%8D-%E0%B2%95%E0%B2%B2%E0%B2%BF%E0%B2%95%E0%B3%86-%E0%B2%B0%E0%B3%86%E0%B2%A1%E0%B2%BF-%E0%B2%B8%E0%B3%8D%E0%B2%9F%E0%B2%A1%E0%B2%BF-%E0%B2%97%E0%B3%8B
ಪ್ರಜಾವಾಣಿ

ಇಂಗ್ಲಿಷ್ ಕಲಿಕೆ: ರೆಡಿ ಸ್ಟಡಿ ಗೋ...!

ಒಂದನೇ ತರಗತಿಯಿಂದಲೇ ಮಕ್ಕಳಿಗೆ ಒಂದು ಭಾಷೆಯಾಗಿ ಇಂಗ್ಲಿಷ್ ಕಲಿಸಿಕೊಡುವ ವ್ಯವಸ್ಥೆಯಾಗಬೇಕು ಎಂಬುದು ರಾಜ್ಯದ ನೂತನ ಮುಖ್ಯಮಂತ್ರಿ ಅವರ ಆಶಯ. ಇಂಗ್ಲಿಷ್ ಹೇಳಿಕೊಡಲು ಪ್ರಾಥಮಿಕ ಶಿಕ್ಷಕರಿಗೆ ದೂರಸಂಪರ್ಕದ ಮೂಲಕ ಮತ್ತು ಬ್ರಿಟಿಷ್ ಕೌನ್ಸಿಲ್ ಸಹಯೋಗದಲ್ಲಿ ಡಯಟ್‌ಗಳ ಮೂಲಕ ನೇರ ಸಂವಾದ ತರಗತಿಗಳಲ್ಲಿ ಭಾಷಾ ಬೋಧನಾ ತರಬೇತಿ ನೀಡಿ, ಹೊಸ ಸವಾಲನ್ನು ಎದುರಿಸಲು ಶಿಕ್ಷಣ ಇಲಾಖೆ ಅವರನ್ನು ಸಿದ್ಧಗೊಳಿಸಿದೆ. ಕಳೆದ ನಾಲ್ಕೈದು ವರ್ಷಗಳಿಂದಲೂ ಈ ಪ್ರಕ್ರಿಯೆ ನಡೆಯುತ್ತಲೇ ಇದೆ. ಪರಿಣಾಮಕಾರಿ ಕಲಿಕೆಯತ್ತ ಹೆಜ್ಜೆ ಇಟ್ಟಾಗಿದೆ.
ಮೌಖಿಕ ಪದ್ಧತಿ ಬಳಸಿ ಕಥೆಗಳು, ಶಿಶುಗೀತೆಗಳು, ಭಾಷಾ ಆಟಗಳು, ಸಂಭಾಷಣಾ ಪಾಠ ಮತ್ತು ಪ್ರಾತ್ಯಕ್ಷಿಕೆಗಳ ಮೂಲಕ ಇಂಗ್ಲಿಷ್ ಕಲಿಸಿಕೊಡಲು ಚಿತ್ರಮಯ ಪಠ್ಯಪುಸ್ತಕ  “ ಆಟಟ” ಕೊಡಲಾಗಿದೆ. ಇವೆಲ್ಲವೂ ಪ್ರಥಮ ಭಾಷೆ ಇಂಗ್ಲಿಷ್ ಕಲಿಸುವವರಿಗೆ ನೆರವಾಗುವಂತಿದ್ದು, ನಾವು ಕಲಿಸುತ್ತಿರುವುದು ದ್ವಿತೀಯ ಭಾಷೆ ಇಂಗ್ಲಿಷ್ ಎಂಬುದನ್ನೇ ಮರೆತಂತಿದೆ! ಇಂಗ್ಲಿಷ್ ಭಾಷೆಯೂ ನಮ್ಮ ಮಾತೃಭಾಷೆಯಷ್ಟೇ ಸುಲಭವಾದ, ಸರಳವಾದ ಮತ್ತು ಬೇಗನೇ ಹಿಡಿತಕ್ಕೆ ಸಿಗುವ ಭಾಷೆ ಎಂದುಕೊಂಡಾಗ ಅದು ಅಂಗೈ ನೆಲ್ಲಿಯಾಗುತ್ತದೆ.
ಅಮೆರಿಕದಲ್ಲಿ ಪ್ರಕಟವಾದ ಸಂಶೋಧನಾ ವರದಿಯು, ಯಾವ ಮಗು ತನ್ನ ಮಾತೃಭಾಷೆಯ ಮೂಲಕ ಇಂಗ್ಲಿಷ್ ಕಲಿಯುತ್ತದೋ ಅದು  ಮುಂದೆ ಇಂಗ್ಲಿಷ್ ಭಾಷೆಯಲ್ಲಿ ಪ್ರಭುತ್ವ ಗಳಿಸಿಕೊಳ್ಳಲು ಸಫಲವಾಗುತ್ತದೆ ಎಂದು ತಿಳಿಸಿದೆ. ಹೊರದೇಶಗಳಿಂದ ಹೋಗಿ ನೆಲೆಸಿರುವ ಅಲ್ಲಿನ ತಂದೆ ತಾಯಂದಿರು ಮತ್ತು ಗುರುಗಳು ಆ ಮಗುವಿನ ಮಾತೃಭಾಷೆಯ (ಹಿಂದಿ, ಗುಜರಾತಿ, ತಮಿಳು ಇಲ್ಲವೇ ಆಫ್ರಿಕನ್, ಸ್ಪ್ಯಾನಿಷ್, ಫ್ರೆಂಚ್ ಇತ್ಯಾದಿ) ಮೂಲಕವೇ ಇಂಗ್ಲಿಷ್ ಭಾಷೆಯನ್ನು ಕಲಿಸುವ ಹೊಸ ಪದ್ಧತಿ ಅಳವಡಿಸಿ ಕೊಂಡಿದ್ದಾರಂತೆ. ಹೀಗಿರುವಾಗ, ಕನ್ನಡದ ಮೂಲಕ ಇಂಗ್ಲಿಷ್ ಕಲಿಯಲು ಮತ್ತು ಕಲಿಸಲು ನಮ್ಮಲ್ಲಿ ಹಲವರು ಯಾಕೆ ಮುಜುಗರ ಪಟ್ಟುಕೊಳ್ಳುವರೋ ತಿಳಿಯದು!
ಗರ್ಭಾವಸ್ಥೆಯಿಂದಲೇ ಇಂಗ್ಲಿಷ್!
ಮಗುವೊಂದು ಧರೆಗಿಳಿಯುವ ಮುನ್ನವೇ ಇಂಗ್ಲಿಷ್ ಅದರ ಕಿವಿಯ ಮೇಲೆ ಬಿದ್ದಿರುತ್ತದಂತೆ. ಪ್ರೆಗ್ನೆನ್ಸಿ ಟೆಸ್ಟ್, ಪಾಸಿಟಿವ್, ಕನ್‌ಸೀವ್ಡ್ ಎಂಬಲ್ಲಿಂದ ಆರಂಭ ಆಗುವ ಪದಗಳು ಮುಂದೆ ಮೆಡಿಕಲ್ ಚೆಕ್‌ಅಪ್, ಸ್ಕ್ಯಾನಿಂಗ್, ಟಿ.ಟಿ. ಇಂಜೆಕ್ಷನ್, ಐರನ್ ಟ್ಯಾಬ್‌ಲೆಟ್ಸ್, ಟಾನಿಕ್, ಹೆಲ್ತಿ ಫುಡ್, ಪೀರಿಯಾಡಿಕಲ್ ಚೆಕ್‌ಅಪ್ ಇತ್ಯಾದಿ ರೂಪದಲ್ಲಿ ಭ್ರೂಣಕ್ಕೆ ಕೇಳಿಸುತ್ತಾ ಹೋಗುತ್ತವೆ!
 
ಅಜ್ಜಿ ಇಂಗ್ಲಿಷ್!
ನಮ್ಮ ಹಳ್ಳಿಯಲ್ಲಿರುವ ಅಜ್ಜಿಗೆ ಕೂಡ ಇಂಗ್ಲಿಷ್ ಎಂದರೆ ಪಂಚಪ್ರಾಣ. `ಬಸ್ ಬಂತಾ ನೋಡ್ಲಾ ಮಗಾ. ಲೇಟ್ ಆಯ್ತದೆ ಇಸ್ಕೂಲ್‌ಗೆ.  ಬಸ್ ಮಿಸ್ ಮಾಡ್ಕೋಬ್ಯಾಡಪ್ಪಾ.
ಬೈಕ್ ಮ್ಯೋಗೆ ನಿನ್ನ ಕರ‌್ಕೊಂಡ್ ಹೋಗಾಕೆ ನಿಮ್ಮಪ್ಪ ಸಿಟ್ ಮಾಡ್ಕತಾನೆ. ಲೇಟಾಗಿ ಓದ್ರೆ ಫೈನ್ ಬೇರೆ ಆಕ್ತಾರಂತೆ, ಹೌದಾ? ಹೋಂವರ್ಕ್ ಎಲ್ಲ ಮಾಡಿದ್ಯಾ ಕಂದಾ. ಗುಡ್ ಗುಡ್. ಫಸ್ಟ್ ಬರ‌್ಬೇಕು ಇಸ್ಕೂಲ್‌ಗೆ.
ಗೋ, ಗೋ...,  ಅಂತ ಮೊಮ್ಮಗ ಕಲಿಸಿದ ಹರಕುಮುರುಕು ಇಂಗ್ಲಿಷ್‌ನಲ್ಲಿ ಹೇಳುತ್ತೆ ಗೊತ್ತಾ?
ಅಗತ್ಯ ಮತ್ತು ಅವಶ್ಯಕತೆಗೆ ತಕ್ಕಂತೆ ಇಂಗ್ಲಿಷ್ ಬೆಳೆಯುತ್ತಲೇ ಇದೆ. ವ್ಯವಹಾರಕ್ಕೆ ಬ್ಯುಸಿನೆಸ್ ಇಂಗ್ಲಿಷ್, ಎಂಜಿನಿಯರ್‌ಗಳಿಗೆ ಟೆಕ್ನಿಕಲ್ ಇಂಗ್ಲಿಷ್, ಟೀಚರ್‌ಗಳಿಗೆ ಇಂಗ್ಲಿಷ್ ಲ್ಯಾಂಗ್ವೇಜ್ ಟೀಚಿಂಗ್ (ಇ.ಎಲ್.ಟಿ.), ವೈದ್ಯರಿಗೆ ಮೆಡಿಕಲ್ ಇಂಗ್ಲಿಷ್,  ಸ್ವಾಮೀಜಿಗಳಿಗೆ ಸ್ಪಿರಿಚುಯಲ್ ಇಂಗ್ಲಿಷ್... ಹೀಗೆ ಹೊಸ ಬಗೆಯ ಇಂಗ್ಲಿಷ್ ಬಳಕೆಗೆ ಬಂದಿದೆ.
ಗಮನಿಸಿ
ಇಂಗ್ಲಿಷ್ ಕಲಿಯಲು ಮಾಹಿತಿಗಾಗಿ ಕೆಳಗಿನ ಕೆಲವು ವೆಬ್ ವಿಳಾಸಗಳನ್ನು ನೋಡಬಹುದು:
ಮಗು ಹುಟ್ಟುವ ಸಂದರ್ಭದಲ್ಲಿ ಆಪರೇಷನ್ ಥಿಯೇಟರ್, ಬೇಬಿ, ಕ್ಲೀನಿಂಗ್, ಬ್ರೆಸ್ಟ್ ಫೀಡಿಂಗ್, ರ‌್ಯಾಪಿಂಗ್, ಇನ್‌ಕ್ಯುಬೇಟರ್, ವೆಯ್ಟ, ಹೈಟ್ ಎಂಬ ಪದಗಳೂ ಅದರ ಕಿವಿಗೆ ಬಿದ್ದಿರಬಹುದು. ಹೀಗೆ ತೊಟ್ಟಿಲಿನಿಂದ ಆರಂಭವಾಗಿ ಸಮಾಧಿಯವರೆಗೆ (ಫ್ರಂ ಕ್ರೆಡಲ್ ಟು ಗ್ರೇವ್) ನಮ್ಮಂದಿಗೆ ಇಂಗ್ಲಿಷ್ ಪ್ರಯಾಣ ಮಾಡುತ್ತಲೇ ಇರುತ್ತದೆ.
ಮಕ್ಕಳನ್ನೇ ತೆಗೆದುಕೊಳ್ಳಿ. ಅವರನ್ನು ಬೇಬಿ ಅಂತಲೇ ಕರೆಯುವುದು ರೂಢಿ. ಅವರು ಶಾಲೆಗೆ ಸಿದ್ಧರಾಗಬೇಕು ಎಂದರೆ ಯೂನಿಫಾರಂ, ಸಾಕ್ಸ್, ಷೂಸ್, ಟೈ, ಬೆಲ್ಟ್, ಶರ್ಟ್, ಹಾಫ್ ಪ್ಯಾಂಟ್, ಕರ್ಚೀಫ್, ಲಂಚ್ ಬ್ಯಾಗ್, ಸ್ಕೂಲ್ ಬ್ಯಾಗ್, ಜಾಮಿಟ್ರಿ ಬಾಕ್ಸ್, ಲಂಚ್ ಬಾಕ್ಸ್, ಪೆನ್ಸಿಲ್, ರಬ್ಬರ್, ಪೆನ್, ಪೇಪರ್, ಬುಕ್, ನೋಟ್‌ಬುಕ್, ಬೆಂಚ್, ಡೆಸ್ಕ್, ಬೋರ್ಡ್, ಡಸ್ಟರ್... ಛೇ ಬಿಡಿ ಅದೊಂದು ವಿಸ್ಮಯ ಲೋಕ!
ಭಾಷಾ ಕೌಶಲ
ಭಾಷೆಯೊಂದನ್ನು ಕಲಿಯುವುದಕ್ಕೆ ಇರುವ ಕೌಶಲಗಳೆಂದರೆ ಆಲಿಸುವುದು, ಮಾತನಾಡುವುದು, ಓದುವುದು ಮತ್ತು ಬರೆಯುವುದು.   ಕನ್ನಡ, ಸಂಸ್ಕೃತ, ಹಿಂದಿ, ಇಂಗ್ಲಿಷ್ ಅಥವಾ ಇನ್ನಾವುದೇ ಭಾಷೆಯನ್ನು ಕಲಿಯಲು ನಮಗೆ ಈ ನಾಲ್ಕು ಕೌಶಲಗಳನ್ನು ನಮ್ಮದನ್ನಾಗಿ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಇದು ಮಾತೃಭಾಷೆಯ ವಿಷಯದಲ್ಲಿ ನಮಗೇ ಗೊತ್ತಿಲ್ಲದಂತೆ ನಮ್ಮ ತೊಟ್ಟಿಲಿನಿಂದಲೇ ಆರಂಭವಾಗಿರುತ್ತದೆ. ಆದರೆ ಮತ್ತೊಂದು ಭಾಷೆಯನ್ನು ಪ್ರಯತ್ನಪೂರ್ವಕವಾಗಿ ಕಲಿಯುವಾಗ ಇವೆಲ್ಲವೂ ಹೊಸದೆನಿಸುತ್ತವೆ.  ಬಹುಮಾಧ್ಯಮ ವೈಜ್ಞಾನಿಕ ವಿಧಾನದಿಂದ ಭಾಷಾ ಕಲಿಕೆ ಅತ್ಯಂತ ಸುಲಭ ಹಾಗೂ ಮನೋರಂಜಕ ಆಗಿರುತ್ತದೆ.
ಪದಸಂಪತ್ತು- ದೇಹ ಭಾಷೆ- ಉಚ್ಚಾರ
ನಾವು ಬಳಸುವ ಭಾಷೆಯಲ್ಲಿ ಕೇವಲ ಶೇ 7ರಷ್ಟು ಭಾಗ ಮಾತ್ರ ಪದಗಳಿರುತ್ತವೆ. ಉಳಿದ ಶೇ 55ರಷ್ಟು ಭಾಗ ನಮ್ಮ ದೇಹ ಭಾಷೆ (ಹಾವಭಾವ- ಭಂಗಿ- ಮುಗುಳ್ನಗು- ಕೈ- ಬಾಯಿ- ಮುಖದ ಚಲನೆ- ಉಡುಪು- ಕೂದಲಿನ ಒಪ್ಪ- ಅಚ್ಚುಕಟ್ಟುತನ ಇತ್ಯಾದಿ) ಮತ್ತು ಶೇ 38ರಷ್ಟು ಭಾಗ ಧ್ವನಿಯ ಏರಿಳಿತ, ಮೃದುತ್ವ, ನಯ-ವಿನಯ, ಗಾಂಭೀರ್ಯ, ಉಚ್ಚಾರಣಾ ಶೈಲಿ ಇತ್ಯಾದಿ ಅಂಶಗಳನ್ನು ಒಳಗೊಂಡಿರುತ್ತದೆ.  ಹಾಗೆಯೇ ನಮ್ಮ ಸಮಗ್ರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಂತೆ ಭಾಷೆ ಕೆಲಸ ಮಾಡುತ್ತದೆ. ದೇಹ ಭಾಷೆಯ ಬಗ್ಗೆ ನಾವು ನಿಗಾ ವಹಿಸುವುದು ತೀರಾ ಕಡಿಮೆ. ಹಾಗಾಗಿ ಇಂಗ್ಲಿಷ್ ಕಲಿಯುವ ಮತ್ತು ಕಲಿಸುವ ಸಂದರ್ಭದಲ್ಲಿ ಇದಕ್ಕೂ ಒತ್ತು ನೀಡಬೇಕಾಗಿದೆ.
ದೃಶ್ಯ- ಶ್ರವಣ
ಭಾಷಾ ಕಲಿಕೆಯ ಮೂಲ ಕೌಶಲ ಆಲಿಸುವುದು. ರೇಡಿಯೊ ಮತ್ತು ಟಿ.ವಿ.ಗಳಲ್ಲಿ ಬಿತ್ತರವಾಗುವ ನೂರಾರು ಕಾರ್ಯಕ್ರಮಗಳು ನಮಗೆ ನಿರಂತರ ಆಲಿಸುವ ಮತ್ತು ನೋಡಿ ತಿಳಿಯುವ ಅವಕಾಶ ಕಲ್ಪಿಸಿಕೊಡುತ್ತಲೇ ಇರುತ್ತವೆ. ಕೇಬಲ್ ಟಿ.ವಿ. ಇಲ್ಲವೇ ಡಿ.ಟಿ.ಎಚ್. ಮೂಲಕವೂ ನಮಗೆ ಬೇಕಾದ ಕಾರ್ಯಕ್ರಮಗಳನ್ನು ಆಯ್ದು ಕೇಳುವ, ಕೇಳುತ್ತಲೇ ಅಲ್ಲಿ ಬಳಸಲಾಗುವ ಆಂಗಿಕ ಭಾಷೆ (ಬಾಡಿ ಲ್ಯಾಂಗ್ವೇಜ್) ನೋಡುವ ಅವಕಾಶ ಇದೆ. ಮಾತನಾಡುವುದರ ಜೊತೆಗೆ ನಾವು ಬಳಸುವ ಬಾಡಿ ಲಾಂಗ್ವೇಜ್ ಕೂಡ ನಮ್ಮ ಭಾವನೆಗಳನ್ನು ಪರಿಣಾಮಕಾರಿಯಾಗಿ ತಿಳಿಸುತ್ತದೆ. ಹೀಗಾಗಿ ದೃಶ್ಯ ಮಾಧ್ಯಮ ನಮಗೆ ಈ ವಿಷಯದಲ್ಲಿ ತರಬೇತಿ ನೀಡುವ ಆಪ್ತಮಿತ್ರ. ಇಂಗ್ಲಿಷ್ ಕಲಿಕೆಗಂತೂ ಇದು ಅತ್ಯುತ್ತಮ ಸಂಪನ್ಮೂಲ. 
ಟೇಪ್ ರೆಕಾರ್ಡರ್‌ನಲ್ಲಿ ಧ್ವನಿಯನ್ನು ಸೆರೆಹಿಡಿದು, ಮಾದರಿ ಸಂಭಾಷಣೆಯ ತುಣುಕುಗಳನ್ನು ಧ್ವನಿಮುದ್ರಿಸಿ ಕೇಳಿ ಕಲಿಯಲು, ಮಾದರಿಗಳನ್ನು ಅನುಸರಿಸಿ ಉಚ್ಚಾರ ಮಾಡಿ, ಸತತ ಅಭ್ಯಾಸದಿಂದ ಯಶಸ್ಸು ಗಳಿಸಲು ಸಾಧ್ಯ. ಬೆಂಗಳೂರು, ಹೈದರಾಬಾದ್, ಮೈಸೂರು, ಮುಂಬೈಗಳಲ್ಲಿನ ಭಾಷಾ ಪ್ರಯೋಗ ಶಾಲೆಗಳಲ್ಲಿ, ಜೊತೆಗೆ ಬಿ.ಬಿ.ಸಿ.ಯಂತಹ ಖಾಸಗಿ ಪ್ರಕಾಶಕರಲ್ಲಿ ಭಾಷಾ ಕಲಿಕೆಗಾಗಿಯೇ ಹತ್ತಾರು ಕ್ಯಾಸೆಟ್‌ಗಳು, ಸಿ.ಡಿ.ಗಳು ಸಿಗುತ್ತವೆ. ನಿತ್ಯ ಬಳಕೆಯ ಮೊಬೈಲ್ ಮತ್ತು ಟ್ಯಾಬ್‌ಲೆಟ್‌ಗಳಲ್ಲಿ ಇರುವ ರೆಕಾರ್ಡಿಂಗ್ ಸೌಲಭ್ಯ, `ಟಾಕಿಂಗ್ ಟಾಮ್'ನಂತಹ ಅಪ್ಲಿಕೇಶನ್‌ಗಳ ಸಹಾಯದಿಂದ ಮಾತನಾಡಿಸಿ, ಪುನರಾವರ್ತಿಸಿ ಕೇಳುವ ಸೌಲಭ್ಯ ಬಳಸಿಕೊಳ್ಳಬಹುದು.
ಕಂಪ್ಯೂಟರ್ ಮತ್ತು ಇಂಟರ್‌ನೆಟ್: ಶಿಕ್ಷಣ ಕ್ಷೇತ್ರದ ಭವಿಷ್ಯ ಕಂಪ್ಯೂಟರ್ ಮತ್ತು ಇಂಟರ್‌ನೆಟ್ ಎಂಬ ಮಾಯಾಲೋಕದ ಜಾಲದಲ್ಲಿ ಸಿಲುಕಿದೆ. ಒಮ್ಮೆ ನಾವು ಇದರ ಇ- ಪ್ರಪಂಚದ ಒಳಹೊಕ್ಕರೆ ಕಲಿಕೆಗೆ ಅಸಾಧ್ಯ ಎಂಬ ಮಾತೇ ಹೊರಡದು. ಮನೆ ಮನೆಯಲ್ಲೂ, ಶಾಲೆ ಶಾಲೆಯಲ್ಲೂ ಬಹುಮಾಧ್ಯಮ ಕಂಪ್ಯೂಟರ್ ಸಾಮ್ರೋಜ್ಯ ವಿಸ್ತರಿಸುತ್ತಿದೆ. ಅದನ್ನು ನಮ್ಮ ಭಾಷಾ ಕಲಿಕೆಗೆ, ಹಾಗೆಯೇ ಕಷ್ಟ ಎಂದು ಭಾವಿಸಲಾಗುವ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ಸಾಮಾನ್ಯ ಜ್ಞಾನ ಕಲಿಕೆಗೆ ಕೂಡ ಬಳಸಿಕೊಳ್ಳಬಹುದು.
ಆಲಿಸುವಿಕೆ ಮತ್ತು ಮಾತನಾಡುವಿಕೆಗೆ ಸಂಬಂಧಿಸಿದಂತೆ ಹತ್ತಾರು ಧ್ವನಿಮುದ್ರಣದ ಸಾಫ್ಟ್‌ವೇರ್‌ಗಳು ಲಭ್ಯವಿದ್ದು ಅವುಗಳ ಸಹಾಯದಿಂದ  ಮಾಹಿತಿ, ಶಿಕ್ಷಣ, ಮನರಂಜನೆಯನ್ನು ಕುಳಿತಲ್ಲೇ ಸೃಷ್ಟಿಸಬಹುದು, ಅನುಭವಿಸಬಹುದು.AUDACITY, WAVELAB, WAVELABLITE, COOLEDIT,  SOUNDFORGE ಮೊದಲಾದ ಧ್ವನಿಮುದ್ರಣದ ಸಾಫ್ಟ್‌ವೇರ್‌ಗಳು ಲಭ್ಯವಿದ್ದು, ಕೆಲವು ಉಚಿತವಾಗಿಯೂ ಸಿಗುತ್ತವೆ. ವಿಂಡೋಸ್‌ನ ಇತ್ತೀಚಿನ ಅವತರಣಿಕೆಯ ಜೊತೆಯಲ್ಲಿ ಧ್ವನಿಮುದ್ರಣದ ಸೌಲಭ್ಯವೂ ಇದೆ. ಇತರ ಭಾಷೆಯ ಪದಗಳ ಉಚ್ಚಾರಕ್ಕೆ ಸಂಬಂಧಿಸಿದಂತೆ ಸಿ.ಡಿ. ಪದಕೋಶಗಳಲ್ಲೇ ಉಚ್ಚಾರಣೆಯನ್ನೂ ನೀಡಲಾಗಿದೆ. ನಮಗೆ ಸೂಕ್ತ ಕಂಡ ಉಚ್ಚಾರವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಇದೆ.
ಇತ್ತೀಚೆಗೆ ಅಜೀಂ ಪ್ರೇಮ್‌ಜಿ ಫೌಂಡೇಶನ್‌ನಂತಹ ಪ್ರತಿಷ್ಠಿತ ಸಂಸ್ಥೆಗಳು ಕನ್ನಡ- ಇಂಗ್ಲಿಷ್- ಹಿಂದಿ ಮೂರೂ ಭಾಷೆಗಳ ಮೂಲಕ ಒಂದೇ ಕಡೆ ಕಲಿಯುವಂತೆ ಹಲವಾರು ಸಿ.ಡಿ.ಗಳನ್ನು ರೂಪಿಸಿ ಕರ್ನಾಟಕದಾದ್ಯಂತ ನೂರಾರು ಶಾಲೆಗಳಿಗೆ ಹಂಚಿವೆ. ಅಂತರ್ಜಾಲದಲ್ಲಿ ಸಿಗುವ ಸಾಫ್ಟ್‌ವೇರ್ ಮತ್ತು ಮಾಹಿತಿಯ ಮಹಾಪೂರವನ್ನೇ ಭಾಷಾ ಕಲಿಕೆಗೂ ಬಳಸಿಕೊಳ್ಳಲು ಸಾಧ್ಯವಿದೆ. ಇಂಗ್ಲಿಷ್ ಕಲಿಕೆಗಂತೂ ಲಕ್ಷಗಟ್ಟಲೆ ವೆಬ್‌ಸೈಟ್‌ಗಳು ಸಿಗುತ್ತವೆ.
ಪಾಠ ಬೋಧನೆಯ ವಿಧಾನ, ಮಾದರಿ ಪಾಠಗಳು, ಧ್ವನಿಮುದ್ರಿತ ರೂಪದ ಪಾಠಗಳು, ವಿಡಿಯೊ ಪಾಠಗಳು, ಸಂವಾದದ ಪಾಠಗಳು ಹೀಗೆ ಏನೆಲ್ಲಾ ಇಲ್ಲಿ ಲಭ್ಯ. ಭಾಷೆಯ ಕಲಿಕೆ ವ್ಯಕ್ತಿತ್ವಕ್ಕೆ ಮೆರುಗು ನೀಡುತ್ತದೆ. ವಿಕಸಿತ ವ್ಯಕ್ತಿತ್ವದ ದ್ಯೋತಕ ಪರಿಶುದ್ಧ ಭಾಷಾ ಬಳಕೆ. ಇಂತಹ ಭಾಷೆಯೆಂಬ ಆಯುಧವನ್ನು ನಮ್ಮ ಬತ್ತಳಿಕೆಯಲ್ಲಿ ಇರಿಸಿಕೊಳ್ಳೋಣ. 
ಇಂಗ್ಲಿಷ್ ಭಾಷೆಯನ್ನು ಕಲಿಸಲು ಇರುವ ಹದಿನೈದಕ್ಕೂ ಹೆಚ್ಚು ವಿಧಾನಗಳಲ್ಲಿ ಆಧುನಿಕ ಬಹುಮಾಧ್ಯಮ ಬೋಧನೋಪಕರಣಗಳನ್ನು ಬಳಸಿಕೊಂಡು ಇಂಗ್ಲಿಷ್ ಕಲಿಸುವ ಹೊಸ ವಿಧಾನವೇ Multi-Media Approach - The New Way.
(ವಿವರಗಳಿಗೆ ನೋಡಿ  Multimedia Language Laboratory to learn Spoken and Written English -  Published by Navakarnataka Publications. Rs.20/- Ph. 08022203580).

Monday 3 June, 2013

Diploma Courses in Arts after SSLC - Article in Vijaykarnataka 03 June 2013



Diploma Courses in Arts after SSLC - Article in Vijaykarnataka 03 June 2013
http://vijaykarnatakaepaper.com/Details.aspx?id=4626&boxid=14856937

ಹೋಟೆಲ್, ಚಿತ್ರಕಲೆಯಲ್ಲಿ ಡಿಪ್ಲೊಮಾ ಕೋರ್ಸ್‌ಗಳು
Jun 3, 2013, 03.54AM IST
- ಲೇಖನ: ಬೇದ್ರೆ ಮಂಜುನಾಥ

ಹೋಟೆಲ್ ಉದ್ಯಮದಲ್ಲಿ ಉಚಿತ ತರಬೇತಿ
ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪ್ರವಾಸೋದ್ಯಮ ವಿಭಾಗದಲ್ಲಿ ಪರಿಶಿಷ್ಟ ಜಾತಿ/ಪಂಗಡದ ಅಭ್ಯರ್ಥಿಗಳಿಗಾಗಿ ಔಪಚಾರಿಕಾ (ಹೋಟೆಲ್ ಉದ್ಯಮ) ಕ್ಷೇತ್ರದಲ್ಲಿ ಉಚಿತ ತರಬೇತಿಯನ್ನು ನೀಡಲಾಗುತ್ತಿದೆ.

ಹೌಸ್‌ಕೀಪಿಂಗ್, ಫುಡ್ ಅಂಡ್ ಬೆವರೇಜ್, ಫುಡ್ ಪ್ರೊಡಕ್ಷನ್ ಕೋರ್ಸ್‌ಗಳಲ್ಲಿ ತರಬೇತಿ ಪಡೆಯಲು ಬಯಸುವವರು 18 ರಿಂದ 25 ವರ್ಷ ವಯೋಮಿತಿಯಲ್ಲಿದ್ದು , ಕನಿಷ್ಟ 8ನೇ ತರಗತಿ ಪಾಸಾಗಿರಬೇಕು. 45 ದಿನಗಳ ತರಬೇತಿ ಅವಧಿಯಲ್ಲಿ ರೂ.2000/- ಸ್ಟೈಫಂಡ್ ಮತ್ತು ರೂ.1,500/- ಪ್ರಯಾಣಭತ್ಯೆ ಹಾಗೂ ಸೂಕ್ತ ದಿನಭತ್ಯೆ ನೀಡಲಾಗುವುದು. ಹೆಚ್ಚಿನ ವಿವರಗಳಿಗೆ ಕರ್ನಾಟಕ ಕಲಾ ಮಹಾವಿದ್ಯಾಲಯದ ಸ್ನಾತಕೋತ್ತರ ಪ್ರವಾಸೋದ್ಯಮ ವಿಭಾಗವನ್ನು ಸಂಪರ್ಕಿಸಲು ತಿಳಿಸಲಾಗಿದೆ. ಫೋನ್:0836-2441655 / 2215344

ಲಲಿತಕಲೆಗಳ ಕೋರ್ಸ್‌ಗಳು

'ಒಂದು ಚಿತ್ರ ಸಾವಿರ ಪದಗಳಿಗೆ ಸಮ' ಎನ್ನುತ್ತದೆ ಚೀನೀ ಗಾದೆ. ಭಾಷೆಯ ಕಲಿಕೆಯಲ್ಲಿ ಸಾವಿರಾರು ಪದಗಳಲ್ಲಿ ವಿವರಿಸಲಾಗದ್ದನ್ನು ಕೇವಲ ಒಂದು ಚಿತ್ರ ಒಂದೇ ಕ್ಷಣದಲ್ಲಿ ಅರ್ಥಮಾಡಿಸುತ್ತದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಪಾಠ ಬೋಧನೆ ಮತ್ತು ಕಲಿಕೆಯ ಸಂದರ್ಭದಲ್ಲಿ ನೆರವಿಗೆ ಬರುವ ಈ ಬಣ್ಣಗಳ ಒಡನಾಟದ ಚಿತ್ರಕಲೆ ಚಿಕ್ಕಂದಿನಿಂದಲೇ ಎಲ್ಲರನ್ನೂ ಆಕರ್ಷಿಸುತ್ತದೆ. ಬೆಂಗಳೂರಿನ ಚಿತ್ರಕಲಾ ಪರಿಷತ್, ಕೆನ್ ಸ್ಕೂಲ್ ಆಫ್ ಆರ್ಟ್ಸ್, ಮೈಸೂರಿನ ಕಾವಾ, ಗುಲ್ಬರ್ಗಾದ ಐಡಿಯಲ್ ಫೈನ್ ಆರ್ಟ್ಸ್ ಕಾಲೇಜು, ಬದಾಮಿಯಲ್ಲಿರುವ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಲಲಿತಕಲಾ ಅಧ್ಯಯನ ಕೇಂದ್ರ, ಶಾಂತಿನಿಕೇತನದ ವಿಶ್ವಭಾರತಿ, ಅಹಮದಾಬಾದಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಡಿಸೈನ್ ಮೊದಲಾದ ಸಂಸ್ಥೆಗಳಲ್ಲಿ ಚಿತ್ರಕಲಾ ಅಧ್ಯಯನಕ್ಕೆ ಬೇಡಿಕೆ ಹೆಚ್ಚುತ್ತಲೇ ಇದೆ. ಕರ್ನಾಟಕದಲ್ಲಿನ ಬಹುತೇಕ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಸಂಯೋಜಿತ ಕಾಲೇಜುಗಳ ಮೂಲಕ ಕಲಾ ಶಿಕ್ಷಣ ದೊರೆಯುತ್ತಿದ್ದರೂ ಖಾಸಗಿಯಾಗಿಯೂ ಹಲವು ಚಿತ್ರಕಲಾ ಶಾಲೆಗಳು ತರಬೇತಿ ನೀಡುತ್ತಲೇ ಇವೆ. ಹಲವು ಪ್ರತಿಷ್ಠಿತ ಗ್ಯಾಲರಿಗಳಲ್ಲಿ ಇತ್ತೀಚೆಗೆ ವಾರಾಂತ್ಯದ ತರಬೇತಿ ತರಗತಿಗಳೂ, ಕ್ರಾಷ್ ಕೋರ್ಸ್‌ಗಳು ಏರ್ಪಾಡಾಗುತ್ತಿವೆ.

ದಶ್ಯ ಮಾಧ್ಯಮಗಳಲ್ಲಿ ದೊರೆಯುತ್ತಿರುವ ವಿಫುಲ ಅವಕಾಶಗಳಿಂದಾಗಿ ಚಿತ್ರಕಲೆ, ಗ್ರಾಫಿಕ್ಸ್, ಫೋಟೋ ಜರ್ನಲಿಸಂ, ವೆಬ್ ಡಿಸೈನಿಂಗ್, ಅನಿಮೇಶನ್ ಮೊದಲಾದ ಕಲೆಯ ಮಾಧ್ಯಮಗಳಿಗೆ ಬೇಡಿಕೆ ಹೆಚ್ಚಾಗಿದೆ. ಐದು ವರ್ಷಗಳ ಚಿತ್ರಕಲಾ ಡಿಪ್ಲೊಮಾ ಅಥವಾ ಫೈನ್ ಆರ್ಟ್ಸ್‌ನಲ್ಲಿ ಪದವಿ ಪಡೆದವರಿಗೆ ಕಂಪ್ಯೂಟರ್ ಗ್ರಾಫಿಕ್ಸ್ ಮತ್ತು ಅನಿಮೇಶನ್ ತಂತ್ರಾಂಶಗಳ ಪರಿಚಯ ಇದ್ದರೆ ಜಗತ್ತಿನಲ್ಲಿ ಎಲ್ಲೆಡೆ ಅವರಿಗೆ ಬೇಡಿಕೆ ಇದ್ದದ್ದೇ!

ಚಿತ್ರಕಲಾ ಪರಿಷತ್ತಿನ ಲಲಿತಕಲಾ ಮಹಾವಿದ್ಯಾಲಯ, ಬೆಂಗಳೂರು

ಚಿತ್ರಕಲಾ ಪರಿಷತ್ತಿನ ಆಶ್ರಯದಲ್ಲಿ, 1964ರಲ್ಲಿ ಆರಂಭಗೊಂಡಿದ್ದ ಚಿತ್ರಕಲಾ ವಿದ್ಯಾಲಯ 1983ರಲ್ಲಿ ಲಲಿತಕಲಾ ಮಹಾವಿದ್ಯಾಲಯವಾಗಿ (ಕಾಲೇಜ್ ಆಫ್ ಫೈನ್ ಆರ್ಟ್ಸ್) ಉನ್ನತೀಕರಿಸಲ್ಪಟ್ಟು 1990 ರಿಂದ, ಸ್ನಾತಕೋತ್ತರ ಶಿಕ್ಷಣ, ಸ್ನಾತಕೋತ್ತರ ಡಿಪ್ಲೊಮಾ ತರಗತಿಗಳನ್ನು ನಡೆಸುತ್ತಿದ್ದು 2008 ರಿಂದ ಸಂಶೋಧನಾ ವ್ಯಾಸಂಗಕ್ಕೂ ಅವಕಾಶಮಾಡಿಕೊಟ್ಟಿದೆ. ಬೆಂಗಳೂರು ವಿಶ್ವವಿದ್ಯಾಲಯ ಮತ್ತು ವಿಶ್ವವಿದ್ಯಾಲಯ ಧನಸಹಾಯ ಆಯೋಗದಿಂದ ಮಾನ್ಯತೆ ಪಡೆದಿರುವ ಈ ಕಾಲೇಜಿಗೆ ನ್ಯಾಕ್ ಸಮಿತಿ ಃ++ ಗ್ರೇಡ್ ನೀಡಿದೆ.

ಇಲ್ಲಿ ಚಿತ್ರಕಲೆ, ಶಿಲ್ಪಕಲೆ, ಗ್ರಾಫಿಕ್ಸ್, ಅಪ್ಲೈಡ್ ಆರ್ಟ್ಸ್ ಮತ್ತು ಕಲಾ ಇತಿಹಾಸ ವಿಭಾಗಗಳಿದ್ದು, ಬ್ಯಾಚುಲರ್ ಮತ್ತು ಮಾಸ್ಟರ್ ಆಫ್ ವಿಜುಅಲ್ ಆರ್ಟ್ಸ್, ಸ್ನಾತಕೋತ್ತರ ಡಿಪ್ಲೊಮ ಕೋರ್ಸುಗಳನ್ನು ನಡೆಸಲಾಗುತ್ತಿದೆ. ಅತ್ಯಂತ ಬೇಡಿಕೆಯುಳ್ಳ ಈ ತರಬೇತಿಗೆ ರಾಜ್ಯದ ಎಲ್ಲೆಡೆಯಿಂದ ಕಲಾ ವಿದ್ಯಾರ್ಥಿಗಳು ಮುಗಿಬೀಳುತ್ತಿದ್ದಾರೆ.
ಹೆಚ್ಚಿನ ವಿವರಗಳಿಗಾಗಿ ನೋಡಿ: www.chitrakalaparishath.org


ಚಾಮರಾಜೇಂದ್ರ ದಶ್ಯಕಲಾ ಮಹಾವಿದ್ಯಾಲಯ (ಚಾಮರಾಜೇಂದ್ರ ಆಕಾಡೆಮಿ ಆಫ್ ವಿಜುಅಲ್ ಆರ್ಟ್ಸ್-ಕಾವಾ), ಮೈಸೂರು.
1906ರಲ್ಲಿ ಮೈಸೂರಿನ ನಾಲ್ವಡಿ ಕಷ್ಣರಾಜ ಒಡೆಯರ್ ಅವರು ಸ್ಥಾಪಿಸಿದ ಚಾಮರಾಜೇಂದ್ರ ಟೆಕ್ನಿಕಲ್ ಇನ್ಸ್ಟಿಟ್ಯೂಟ್, 'ಮುಂಬಯಿಯನ ಜೆ.ಜೆ. ಸ್ಕೂಲ್ ಆಫ್ ಆರ್ಟ್ಸ್ ಮಾದರಿಯಲ್ಲಿ ಈ ಸಂಸ್ಥೆ ಇರಬೇಕು' ಎಂಬ ಖ್ಯಾತ ರಷ್ಯನ್ ಕಲಾವಿದ ಸ್ವೆಟಸ್ಲಾವ್ ರೋರಿಕ್ ಅವರ ಸಲಹೆಯಂತೆ ಪರಿಷ್ಕರಿಸಲ್ಪಟ್ಟು, 1981 ರಲ್ಲಿ ಚಾಮರಾಜೇಂದ್ರ ದಶ್ಯಕಲಾ ಮಹಾವಿದ್ಯಾಲಯವಾಗಿ ಮರುನಾಮಕರಣಗೊಂಡಿತು.

2004ರಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನದಲ್ಲಿರುವ, ಮೈಸೂರು ವಿಶ್ವವಿದ್ಯಾಲಯಕ್ಕೆ ಸಂಯೋಜನೆಗೊಂಡಿರುವ ಕಾವಾದಲ್ಲಿ ಚಿತ್ರಕಲೆ, ಶಿಲ್ಪಕಲೆ, ಗ್ರಾಫಿಕ್ಸ್, ಅಪ್ಲೈಡ್ ಆರ್ಟ್ಸ್ ಮತ್ತು ಕಲಾ ಇತಿಹಾಸ, ಫೋಟೋಗ್ರಫಿ, ಫೋಟೋ-ಜರ್ನಲಿಸಂ ವಿಭಾಗಗಳಿದ್ದು, ಬ್ಯಾಚುಲರ್ ಮತ್ತು ಮಾಸ್ಟರ್ ಆಫ್ ವಿಜುಅಲ್ ಆರ್ಟ್ಸ್, ಸ್ನಾತಕೋತ್ತರ ಡಿಪ್ಲೊಮಾ ಕೋರ್ಸುಗಳನ್ನು ನಡೆಸಲಾಗುತ್ತಿದೆ.
ಹೆಚ್ಚಿನ ವಿವರಗಳಿಗಾಗಿ ನೋಡಿ: www.cavamysore.com


ಕುಸುರಿ ಕಲೆ, ಕೈಬರಹ, ಕ್ಯಾಲಿಗ್ರಫಿ ಕೋರ್ಸ್‌ಗಳು

ನಮ್ಮ ಕೈಬರಹ ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆಯಂತೆ! ಕೈಬರಹ ಸುಧಾರಿಸುವ ವಿಶೇಷ ಕೋರ್ಸ್‌ಗಳು ಈಗ ಎಲ್ಲೆಡೆ ಭರಾಟೆಯಿಂದ ನಡೆಯುತ್ತಿವೆ. ಗ್ರಾಫಾಲಜಿ ಎಂದು ಗುರುತಿಸಲಾದ ಈ ಕೋರ್ಸ್‌ನಲ್ಲಿ ಕೈಬರಹ ಅಧ್ಯಯನ ಹೇಳಿಕೊಡಲಾಗುತ್ತಿದೆ. ಗ್ರಾಫಾಲಜಿ ವಿಷಯದ ಪುಸ್ತಕಗಳೂ ಪ್ರಕಟವಾಗಿವೆ.

ಕ್ಯಾಲಿಗ್ರಫಿ ಕೋರ್ಸ್‌ಗಳು, ಕುಸುರಿ ಕಲೆ, ನಿಬ್ ಪೇಂಟಿಂಗ್, ದಾರದ ಕಲೆ, ಕ್ರೋಷಾ ಕಲೆ, ಸ್ಕೆಚ್, ಸ್ವೆಟರ್-ಕುಲಾವಿ ಹೆಣಿಗೆ, ಮದುವೆ, ದೇವರ ಪೂಜೆ ಮೊದಲಾದ ಸಂದರ್ಭಗಳಲ್ಲಿ ಬಳಸುವ ಕಲಾತ್ಮಕ ಕುಸುರಿ ಕಲೆ, ರಂಗೋಲಿ, ಬಣ್ಣದ ಚಿತ್ತಾರಗಳ ರಚನೆ, ಅರಿಸಿನ-ಕುಂಕುಮದ ಮಂಡಲ ರಚನೆಗೂ ತರಬೇತಿ ಶಿಬಿರಗಳಿವೆ.

ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ
ಮೈಸೂರಿನ ಲಕ್ಷ್ಮೀಪುರಂನಲ್ಲಿರುವ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಲ್ಲಿ ಸರ್ಟಿಫಿಕೇಟ್ ಕೋರ್ಸ್, ಡಿಪ್ಲೊಮಾ ಕೋರ್ಸ್, ಬ್ಯಾಚುಲರ್ ಆಫ್ ಪರ್‌ಫಾರ‌್ಮಿಂಗ್ ಆರ್ಟ್ಸ್ (ಬಿ.ಪಿ.ಎ.), ಮಾಸ್ಟರ್ ಆಫ್ ಪರ್‌ಫಾರ‌್ಮಿಂಗ್ ಆರ್ಟ್ಸ್ (ಎಂ.ಪಿ.ಎ.), ಎಂ. ಫಿಲ್., ಡಿ.ಲಿಟ್. ಮತ್ತು ಪಿ.ಎಚ್.ಡಿ. ಅಧ್ಯಯನಕ್ಕಾಗಿ ಪ್ರತಿವರ್ಷ ಅರ್ಜಿಗಳನ್ನು ಕರೆಯಲಾಗುತ್ತದೆ. ಕರ್ನಾಟಕ ಮತ್ತು ಹಿಂದೂಸ್ತಾನಿ ಗಾಯನ, ವಿವಿಧ ಸಂಗೀತವಾದ್ಯಗಳ ವಾದನ, ಭರತನಾಟ್ಯ, ನಾಟಕ ಇತ್ಯಾದಿ ವಿಷಯಗಳಲ್ಲಿ ಆಸಕ್ತಿಯಿರುವ, ಎಸ್.ಎಸ್.ಎಲ್.ಸಿ., ಪಿ.ಯು.ಸಿ., ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ, ಆಸಕ್ತ ಅಭ್ಯರ್ಥಿಗಳು ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿದ್ಯಾಲಯದಿಂದ ಅರ್ಜಿಗಳನ್ನು ಪಡೆದು, ಭರ್ತಿಮಾಡಿ ಸಲ್ಲಿಸಬಹುದು. ಲಿಖಿತ ಮತ್ತು ಸಂದರ್ಶನಗಳ ಆಯ್ಕೆ ಪರೀಕ್ಷೆ ಇದ್ದು ಶಾಸ್ತ್ರ ಮತ್ತು ಪ್ರಾಯೋಗಿಕ ಪರೀಕ್ಷೆಗಳನ್ನು ಅಭ್ಯರ್ಥಿಗಳು ಎದುರಿಸಬೇಕು. ವಿವರಗಳಿಗೆ ಸಂಪರ್ಕಿಸಿರಿ: ರಿಜಿಸ್ಟ್ರಾರ್, ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿದ್ಯಾಲಯ, ಜೆ.ಎಲ್.ಬಿ. ರಸ್ತೆ, ಬಲ್ಲಾಳ್ ವತ್ತದ ಹತ್ತಿರ, ಲಕ್ಷ್ಮೀಪುರಂ, ಮೈಸೂರು - 570004.

ರಂಗಶಿಕ್ಷಣ - ಪ್ರದರ್ಶನ ಕಲೆಯಲ್ಲಿ ತರಬೇತಿ
ಇತ್ತೀಚೆಗೆ ಟಿ.ವಿ. ಸೀರಿಯಲ್‌ಗಳಲ್ಲಿ ನಟಿಸುವ, ಆ್ಯಂಕರ್‌ಗಳಾಗಿ ದುಡಿಯುವ ಅವಕಾಶ, ರೇಡಿಯೋಗಳಲ್ಲಿ ಜಾಕಿಯಾಗಿ ಸೇವೆ ಸಲ್ಲಿಸುವ, ಸ್ಟೇಜ್ ಮತ್ತು ಈವೆಂಟ್ ಮ್ಯಾನೇಜ್‌ಮೆಂಟ್‌ಗಳನ್ನು ನಡೆಸಿಕೊಡುವ ಅವಕಾಶ ಬಳಸಿಕೊಳ್ಳುವತ್ತ ಹೆಚ್ಚು ಹೆಚ್ಚು ಯುವಜನರು ಒಲವು ತೋರಿಸುತ್ತಿದ್ದಾರೆ. ಧ್ವನಿ ಬಳಕೆಯ ವೈವಿಧ್ಯತೆ, ಅಂಗಚಲನೆ, ನಟನಾ ಕೌಶಲ ಇತ್ಯಾದಿ ವಿಷಯಗಳಲ್ಲಿ ಪರಿಣತಿ ಇದ್ದವರಿಗೆ ವಿಪರೀತ ಬೇಡಿಕೆ ಇದೆ. ಸಿನಿಮಾ ತಂತ್ರಜ್ಞಾನ, ಫೋಟೋಗ್ರಫಿ, ಸಿನಿಮಾಟೋಗ್ರಫಿ ಕೋರ್ಸ್‌ಗಳತ್ತಲೂ ಹಲವರು ವಾಲುತ್ತಿದ್ದಾರೆ. ರಂಗಶಿಕ್ಷಣದ ಮೂಲಪಾಠಗಳ ಪರಿಚಯ ಇದ್ದವರು ಈ ಪ್ರದರ್ಶನ ಕಲೆಗಳ ರಂಗದಲ್ಲಿ ಖಂಡಿತಾ ಮಿಂಚಬಲ್ಲರು. ಒಂದು ವರ್ಷದ ರಂಗಶಿಕ್ಷಣ ತರಬೇತಿ ಇತ್ತೀಚೆಗೆ ತುಂಬಾ ಜನಪ್ರಿಯವಾಗುತ್ತಿದೆ.

ನಟನೆಯಲ್ಲಿ ತರಬೇತಿ
ದೆಹಲಿಯಲ್ಲಿರುವ ರಾಷ್ಟ್ರೀಯ ನಾಟಕ ಶಾಲೆ ರಂಗಭೂಮಿಗಾಗಿ ಶ್ರಮಿಸುತ್ತಿರುವ ಅಗ್ರಗಣ್ಯ ಸಂಸ್ಥೆ. ಪ್ರತಿವರ್ಷ ವಿವಿಧ ಡಿಪ್ಲೋಮಾ, ಪದವಿ ಹಾಗೂ ಉನ್ನತ ಶಿಕ್ಷಣದ ಅವಕಾಶಗಳನ್ನು ಕಲ್ಪಿಸುತ್ತಿರುವ ಎನ್.ಎಸ್.ಡಿ. ದೇಶದ ವಿವಿಧ ರಾಜ್ಯಗಳಲ್ಲಿ ಶಾಖೆಗಳನ್ನು ತೆರೆದಿದ್ದು ಕಾಲಕಾಲಕ್ಕೆ ಸ್ಥಳೀಯ ಭಾಷೆ ಮತ್ತು ಸಂಸ್ಕೃತಿಯ ಅಗತ್ಯಕ್ಕೆ ತಕ್ಕಂತೆ ಶಿಬಿರಗಳನ್ನು, ಕೋರ್ಸ್‌ಗಳನ್ನು, ಶಿಕ್ಷಣದಲ್ಲಿ ರಂಗಭೂಮಿ, ಸಮಗ್ರ ರಂಗಭೂಮಿ ವಸತಿ ಕಮ್ಮಟವನ್ನು ಏರ್ಪಡಿಸುತ್ತದೆ. ಪ್ರಾಥಮಿಕ ರಂಗಭೂಮಿ ತರಬೇತಿ ಮತ್ತು ಮಕ್ಕಳ ನಾಟಕ ರಂಗದ ಕಾರ್ಯಾಚರಣೆ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಧ್ವನಿ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆಮಾಡಲಾಗುವುದು. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿರಿ: ಡೈರೆಕ್ಟರ್, ಎನ್.ಎಸ್.ಡಿ. ಬೆಂಗಳೂರು ವಿಭಾಗ, ಗುರುನಾನಕ್ ಭವನ್, ನಂ.6, ಮಿಲ್ಲರ್ಸ್‌ ಟ್ಯಾಂಕ್ ಬಂಡ್ ರಸ್ತೆ, ವಸಂತನಗರ, ಬೆಂಗಳೂರು-560052
http://nsd.gov.in/


ಮೈಸೂರಿನ ರಂಗಾಯಣದಲ್ಲಿ ರಂಗಶಿಕ್ಷಣ ಡಿಪ್ಲೊಮಾ
ಮೈಸೂರಿನ ಕಲಾಮಂದಿರದ ಆವರಣದಲ್ಲಿರುವ ರಂಗಾಯಣ 1989ರಲ್ಲಿ ಆರಂಭಗೊಂಡಿದ್ದು 2010 ರಿಂದ ಸರ್ಕಾರವು ರಂಗಶಾಲೆಯನ್ನು ಆರಂಭಿಸಿದೆ. ಈ ರಂಗಶಾಲೆ - ರಂಗಶಿಕ್ಷಣ ಕೇಂದ್ರದಲ್ಲಿ ಒಂದು ವರ್ಷದ ರಂಗ ಶಿಕ್ಷಣ ಡಿಪ್ಲಮೋ ಕೋರ್ಸ್ ನಡೆಸುತ್ತಿದ್ದು 2012-13ನೇ ಸಾಲಿನ ರಂಗಶಿಕ್ಷಣ ಡಿಪ್ಲೊಮೊಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಈ ಕೋರ್ಸ್‌ಗೆ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯವು ಮಾನ್ಯತೆ ನೀಡಿದೆ. ಆಸಕ್ತರು 30-05-2012ರ ಒಳಗಾಗಿ ರೂ. 50/- ಮನಿಆರ್ಡರ್ ಕಳಿಸಿಕೊಟ್ಟು ಪ್ರಾಸ್ಪೆಕ್ಟಸ್ ಮತ್ತು ಅರ್ಜಿ ತರಿಸಿಕೊಳ್ಳಬಹುದು.

ಒಂದು ವರ್ಷದ ರಂಗಶಿಕ್ಷಣವನ್ನು ಯಶಸ್ವಿಯಾಗಿ ಪೂರೈಸಿದ ವಿದ್ಯಾರ್ಥಿಯು ಹೆಚ್ಚಿನ ವತ್ತಿಪರ ನಟನ ಪರಿಣತಿ ತರಬೇತಿಗಾಗಿ ರಂಗಾಯಣ ರೆಪರ್ಟರಿಯಲ್ಲಿ ಕಿರಿಯ ಕಲಾವಿದನಾಗಿ ಒಪ್ಪಂದದ ಮೇಲೆ ಎರಡು ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಬಹುದು. ಈ ಎರಡು ವರ್ಷಗಳ ಅವಧಿಯಲ್ಲಿ ನಿಗದಿತ ಸಂಭಾವನೆಯನ್ನು ನೀಡಲಾಗುವುದು ಮತ್ತು ಈ ಸೇವಾವಧಿ ಪೂರ್ಣಗೊಳಿಸಿದ ವಿದ್ಯಾರ್ಥಿಯು *ವತ್ತಿಪರ ಪರಿಣತಿ* ಪ್ರಮಾಣಪತ್ರವನ್ನು ಪಡೆಯಲು ಅರ್ಹನಾಗಿರುತ್ತಾನೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
ರಂಗಾಯಣ, ರಂಗಶಾಲೆ
ಕಲಾಮಂದಿರ ಆವರಣ
ವಿನೋಬಾ ರಸ್ತೆ
ಮೈಸೂರು - 560 005
ಫೋನ್: 0821-2512629 / 2512639
http://rangayana.org
http://rangayanamysore.blogspot.in/
www.facebook.com/Rangayana
http://en.wikipedia.org/wiki/Rangayana

ಹೆಗ್ಗೋಡಿನ ನೀನಾಸಂನಲ್ಲಿ ರಂಗಶಿಕ್ಷಣ ಡಿಪ್ಲೊಮಾ
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಹೆಗ್ಗೋಡಿನಲ್ಲಿರುವ ನೀನಾಸಂ ರಂಗಶಿಕ್ಷಣ ಕೇಂದ್ರದಲ್ಲಿ 1980ರಿಂದ ಒಂದು ವರ್ಷದ ರಂಗ ಶಿಕ್ಷಣ ಡಿಪ್ಲಮೋ ಕೋರ್ಸ್ ಆರಂಭಗೊಂಡಿದ್ದು ಪ್ರತಿವರ್ಷ 15 ರಂಗಾಸಕ್ತರಿಗೆ ತರಬೇತಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಊಟ-ವಸತಿ-ಶಿಕ್ಷಣ ಉಚಿತವಾಗಿ ಲಭ್ಯವಿದ್ದು ತರಬೇತಿಯ ಅವಧಿಯಲ್ಲಿ ಶಿಷ್ಯವೇತನವನ್ನು ಕೂಡ ನೀಡಲಾಗುತ್ತದೆ. ಕೆ.ವಿ. ಸುಬ್ಬಣ್ಣ ಅವರ ನಾಯಕತ್ವದಲ್ಲಿ ವಿಶ್ವವಿಖ್ಯಾತಿಗಳಿಸಿದ್ದ ನೀನಾಸಂ ತಿರುಗಾಟ 1985ರಲ್ಲಿ ಆರಂಭಗೊಂಡಿದ್ದು ಇದುವರೆಗೆ 3000 ಕ್ಕೂ ಹೆಚ್ಚು ಪ್ರದರ್ಶನಗಳನ್ನು ನಡೆಸಿಕೊಟ್ಟು ಎರಡು ಮಿಲಿಯನ್‌ಗೂ ಹೆಚ್ಚು ಜನರನ್ನು ತಲುಪಿರುವುದು ದೇಶದ ರಂಗ ಇತಿಹಾಸದಲ್ಲಿ ದಾಖಲಾಗಿದೆ.

ನೀನಾಸಂನಲ್ಲಿ ರಂಗಕಲ್ಪನೆ, ರಂಗ ಇತಿಹಾಸ, ನಾಟಕ ಇತಿಹಾಸ, ರಂಗನಟನೆ, ರಂಗಸಿದ್ಧತೆ, ರಂಗವ್ಯವಸ್ಥೆ ಮುಂತಾಗಿ ವಿಸ್ತಾರವಾದ ಸೈದ್ಧಾಂತಿಕ ಹಾಗೂ ಪ್ರಾಯೋಗಿಕ ಶಿಕ್ಷಣವನ್ನು ನೀಡಲಾಗುತ್ತಿದೆ. ಯೋಗ, ಕಂಸಾಳೆ, ಯಕ್ಷಗಾನ, ಗಮಕ, ಮುಖವರ್ಣಿಕೆ, ಕೋಲಾಟ, ವೀರಗಾಸೆ, ಪ್ರಸಾದನ, ನೆರಳು-ಬೆಳಕು ಕಾರ್ಯಾಗಾರಗಳಲ್ಲದೇ ಕನ್ನಡ ಸಾಹಿತ್ಯ ಪರಂಪರೆಯ ಪರಿಚಯವನ್ನು ನಾಡಿನ ಪ್ರಖ್ಯಾತ ತಜ್ಞರಿಂದ ಮಾಡಿಸಲಾಗುವುದು. ತರಬೇತಿಯ ಅವಧಿಯಲ್ಲಿ ಹಲವು ನಾಟಕಗಳನ್ನು ಪ್ರದರ್ಶಿಸುವ ಅವಕಾಶ ಮತ್ತು ನೀನಾಸಂ ರಂಗತಿರುಗಾಟದಲ್ಲಿ ಭಾಗವಹಿಸುವ ಅವಕಾಶ ಈ ಅಭ್ಯರ್ಥಿಗಳಿಗೆ ದೊರೆಯುತ್ತಿದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
ನೀನಾಸಂ ರಂಗಶಿಕ್ಷಣ ಕೇಂದ್ರ
ಹೆಗ್ಗೋಡು - 577 407
ಸಾಗರ ತಾಲೂಕು, ಶಿವಮೊಗ್ಗ ಜಿಲ್ಲೆ
www.ninasam.org/
www.ninasam.org/ninasam-theater-institute/how-to-apply/

ಸಾಣೇಹಳ್ಳಿಯ ಶ್ರೀಮಠದಲ್ಲಿ ರಂಗಶಿಕ್ಷಣ ಡಿಪ್ಲೊಮಾ

ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಸಾಣೇಹಳ್ಳಿಯ ಶ್ರೀ ಶಿವಕುಮಾರ ರಂಗ ಶಿಕ್ಷಣ ಕೇಂದ್ರದಲ್ಲಿ 2008ನೇ ಸಾಲಿನಿಂದ ಒಂದು ವರ್ಷದ ರಂಗ ಶಿಕ್ಷಣ ಡಿಪ್ಲಮೋ ಕೋರ್ಸ್ ಆರಂಭಗೊಂಡಿದ್ದು ಪ್ರತಿವರ್ಷ 20 ರಂಗಾಸಕ್ತರಿಗೆ ತರಬೇತಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಊಟ-ವಸತಿ-ಶಿಕ್ಷಣ ಉಚಿತವಾಗಿ ಲಭ್ಯವಿದ್ದು ತರಬೇತಿಯ ಅವಧಿಯಲ್ಲಿ ಶಿಷ್ಯವೇತನವನ್ನು ಕೂಡ ನೀಡಲಾಗುತ್ತದೆ. ಪೂಜ್ಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ನೇತತ್ವದಲ್ಲಿ, ಡಾ. ಕೆ ಮರುಳಸಿದ್ದಪ್ಪನವರ ಅಧ್ಯಕ್ಷತೆಯಲ್ಲಿ ಪಠ್ಯರಚನಾ ಸಮಿತಿ ರಚಿತವಾಗಿ ದೇಶ ವಿದೇಶಗಳ ರಂಗಶಿಕ್ಷಣ ಪಠ್ಯಕ್ರಮವನ್ನು ಅಭ್ಯಸಿಸಿ ಸೂಕ್ತ ಪಠ್ಯಕ್ರಮ ರೂಪಿಸಲಾಗಿದ್ದು ಸ್ಥಳೀಯವಾಗಿ ಯೋಗ, ಕಂಸಾಳೆ, ಯಕ್ಷಗಾನ, ಗಮಕ, ಮುಖವರ್ಣಿಕೆ, ಕೋಲಾಟ, ವೀರಗಾಸೆ, ಪ್ರಸಾದನ, ನೆರಳು-ಬೆಳಕು ಕಾರ್ಯಾಗಾರಗಳಲ್ಲದೇ ಕನ್ನಡ ಸಾಹಿತ್ಯ ಪರಂಪರೆಯ ಪರಿಚಯವನ್ನು ನಾಡಿನ ಪ್ರಖ್ಯಾತ ತಜ್ಞರಿಂಣದ ಮಾಡಿಸಲಾಗುವುದು. ತರಬೇತಿಯ ಅವಧಿಯಲ್ಲಿ ಹಲವು ನಾಟಕಗಳನ್ನು ಪ್ರದರ್ಶಿಸುವ ಅವಕಾಶ ಮತ್ತು *ಶಿವಸಂಚಾರ* ಎಂಬ ರಂಗತಿರುಗಾಟದಲ್ಲಿ ಭಾಗವಹಿಸುವ ಅವಕಾಶ ಈ ಅಭ್ಯರ್ಥಿಗಳಿಗೆ ದೊರೆಯುತ್ತಿದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
ಶ್ರೀ ಶಿವಕುಮಾರ ಕಲಾಸಂಘ (ರಿ) ಸಾಣೇಹಳ್ಳಿ
ಶ್ರೀ ಶಿವಕುಮಾರ ರಂಗ ಶಿಕ್ಷಣ ಕೇಂದ್ರ
ಸಾಣೇಹಳ್ಳಿ - 577 515
ಹೊಸದುರ್ಗ ತಾಲೂಕು, ಚಿತ್ರದುರ್ಗ ಜಿಲ್ಲೆ
ಫೋನ್: 08199-243772 / 9449649850
http://shivasanchara.org/
http://shivasanchara.org/sanihalli/index.htm
http://shivasanchara.blogspot.in/2010/11/shivasanchara-sanehalli-website.html

ಲೇಖನ: ಬೇದ್ರೆ ಮಂಜುನಾಥ

08 Kinder Katha Books for Children (Senior) - Introduction by Bedre Manjunath in Vishwavani 26.02.2023

    08 Kinder Katha Books for Children (Senior) - Introduction by Bedre Manjunath in Vishwavani 26.02.2023 - Thank you Editors, Shashidhara...