Tuesday 15 January, 2013

KAS Mains 2011 GS Paper 1 - Article in Udayavani Josh 15 Jan 2013


KAS Mains 2011 GS Paper 1 - Article in Udayavani Josh 15 Jan 2013
  • ಟ್ರೈ ದಿಸ್‌ ಅಟ್‌ ಹೋಂ: ನಿಮ್ಮ ಮಾರ್ಕ್‌ ಎಷ್ಟು?

  • ಜನರಲ್‌ ಸ್ಟಡೀಸ್‌ ಕ್ವೆಶ್ಚನ್‌ ಪೇಪರ್‌ ಇಲ್ಲಿದೆ. ಸಾಧ್ಯವಾದರೆ ನೀವೂ ಪರೀಕ್ಷೆ ಬರೆಯಿರಿ. ನಿಮಗೆಷ್ಟು ಗೊತ್ತು ಅನ್ನೋದ

    • Udayavani | Jan 14, 2013
      ಜನರಲ್‌ ಸ್ಟಡೀಸ್‌ ಕ್ವೆಶ್ಚನ್‌ ಪೇಪರ್‌ ಇಲ್ಲಿದೆ. ಸಾಧ್ಯವಾದರೆ ನೀವೂ ಪರೀಕ್ಷೆ ಬರೆಯಿರಿ. ನಿಮಗೆಷ್ಟು ಗೊತ್ತು ಅನ್ನೋದನ್ನು ತಿಳಿದುಕೊಳ್ಳಿ. 

      ಕರ್ನಾಟಕ ಲೋಕಸೇವಾ ಆಯೋಗವು ಕಳೆದ ಡಿಸೆಂಬರ್‌ 16ರಂದು ನಡೆಸಿದ ಕಡ್ಡಾಯ ಸಾಮಾನ್ಯ ಅಧ್ಯಯನ ಪತ್ರಿಕೆ- 01 ಮತ್ತು 02 ಅಗಾಧ ವಿಷಯ ವಿಸ್ತಾರವನ್ನು ಒಳಗೊಂಡಂತಿದ್ದು, ಸಂತೆಗೆ ಮೂರು ಮೊಳ ನೇಯುವ ಅಭ್ಯರ್ಥಿಗಳಿಗೆ ನಿಜಕ್ಕೂ ಕಬ್ಬಿಣದ ಕಡಲೆಯೇ ಆಗಿದ್ದವು. ಆದರೆ ಮೊದಲಿನಿಂದಲೂ ವ್ಯಾಪಕ ಓದನ್ನು ರೂಢಿಸಿಕೊಂಡ, ಈಗಾಗಲೇ ಐಎಎಸ್‌ ಮುಖ್ಯ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ಮಾತ್ರ ಅತ್ಯಂತ ಸುಲಭವಾಗಿತ್ತು, ಕಾರಣ ಅಲ್ಲಿ ಬಂದಿದ್ದ ಹಲವು ಪ್ರಶ್ನೆಗಳು ಬೇರೆ ರೂಪದಲ್ಲಿ ಇಲ್ಲಿಯೂ ಬಂದಿದ್ದವು. ಅಲ್ಲಿ 5- 10 ಅಂಕಗಳಿಗೆ ಇದ್ದ ಕೆಲವು ಪ್ರಶ್ನೆಗಳು ಇಲ್ಲಿ 2 ಅಂಕಗಳಿಗೆ ಬಂದಿದ್ದು, ಬರೆಯುವವರಿಗೆ ಸಮಯ ಮತ್ತು ವಿಸ್ತರಣೆಗೆ ಅವಕಾಶ ಸಾಲದೆ ಒ¨ªಾಡಿದ್ದು ಸಾಮಾನ್ಯ ದೃಶ್ಯವಾಗಿತ್ತು. ಎಷ್ಟೇ ವೇಗವಾಗಿ ಬರೆದರೂ ವಿಷಯಗಳ ವ್ಯಾಪ್ತಿಯ ಅಗಾಧತೆಯಿಂದ ಬರೆಯುತ್ತಲೇ ಸಾಗಿ ಕೊನೆಗೆ ಒಂದಷ್ಟು ಪ್ರಶ್ನೆಗಳನ್ನು ಹಾಗೇ ಬಿಟ್ಟುಬಂದವರೂ ಉಂಟು! 

      ಸಾಮಾನ್ಯ ಅಧ್ಯಯನ ಪತ್ರಿಕೆ 1- ಸಿಲಬಸ್‌- 300 ಅಂಕಗಳು- 3 ಗಂಟೆ 
      1. ಆಧುನಿಕ ಭಾರತದ ಇತಿಹಾಸ ಮತ್ತು ಸಂಸ್ಕೃತಿ- ಕರ್ನಾಟಕ ಇತಿಹಾಸ ಮತ್ತು ಸಂಸ್ಕೃತಿಗೆ ವಿಶೇಷ ಆದ್ಯತೆ 
      2. ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿನ ಪ್ರಚಲಿತ ಘಟನಾವಳಿಗಳು 
      3. ಅಂಕಿ-ಅಂಶಗಳ ವಿಶ್ಲೇಷಣೆ, ಗ್ರಾಫ್ ಮತ್ತು ಚಿತ್ರಗಳು, ನಕಾಶೆಗಳು 

      ಈ ಬಾರಿಯ ಪ್ರಶ್ನೆ ಪತ್ರಿಕೆ ಹೀಗಿತ್ತು: 
      2011ರ ಕೆಎಎಸ್‌ ಮುಖ್ಯ ಪರೀಕ್ಷೆಯ ಕಡ್ಡಾಯ ಸಾಮಾನ್ಯ ಅಧ್ಯಯನ ಪತ್ರಿಕೆ 1 - ಅಂಕಗಳು 300 

      ಭಾಗ - ಎ 
      1. ಈ ಕೆಳಗಿನ ಯಾವುದಾದರೂ ಎರಡು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿಯೊಂದು ಪ್ರಶ್ನೆಗೂ ಸುಮಾರು 200 ರಿಂದ 250 ಪದಗಳಲ್ಲಿ ಉತ್ತರಿಸಿ: 20 x 2 = 40 
      ಎ. 1937ರ ಚುನಾವಣೆಗಳಲ್ಲಿ ಭಾಗವಹಿಸುವುದಕ್ಕೆ ಕಾಂಗ್ರೆಸ್‌ ಏಕೆ ಸಮ್ಮತಿಸಿತು? 1937-39ರ ಅವಧಿಯಲ್ಲಿ ಕಾಂಗ್ರೆಸ್‌ ಮಂತ್ರಿಮಂಡಲಗಳು ಪ್ರಾಂತ್ಯಗಳು ಕೈಗೊಂಡ ವಿವಿಧ ಕ್ರಮಗಳು ಯಾವುವು? 
      ಬಿ. ಪೂರ್ಣ ಸ್ವರಾಜ್ಯದ ಕರೆಗೆ ಕರ್ನಾಟಕದ ಜನರು ಹೇಗೆ ಪ್ರತಿಕ್ರಿಯಿಸಿದರು? 
      ಸಿ. ಸಾಮಾಜಿಕ ಹಾಗೂ ಧಾರ್ಮಿಕ ಸುಧಾರಣೆಗೆ ಬ್ರಹ್ಮ ಸಮಾಜವು ನೀಡಿದ ಮುಖ್ಯ ಕೊಡುಗೆಗಳನ್ನು ವಿವರಿಸಿ. 
      ಡಿ. ಭಾಷೆಗಳ ಆಧಾರದ ಮೇಲೆ ರಾಜ್ಯಗಳ ಪುನಾರಚನೆಯು ಕರ್ನಾಟಕದ ನಿರ್ಮಾಣದ ಮೇಲೆ ಬೀರಿದ ಪರಿಣಾಮವನ್ನು ಕುರಿತು ಚರ್ಚಿಸಿ. 

      2. ಈ ಕೆಳಗಿನ ಯಾವುದಾದರೂ ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿಯೊಂದು ಪ್ರಶ್ನೆಗೂ ಸುಮಾರು 100-120 ಪದಗಳಲ್ಲಿ ಉತ್ತರಿಸಿ: 10 x 4= 40 
      ಎ. ಕರ್ನಾಟಕದಲ್ಲಿ ಕ್ವಿಟ್‌ ಇಂಡಿಯಾ ಚಳುವಳಿಯು ಯಾವ ಯಾವ ರೂಪಗಳನ್ನು ಪಡೆದುಕೊಂಡಿತ್ತು? 
      ಬಿ. 19ನೇ ಶತಮಾನದಲ್ಲಿ ಮಹಿಳಾ ಶಿಕ್ಷಣ ಕುರಿತಂತೆ ಸುಧಾರಣಾಕಾರರು ಮೈಸೂರು ರಾಜ್ಯದಲ್ಲಿ ಮಾಡಿದ ಆರಂಭಿಕ ಪ್ರಯತ್ನಗಳನ್ನು ಕುರಿತು ಚರ್ಚಿಸಿ. 
      ಸಿ. 1932ರ ನಂತರ ಗಾಂಧೀಜಿಯವರ ನೇತೃತ್ವದಲ್ಲಿ ನಡೆದ ಹರಿಜನ ಚಳುವಳಿಯನ್ನು ಕುರಿತು ಟಿಪ್ಪಣಿ ಬರೆಯಿರಿ. 
      ಡಿ. ಸ್ವದೇಶಿ ಮತ್ತು ಬಹಿಷ್ಕಾರ ಚಳುವಳಿ ಎಂದರೇನು? 
      ಇ. ಭಾರತದ ಸ್ವಾತಂತ್ರÂ ಸಂಗ್ರಾಮದಲ್ಲಿ ಕ್ರಾಂತಿಕಾರಿ ಉಗ್ರಗಾಮಿಗಳು ಅಳವಡಿಸಿಕೊಂಡಂಥ ವಿಧಾನಗಳಿಗೆ ಕಾರಣಗಳೇನು? ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. 
      ಎಫ್. ಮೈಸೂರಿನ ರಾಜಸಂಸ್ಥಾನದ ಮೇಲೆ ರಾಷ್ಟ್ರೀಯ ಚಳುವಳಿಯು ಯಾವ ರೀತಿಯ ಪರಿಣಾಮ ಉಂಟುಮಾಡಿತು? 

      3. ಕೆಳಗಿನ ಯಾವುದಾದರೂ ಎರಡು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿಯೊಂದು ಪ್ರಶ್ನೆಗೂ ಸುಮಾರು 50-60 ಪದಗಳಲ್ಲಿ ಉತ್ತರಿಸಿ: 5 x 2= 10 
      ಎ. ಗಾಂಧಿಯವರು ತಮ್ಮ ಹಿಂದ್‌ ಸ್ವರಾಜ್‌ ಎಂಬ ಕೃತಿಯ ಮೂಲಕ ತಲುಪಿಸಿದ ಸಂದೇಶದ ಮುಖ್ಯಾಂಶಗಳನ್ನು ತಿಳಿಸಿ. 
      ಬಿ. ಸ್ವಾತಂತ್ರÂಕ್ಕಾಗಿ ಭಾರತವು ನಡೆಸಿದ ಹೋರಾಟದಲ್ಲಿ ಭಾರತದ ರಾಷ್ಟ್ರೀಯ ಸೇನೆ (ಐNಅ)ಯ ಪಾತ್ರವನ್ನು ಕುರಿತು ಚರ್ಚಿಸಿ. 
      ಸಿ. ಪ್ರತ್ಯೇಕ ಮತದಾರರ ಸಮುದಾಯದ ಪರವಾಗಿ ಅಂಬೇಡ್ಕರ್‌ ನಿಲುವು ತಳೆಯಲು ಕಾರಣಗಳೇನು? 

      4. ಈ ಕೆಳಗಿನ ಎಲ್ಲವುಗಳಿಗೆ ಸಂಕ್ಷಿಪ್ತ ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಉತ್ತರ 20-25 ಪದಗಳ ಮಿತಿಯಲ್ಲಿರಬೇಕು: 2 x 5= 10 
      ಎ. ಮೀರತ್‌ ಒಳಸಂಚು ಪ್ರಕರಣ 
      ಬಿ. ಅಖೀಲ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತು 
      ಸಿ. ಮೈಸೂರು ರಾಜ್ಯದಲ್ಲಿ ಮಿಲ್ಲರ್‌ ಸಮಿತಿ ವರದಿಯ ಮಹತ್ವ 
      ಡಿ. ಕಿತ್ತೂರು ರಾಣಿ ಚೆನ್ನಮ್ಮ 
      ಇ. ಸಂತಾಲರ ದಂಗೆ 

      ಭಾಗ- ಬಿ 
      5. ಕೆಳಗಿನ ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿಯೊಂದು ಪ್ರಶ್ನೆಗೂ ಸುಮಾರು 200 ರಿಂದ 250 ಪದಗಳಲ್ಲಿ ಉತ್ತರಿಸಿ: 20 x 3= 60 
      ಎ. ಕೂಡಂಕುಲಂ ಪರಿಯೋಜನೆ ಕುರಿತಾದ ಆಂದೋಲನದ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರವು ಕೈಗೊಂಡಿರುವ ಕ್ರಮಗಳೇನು? 
      ಬಿ. ಭ್ರಷ್ಟಾಚಾರವು ಭಾರತದ ಪ್ರಗತಿಯನ್ನು ಕಾಡುತ್ತಿದೆಯೇ? ನಿಮ್ಮ ಟೀಕೆಗಳನ್ನು ಬರೆಯಿರಿ. 
      ಸಿ. ಬಹುದೊಡ್ಡ ಪರಿಸರದ ಸಮಸ್ಯೆಗಳನ್ನು(ಜಾಗತಿಕ ತಾಪಮಾನ ಏರಿಕೆ, ಅಂತರ್ಜಲ ಬರಿದಾಗುವಿಕೆ ಮುಂತಾದ ರೀತಿಯ) ಸರ್ಕಾರದ ಮಟ್ಟದಲ್ಲಿ ಮಾತ್ರ ನಿಭಾಯಿಸಲು ಸಾಧ್ಯ ಎಂದು ಅನೇಕರು ಭಾವಿಸುತ್ತಾರೆ. ಆದರೆ ಇನ್ನೂ ಕೆಲವರು, ಸಾಂಸ್ಥಿಕ ಪರಿಹಾರಗಳಿಗಿಂತ ವೈಯಕ್ತಿಕ ಮಟ್ಟದಲ್ಲಿ ನಡೆಯುವ ಪ್ರಯತ್ನಗಳು ಹೆಚ್ಚು ನಿರ್ಣಾಯಕ ಹಾಗೂ ಮೌಲ್ಯಯುತವಾಗಿರುತ್ತವೆ ಎಂದು ಭಾವಿಸುತ್ತಾರೆ. ಈ ಎರಡೂ ದೃಷ್ಟಿಕೋನಗಳ ಬಗ್ಗೆ ಚರ್ಚಿಸಿ ಮತ್ತು ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ. 
      ಡಿ. ಭಾರತದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ರಾಷ್ಟ್ರೀಕರಣಗೊಳಿಸುವುದರ ಸಮಾಜೋ- ಸಾಂಸ್ಕೃತಿಕ ಹಾಗೂ ಆರ್ಥಿಕ ಮಹತ್ವವನ್ನು ಕುರಿತು ಪರಿಶೀಲಿಸಿ. 
      ಇ. ಐಪಿಎಲ್‌ ಬ್ರಾÂಂಡ್‌ ಇರುವುದು ಕ್ರಿಕೆಟ್‌ಗಾಗಿಯೇ ಹೊರತು ಹಗರಣಗಳಿಗಲ್ಲ. ಇಡೀ ದೇಶಾದ್ಯಂತ ಚರ್ಚೆಯನ್ನು ಎಬ್ಬಿಸಿದ ವಿವಾದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ. 
      ಎಫ್. ಭಾರತದ ಹುಲಿ ಬಿಕ್ಕಟ್ಟನ್ನು ಸರಿಸ್ಕಾ ಅನುಭವವು ಹೇಗೆ ತೋರಿಸಿಕೊಟ್ಟಿದೆ? 

      6. ಕೆಳಗಿನ ಯಾವುದಾದರೂ ಐದು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿಯೊಂದು ಪ್ರಶ್ನೆಗೂ ಸುಮಾರು 100 ರಿಂದ 120 ಪದಗಳಲ್ಲಿ ಉತ್ತರಿಸಿ: 10 x 5= 50 
      ಎ. ಕಿಂಗ್‌ಫಿಶರ್‌ ಏರ್‌ಲೈನ್ಸ್‌ ಪತನಕ್ಕೆ ಕಾರಣಗಳೇನು? 
      ಬಿ. ಭಾರತ -ಮಲೇಶಿಯ ಮುಕ್ತ ವ್ಯಾಪಾರ ಒಪ್ಪಂದ (ಊಖಅ)ದ ಪರಿಣಾಮಗಳನ್ನು ಸಂಕ್ಷಿಪ್ತವಾಗಿ ವಿವರಿಸಿ. 
      ಸಿ. ನಗರಗಳಲ್ಲಿ ಸಾರ್ವಜನಿಕ ಸಾರಿಗಯ ಪ್ರಾಮುಖ್ಯತೆಯನ್ನು ಕುರಿತು ಚರ್ಚಿಸಿ. 
      ಡಿ. ಬದಲಾಗುತ್ತಿರುವ ಬ್ರಹ್ಮಗಿರಿ ವನ್ಯಜೀವಿಧಾಮದ ದೃಶ್ಯವಿವರ ಕುರಿತು ನಿರೂಪಿಸಿ. 
      ಇ. ಯುಎಸ್‌ ಹೊಣೆಗಾರಿಕೆ ಮಸೂದೆಯ ವಿಶಿಷ್ಟ ಅಂಶಗಳನ್ನು ತಿಳಿಸಿ. 
      ಎಫ್. ಸುಸ್ಥಿರ ಅಭಿವೃದ್ಧಿ ಎಂದರೇನು? 
      ಜಿ. ಭಾರತದಲ್ಲಿ ಆರೋಗ್ಯಕರವಾದ ಸಂಶೋಧನಾ ಸಂಸ್ಕೃತಿ ಇಲ್ಲದ ಕೊರತೆಯಿಂದಾಗುತ್ತಿರುವ ಪರಿಣಾಮಗಳನ್ನು ವಿವರಿಸಿ. 

      7. ಕೆಳಗಿನ ಯಾವುದಾದರೂ ಆರು ಪ್ರಶ್ನೆಗಳಿಗೆ ಉತ್ತರಿಸಿ, ಟಿಪ್ಪಣಿ ಬರೆಯಿರಿ. ಉತ್ತರಗಳು ತಲಾ 50- 60 ಪದಗಳ ಮಿತಿಯಲ್ಲಿರಬೇಕು: 5 x 6= 30 
      ಎ. ಅಂತರರಾಷ್ಟ್ರೀಯ ವಿಮಾನ ಸಾಗಾಣಿಕೆ ಸಂಘ(ಐnಠಿಛಿrnಚಠಿಜಿಟnಚl ಅಜಿr ಖrಚnsಟಟ್ಟಠಿ ಅssಟcಜಿಚಠಿಜಿಟn) ಕುರಿತು ಸಂಕ್ಷಿಪ್ತ ಟಿಪ್ಪಣಿ ಬರೆಯಿರಿ. 
      ಬಿ. ಆರ್‌ಬಿಐ ನೀತಿ 2012- 2013ರ ಮುಖ್ಯಾಂಶಗಳನ್ನು ತಿಳಿಸಿ. 
      ಸಿ. ಚೆನ್ನೈ- ದಾವೈ ಕಾರಿಡಾರ್‌ ಪರಿಯೋಜನೆ ಎಂದರೇನು? 
      ಡಿ. ಮಳೆನೀರಿನ ಕೊಯ್ಲು ಮಾಡುವುದರ ಅಗತ್ಯತೆ ಕುರಿತು ಟಿಪ್ಪಣಿ ಬರೆಯಿರಿ. 
      ಇ. ಕನ್ನಡ ಲೇಖಕರಾದ ಕುವೆಂಪು ಪ್ರತಿಪಾದಿಸಿರುವ ವಿಶ್ವಮಾನವ ಪರಿಕಲ್ಪನೆಯ ಮಹತ್ವವನ್ನು ನಿರೂಪಿಸಿ. 
      ಎಫ್. ಅರ್ಹತಾ ಪ್ರಭುತ್ವ ಎಂದರೇನು? 
      ಜಿ. ಯಾವುದನ್ನು ಸಾಮಾನ್ಯುವಾಗಿ ಸೈಬರ್‌ ಬೆನ್ನಟ್ಟುವಿಕೆ ಎಂದು ಕರೆಯುತ್ತಾರೆ? 
      ಎಚ್‌. ಮರ್ಯಾದಾ ಹತ್ಯೆ ಎಂದರೇನು? ಸಂಕ್ಷಿಪ್ತವಾಗಿ ವಿವರಿಸಿ. 

      8. ಈ ಕೆಳಗಿನ ಎಲ್ಲವುಗಳಿಗೂ ಸಂಕ್ಷಿಪ್ತ ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಉತ್ತರ 20- 25 ಪದಗಳ ಮಿತಿಯಲ್ಲಿರಬೇಕು: 2 x 10 = 20 
      ಎ. ಹಣ ನೀಡಿಕೆಯ ಸುದ್ದಿಸೇವೆ 
      ಬಿ. ಖRಐMs 
      ಸಿ. ಸಹಸ್ರಮಾನದ ಅಭಿವೃದ್ಧಿ ಗುರಿಗಳು 
      ಡಿ. Mಟsಠಿ ಊಚvಟurಛಿಛ Nಚಠಿಜಿಟn 
      ಇ. ರಾಷ್ಟ್ರೀಯ ಉಪಚಾರ (Nಚಠಿಜಿಟnಚl ಖrಛಿಚಠಿಞಛಿnಠಿ) 
      ಎಫ್. ಕರ್ನಾಟಕ ಸರ್ಕಾರವು ಸ್ಥಾಪಿಸಿರುವ ಪಂಪ ಪ್ರಶಸ್ತಿ 
      ಜಿ. ಖಜಛಿ 'ಖಜಿsಠಿಛಿಞಚ ಕullಟuಠಿ' 
      ಎಚ್‌. ಏರ್‌ ಇಂಡಿಯಾ ಮತ್ತು ಇಂಡಿಯನ್‌ ಏರ್‌ಲೈನ್ಸ್‌ ವಿಲೀನವು ಒಂದು ಕಾರ್ಯಸಾಧ್ಯ ಪರಿಹಾರವೇ? 
      ಐ. ಮೊಹಮದ್‌ ಅಜ್ಮಲ್‌ ಅಮೀರ್‌ ಕಸಬ್‌ 
      ಜೆ. ಕರ್ನಾಟಕ ಜಾನಪದ ವಿಶ್ವವಿದ್ಯಾಲಯ 

      ಭಾಗ- ಸಿ 
      9. ಎ.'lಛಿss ಠಿಜಚn' ಮತ್ತು 'ಞಟ್ಟಛಿ ಠಿಜಚn' ಆಗಿವ್‌ಗಳ ರಚನೆಯನ್ನು ವಿವರಿಸಿ. ಈ ಗ್ರಾಫ್ಗಳ ಉಪಯೋಗವನ್ನು ತಿಳಿಸಿ. -4 
      ಬಿ. ಒಂದು ಹೆಸರಾಂತ ವೃತ್ತಪತ್ರಿಕೆಯು ತನ್ನ ಸಾಪ್ತಾಹಿಕ ವಿಭಾಗದಲ್ಲಿ, ಒಂದು ರಾಜ್ಯದೊಳಗಿನ ವಿವಿಧ ವೃತ್ತಿಗಳಲ್ಲಿ ಮಹಿಳೆಯರು ಭಾಗವಹಿಸುವುದನ್ನು ಕುರಿತು ಕೆಳಕಂಡ ಶೇಕಡಾವಾರು ದತ್ತಾಂಶವನ್ನು ಪ್ರಕಟಿಸಿದೆ:
      ವೃತ್ತಿ ಶೇಕಡಾವಾರು- 2007 ಶೇಕಡಾವಾರು 2011 
      ಸಾಫ್ಟ್ವೇರ್‌ ಇಂಜಿನಿಯರುಗಳು 25 37 
      ರಕ್ಷಣಾ ಸೇವೆಗಳು 05 10 
      ವಿದೇಶಾಂಗ ಸೇವೆಗಳು 12 13 
      ಪತ್ರಕರ್ತರು 16 28 
      ನ್ಯಾಯವಾದಿಗಳು 28 32 
      ವಾಸ್ತು ಶಿಲ್ಪಿಗಳು 04 13 
      ಸನದು ಪಡೆದ ಲೆಕ್ಕಪರಿಶೋಧಕರು 13 20 
      ಮನೋರೋಗ ಚಿಕಿತ್ಸಕರು 43 58 
      ಅ. ಇಲ್ಲಿ ಕೊಟ್ಟಿರುವ ದತ್ತಾಂಶಕ್ಕೆ ಸೂಕ್ತ ರೇಖಾಚಿತ್ರವನ್ನು ರಚಿಸಿ. 
      ಆ. ಮಹಿಳಾ ಭಾಗವಹಿಸುವಿಕೆಯಲ್ಲಿ ಸ್ವಲ್ಪವೇ ಏರಿಕೆಯಾಗಿರುವ ಹಾಗೂ ಅತಿಶಯವಾದ ಏರಿಕೆಯಾಗಿರುವ ಎರಡು ವೃತ್ತಿಗಳನ್ನು ಹೆಸರಿಸಿ. 
      ಇ. ಪುರುಷ ಭಾಗವಹಿಸುವಿಕೆಯು ಒಂದೇ ರೀತಿಯಾಗಿ ಇಳಿಮುಖವಾಗಿರುವಂಥ ಎರಡು ವೃತ್ತಿಗಳು ಯಾವುವು?
      ಈ. ಒಬ್ಬ ಮಹಿಳಾ ಹೋರಾಟಗಾರ್ತಿ ಹೀಗೆ ಬರೆಯುತ್ತಾರೆ, ಇತರ ವೃತ್ತಿಗಳಿಗೆ ಹೋಲಿಸಿದರೆ ಮಹಿಳೆಯರು ಅಲ್ಪ$ಸಂಖ್ಯಾತರಾಗಿರುವಂಥ ಸಂದರ್ಭದಲ್ಲಿ ಯಾವುದೇ ಒಂದು ಗೊತ್ತಾದ ಕಾಲದಲ್ಲಿ ಮಹಿಳೆಯರು ಗರಿಷ್ಠ ಅನುಕೂಲಗಳನ್ನು ಅನುಭವಿಸುತ್ತಾರೆ. ಇಲ್ಲಿ ಲಭ್ಯವಿರುವ ದತ್ತಾಂಶವನ್ನು ಆಧರಿಸಿ ಈ ಮಾಹಿತಿಯನ್ನು ವಿಮರ್ಶಿಸಿ. -10 

      ಸಿ. ಅ. ಕೃಷ್ಣಮೂರ್ತಿ ಎಂಬುವವರು 2011ರಲ್ಲಿ ಸರಾಸರಿ ಪ್ರತಿ ತಿಂಗಳೂ ರೂ.465 ಸಂದಾಯ ಮಾಡಿ¨ªಾರೆ. ಸೆಪ್ಟೆಂಬರ್‌ನಿಂದ ಡಿಸೆಂಬರ್‌ ತಿಂಗಳವರೆಗೆ ಸೋಲಾರ್‌ ಹೀಟಿಂಗ್‌ ವ್ಯವಸ್ಥೆಗೆ ಸಂಬಂಧಿಸಿದಂತೆ ಪ್ರತಿ ತಿಂಗಳೂ ರೂ.50 ರಿಯಾಯಿತಿ ಮೊತ್ತವನ್ನು ಕಂಪ್ಯೂಟರ್‌ ಕಡಿತ ಮಾಡಿಲ್ಲ ಎಂಬುದು ಅವರಿಗೆ ಈಗ ಗೊತ್ತಾಗಿದೆ. ಇದನ್ನು ಸರಿಪಡಿಸಿದರೆ ಮಾಸಿಕ ಸರಾಸರಿ ಎಷ್ಟಾಗುತ್ತದೆ? 
      ಆ. ಮಂಡಳಿಯ ಪರೀಕ್ಷೆಯನ್ನು ತೆಗೆದುಕೊಳ್ಳುತ್ತಿರುವ 10ನೇ ತರಗತಿಯ ಹುಡುಗರು ಹಾಗೂ ಹುಡುಗಿಯರ ಲಿಂಗಾನುಪಾತವು 4:5 ಆಗಿದೆ. 90 ವಿದ್ಯಾರ್ಥಿಗಳಿರುವ ವರ್ಗದ ಸರಾಸರಿ ಅಂಕಗಳು 64. ಹುಡುಗರ ಸರಾಸರಿ ಅಂಕ ಗಳೀಕೆ 60 ಆಗಿದ್ದರೆ ಹುಡುಗಿಯರು ಗಳಿಸಿದ ಒಟ್ಟು ಅಂಕಗಳು ಎಷ್ಟು? 4 + 2= 6 

      10. ಎ. ಒಂದು ಕುಟುಂಬದ ಮಾಸಿಕ ಖರ್ಚುಗಳ ದತ್ತಾಂಶವನ್ನು ಈ ಕೆಳಗೆ ನೀಡಲಾಗಿದೆ: 
      ಬಾಬ್ತು ಒಟ್ಟು ಖರ್ಚಿನ ಶೇಕಡಾವಾರು 
      ಆಹಾರ 65 
      ಬಟ್ಟೆ 10 
      ಮನೆ 12 
      ಇಂಧನ ಮತ್ತು ದೀಪದ ವ್ಯವಸ್ಥೆ 05 
      ಇತರೆ 08 

      ಅ. ಮೇಲ್ಕಂಡ ದತ್ತಾಂಶಕ್ಕೆ ಪೈ ರೇಖಾಚಿತ್ರವನ್ನು ಬರೆಯಿರಿ. 
      ಆ. ಕುಟುಂಬದ ಒಟ್ಟು ಮಾಸಿಕ ಖರ್ಚು ರೂ.25,000 ಆಗಿದ್ದರೆ ಪ್ರತ್ಯೇಕ ಬಾಬ್ತುಗಳಿಗೆ ಎಷ್ಟೆಷ್ಟು ಖರ್ಚು ಎಂಬುದನ್ನು ಕಂಡುಹಿಡಿಯಿರಿ. 
      ಇ. ಇಂಧನ ಹಾಗೂ ದೀಪದ ವ್ಯವಸ್ಥೆಗೆ ಖರ್ಚುಮಾಡಿದ್ದಕ್ಕಿಂತ ಶೇಕಡಾವಾರು ಎಷ್ಟು ಹಣವನ್ನು ಮನೆಗೆ ಅಧಿಕವಾಗಿ ಖರ್ಚು ಮಾಡಲಾಗಿದೆ ಎಂಬುದನ್ನು ಲೆಕ್ಕ ಮಾಡಿ. 4 + 2 + 2 = 8 

      ಬಿ. ಕೆಳಕಂಡ ಬೈವೇರಿಯೇಟ್‌ ದತ್ತಾಂಶವನ್ನು ಬಳಸಿಕೊಂಡು ಪಿರ್‌ಸನ್ನನ ಸಹ ಸಂಬಂಧ ಗುಣಾಂಕ ಹಾಗೂ ನಿರ್ಧಾರಣಾ ಗುಣಾಂಕವನ್ನು ಲೆಕ್ಕಹಾಕಿ: 
      x 5 9 13 17 21 
      y 12 20 25 33 35 
      ಮತ್ತು ಈ ಎರಡೂ ಗುಣಾಂಕಗಳ ಮೌಲ್ಯಗಳನ್ನು ಸಾಂಖೀÂಕವಾಗಿ ವ್ಯಾಖ್ಯಾನಿಸಿ. -6 

      ಸಿ. ಈ ಕೆಳಗಿನವುಗಳನ್ನು ಎಷ್ಟು ವಿವಿಧ ರೀತಿಗಳಲ್ಲಿ ಮಾಡಬಹುದು? 2 x 3= 6 
      ಅ. ಆರು ಪುಸ್ತಕಗಳನ್ನು ಒಂದು ಕಪಾಟಿನಲ್ಲಿ ಜೋಡಿಸುವ ವಿಧಗಳು. 
      ಆ. ಅತ್ಯಂತ ಹಿರಿಯ ಆಟಗಾರನು ಮೊದಲು ಎಸೆಯುವುದು ಸಾಧ್ಯವಾಗದಂತೆ, ಆರು ಮಂದಿ ಆಟಗಾರರನ್ನು ಕ್ರಿಕೆಟ್‌ ಚೆಂಡು ಎಸೆಯಲು ವ್ಯವಸ್ಥೆ ಮಾಡುವುದು. 
      ಇ. ಆರು ಮಂದಿ ಪುರುಷರು ಮತ್ತು ಮೂವರು ಮಹಿಳೆಯರು ಒಂದು ಮೇಜಿನ ಸುತ್ತಲೂ ಕೂರಬೇಕು, ಹೇಗೆಂದರೆ ಪ್ರತಿಯೊಬ್ಬ ಪುರುಷನ ಪಕ್ಕದಲ್ಲಿ ಒಬ್ಬ ಮಹಿಳೆ ಕೂತಿರಬೇಕು. ಇದು ಪ್ರಶ್ನೆಪತ್ರಿಕೆ. ಇದನ್ನು ಈಗ ನೀವೂ ಬಿಡಿಸಲು ಪ್ರಯತ್ನಿಸಬಹುದಲ್ಲವೇ? ಸ್ಕೋರ್‌ ಎಷ್ಟು?

08 Kinder Katha Books for Children (Senior) - Introduction by Bedre Manjunath in Vishwavani 26.02.2023

    08 Kinder Katha Books for Children (Senior) - Introduction by Bedre Manjunath in Vishwavani 26.02.2023 - Thank you Editors, Shashidhara...