Tuesday 25 December, 2012

KAS Mains Compulsory Kannada Paper - Article in Udayavani Josh 25 Dec 2012


KAS Mains Compulsory Kannada Paper - Article in Udayavani Josh 25 Dec 2012
Udayavani
  • ಕೆಎಎಸ್‌ ಪರೀಕ್ಷೆ ಹೇಗಿತ್ತು ಗೊತ್ತಾ?

  • ಖಂಡಿತಾ ಗಾಬರಿಯಾಗಬೇಡಿ. ಇದೇನು ಪ್ರಳಯದ ರುದ್ರನಾಟ್ಯವಲ್ಲ. ಪಂಜೆ ಮಂಗೇಶರಾಯರ(ಕವಿಶಿಷ್ಯ) ''''ತೆಂಕಣ ಗಾಳಿಯಾಟ'' ಪದ್ಯದ

    • Udayavani | Dec 24, 2012
      ಬರಲಿದೆ, ಅಹಹಾ! ದೂರದಿ ಬರಲಿದೆ 
      ಭುಸುಗುಟ್ಟುವ ಪಾತಾಳದ ಹಾವೋ..... 
      ಬರುವುದು ಭರ ಭರ ಭರದಲಿ ಬರುವುದು 
      ಬೊಬ್ಬೆಯ ಹಬ್ಬಿಸಿ ಒಂದೇ ಬಾರಿಗೆ 
      ಉಬ್ಬರ ಎಬ್ಬಿಸಿ ಕಡಲಿನ ನೀರಿಗೆ 
      ಬೊಬ್ಬುಳಿ ತೆರೆಯನು ದಡಕ್ಕೆ ಹೊಮ್ಮಿಸಿ 
      ಅಬ್ಬರದಲಿ ಭೋರ್‌ಭೋರನೆ ಗುಮ್ಮಿಸಿ... 
      ಖಂಡಿತಾ ಗಾಬರಿಯಾಗಬೇಡಿ. ಇದೇನು ಪ್ರಳಯದ ರುದ್ರನಾಟ್ಯವಲ್ಲ. ಪಂಜೆ ಮಂಗೇಶರಾಯರ(ಕವಿಶಿಷ್ಯ) 'ತೆಂಕಣ ಗಾಳಿಯಾಟ' ಪದ್ಯದ ಸಾಲುಗಳಿವು. ಅಷ್ಟೆÇÉಾ ರುದ್ರತಾಂಡವವಾಡುತ್ತಾ ಧಾವಿಸುತ್ತಿರುವುದು ಪ್ರತಿವರ್ಷ ಬರುವ ತೆಂಕಣಗಾಳಿ ಅಷ್ಟೇ! 

      ತೆಂಕಣ ಗಾಳಿಯು ಕೊಂಕಣ ಸೀಮೆಗೆ 
      ಬಂತೈ ಬಂತೈ ಬಂತೈ... 
      ಪ್ರಳಯ ಆಗದೇ ಇರುವುದರಿಂದ ಇದೀಗ ನೀವು ಈ ಅಂಕಣವನ್ನು ಓದುತ್ತಿರುವಿರಿ! ಪರಮಪಿತನ, ಸುತನ, ಪವಿತ್ರಾತ್ಮನ ಹೆಸರಿನಲ್ಲಿ ಕ್ರಿಸ್‌ಮಸ್‌ ಸಂಭ್ರಮವನ್ನು ಹಂಚಿಕೊಳ್ಳುತ್ತಿರುವಿರಿ! ವಿಪ್ಲವಗಳೆಲ್ಲವೂ ಠುಸ್ಸೆಂದದ್ದಕ್ಕೆ ಉಸ್ಸೆಂದು ನಿಟ್ಟುಸಿರು ಬಿಟ್ಟಿರುವಿರಿ! 

      ಪ್ರಳಯ ಕುರಿತಂತೆ ಹತ್ತಾರು ಪುಸ್ತಕಗಳೂ ಜನರ ಕೈಯಲ್ಲಿ ಚಲಾವಣೆಯಾಗುತ್ತಿದ್ದರೂ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಪ್ರಕಟಿಸಿರುವ, ಪೊ›.ಎಚ್‌.ಆರ್‌. ರಾಮಕೃಷ್ಣ ರಾವ್‌ ಅವರ ಪ್ರಳಯ-2012, ಡಾ.ಎಸ್‌. ಬಾಲಚಂದ್ರರಾವ್‌ ಅವರ ಮಹಾಪ್ರಳಯ 2012? ಮತ್ತು ಸಪ್ತಗಿರಿ ಪ್ರಕಾಶನ ಪ್ರಕಟಿಸಿರುವ ಶ್ರೀಕಾಂತ್‌ ವಿ. ಬÇÉಾಳ್‌ ಅವರ 2012ರಲ್ಲಿ ಪ್ರಳಯ ಸಂಭವವೇ? ಭೂಮಿ ಸುರಕ್ಷಿತವೇ? ಕೃತಿಗಳು ವಸ್ತುನಿಷ್ಠವಾಗಿ ಪ್ರಳಯದ ವಿಶ್ಲೇಷಣೆ ಮಾಡುವಲ್ಲಿ ಯಶಸ್ವಿಯಾಗಿವೆ ಎನ್ನಬಹುದು. 

      ಪ್ರಳಯವೆಂಬ ಯಕಃಶ್ಚಿತ್‌ ಸಂಶಯ ಕೀಟವನ್ನು ನಿವಾರಿಸಲು ಅಧ್ಯಯನವೆಂಬ ದಿವೌÂಷಧಿಯೇ ಬೇಕು. ವಿಶ್ವ ರಹಸ್ಯದ ಕೀಲಿಕೈ ಹುಡುಕುತ್ತಿರುವ ಈ ಹೊತ್ತಿನಲ್ಲಿ ಇಲ್ಲದ್ದನ್ನು ಕುರಿತು ಚಿಂತಿಸದೆ, ನಾವೇ ಹುಡುಕಿ, ಸೃಷ್ಟಿ ಕ್ರಿಯೆ ಅರ್ಥಕಂಡುಕೊಳ್ಳಲು ನೆರವಾಗುವ ವೈಜ್ಞಾನಿಕ ಸಾಹಿತ್ಯ, ವಿಶ್ಲೇಷಣೆಗಳನ್ನು ಅಧ್ಯಯನ ಮಾಡೋಣ, ವೈಜ್ಞಾನಿಕ ಚಿಂತನೆಯನ್ನು ಎÇÉೆಡೆ ಹರಡೋಣ. 

      ಕಡ್ಡಾಯ ಕನ್ನಡ ಪತ್ರಿಕೆ- 2012 
      ಕರ್ನಾಟಕ ಲೋಕಸೇವಾ ಆಯೋಗವು ಇದೇ ಡಿಸೆಂಬರ್‌ 15ರಂದು ನಡೆಸಿದ ಕಡ್ಡಾಯ ಕನ್ನಡ ಪತ್ರಿಕೆಯು ಅತ್ಯಂತ ಸುಲಭವಾಗಿದ್ದು, ಸಾಮಾನ್ಯ ಕನ್ನಡ ಓದು, ಬರಹ ತಿಳಿದವರೆಲ್ಲರೂ ಸುಲಭವಾಗಿ ಬಿಡಿಸುವಂತಿತ್ತು. ಇಂಗ್ಲಿಷ್‌ ಮಾಧ್ಯಮದಲ್ಲಿ ಓದಿ ಆರಂಭದಿಂದಲೂ ಕನ್ನಡವನ್ನು ನಿರ್ಲಕ್ಷಿಸಿದವರಿಗೆ ಮಾತ್ರ ಸ್ವಲ್ಪ$ಕಷ್ಟ ಅನಿಸಿತು. ವ್ಯಾಕರಣ ಅಂಶಗಳಿಗಿಂತ ಪದಸಂಪತ್ತಿನ ಕಡೆಗೇ ಹೆಚ್ಚು ಒತ್ತು ಇತ್ತು. ವಿಷಯ ವಿಶ್ಲೇಷಣೆ ಮತ್ತು ನಿರೂಪಣೆಗೆ ಹೆಚ್ಚಿನ ಒತ್ತು ಇದ್ದು ಅಭ್ಯರ್ಥಿಗಳು ಕೊಟ್ಟಿರುವ ವಸ್ತು, ವಿಷಯವನ್ನು ಹೇಗೆ ಗ್ರಹಿಸಿ¨ªಾರೆ, ಹೇಗೆ ಕ್ಲುಪ್ತವಾಗಿ ನಿರ್ದಿಷ್ಟ ಉತ್ತರಗಳನ್ನು ನೀಡಿ¨ªಾರೆ ಎನ್ನುವುದರ ಮೇಲೆ ಫ‌ಲಿತಾಂಶ ನಿಗದಿಯಾಗುತ್ತದೆ. ಈ ಬಾರಿಯ ಪ್ರಶ್ನೆ ಪತ್ರಿಕೆ ಹೀಗಿತ್ತು: 
      ಕೆಎಎಸ್‌ ಮುಖ್ಯ ಪರೀಕ್ಷೆಯ ಕಡ್ಡಾಯ ಕನ್ನಡ ಪತ್ರಿಕೆ 2012- ಅಂಕಗಳು 150 

      ಭಾಗ- ಎ 
      1. ಈ ಕೆಳಗಿನ ಯಾವುದಾದರೂ ಒಂದರ ಬಗ್ಗೆ ಸುಮಾರು 300 ಶಬ್ದಗಳಲ್ಲಿ ಒಂದು ಪ್ರಬಂಧ ಬರೆಯಿರಿ: 25 
      ಅ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸದ ಅಗತ್ಯ 
      ಆ. ಅರಣ್ಯಗಳ ನಾಶ- ದೇಶವಿನಾಶ 
      ಇ. ಗ್ರಾಮಾಂತರ ಪ್ರಾಥಮಿಕ ಶಾಲೆಗಳ ಹೀನಸ್ಥಿತಿ 
      ಈ. ಹಳೆಯ ಸಂಸ್ಕೃತಿಯ ಅಳಿವು-ಉಳಿವು 

      2. ಈ ಕೆಳಗಿನ ಗದ್ಯಭಾಗವನ್ನು ಗಮನವಿಟ್ಟು ಓದಿ ಕೊನೆಯಲ್ಲಿ ಕೊಟ್ಟಿರುವ ಪ್ರಶ್ನೆಗಳಿಗೆ ನಿಮ್ಮ ಮಾತುಗಳಲ್ಲಿ ಉತ್ತರಿಸಿ: 25 
      (ಸಮಾಜಕಾರ್ಯವನ್ನು ಕುರಿತ ಪುಟ್ಟ ಪ್ರಬಂಧವೊಂದನ್ನು ನೀಡಲಾಗಿದ್ದು, ಇದನ್ನು ಕನಿಷ್ಟ ಎರಡು ಬಾರಿ ಓದಿಕೊಂಡು ಅದರ ಕೆಳಗೆ ನೀಡಲಾದ ಐದು ಪ್ರಶ್ನೆಗಳಿಗೆ 
      ಉತ್ತರಿಸಬೇಕಿತ್ತು. ಪ್ರತಿ ಪ್ರಶ್ನೆಗೆ 5 ಅಂಕಗಳು ನಿಗದಿಯಾಗಿದ್ದವು.) 

      3. ಈ ಕೆಳಗಿನ ಗದ್ಯಭಾಗದ ಸಾರವನ್ನು ನಿಮ್ಮ ಸ್ವಂತ ಮಾತುಗಳಲ್ಲಿ 100 ಶಬ್ದಗಳಿಗೆ ಮೀರದಂತೆ ಸಂಗ್ರಹಿಸಿ ಬರೆಯಿರಿ. ಲೇಖನದ ಕೊನೆಯಲ್ಲಿ ನೀವು ಬಳಸಿರುವ ಶಬ್ದಗಳ ಸಂಖ್ಯೆಯನ್ನು ಸೂಚಿಸಿ: 25 

      ವಿಸೂ: ಲೇಖನ ಸಂಗ್ರಹವು ಸೂಚಿಸಿರುವುದಕ್ಕಿಂತ ಹೆಚ್ಚು ಅಥವಾ ಕಡಿಮೆ ಇದ್ದರೆ ಅಂಕಗಳನ್ನು ಕಳೆಯಲಾಗುವುದು. 
      (ಸುಮಾರು 300ಕ್ಕೂ ಹೆಚ್ಚು ಪದಗಳ ಮಿತಿಯ ಒಂದು ಗದ್ಯಭಾಗವನ್ನು ನೀಡಲಾಗಿದ್ದು, ಕನ್ನಡ ಭಾಷೆಯ ಅಭಿಮಾನ ಬೆಳೆಸುವ ಕುರಿತ ಸುದೀರ್ಘ‌ ಚರ್ಚೆ ಅದರಲ್ಲಿತ್ತು. ಇದರ ಮೂರನೇ ಒಂದು ಭಾಗ ಅಂದರೆ ಸುಮಾರು 100 ಪದಗಳ ಅಳತೆಗೆ ಸರಿಹೊಂದುವಂತೆ, ಮೂಲದ ಯಾವುದೇ ಪ್ರಮುಖ ಸಂಗತಿಗಳನ್ನು ಬಿಟ್ಟುಬಿಡದೇ ಕ್ಲುಪ್ತವಾಗಿ ಹಿಡಿದಿಡಬೇಕಿತ್ತು. ತಕ್ಕ ಶೀರ್ಷಿಕೆಯನ್ನೂ ಬರೆಯಬೇಕಿತ್ತು. ಸಂಕ್ಷೇಪಿಕರಣದ ಉತ್ತರ ಬರೆಯಲಿಕ್ಕಾಗಿಯೇ ಪ್ರತ್ಯೇಕವಾದ ನಿರ್ದಿಷ್ಟ ಸಾಲುಗಳ ಹಾಳೆಯನ್ನು ನೀಡಲಾಗಿತ್ತು.) 
      4. ಕೆಳಗಿನ ಗದ್ಯಭಾಗವನ್ನು ಕನ್ನಡಕ್ಕೆ ಭಾಷಾಂತರಿಸಿ: 25 
      (ಸುಮಾರು 90 ಪದಗಳ ಮಿತಿಯ ಸುಲಭವಾದ ನೀತಿ ಶಿಕ್ಷಣವನ್ನು ಕುರಿತ ಪ್ರಬಂಧವೊಂದರಿಂದ ಆಯ್ದ ಇಂಗ್ಲಿಷ್‌ ಪ್ಯಾರಾಗ್ರಾಫ್ ನೀಡಿ ಅದನ್ನು ಕನ್ನಡಕ್ಕೆ ಅನುವಾದ ಮಾಡುವಂತೆ ಕೇಳಲಾಗಿತ್ತು. ಭಾಷೆ ಮತ್ತು ಭಾವ ತುಂಬಾ ಸರಳವಾಗಿತ್ತು.) 

      ಭಾಗ- ಬಿ 
      5. ಈ ಕೆಳಗಿನವುಗಳಲ್ಲಿ ಒಂದನ್ನು ಕುರಿತು 100 ಪದಗಳಲ್ಲಿ ಪತ್ರಿಕಾ ಸಂಪಾದಕರಿಗೆ ಒಂದು ಪತ್ರ ಬರೆಯಿರಿ: 10 
      ಎ. ಶಬ್ದಮಾಲಿನ್ಯವನ್ನು ತಡೆಗಟ್ಟುವ ಬಗೆ 
      ಬಿ. ಶಾಂತಿ ಕದಡುತ್ತಿರುವ ಮಾದಕ ವಸ್ತುಗಳ ಹಾವಳಿ 
      ಸಿ. ದುರುಪಯೋಗಕ್ಕೆ ಬಳಸಲಾಗುತ್ತಿರುವ ಮೊಬೈಲ್‌ 

      6. ಈ ಕೆಳಗಿನವುಗಳಲ್ಲಿ ಎರಡರ ಅರ್ಥಸ್ವಾರಸ್ಯವನ್ನು ವಿವರಿಸಿ: 10 
      ಎ. ಹಾಸಿಗೆ ಇದ್ದಷ್ಟು ಕಾಲುಚಾಚು 
      ಬಿ. ಹನಿಹನಿ ಕೂಡಿದರೆ ಹಳ್ಳ 
      ಸಿ. ಲಂಚ ಕೊಟ್ಟು ಮಂಚ ಏರು 
      ಡಿ. ರೊಟ್ಟಿ ಜಾರಿ ತುಪ್ಪಕ್ಕೆ ಬಿತ್ತು 

      7. ಈ ಕೆಳಗಿನ ನುಡಿಗಟ್ಟುಗಳಲ್ಲಿ ಎರಡರ ಅರ್ಥವನ್ನು ವಿವರಿಸಿ, ಅವುಗಳನ್ನು ನಿಮ್ಮ ಸ್ವಂತ ವಾಕ್ಯಗಳಲ್ಲಿ ಪ್ರಯೋಗಿಸಿ: 5 
      ಎ. ಮಣ್ಣುಮುಕ್ಕು 
      ಬಿ. ಕಬ್ಬಿಣದ ಕಡಲೆ 
      ಸಿ. ಗಾಳಿಗೋಪುರ 
      ಡಿ. ತೂರಿಬಿಡು 
      ಇ. ನೀರಿನ ಮೇಲಣ ಗುಳ್ಳೆ 

      8. ಕೆಳಗಿನ ಪ್ರಶ್ನೆಗಳಿಗೆ ಸೂಕ್ತ ಉತ್ತರ ಬರೆಯಿರಿ: 5 
      ಎ. ಚಿರಂತನ ದಾಹ- ಯಾರು ಬರೆದ ಕಾವ್ಯ? 
      ಬಿ. ಜ್ಞಾನಪೀಠ ಪ್ರಶಸ್ತಿಯನ್ನು ಸ್ಥಾಪಿಸಿದವರ ಹೆಸರೇನು? 
      ಸಿ. ಪುತಿನ- ಎಂಬ ಕಾವ್ಯನಾಮದ, ಕವಿಯ ಪೂರ್ಣ ಹೆಸರೇನು? 
      ಡಿ. ಬನವಾಸಿಯಲ್ಲಿ ಕೋಗಿಲೆಯಾಗಿ ಹುಟ್ಟಲು ಬಯಸಿದ ಪ್ರಾಚೀನ ಕವಿ ಯಾರು? 
      ಇ. ಕನ್ನಡದ ವರ್ಗೀಯ ವ್ಯಂಜನಗಳ ಸಂಖ್ಯೆ ಎಷ್ಟು? 

      ಭಾಗ - ಸಿ 

      9. ಈ ಕೆಳಗಿನವುಗಳಲ್ಲಿ ಐದಕ್ಕೆ ತತ್ಸಮ ರೂಪಗಳನ್ನು ಕೊಡಿ: 5 
      ಎ. ದನಿ 
      ಬಿ. ಬಿಜ್ಞೆ 
      ಸಿ. ಸಂಜೆ 
      ಡಿ. ದೀವಿಗೆ 
      ಇ. ರತುನ 
      ಎಫ್. ರಿಸಿ 
      ಜಿ. ಸೊನ್ನೆ 
      ಎಚ್‌. ಕಬ್ಬ 
      ಐ. ದಾಡೆ 
      ಜೆ. ಮಿಳು¤ 

      10. ಈ ಕೆಳಗಿನವುಗಳಲ್ಲಿ ಐದಕ್ಕೆ ತದ್ಭವ ರೂಪಗಳನ್ನು ಕೊಡಿ: 5 
      ಎ. ಕೂಷ್ಮಾಂಡ 
      ಬಿ. ಲಕ್ಷಿ¾à 
      ಸಿ. ಸ್ಥಾನ 
      ಡಿ. ಭಕ್ತಿ 
      ಇ. ಮೃಗ 
      ಎಫ್. ಕಾರ್ಯ 
      ಜಿ. ಅಡವಿ 
      ಎಚ್‌. ವಿಷಯ 
      ಐ. ಯಾತ್ರೆ 
      ಜೆ. ತ್ಯಾಗ 

      11. ಈ ಕೆಳಗಿನವುಗಳಲ್ಲಿ ಐದಕ್ಕೆ ವಿರುದ್ಧಾರ್ಥಕ ಶಬ್ದ ತಿಳಿಸಿ: 5 
      ಎ. ಮರ್ಯಾದೆ 
      ಬಿ. ಆದಿ 
      ಸಿ. ಅಧರ್ಮ 
      ಡಿ. ಸದ್ಗುಣ 
      ಇ. ಸ್ವಕೀಯ 
      ಎಫ್. ಆಸ್ತಿಕ 
      ಜಿ. ಕನಿಷ್ಠ 
      ಎಚ್‌. ತಿರಸ್ಕರಿಸು 
      ಐ. ಹಿಂಗಾರು 
      ಜೆ. ಸಂದೇಹ 

      12. ಈ ಕೆಳಗಿನ ವಾಕ್ಯಗಳಲ್ಲಿ ಕಂಡುಬರುವ ಕಾಗುಣಿತಾಕ್ಷರಗಳ ತಪ್ಪು$ಗಳನ್ನು ತಿದ್ದಿ ಬರೆಯಿರಿ: 5 
      ಎ. ಆಕಾಸದಲ್ಲಿ ನಕ್ಷತ್ರಗಳು ಮಿನುಗುತ್ತವೆ. 
      ಬಿ. ಇದು ಅಪರುಪದ ಶೀಲಾಸ್ಮಾರಕ 
      ಸಿ. ಬರಪರಿಹರಹಣಕ್ಕಾಗಿ ಬರೆದ ಅರ್ಜಿಧಾರನ ಪತ್ರವಿದು. 
      ಡಿ. ಇನ್ನಷ್ಟು ಸಂಶೋಧನೆಯಿಂದ ಬೂವೈಗ್ನಾನಿಕ ಮಹಾತಗಳು ಹೊರಬೀಳಬಹುದು. 
      ಇ. ರೈತರು ಬೆಳೆಯ ಲಾಭವನ್ನು ಸಾಮನ್ಯವಾಗಿ ಅನ್ಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಾರೆ. 

      ಇಷ್ಟೊಂದು ಸರಳವಾಗಿದ್ದ ಪತ್ರಿಕೆಯನ್ನು ಬಿಡಿಸಿ ಕೇವಲ ಶೇಕಡಾ 30ರಿಂದ 35ರಷ್ಟು ಅಂಕಗಳನ್ನು ಗಳಿಸಿಕೊಳ್ಳಲು ಬಹುತೇಕ ಇಂಗ್ಲಿಷ್‌ ಮೀಡಿಯಂನಲ್ಲಿ ಕಲಿತ ಮೇಧಾವಿಗಳು ತಿಣುಕಾಡಿ¨ªಾರೆ. ಸಂಕ್ಷೇಪಿಕರಣಕ್ಕೆ ವಿಧಿಸಿರುವ ಪದಗಳ ಮಿತಿ ಮತ್ತು ನಿರ್ಬಂಧವನ್ನು ಅರ್ಥಮಾಡಿಕೊಳ್ಳುವಲ್ಲಿ ಬಹುಜನರು ಸೋತಿ¨ªಾರೆ. ಸಂಕ್ಷೇಪಿಕರಣವನ್ನು ಬರೆಯಲು ನೀಡಲಾಗಿದ್ದ ಪ್ರತ್ಯೇಕ ಹಾಳೆಯನ್ನು ರಫ್ ವರ್ಕ್‌ ಶೀಟ್‌ ಅಂತ ಬಳಸಿದವರು ಕೆಲವರಿದ್ದರೆ ಮತ್ತೆ ಕೆಲವರಿಗೆ ಅದರಲ್ಲಿ ಏನು ಬರೆಯಬೇಕು ಎನ್ನುವುದೇ ತಿಳಿಯದೇ ಖಾಲಿ ಕೊಟ್ಟು ಬಂದವರೂ ಇ¨ªಾರೆ! ನಿಗದಿತ ಗದ್ಯಭಾಗವನ್ನು ಓದಿ, ಅರ್ಥೈಸಿಕೊಂಡು ಉತ್ತರಿಸಲು (ಕಾಂಪ್ರಹೆನÒನ್‌) ಇರುವ ಕಿರು ಪ್ರಬಂಧದಲ್ಲಿನ ವಿಷಯವನ್ನು ವಿಸ್ತರಿಸಿ 25 ಅಂಕಗಳಿಗೆ ಬರೆಯುವುದು ಹೇಗೆಂದು ತಿಳಿದಿಲ್ಲ. ಒಂದು ಪ್ರಶ್ನೆಗೆ ಒಂದು ಸಾಲು ಉತ್ತರಿಸಿದರೆ ಸಾಕಾಗುತ್ತದೆ ಅನ್ನಿಸಿ ತಿರಸ್ಕಾರದಿಂದ ಕಂಡವರು ಕೆಲವರಿದ್ದರೆ ಎಷ್ಟೇ ಬರೆದರೂ ಅಂಕ ಬರುವುದು ಅನುಮಾನ ಅಂದುಕೊಳ್ಳುತ್ತಲೇ ವಿಶ್ಲೇಷಣೆಗೆ ಕೈಹಾಕಿ¨ªಾರೆ. ವ್ಯಾಕರಣಾಂಶಗಳು ಈ ಬಾರಿ ಕಾಣೆಯಾಗಿದ್ದು ವಿಶೇಷ. ಪತ್ರಲೇಖನಕ್ಕೆ ಸಿದ್ಧಮಾದರಿ ಬಳಸಿದರೂ ವಿಷಯ ಮಂಡನೆ ಮತ್ತು ವಿವರಣೆಗೆ ಅಂಕಗಳು ದೊರೆಯುತ್ತವೆ. ಅಂದಹಾಗೆ ಇಲ್ಲಿ ಕೊಟ್ಟಿರುವ ಪ್ರಶ್ನೆ ಪತ್ರಿಕೆಯನ್ನು ಈಗ ನೀವೂ ಬಿಡಿಸಲು ಪ್ರಯತ್ನಿಸಬಹುದಲ್ಲವೇ? ಸ್ಕೋರ್‌ ಎಷ್ಟು? 

      ಮನೋರಮಾ ಯಿಯರ್‌ ಬುಕ್‌- 2013 
      ಇದೀಗ ಮಾರುಕಟ್ಟೆಯಲ್ಲಿರುವ ಮನೋರಮಾ ವಾರ್ಷಿಕ ಕೋಶ- 2013ರಲ್ಲಿ ಡಾ.ಎಂ.ಎಸ್‌. ಸ್ವಾಮಿನಾಥನ್‌ ಅವರು ಬರೆದ ರಿಯೋ ಸಮ್ಮೇಳನ ಕುರಿತ ವಿಶೇಷ ಲೇಖನ, ಪೊ›. ಜಯಂತ್‌ ನಾಳೀìಕರ್‌ ಬರೆದ ಗಣಿತ- ವಿಜ್ಞಾನಗಳ ರಾಣಿ ಕುರಿತ ಲೇಖನ, ಡಾ. ಸ್ಯಾಮ್ಯುಯೆಲ್‌ ಪಾಲ್‌ ಅವರ ಉತ್ಕೃಷ್ಟತೆ ಗಳಿಸಿಕೊಳ್ಳುವುದು ಕುರಿತ ಲೇಖನ, ಇಂಗ್ಲಿಷ್‌ ಕಲಿಕೆಗೆ ಪೂರಕವಾಗಿರುವ ಅಗ್ರಲೇಖನಗಳ ಜೊತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಾಯವಾಗುವ ಹಲವು ವಿಶಿಷ್ಟ ವಿಷಯಗಳ ಕುರಿತು ವಿಜ್ಞಾನಿಗಳು, ಮ್ಯಾನೇಜ್‌ಮೆಂಟ್‌ ಗುರುಗಳು, ಕೆರೀರ್‌ ಎಕ್ಸ್‌ಪರ್ಟ್‌ಗಳು, ಕೃಷಿ-ಆರ್ಥಿಕ ಪರಿಣತರು, ಕ್ರೀಡಾ ವಿಶ್ಲೇಷಕರು ಮತ್ತು ಪರಿಸರ ತಜ್ಞರು ಬರೆದಿರುವ 25 ಲೇಖನಗಳು, ಟಿಪ್ಪಣಿಗಳು, ಅಡಿಟಿಪ್ಪಣಿಗಳು ಮತ್ತು ಅಂಕಿ-ಅಂಶಗಳಿವೆ. ಭಾರತೀಯ ಸಿನೆಮಾದ 100 ವರ್ಷಗಳ ಕಾಲಯಾನ ಮತ್ತು ವಿಶ್ವವಿಖ್ಯಾತ 50 ಪೇಂಟಿಂಗ್‌ಗಳ ಪರಿಚಯವಿದೆ. 60 ವರ್ಷಗಳನ್ನು ಪೂರೈಸಿರುವ ಭಾರತೀಯ ಸಂಸತ್ತಿನ ಪರಿಚಯ, 2012ರ ಲಂಡನ್‌ ಒಲಿಂಪಿಕ್ಸ್‌ ವಿಶೇಷ ವರದಿ, ಭಾರತದಲ್ಲಿ ಭ್ರಷ್ಟಾಚಾರ, ದೇವಕಣ ಹಿಗ್ಸ್‌ ಬೋಸಾನ್‌, ಪರಿಸರದ ಸವಾಲುಗಳು, ಇಂಜಿನಿಯರಿಂಗ್‌ ಶಿಕ್ಷಣದ ಪುನಾರಚನೆ, ಅಂತಜಾìಲ ಭದ್ರತಾ ವ್ಯವಸ್ಥೆ ಹೀಗೆ ಹತ್ತು ಹಲವು ಹೊಸ ವಿಷಯಗಳಿಂದ ತುಂಬಿ ತುಳುಕುತ್ತಿದೆ. 

      ಪ್ರಚಲಿತ ಘಟನಾವಳಿಗಳಲ್ಲಿ 2012ರಲ್ಲಿ ನಡೆದ ಪ್ರಮುಖ ಘಟನೆಗಳು, ಶಿಫಾರಸ್ಸುಗಳು, ಚುನಾವಣಾ ಸುಧಾರಣೆಗಳು, ಹಗರಣಗಳು, ಭಾರತ ಮತ್ತು ವಿಶ್ವದ ಸ್ಮರಣೀಯ ವಿದ್ಯಮಾನಗಳ ಕಿರುಚಿತ್ರಣವಿದೆ. ಐತಿಹಾಸಿಕ ಸ್ಥಳಗಳು, ಮಹಾವ್ಯಕ್ತಿಗಳ ಕಿರುಪರಿಚಯ, ಸುಪ್ರಸಿದ್ಧ ಪುಸ್ತಕಗಳು, ಪದಕೋಶದ ವಿವರಣಾತ್ಮಕ ಟಿಪ್ಪಣಿಗಳು, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿನ ಶರವೇಗದ ಬೆಳವಣಿಗೆ, ಉದ್ಯೋಗ ಕ್ಷೇತ್ರದಲ್ಲಿನ ಅವಕಾಶಗಳು ಮೊದಲಾದ ವಿಷಯಗಳನ್ನು ಪ್ರತ್ಯೇಕ ವಿಭಾಗಗಳಲ್ಲಿ ಹಿಡಿದಿಡಲಾಗಿದೆ. ಇದರೊಂದಿಗೆ ಉಚಿತ ಕೊಡುಗೆಯಾಗಿ ನೀಡಲಾಗಿರುವ ಬ್ರಿಟಾನಿಕ ವಿಶ್ವಕೋಶ 2013 ಸಿಡಿಯಲ್ಲಿ 25,000 ಲೇಖನಗಳು, 2,75,000 ಪದಗಳ ಮೆರಿಯಮ್‌ ವೆಬ್‌ಸ್ಟರ್‌ ಪದಕೋಶ, 2500 ವರ್ಣಚಿತ್ರಗಳು, 196 ಭೂಪಟಗಳು, 1,66,000 ಅಂತರ್ಜಾಲ ತಾಣಗಳ ಸಂಪರ್ಕ ಕೊಂಡಿಗಳು ಈ ಬಾರಿಯ ವಿಶೇಷ ಆಕರ್ಷಣೆಯಾಗಿವೆ. 

      ಸ್ಥಳೀಯ ಪತ್ರಿಕಾ ವ್ಯಾಪಾರಿಗಳಲ್ಲಿ ಅಥವಾ ಪುಸ್ತಕಾಲಯಗಳಲ್ಲಿ ಸಿಗುತ್ತಿರುವ ಮನೋರಮಾ ವಾರ್ಷಿಕ ಕೋಶ- 2013ಅನ್ನು ಫ್ಲಿಪ್‌ಕಾರ್ಟ್‌ ಅಂತರ್ಜಾಲದ ಮಳಿಗೆಯಿಂದಲೂ ಖರೀದಿಸಬಹುದು. ಮನೆಬಾಗಿಲಿಗೇ ತಲುಪಿಸುವುದರ ಜೊತೆ 30% ಡಿಸ್ಕೌಂಟ್‌ ಸೌಲಭ್ಯವೂ ಇದೆ.

Thursday 20 December, 2012

Pralaya is a Hoax - Three Books Say It - Article in Udayavani Bahumukhi 20 Dec 2012


Pralaya is a Hoax - Three Books Say It - Article in Udayavani Bahumukhi 20 Dec 2012

 Udayavani 
ಪ್ರಳಯ ಕೃತಿಗಳು!



  • ನಂಬಿಕೆಡುವವರುಂಟಲ್ಲವೋ ಎನ್ನುವ ಮೂರು ಕೃತಿಗಳು!

    • Udayavani | Dec 19, 2012
      ನಂಬಿಕೆಡುವವರುಂಟಲ್ಲವೋ ಎನ್ನುವ ಮೂರು ಕೃತಿಗಳು! 
      ಕಳೆದ ಎರಡು ದಶಕಗಳಿಂದ ಕರ್ನಾಟಕದಲ್ಲಿ ಜಾnನ ವಿಜಾnನ ಪ್ರಸಾರದಲ್ಲಿ ಸಕ್ರಿಯವಾಗಿರುವ ಭಾರತ ಜಾnನ ವಿಜಾnನ ಸಮಿತಿ ಕಾಲಕಾಲಕ್ಕೆ ವಿದ್ಯಾರ್ಥಿಗಳ, ಶಿಕ್ಷಕರ ಮತ್ತು ಜನಸಾಮಾನ್ಯರ ಅಗತ್ಯಕ್ಕೆ ತಕ್ಕ ಮಾರ್ಗದರ್ಶಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಜನಜಾಗೃತಿ ಉಂಟುಮಾಡುವ ಉಪಯುಕ್ತ ಕೃತಿಗಳನ್ನು ಪ್ರಕಟಿಸಿ, ಕನ್ನಡದಲ್ಲಿ ವಿಜಾnನ ಸಾಹಿತ್ಯದ ಪ್ರಚಾರಕ್ಕೆ ಟೊಂಕಕಟ್ಟಿ ನಿಂತಿದೆ. ಗ್ರಹಣಗಳ ಸಂದರ್ಭದಲ್ಲಿ ಗ್ರಹಣೋತ್ಸವದ ಕನ್ನಡಕ ಮತ್ತು ಪುಸ್ತಕಗಳನ್ನು ಹೊರತಂದು ಮೂಢನಂಬಿಕೆಯ ವಿರುದ್ಧ ಸಮರ ಸಾರುವ ಹಲವು ಕಾರ್ಯಕ್ರಮಗಳನ್ನು ನಡೆಸಿ ಯಶಸ್ವಿಯಾಗಿದೆ. ಇದೀಗ ಮಹಾಮಾರಿಯಂತೆ ಕಾಡುತ್ತಿರುವ ಬೌದ್ಧಿಕ ಪ್ಲೇಗ್‌ ಪ್ರಳಯ 2012 ಕ್ಕೆ ಮದ್ದು ಅರೆಯುವ ಸಲುವಾಗಿ ಖ್ಯಾತ ವಿಜಾnನಿಗಳಿಂದ ಸುಲಭ ಬೆಲೆಯ ಸರಳ ನಿರೂಪಣೆಯ ಪುಸ್ತಕಗಳನ್ನು ಪ್ರಕಟಿಸಿದೆ. 

      ಪ್ರಳಯ ಕುರಿತಂತೆ ಹತ್ತಾರು ಪುಸ್ತಕಗಳೂ ಜನರ ಕೈಯಿಂದ ಕೈಗೆ ಬದಲಾಗುತ್ತಲೇ ಇವೆ. ಇದೀಗ ತಾನೇ ಮಾರುಕಟ್ಟೆಗೆ ಪ್ರವೇಶಿಸಿರುವ, ಕರ್ನಾಟಕ ಜಾnನ ವಿಜಾnನ ಸಮಿತಿ ಪ್ರಕಟಿಸಿರುವ, ಪೊ›. ಎಚ್‌. ಆರ್‌. ರಾಮಕೃಷ್ಣ ರಾವ್‌ ಅವರ ಪ್ರಳಯ-2012, ಡಾ. ಎಸ್‌. ಬಾಲಚಂದ್ರರಾವ್‌ ಅವರ ಮಹಾಪ್ರಳಯ 2012? ಮತ್ತು ಸಪ್ತಗಿರಿ ಪ್ರಕಾಶನ ಪ್ರಕಟಿಸಿರುವ ಶ್ರೀಕಾಂತ್‌ ವಿ. ಬಲ್ಲಾಳ್‌ ಅವರ 2012ರಲ್ಲಿ ಪ್ರಳಯ ಸಂಭವವೇ? ಭೂಮಿ ಸುರಕ್ಷಿ$ತವೇ? ಕೃತಿಗಳು ವಸ್ತುನಿಷ್ಠವಾಗಿ ಪ್ರಳಯದ ವಿಶ್ಲೇಷಣೆ ಮಾಡುವಲ್ಲಿ ಯಶಸ್ವಿಯಾಗಿವೆ ಎನ್ನಬಹುದು. 

      ಪೊ›. ಎಚ್‌. ಆರ್‌. ರಾಮಕೃಷ್ಣರಾಯರು ಪ್ರಳಯ-2012 ಕೃತಿಯಲ್ಲಿ ವೈಜಾnನಿಕವಾದ ಸತ್ಯವನ್ನು ಸಾûಾÂಧಾರಗಳನ್ನು ವಿಶ್ಲೇಷಣೆಗಳೊಂದಿಗೆ ಮಂಡಿಸಿದರೆ, ಡಾ. ಎಸ್‌. ಬಾಲಚಂದ್ರರಾವ್‌ ಅವರು ಪುರಾತನ ಭಾರತೀಯ ಖಗೋಳ ವಿಜಾnನದ ಹಿನ್ನೆಲೆಯನ್ನು, ಗಣಿತಶಾಸ್ತ್ರವನ್ನು ಆಳವಾಗಿ ಅಧ್ಯಯನ ಮಾಡಿ ಅಗತ್ಯವೆನಿಸಿದ ಟಿಪ್ಪಣಿಗಳೊಂದಿಗೆ ಮಹಾಪ್ರಳಯ-2012? ಕೃತಿ ರಚಿಸಿಕೊಟ್ಟಿದ್ದಾರೆ. ಶ್ರೀಕಾಂತ್‌ ಬಲ್ಲಾಳರ ಕೃತಿ, ಪುರಾಣ, ಇತಿಹಾಸ, ಐತಿಹ್ಯ, ಜ್ಯೋತಿಷ ಹೀಗೆ ಎಲ್ಲಾ ಸರಕನ್ನೂ ತಗಲಿಸಿಕೊಂಡು ಕುದುರೆಗಿಂತ ಲದ್ದಿ ಬಿರುಸು ಎನಿಸುವಂತೆ ಮಾಡಿ, ಸತ್ಯಯುಗವೆಂಬ ಒಳ್ಳೆಯ ಸಮಯ ಬಂದುಬಿಟ್ಟರೆ ಜ್ಯೋತಿಷಿಗಳಿಗೆ, ಭವಿಷ್ಯಕಾರರಿಗೆಲ್ಲಾ ಕೆಲಸವಿರುತ್ತಾ? ಎಂಬ ಪ್ರಶ್ನೆಯನ್ನು ಕೇಳಿ ಮಾಯನ್‌ ಕ್ಯಾಲೆಂಡರಿನಂತೆ ಸುಮ್ಮನಾಗಿಬಿಡುತ್ತದೆ! ಡಾ. ಬಾಲಚಂದ್ರರಾಯರ ಕೃತಿ ಇತಿಹಾಸ, ಪುರಾಣ, ನಂಬಿಕೆಗಳು ಮತ್ತು ವೈಜಾnನಿಕ ಕಾರಣಗಳನ್ನು ಆಳವಾಗಿ ವಿಶ್ಲೇಷಿಸಿ, ಅಂತಿಮವಾಗಿ ಪ್ರಳಯ ಅನ್ನುವ ಕಲ್ಪನೆಯೇ ಸುಳ್ಳು ಎಂದು ಸಾಧಿಸುವ ಪ್ರಯತ್ನದಲ್ಲಿ ಯಶಸ್ವಿಯಾಗಿದೆ. ಮಾಹಿತಿಯ ವಿಶ್ಲೇಷಣೆ ಎಂತಹವರಿಗೂ ಸುಲಭವಾಗಿ ಅರ್ಥವಾಗುವಂತಿದೆ. 

      ಈ ಮೂರೂ ಕೃತಿಗಳಲ್ಲಿ ನಮ್ಮ ನಂಬುಗೆಯನ್ನು ಪ್ರಶ್ನಿಸುವ, ಗಟ್ಟಿಗೊಳಿಸುವ ಮತ್ತು ಅಹುದಹುದೆನ್ನುವಂತೆ ಮಾಡುವ ಕೆಲವು ಅಂಶಗಳಿವೆ. ವಿವಿಧ ಮೂಲಗಳಿಂದ ಆಯ್ದುಕೊಂಡಿರುವ ಮಾಹಿತಿ ಎಷ್ಟರ ಮಟ್ಟಿಗೆ ವಿಶ್ವಾಸಾರ್ಹ ಎನ್ನುವ ಪ್ರಶ್ನೆಯೂ ಮೂಡುತ್ತದೆ. ಕೇವಲ ವಿಷಯಗಳನ್ನು ಮಂಡಿಸಿ, ತರ್ಕಿಸಿ, ತೀರ್ಮಾನವನ್ನು ತೆಗೆದುಕೊಳ್ಳಲು ನಮಗೇ ಸೂಚಿಸುವ ಕೃತಿಗಳು ಬೇಗನೇ ಕಣ್ಮರೆಯಾಗುತ್ತವೆ. ನಿರ್ದಿಷ್ಟ ಪರಿಹಾರದ ಮಾರ್ಗ ತೋರಿಸಲು ನಿರ್ದಿಷ್ಟತೆಯೇ ಪ್ರಶ್ನಿಸಲ್ಪಡುವ ಸಂದರ್ಭವಿರುವುದರಿಂದ ಅದು ಆಗದ ಮಾತು. ಕಾಲ ಎಂಬುದು ಸಾಪೇಕ್ಷವಾದದ್ದು. ಕಾಲದ ಅಳತೆಯೂ ಸಾಪೇಕ್ಷವೇ. ಮಾನವಕುಲದ ಇತಿಹಾಸವೆಂಬುದು ಕಾಲಚಕ್ರದಲ್ಲಿ ಮೂಡಿಬಂದಿರುವ ಕೆಲವು ಹೆಜ್ಜೆಗುರುತುಗಳಷ್ಟೇ. ಅವರವರ ಭಾವಕ್ಕೆ, ಅವರವರಿಗೆ ಸರಿದೋರಿದಂತೆ, ಈ ಹೆಜ್ಜೆಗುರುತುಗಳ ವಿಶ್ಲೇಷಣೆ ನಡೆದಿದೆ, ಅಷ್ಟೇ! 

      ಮಾಯನ್‌ ಕ್ಯಾಲೆಂಡರ್‌ ಎಂಬ ಅಮೂರ್ತ ಕಲ್ಪನೆಯನ್ನು ಮೂರ್ತರೂಪಕ್ಕೆ ತಂದು ಅರ್ಧ ಶತಮಾನವೂ ಕಳೆದಿಲ್ಲ. ತಿಂಗಳಿಗೆ ಕೇವಲ 20 ದಿನಗಳಿದ್ದ ಈ ಕ್ಯಾಲೆಂಡರ್‌, ಕ್ರಿಸ್ತ ಶಕೆ ಪ್ರತಿಪಾದಿಸಿರುವ ಗ್ರೆಗರಿಯನ್‌ ಕ್ಯಾಲೆಂಡರ್‌ ಮತ್ತು ಶಾಲಿವಾಹನ ಶಕೆ, ವಿಕ್ರಮ ಶಕೆ, ಹಿಜರಿ ಶಕೆ, ಇತ್ಯಾದಿ ಜಗತ್ತಿನಾದ್ಯಂತ ಇರುವ ನೂರಾರು ಕ್ಯಾಲೆಂಡರುಗಳನ್ನು ಒಂದೆಡೆ ಇಟ್ಟುಕೊಂಡು ಪರಸ್ಪರ ತಾಳೆ ನೋಡಿದರೆ ಸಾಪೇಕ್ಷ ಕಾಲದ ಅಳತೆಯನ್ನು ಎಷ್ಟು ಸಮಗ್ರವಾಗಿ ಗ್ರಹಿಸಲು ಸಾಧ್ಯ ಎಂಬುದು ತಿಳಿಯುತ್ತದೆ. ಒಂದೊಂದರದ್ದೂ ಒಂದೊಂದು ದಿಕ್ಕು! ಆಯಾ ಕಾಲಘಟ್ಟಗಳಲ್ಲಿ, ಸ್ಥಳೀಯ ಅನುಕೂಲತೆಗೆ ಅನುಗುಣವಾಗಿ ರಚಿತವಾಗಿರುವ ಈ ಕಾಲಗಣಕಗಳು ಪರಸ್ಪರ ಹೊಂದಾಣಿಕೆ ಮಾಡಿಕೊಂಡರೂ ಅವೆಲ್ಲವೂ 2012, ಡಿಸೆಂಬರ್‌ 21 ಎಂಬದೇ ಪ್ರಳಯದ ದಿನವೆಂದು ಕರಾರುವಾಕ್ಕಾಗಿ ನಿರ್ಧರಿಸುವಲ್ಲಿ ಖಂಡಿತಾ ಯಶಸ್ವಿಯಾಗಲಾರವು! 

      2012 ರಲ್ಲಿ ಪ್ರಳಯ - ಯುಗಾಂತಂ - ಎಲ್ಲವೂ ವಿನಾಶ - ಎಂಬ ಅವೈಜಾnನಿಕ ಪರಿಕಲ್ಪನೆಯನ್ನು ಎಷ್ಟು ಹೆಚ್ಚಿನ ಮಟ್ಟದಲ್ಲಿ ಸಾಧ್ಯವೋ ಅಷ್ಟರ ಮಟ್ಟಿಗೆ ವ್ಯಾವಹಾರಿಕವಾಗಿ ಬಳಸಿಕೊಳ್ಳಲು ಆರಂಭವಾಗಿ ದಶಕಗಳೇ ಕಳೆದಿವೆ. 1999 ರ ಮೇನಲ್ಲಿ ಪ್ರಳಯ ಆಗಿಯೇ ಬಿಡುತ್ತದೆ ಎಂಬ ಹುಸಿ ನುಡಿಗಳನ್ನು ನಂಬಿ ಪ್ರಾಣತ್ಯಾಗ ಮಾಡಿದ ರೇಲಿಯೆನ್ಸ್‌ ಪಂಗಡದ ಸದಸ್ಯರಿಗಿಂತ ಮೂರ್ಖಾತಿಮೂರ್ಖರು ಈಗ ಹೊಸದಾಗಿ ನಮ್ಮ ನಡುವೆ ಹುಟ್ಟಿಬಿಟ್ಟಿದ್ದಾರೆ! ದಿನಾ ಬೆಳಗ್ಗೆ, ರಾತ್ರಿ ಮೂರ್ಖರ ಪೆಟ್ಟಿಗೆಯಲ್ಲಿ ತೌಡುಕುಟ್ಟುತ್ತಲೇ ಇದ್ದಾರೆ! ಪತ್ರಿಕೆಗಳಿಗಂತೂ ಇದೊಂದು ರುಚಿಕರ ಖಾದ್ಯ! ಹಿಮಪರ್ವತಗಳಲ್ಲಿ ಉತ್ಪಾತ ಉಂಟಾಗುತ್ತದೆ ಎಂಬ ಊಹೆಗೆ ಸೊಪ್ಪು ಹಾಕದ ಅಲ್ಲಿನ ಜನ ನಿರುಮ್ಮಳರಾಗಿ, ನೆಮ್ಮದಿಯ ನಿದ್ದೆ ಮಾಡುತ್ತಿದ್ದರೆ ಕರ್ನಾಟಕದ ಕೆಲವು ಟಿ.ವಿ. ಚಾನೆಲ್ಲುಗಳು ಮಾತ್ರ ಪ್ರತಿ ರಾತ್ರಿ ಪ್ರಳಯದ ತುರಿಕೆ ಬರಿಸಿ, ನಿದ್ದೆಯೋಡಿಸುವ ಸಂಕಲ್ಪ ಮಾಡಿದಂತಿವೆ! 

      ಪತ್ರಿಕೆಗಳಲ್ಲಿ ಪುಂಖಾನುಪುಂಖವಾಗಿ ಪರ-ವಿರೋಧದ ಹೇಳಿಕೆಗಳು ಪ್ರಕಟವಾಗುತ್ತಲೇ ಇವೆ. ಹೋರಾಶಾಸಿŒಗಳು, ಚೌಕಾಬಾರದ ಸಂಖ್ಯಾಶಾಸಿŒಗಳು, ಪಂಚಾಂಗದ ಪಟಾಲಂ ಲ್ಯಾಪ್‌ಟಾಪ್‌ ಇಟ್ಟುಕೊಂಡು ದಿವ್ಯದರ್ಶನದಲ್ಲಿ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದರೆ ಅವುಗಳನ್ನು ಖಂಡಿಸುತ್ತಾ, ಇದಮಿತ್ಥಂ ಎಂಬುದನ್ನು ತೋರಿಸಿಕೊಡಲು ವೈಜಾnನಿಕ ಚಿಂತಕರು, ವಿಜಾnನಿಗಳು, ಖಗೋಳಜ್ಞರು ವಿವರಣೆ ನೀಡಲು ಪದಗಳಿಗಾಗಿ ಹುಡುಕಾಡುತ್ತಿದ್ದಾರೆ. ಹೋಮ-ಹವನ-ಪುರಸ್ಕಾರಗಳಂತಹ ವೈದಿಕ ಆಚರಣೆಗಳಿಗೂ, ಪ್ರಾರ್ಥನೆ, ಬಲಿ, ಕೋಲಗಳಂತಹ ಪ್ರಾದೇಶಿಕ ವೈವಿಧ್ಯಕ್ಕೂ ಈ ವ್ಯಾಧಿಯ ವಿಸ್ತರಣೆಯಾಗಿದೆ. ಪ್ರಳಯ ತಡೆಯಲು ಸಾಧ್ಯವಿಲ್ಲವಾದ್ದರಿಂದ ಬದುಕಿ ಉಳಿಯಲು ಹೊಸ ಮಾರ್ಗ ಹುಡುಕುವ ಮಾರ್ಗಾನ್ವೇಶಕರ ತಂಡಗಳೇ ವಿತಂಡವಾದದಲ್ಲಿ ಮುಳುಗಿವೆ! ಡಾ. ಬಾಲಚಂದ್ರರಾವ್‌ ಅವರು ಈ ಚಾನೆಲ್ಲುಗಳ ವಿರುದ್ಧ ಸಮರಸಾರಿದ್ದರೆ, ಪೊ›. ರಾಮಕೃಷ್ಣರಾವ್‌ ಅವರು ಜನರನ್ನು ವೈಜಾnನಿಕ ಚಿಂತನೆಯೆಡೆಗೆ ಕರೆದೊಯ್ಯುವ ಸಾಹಸ ಮಾಡಿದ್ದಾರೆ. ಈ ಮೂರೂ ಕೃತಿಗಳು 2012ರಲ್ಲಿ ಅಂತಹ ವಿಶೇಷವಾದದ್ದು ಏನೂ ಆಗದು ಎನ್ನುವದನ್ನು ಘೋಷಿಸಲು ತಮ್ಮ ತಮ್ಮ ಆಧಾರಗ್ರಂಥಗಳೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾರೆ. ಇದರ ಆಧಾರದಲ್ಲಿ ರಾಜ್ಯ, ರಾಷ್ಟ್ರದಾದ್ಯಂತ ಚರ್ಚೆಗಳು ನಡೆದು ಮೂರ್ಖರ ಪೆಟ್ಟಿಗಳಲ್ಲಿ ಬರುವ ಅರ್ಥಹೀನ ಬ್ರಹ್ಮಾಂಡ ಕಾರ್ಯಕರ್ಮಗಳನ್ನು ಓಡಿಸಬೇಕಾಗಿದೆ. 

      ಜೀವಿಗಳ ಶರೀರದಲ್ಲಿ ಪ್ರತಿ ಕ್ಷಣವೂ ಕೋಟಿಗಟ್ಟಲೇ ಜೀವಕೋಶಗಳು ಸಾಯುತ್ತವೆ ಮತ್ತು ಅದಕ್ಕೂ ಹೆಚ್ಚು ಸಂಖ್ಯೆಯ ಹೊಸ ಜೀವಕೋಶಗಳು ಹುಟ್ಟುತ್ತವೆ. ಕ್ಷಣ ಕ್ಷಣವೂ ಜೀವಕೋಶಗಳಿಗೆ ಪ್ರಳಯವೇ! ಪ್ರಳಯದಿಂದಲೇ ಹೊಸ ಹುಟ್ಟು, ಬೆಳವಣಿಗೆ! ಹಳೆಯ ಚಿಂತನೆಗಳ ಮೇಲೆ ಹೊಸ ಚಿಂತನೆಗಳ ಲೇಪ. ಹಳೆ ಬೇರು ಹೊಸ ಚಿಗುರು ಕೂಡಿರಲು ಮರಸೊಬಗು. ಹೊಸ ತತ್ವದೊಡನೆ ವಿಜಾnನ ಕಲೆ ಮೇಳವಿಸಿದರೆ ಜೀವನ ಸಾರ್ಥಕವಾಗುತ್ತದೆ ಎನ್ನುವ ಕಗ್ಗದ ನುಡಿಯೇ ದಾರಿದೀಪ. 

      ಜಗತ್ತು ಹೊಸ ವಿಜಾnನದ ಹೊಸ್ತಿಲಲ್ಲಿದೆ. ಪ್ರಗತಿಯ ಹಾದಿಯ ಪಯಣ ಸುದೀರ್ಘ‌ವಾದರೂ ಆನಂದದಾಯಕವಾದದ್ದು. ಅನಗತ್ಯವಾದ, ಜೀವ ವಿರೋಧಿ, ವಿನಾಶದ ಚಿಂತೆಗಳಿಂದ ವಿಚಲಿತರಾಗದೆ, ಬರುವ ಕಠಿಣ ಸವಾಲುಗಳನ್ನು ಎದುರಿಸುವ ಸಿದ್ಧತೆಗಳನ್ನು ಮಾಡಿಕೊಂಡು, ವಿಜಾnನದ ಭದ್ರ ಬುನಾದಿಯ ಮೇಲೆ ಮಾನವತೆಯ ಕಟ್ಟಡ ಕಟ್ಟುವ ಪ್ರಯತ್ನ ಸಾಗಬೇಕಾಗಿದೆ. ಅದಕ್ಕೆಂದೇ ಹಲವು ಪ್ರಾಜ್ಞರು ದುಡಿಯುತ್ತಲೂ ಇದ್ದಾರೆ. ಸುಮ್ಮನಿರಲಾದರೆ ಇರುವೆ ಬಿಟ್ಟುಕೊಂಡವರಂತೆ ಸಮೂಹ ಸನ್ನಿಗೊಳಗಾಗಿ ಹುಯಿಲೆಬ್ಬಿಸುವ ಧೂರ್ತರ ಹುನ್ನಾರಗಳಿಗೆ ಬಲಿಯಾಗದೆ, ಯತಾರ್ಥ ಏನೆಂದು ಗ್ರಹಿಸಿ, ದೃಢಮನಸ್ಸಿನಿಂದ ನಮ್ಮ ದೈನಂದಿನ ಚಟುವಟಿಕೆಗಳಲ್ಲಿ, ಪ್ರಗತಿಪರ ಕೆಲಸಗಳಲ್ಲಿ ತೊಡಗಿ, ದೆವ್ವನ ಕಾರ್ಖಾನೆಯಾಗಬಹುದಾದ ಖಾಲಿತಲೆಯನ್ನು ಒಳ್ಳೆಯ ವಿಚಾರಗಳಿಂದ ತುಂಬಿ, ಕ್ರಿಯಾಶೀಲ ಚೇತನವನ್ನಾಗಿಸಿದರೆ ಯಾವ ಪ್ರಳಯವೂ ಬಾಧಿಸದು. ಸುಮ್ಮನೇ ಹುಯಿಲೆಬ್ಬಿಸುವ ಪ್ರಳಯದ ಕಲಿಗೆ ಕಲಿಯುಗ ವಿಪರೀತರಾಗುವ ಸಂದರ್ಭ ಇದು. 

      ಪ್ರಳಯವೆಂಬ ಯಕಃಶ್ಚಿತ್‌ ಸಂಶಯ ಕೀಟವನ್ನು ನಿವಾರಿಸಲು ಅಧ್ಯಯನವೆಂಬ ದಿವೌÂಷಧಿಯೇ ಬೇಕು. ವಿಶ್ವ ರಹಸ್ಯದ ಕೀಲಿಕೈ ಹುಡುಕುತ್ತಿರುವ ಈ ಹೊತ್ತಿನಲ್ಲಿ ಇಲ್ಲದ್ದನ್ನು ಕುರಿತು ಚಿಂತಿಸದೆ, ನಾವೇ ಹುಡುಕಿ, ಸೃಷ್ಟಿ ಕ್ರಿಯೆ ಅರ್ಥಕಂಡುಕೊಳ್ಳಲು ನೆರವಾಗುವ ವೈಜಾnನಿಕ ಸಾಹಿತ್ಯ, ವಿಶ್ಲೇಷಣೆಗಳನ್ನು ಅಧ್ಯಯನ ಮಾಡೋಣ, ಜಾnನ ವಿಜಾnನ ಸಮಿತಿಯ ಪ್ರಯತ್ನಕ್ಕೆ ಶುಭಕೋರೋಣ, ಅಲ್ಲವೇ? 


      ಕೃತಿ : ಪ್ರಳಯ 2012 
      ಲೇಖಕರು : ಪೊ›. ಎಚ್‌. ಆರ್‌. ರಾಮಕೃಷ್ಣ ರಾವ್‌ 
      ಪ್ರಕಾಶಕರು : ಭಾರತ ಜಾnನ ವಿಜಾnನ ಸಮಿತಿ, ಕರ್ನಾಟಕ, ಬೆಂಗಳೂರು. ಪುಟಗಳು : 36 ಬೆಲೆ : ರೂ. 10-00 

      ಕೃತಿ : ಮಹಾಪ್ರಳಯ 2012 
      ಲೇಖಕರು : ಡಾ. ಎಸ್‌. ಬಾಲಚಂದ್ರರಾವ್‌ 
      ಪ್ರಕಾಶಕರು : ಭಾರತ ಜಾnನ ವಿಜಾnನ ಸಮಿತಿ, ಕರ್ನಾಟಕ, ಬೆಂಗಳೂರು. ಪುಟಗಳು : 56 ಬೆಲೆ : ರೂ. 20-00 

      ಕೃತಿ : 2012ರಲ್ಲಿ ಪ್ರಳಯ ಸಂಭವವೇ? ಭೂಮಿ ಸುರಕ್ಷಿ$ತವೇ? 
      ಲೇಖಕರು : ಶ್ರೀಕಾಂತ್‌ ವಿ. ಬಲ್ಲಾಳ್‌ 
      ಪ್ರಕಾಶಕರು : ಸಪ್ತಗಿರಿ ಪ್ರಕಾಶನ, ಮನವರ್ತಿಪೇಟೆ, ಬೆಂಗಳೂರು. ಪುಟಗಳು : 56 ಬೆಲೆ : ರೂ. 20-00 

      ಬೇದ್ರೆ ಮಂಜುನಾಥ

Tuesday 18 December, 2012

Decision Making and Maths Day - Article in Udayavani Daily Josh 18 Dec 2012


Decision Making and Maths Day - Article in Udayavani Daily Josh 18 Dec 2012

Udayavani
  • ಟೆನ್ಸನ್ನು ಮಾಡ್ಕೊಬೇಡಿ: ಹೇಳ್ಳೋದು ಗಮನವಿಟ್ಟು ಓದಿ

  • ಹಲವು ಅಡಚಣೆಗಳನ್ನು, ಕೋರ್ಟ್‌ ಮೆಟ್ಟಿಲುಗಳನ್ನು ದಾಟಿ ಇದೀಗ ಕರ್ನಾಟಕ ಲೋಕಸೇವಾ ಆಯೋಗದ ಕೆಎಎಸ್‌ ಮುಖ್ಯಪರೀಕ್ಷೆಗಳು ಇದೇ

    • Udayavani | Dec 17, 2012
      ಹಲವು ಅಡಚಣೆಗಳನ್ನು, ಕೋರ್ಟ್‌ ಮೆಟ್ಟಿಲುಗಳನ್ನು ದಾಟಿ ಇದೀಗ ಕರ್ನಾಟಕ ಲೋಕಸೇವಾ ಆಯೋಗದ ಕೆಎಎಸ್‌ ಮುಖ್ಯಪರೀಕ್ಷೆಗಳು ಇದೇ ಡಿಸೆಂಬರ್‌ 15ರಿಂದ ಬೆಂಗಳೂರು ಮತ್ತು ಧಾರವಾಡಗಳಲ್ಲಿ ಆರಂಭಗೊಂಡಿವೆ. ಇದೇ ಅವಧಿಯಲ್ಲಿ ನಡೆಯುತ್ತಿರುವ ಬೇರೆ ಬೇರೆ ಹು¨ªೆಗಳ ಪರೀಕ್ಷೆಗಳು ಮತ್ತು ಯುಜಿಸಿ ಎನ್‌ಇಟಿ ಪರೀಕ್ಷೆಗಳಿಗೆ ಹಾಜರಾಗಲು ಕೆಲವು ಅಭ್ಯರ್ಥಿಗಳಿಗೆ ಅಡಚಣೆ ಅಗುತ್ತಿರುವುದು ಖಂಡಿತ. ಉತ್ಸುಕತೆಯಿಂದ ಸಿದ್ಧತೆ ನಡೆಸಿ ಪರೀಕ್ಷೆಯನ್ನು ಎದುರಿಸುತ್ತಿರುವವರು ಹಲವರಾದರೆ ಪರೀಕ್ಷೆಗೆ ಹಾಜರಾಗಲು ಹಿಂದೇಟು ಹಾಕಿ ಮನೆಯÇÉೇ ಉಳಿದವರು ಕೆಲವರು. 
      ಅವರಲ್ಲಿ ಮಹಿಳೆಯರ ಸಂಖ್ಯೆ ಜಾಸ್ತಿ! ಸಿದ್ಧತೆಯ ಕೊರತೆ, ಆತ್ಮವಿಶ್ವಾಸದ ಕೊರತೆ, ಗಂಡ ಪ್ರಿಲಿಮ್ಸ್‌ನಲ್ಲಿ ಫೇಲಾಗಿದ್ದು, ಪ್ರಿಲಿಮ್ಸ್‌ ಪಾಸಾಗಿರುವ ಹೆಂಡತಿ ಮುಖ್ಯಪರೀಕ್ಷೆಗೆ ಹೋಗಲು ಹಿಂದೇಟು ಹಾಕಿರುವುದು, ಪಾಸಾದರೂ ಸಂದರ್ಶನದಲ್ಲಿ ನಡೆಯಲಿದೆ ಎನ್ನಲಾಗುತ್ತಿರುವ ಭ್ರಷ್ಟಾಚಾರ, ಲಂಚಗುಳಿತನ, ಹಣಕ್ಕಾಗಿ ಹು¨ªೆಯ ಮಾರಾಟದ ಸುದ್ದಿಗಳಿಗೆ ಕಿವಿಗೊಟ್ಟಿರುವುದು ಹೀಗೆ ಏನೇನೋ ಕಾರಣಗಳಿಂದ ಮುಖ್ಯ ಪರೀಕ್ಷೆಯಿಂದ ಹೊರಗುಳಿದವರಿ¨ªಾರೆ. ಜೀವನಕ್ಕೆ ಪ್ರಮುಖ ತಿರುವುಕೊಡುವ, ಯಶಸ್ಸು ತಂದುಕೊಡುವ ತೀರ್ಮಾನ ತೆಗೆದುಕೊಳ್ಳುವಲ್ಲಿ ಈ ಯುವಜನರು ಏಕೆ ಹಿಂದೇಟು ಹಾಕುತ್ತಿ¨ªಾರೆ? ಅಂತಹ ಒತ್ತಡ ಇರುವುದಾದರೂ ಏನು? ಯಶಸ್ಸು ಸಿಗದೇ ಇ¨ªಾಗ ಪ್ರಾಣಕಳೆದುಕೊಳ್ಳುತ್ತಿರುವುದು ಏಕೆ? 

      ಸೋಲೇ ಗೆಲುವಿನ ಸೋಪಾನ 
      ಜೀವನದಲ್ಲಿ ಸೋಲುವುದು, ಸೋತುಹೋದೆವೆಂದು ಸಾಯುವುದು ಅಂಥ ದೊಡ್ಡ ಸಾಧನೆಯಲ್ಲ. ಆದರೆ ಆ ಸೋಲಿನ ನೋವನ್ನು ನಸುನಗೆಯೊಂದಿಗೆ ಸಹಿಸುತ್ತಾ ಜೀವಿಸುವುದು ಅತಿ ದೊಡ್ಡ ಸಾಧನೆ. ಗೆದ್ದೇ ಗೆಲ್ಲುವೆವು, ಗೆದ್ದೇ ಗೆಲ್ಲುವೆವು- ಹಂ ಹೋಂಗೇ ಕಾಂಯಾಬ್‌.... ಗೀತೆಯ ಅನುರಣನವೇ ಎÇÉಾ ಕಡೆ ಕೇಳಿಬರುವುದನ್ನು ಎಲ್ಲರೂ ಬಯಸುವುದು ಸಹಜ. ಆದರೆ ಎÇÉಾ ಸಂದರ್ಭಗಳಲ್ಲಿಯೂ ಗೆಲುವು ನಮ್ಮದೇ ಆಗಬೇಕೆಂದೇನಿಲ್ಲ. ತೀವ್ರತರ ಸ್ಪರ್ಧೆಯಲ್ಲಿ ಅತ್ಯುತ್ತಮವಾಗಿ ಹೋರಾಡಿದರೂ ಗೆಲುವು ಕೂದಲೆಳೆಯಂತರದಲ್ಲಿ ನುಣುಚಿಕೊಳ್ಳಲೂಬಹುದು. ಸೋತವರು ಹತಾಶರಾಗಿ, ಲೈಫ‌ು ಇಷ್ಟೇನೇ ಎಂದು ಹಿಂದಿರುಗಿ ಬರಲಾರದಂತಹ ನಿರ್ಣಯಗಳನ್ನು ತೆಗೆದುಕೊಳ್ಳುವ ಅತಿರೇಕಕ್ಕೂ ಹೋಗಬಹುದು. ಆದರೆ, ಬದುಕಿ, ಹೋರಾಡಿ, ಕಳೆದುಕೊಂಡÇÉೇ ಮತ್ತೆ ಹುಡುಕಿ, ಸೋಲನ್ನೇ ಗೆಲುವಿನ ಮೆಟ್ಟಿಲಾಗಿಸಿಕೊಳ್ಳಬೇಕಾದದ್ದು ಇಂದಿನ ಅಗತ್ಯ. 
      ಎ ಸೌಂಡ್‌ ಮೈಂಡ್‌ ಇನ್‌ ಎ ಸೌಂಡ್‌ ಬಾಡಿ(ಸದೃಢ ದೇಹದಲ್ಲಿ ಸಬಲ ಮನಸ್ಸು) ಎಂಬ ಸತ್ಯ ಯುವಜನರಿಗೆ ತಿಳಿಯಬೇಕಿದೆ. ಸೋಲುವುದನ್ನೂ, ಸೋತದ್ದನ್ನು ಒಪ್ಪಿಕೊಳ್ಳುವುದನ್ನೂ, ತಮ್ಮ ಮಿತಿಗಳನ್ನು ಅರ್ಥಮಾಡಿಕೊಳ್ಳುವುದನ್ನೂ ಕಲಿಯಬೇಕಾಗಿದೆ. ಅತಿ ಹೆಚ್ಚಿನ ಸಾಧನೆ ಮಾಡುವ ಗುರಿಯ ಬೆನ್ನು ಹತ್ತಿದವರಂತೂ ಹತಾಶೆಯನ್ನು ಹತ್ತಿರಕ್ಕೂ ಬಿಟ್ಟುಕೊಳ್ಳಬಾರದು. ನಿಮಗಿಂತ ಹೆಚ್ಚು ಅಂಕಗಳಿಸಿ, ಕೆಎಎಸ್‌ ಮುಗಿಸಿ ಡಿವೈಎಸ್‌ಪಿ ಖಂಡಿತಾ ಆಗ್ತಿàನಿ, ನೋಡ್ತಾ ಇರಿ ಎಂದು ಛಾಲೆಂಜ್‌ ಮಾಡಿ, ಮುಖ್ಯ ಪರೀಕ್ಷೆಯಲ್ಲಿ ಒಂದು ಪತ್ರಿಕೆ ಚೆನ್ನಾಗಿ ಆಗಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಫ‌ಲಿತಾಂಶ ಪ್ರಕಟವಾಗುವ ಮುನ್ನವೇ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾದ ಯುವಕ ಸಾಧಿಸಿ¨ªಾದರೂ ಏನು? ಫ‌ಲಿತಾಂಶ ಪ್ರಕಟವಾದಾಗ ಆತ ತೇರ್ಗಡೆಯಾಗಿ ಸಂದರ್ಶನಕ್ಕೆ ಅರ್ಹತೆ ಗಿಟ್ಟಿಸಿದ್ದ. ಸ್ವಲ್ಪ$ಕಾದಿದ್ದರೆ ಸಾಕಿತ್ತಲ್ಲವೇ? ಇದಲ್ಲದಿದ್ದರೆ ಇನ್ನೊಂದು. ಏನೋ ಒಮ್ಮೆ ಅನುತ್ತೀರ್ಣರಾಗಬಹುದು, ಮತ್ತೂಂದು ಅವಕಾಶ ಇದ್ದೇ ಇದೆ. ಮರಳಿ ಯತ್ನವ ಮಾಡಬಹುದಿತ್ತಲ್ಲವೇ? ಬಿಸಿ ರಕ್ತದ ಯುವಜನರಿಗೆ ಹೇಳುವವರು ಯಾರು? 
      ಪ್ರತಿವರ್ಷ ಒಂದು ಮಿಲಿಯನ್‌ ಆತ್ಮಹತ್ಯೆಗಳು ದಾಖಲಾಗುತ್ತಿವೆಯಂತೆ! ಈ ಪ್ರವೃತ್ತಿಯನ್ನು ತಡೆಗಟ್ಟಲಿಕ್ಕಾಗಿಯೇ ವಿಶ್ವದ ಎÇÉಾ ರಾಷ್ಟ್ರಗಳೂ ಶ್ರಮಿಸುತ್ತಿವೆ. ಯುವಜನರು ನಮ್ಮ ದೇಶದ ಆಸ್ತಿ. ಅವರ ಬುದ್ಧಿಮತ್ತೆ, ಪರಿಶ್ರಮ, ದೇಶದ ಏಳಿಗೆಗೆ ಅತ್ಯಗತ್ಯ. ಶ್ರಮ ಗೌರವ ಇಟ್ಟುಕೊಂಡು, ಸಣ್ಣದೋ, ದೊಡ್ಡದೋ, ಒಂದು ಕೆಲಸ ಮಾಡುವ ದೃಢ ನಿರ್ಧಾರದ ಅಗತ್ಯ ಇಂದು ಬಹಳವಿದೆ. ಅದಕ್ಕಾಗಿಯೇ ಪ್ರತಿವರ್ಷ ಅಕ್ಟೋಬರ್‌ 10ರಂದು ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಆಚರಿಸಲಾಗುತ್ತಿದೆ ಕೂಡ. ಈ ಸಂದರ್ಭದಲ್ಲಿ ಭಾರತದ ಬಹುತೇಕ ಎÇÉಾ ಭಾಷೆಯ ದೈನಿಕ ಮತ್ತು ನಿಯತಕಾಲಿಕೆಗಳು ಆತ್ಮಹತ್ಯೆಯ ಪ್ರವೃತ್ತಿ ಮತ್ತು ಅನಾಹುತಗಳನ್ನು ಅಂಕಿ-ಅಂಶಗಳ ಸಮೇತ ಪ್ರಕಟಿಸಿ ಜಾಗೃತಿ ಮೂಡಿಸಲು ಪ್ರಯತ್ನಿಸಿವೆ. ಆತ್ಮಹತ್ಯೆಯೇ ಎಲ್ಲಕ್ಕೂ ಉತ್ತರ ಅಲ್ಲವಲ್ಲ! 

      ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ 
      ಕೇಂದ್ರ ಲೋಕಸೇವಾ ಆಯೋಗದ ಪೂರ್ವಭಾವಿ ಪರೀಕ್ಷೆಗೆ ನಿಗದಿಪಡಿಸಲಾಗಿರುವ ಸಿವಿಲ್‌ ಸರ್ವೀಸ್‌ ಆಪ್ಟಿಟ್ಯೂಡ್‌ ಟೆಸ್ಟ್‌ ಪತ್ರಿಕೆಯಲ್ಲಿ ತೀರ್ಮಾನ ಕೈಗೊಳ್ಳುವಿಕೆ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಕುರಿತ ಪ್ರಶ್ನೆಗಳನ್ನು ಕಳೆದ ವರ್ಷದಿಂದ ಜಾರಿಗೊಳಿಸಿರುವ ಹೊಸ ಮಾದರಿ ಪ್ರಶ್ನೆಪತ್ರಿಕೆಯಲ್ಲಿ ಕೇಳಲಾಗುತ್ತಿದೆ. ಮಾನಸಿಕ ಸಾಮರ್ಥ್ಯ ಪರೀಕ್ಷೆಯ ಭಾಗವಾಗಿರುವ ಈ ಪ್ರಶ್ನೆಗಳನ್ನು ಬಿಡಿಸಲು, ಯಾವುದೇ ನಿರ್ಧಾರ ತೆಗೆದುಕೊಳ್ಳಲು ಹಲವು ಅಡಚಣೆಗಳು ಮತ್ತು ಸನ್ನಿವೇಶಗಳು ಕಾರಣವಾಗಿದ್ದರೂ ಅಭ್ಯರ್ಥಿಯ ನಿಲುವು ಮತ್ತು ಮನೋಭಾವಗಳು ನಿರ್ಧಾರ ತೆಗೆದುಕೊಳ್ಳುವಲ್ಲಿ ನಿರ್ಣಾಯಕ ಪಾತ್ರವಹಿಸುತ್ತವೆ. ಕೊಟ್ಟಿರುವ ಬಹು ಆಯ್ಕೆಯ ಉತ್ತರಗಳಲ್ಲಿ ಎÇÉಾ ಉತ್ತರಗಳೂ ಸರಿಯಾಗಿರುವಂತೆಯೇ ತೋರುತ್ತವೆ. ಆದರೂ ಮನಃಶಾಸ್ತ್ರದ ಹಿನ್ನೆಲೆಯಲ್ಲಿ ಅಥವಾ ನಿಗದಿತ ವಿಷಯಕ್ಕೆ ಸಂಬಂಧಿಸಿದಂತೆ ಇರುವ ಸಿದ್ಧಾಂತಗಳ ಬೆಳಕಿನಲ್ಲಿ ಯಾವುದೋ ಒಂದು ಉತ್ತರ ಅತಿ ಹೆಚ್ಚು ಕರಾರುವಾಕ್‌ ಅನಿಸುತ್ತದೆ. ಅದನ್ನೇ ಆಯ್ದು ಬರೆಯಬೇಕಿರುತ್ತದೆ. 
      ಲೋಕಸೇವಾ ಆಯೋಗಗಳು ನಡೆಸುವ ಪರೀಕ್ಷೆಗಳಲ್ಲಿ ಕೇಳಲಾಗುವ ಈ ರೀತಿಯ ಪ್ರಶ್ನೆಗಳು ಅಭ್ಯರ್ಥಿಯು ಸಾರ್ವಜನಿಕ ಆಡಳಿತಕ್ಕೆ ಕಾಲಿರಿಸುವಾಗ ಆತನಿಗೆ ಆಡಳಿತಾತ್ಮಕ ನಿರ್ಣಯಗಳನ್ನು ಕೈಗೊಳ್ಳುವ ಸಾಮರ್ಥ್ಯ ಎಷ್ಟಿದೆ ಎನ್ನುವ ಹಿನ್ನೆಲೆ ಹೊಂದಿರುತ್ತವೆ. ಹಾಗಾಗಿ ಸಾರ್ವಜನಿಕ ಆಡಳಿತ ವಿಷಯಕ್ಕೆ ಸಂಬಂಧಿಸಿದ ಪುಸ್ತಕಗಳಲ್ಲಿ ನೀಡಿರುವ ನಿರ್ಣಯ ಕೈಗೊಳ್ಳುವಿಕೆಯ ಥಿಯರಿಗಳು ಮತ್ತು ಅವುಗಳ ವ್ಯಾಪ್ತಿಯನ್ನು ತಿಳಿದಿರಬೇಕಾದದ್ದು ಅಗತ್ಯ.

      ಸಾರ್ವಜನಿಕ ಆಡಳಿತದಲ್ಲಿ ನಿರ್ಣಯ ಕೈಗೊಳ್ಳುವಿಕೆ 
      ಲಭ್ಯವಿರುವ ಆಯ್ಕೆಗಳಲ್ಲಿ ಅತ್ಯಂತ ಸೂಕ್ತ ಎನಿಸುವುದನ್ನು ಆಯ್ದುಕೊಳ್ಳುವುದೇ ಪರಿಣಾಮಕಾರಿ ನಿರ್ಧಾರ, ಎನ್ನುತ್ತಾರೆ ಇರಿÌನ್‌ ಡಿ. ಬ್ರಾಸ್‌. ನಿರ್ಣಯ ಕೈಗೊಳ್ಳಲು ಇರುವ ಎರಡು ಅಥವಾ ಅದಕ್ಕಿಂತ ಹೆಚ್ಚು ಆಯ್ಕೆಯ ಮನೋಭಾವಗಳಲ್ಲಿ ಕರಾರುವಾಕ್ಕಾದ ಒಂದನ್ನೇ ಆರಿಸುವುದು ಪರಿಣಾಮಕಾರಿ ನಿರ್ಣಯ ಕೈಗೊಳ್ಳುವಿಕೆ, ಎನ್ನುತ್ತಾರೆ ರಾಬರ್ಟ್‌ ಟಾನೆನ್‌ಬಾಮ್‌. ಒಂದು ಸಂಸ್ಥೆ ಹೇಗೆ ಕಾರ್ಯ ನಿರ್ವಹಿಸುತ್ತದೆ ಎನ್ನುವುದನ್ನು ತಿಳಿಯಲು ಆ ಸಂಸ್ಥೆಯು ಕೈಗೊಳ್ಳುವ ನಿರ್ಣಯಗಳನ್ನು ಗಮನಿಸಬೇಕು, ಎನ್ನುತ್ತಾರೆ ಎಫ್. ಎ. ನೀಗ್ರೋ. ಸರ್ಕಾರಿ ವಲಯದಲ್ಲಿ ಯಾವುದೇ ವಿಷಯ ಕುರಿತು ನಿರ್ಣಯ ತೆಗೆದುಕೊಳ್ಳುವುದು ಒಂದು ಗುಂಪು ಅಥವಾ ಆಡಳಿತ ಯಂತ್ರದ ಒಟ್ಟಾರೆ ಅಭಿಪ್ರಾಯ ಸಂಗ್ರಹಣೆಯಾಗಿರುತ್ತದೆ ಏಕೆಂದರೆ ಈ ತೀರ್ಮಾನ ಇಡೀ ರಾಷ್ಟ್ರದ ಆಡಳಿತ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ, ಎನ್ನುತ್ತಾರೆ ಸೆಕ್ಲೆರ್‌ ಹಡ್ಸನ್‌. 
      ಪೀಟರ್‌ ಎಫ್ ಡ್ರಕರ್‌ ಅವರ ಪ್ರಕಾರ ನಿರ್ಣಯ ತೆಗೆದುಕೊಳ್ಳುವಿಕೆ ಈ ಕೆಳಗಿನ ಐದು ಅಂಶಗಳನ್ನು ಆಧರಿಸಿರುತ್ತದೆ: 
      1. ಸಮಸ್ಯೆಯ ಗುರುತಿಸುವಿಕೆ ಅಥವಾ ವ್ಯಾಖ್ಯೆ 
      2. ಸಮಸ್ಯೆಗೆ ಸಂಬಂಧಿಸಿದ ಮಾಹಿತಿ ಸಂಗ್ರಹಣೆ, ವಿಂಗಡಣೆ ಮತ್ತು ವಿಶ್ಲೇಷಣೆ 
      3. ಸಮಸ್ಯೆಗೆ ಸೂಕ್ತ ಪರಿಹಾರ ಯಾವುವು ಎಂಬ ಆಯ್ಕೆಯ ಯಾದಿ ಸಿದ್ಧಪಡಿಸುವುದು 
      4. ಲಭ್ಯವಿರುವ ಪರಿಹಾರದ ಯಾದಿಯಿಂದ ಸೂಕ್ತವಾದದ್ದನ್ನು ಆಯ್ದುಕೊಳ್ಳುವುದು. 
      5. ಆಯ್ದುಕೊಂಡ ಪರಿಹಾರವನ್ನು ಪರಿಣಾಮಕಾರಿಯಾಗಿ ಅಳವಡಿಸುವುದು 
      ಪರಿಣಾಮಕಾರಿ ಆಯ್ಕೆಯನ್ನು ನಿರ್ಧರಿಸಲು ನೂರಾರು ಅಂಶಗಳು ಸಹಕಾರಿಯಾಗಿರುವಂತೆಯೇ ಹತ್ತಾರು ಅಡೆತಡೆಗಳೂ ಇರುತ್ತವೆ. ಅವೆಲ್ಲವನ್ನು ವಿವರವಾಗಿ ಅಧ್ಯಯನ ಮಾಡಿದ ನಂತರವಷ್ಟೇ ಸೂಕ್ತ ನಿರ್ಣಯ ಕೈಗೊಳ್ಳಲು ಸಾಧ್ಯ. ನಾವು ತೆಗೆದುಕೊಳ್ಳುವ ಯಾವುದೇ ನಿರ್ಣಯ ಸಮಾಜಕ್ಕೆ ಉಪಯುಕ್ತವಾಗಿರಬೇಕೇ ಹೊರತು ಆತ್ಮಹತ್ಯೆಯಂತಹ ತೀವ್ರ ನೇತ್ಯಾತ್ಮಕ ನಿರ್ಣಯಗಳಿಂದ ಸಮಾಜದ ಸ್ವಾಸ್ಥÂ ಕೆಡಿಸುವಂತಹ ನಿರ್ಧಾರವಾಗಬಾರದು. ಆಡಳಿತ ಸೇವೆಗೆ ಸೇರುವ ಅಭ್ಯರ್ಥಿಗಳಲ್ಲಿ ಇಂತಹ ನೇತ್ಯಾತ್ಮಕ ನಿರ್ಣಯದ ಸುಳಿವೂ ಇರಕೂಡದು. ಆತ್ಮಹತ್ಯೆಗೆ ಪ್ರೇರೇಪಿಸುವಂತಹ ವಾತಾವರಣವೂ ದೂರಾಗಬೇಕು. ಸೋತರೂ ಮತ್ತೆ ಮೈ ಕೊಡವಿ ಎದ್ದು ನಿಲ್ಲಬಲ್ಲ ಧೀರರು ನಿಜಕ್ಕೂ ಉತ್ತಮ ನಿರ್ಣಯ ಕೈಗೊಳ್ಳುವಲ್ಲಿ ಸಫ‌ಲರಾಗುತ್ತಾರೆ ಎಂಬುದು ಅನುಭವದಿಂದ ವೇದ್ಯವಾದ ಸತ್ಯ! 

      ಡಾ. ಹರ್ಬರ್ಟ್‌ ಸೈಮನ್‌ರ ಸಿದ್ಧಾಂತಗಳು 
      1978ರಲ್ಲಿ ನೊಬೆಲ್‌ ಅರ್ಥಶಾಸ್ತ್ರ ಪುರಸ್ಕಾರ ಗಳಿಸಿದ ಅಮೆರಿಕದ ಆಡಳಿತಶಾಸ್ತ್ರ ತಜ್ಞ ಡಾ. ಹರ್ಬರ್ಟ್‌ ಸೈಮನ್‌ ತಮ್ಮ ಅಡ್ಮಿನಿಸ್ಟ್ರೇಟಿವ್‌ ಬಿಹೇವಿಯರ್‌ ಕೃತಿಯಲ್ಲಿ ನಿರ್ಧಾರ ಕೈಗೊಳ್ಳುವಿಕೆ ಕುರಿತು ವಿವರವಾಗಿ ಚರ್ಚಿಸಿ¨ªಾರೆ. ಆಡಳಿತದ ಹೃದಯಭಾಗವೇ ಪರಿಣಾಮಕಾರಿ ನಿರ್ಣಯ ಕೈಗೊಳ್ಳುವಿಕೆ. ತಾರ್ಕಿಕ ಆಲೋಚನೆ ಮತ್ತು ಆಯ್ಕೆಯ ಹಿಂದಿರುವ ಮಾನಸಿಕ ಸ್ಥಿತಿಯೇ ಅದರ ಭಾಷೆ. ಸಮಸ್ಯೆಯ ಗುರುತಿಸುವಿಕೆ, ಅದರ ವ್ಯಾಖ್ಯೆ, ವಿಶ್ಲೇಷಣೆ, ಪರಿಹಾರದ ವಿವಿಧ ಸಾಧ್ಯತೆಗಳು ಮತ್ತು ಲಭ್ಯ ಪರಿಹಾರಗಳಲ್ಲಿ ಒಂದನ್ನು ಆಯ್ದುಕೊಳ್ಳುವುದು ಪರಿಣಾಮಕಾರಿ ನಿರ್ಣಯ ಕೈಗೊಳ್ಳುವಿಕೆ ಎನಿಸುತ್ತದೆ. ಇದಕ್ಕಾಗಿ ತೀರ್ಪು ಅಥವಾ ನಿರ್ಣಯ, ಸೃಜನಶೀಲತೆ, ಸಮಸ್ಯಾ ವಿಶ್ಲೇಷಣಾ ತಂತ್ರ ಮತ್ತು ಅನುಭವದ ಅಗತ್ಯವಿದೆ, ಎನ್ನುತ್ತಾರೆ ಸೈಮನ್‌. 



      ಮನೋರಮಾ ಯಿಯರ್‌ ಬುಕ್‌- 2013 
      ಇದೀಗ ಮಾರುಕಟ್ಟೆಯಲ್ಲಿರುವ ಮನೋರಮಾ ವಾರ್ಷಿಕ ಕೋಶ- 2013ರಲ್ಲಿ ಡಾ.ಎಂ.ಎಸ್‌. ಸ್ವಾಮಿನಾಥನ್‌ ಅವರು ಬರೆದ ರಿಯೋ ಸಮ್ಮೇಳನ ಕುರಿತ ವಿಶೇಷ ಲೇಖನ, ಪೊ›. ಜಯಂತ್‌ ನಾಳೀìಕರ್‌ ಬರೆದ ಗಣಿತ - ವಿಜ್ಞಾನಗಳ ರಾಣಿ ಕುರಿತ ಲೇಖನ, ಡಾ. ಸ್ಯಾಮ್ಯುಯೆಲ್‌ ಪಾಲ್‌ ಅವರ ಉತ್ಕೃಷ್ಟತೆ ಗಳಿಸಿಕೊಳ್ಳುವುದು ಕುರಿತ ಲೇಖನ, ಇಂಗ್ಲಿಷ್‌ ಕಲಿಕೆಗೆ ಪೂರಕವಾಗಿರುವ ಅಗ್ರಲೇಖನಗಳ ಜೊತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಾಯವಾಗುವ ಹಲವು ವಿಶಿಷ್ಟ ವಿಷಯಗಳ ಕುರಿತು ವಿಜ್ಞಾನಿಗಳು, ಮ್ಯಾನೇಜ್‌ಮೆಂಟ್‌ ಗುರುಗಳು, ಕೆರೀರ್‌ ಎಕ್ಸ್‌ಪರ್ಟ್‌ಗಳು, ಕೃಷಿ-ಆರ್ಥಿಕ ಪರಿಣತರು, ಕ್ರೀಡಾ ವಿಶ್ಲೇಷಕರು ಮತ್ತು ಪರಿಸರ ತಜ್ಞರು ಬರೆದಿರುವ 25 ಲೇಖನಗಳು, ಟಿಪ್ಪಣಿಗಳು, ಅಡಿಟಿಪ್ಪಣಿಗಳು ಮತ್ತು ಅಂಕಿ-ಅಂಶಗಳಿವೆ. ಭಾರತೀಯ ಸಿನೆಮಾದ 100 ವರ್ಷಗಳ ಕಾಲಯಾನ ಮತ್ತು ವಿಶ್ವವಿಖ್ಯಾತ 50 ಪೇಂಟಿಂಗ್‌ಗಳ ಪರಿಚಯವಿದೆ. 60 ವರ್ಷಗಳನ್ನು ಪೂರೈಸಿರುವ ಭಾರತೀಯ ಸಂಸತ್ತಿನ ಪರಿಚಯ, 2012ರ ಲಂಡನ್‌ ಒಲಿಂಪಿಕ್ಸ್‌ ವಿಶೇಷ ವರದಿ, ಭಾರತದಲ್ಲಿ ಭ್ರಷ್ಟಾಚಾರ, ದೇವಕಣ ಹಿಗ್ಸ್‌ ಬೋಸಾನ್‌, ಪರಿಸರದ ಸವಾಲುಗಳು, ಇಂಜಿನಿಯರಿಂಗ್‌ ಶಿಕ್ಷಣದ ಪುನಾರಚನೆ, ಅಂತಜಾìಲ ಭದ್ರತಾ ವ್ಯವಸ್ಥೆ ಹೀಗೆ ಹತ್ತು ಹಲವು ಹೊಸ ವಿಷಯಗಳಿಂದ ತುಂಬಿ ತುಳುಕುತ್ತಿದೆ. 
      ಪ್ರಚಲಿತ ಘಟನಾವಳಿಗಳಲ್ಲಿ 2012ರಲ್ಲಿ ನಡೆದ ಪ್ರಮುಖ ಘಟನೆಗಳು, ಶಿಫಾರಸ್ಸುಗಳು, ಚುನಾವಣಾ ಸುಧಾರಣೆಗಳು, ಹಗರಣಗಳು, ಭಾರತ ಮತ್ತು ವಿಶ್ವದ ಸ್ಮರಣೀಯ ವಿದ್ಯಮಾನಗಳ ಕಿರುಚಿತ್ರಣವಿದೆ. ಐತಿಹಾಸಿಕ ಸ್ಥಳಗಳು, ಮಹಾವ್ಯಕ್ತಿಗಳ ಕಿರುಪರಿಚಯ, ಸುಪ್ರಸಿದ್ಧ ಪುಸ್ತಕಗಳು, ಪದಕೋಶದ ವಿವರಣಾತ್ಮಕ ಟಿಪ್ಪಣಿಗಳು, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿನ ಶರವೇಗದ ಬೆಳವಣಿಗೆ, ಉದ್ಯೋಗ ಕ್ಷೇತ್ರದಲ್ಲಿನ ಅವಕಾಶಗಳು ಮೊದಲಾದ ವಿಷಯಗಳನ್ನು ಪ್ರತ್ಯೇಕ ವಿಭಾಗಗಳಲ್ಲಿ ಹಿಡಿದಿಡಲಾಗಿದೆ. ಇದರೊಂದಿಗೆ ಉಚಿತ ಕೊಡುಗೆಯಾಗಿ ನೀಡಲಾಗಿರುವ ಬ್ರಿಟಾನಿಕ ವಿಶ್ವಕೋಶ 2013 ಸಿಡಿಯಲ್ಲಿ 25,000 ಲೇಖನಗಳು, 2,75,000 ಪದಗಳ ಮೆರಿಯಮ್‌ ವೆಬ್‌ಸ್ಟರ್‌ ಪದಕೋಶ, 2500 ವರ್ಣಚಿತ್ರಗಳು, 196 ಭೂಪಟಗಳು, 1,66,000 ಅಂತರ್ಜಾಲತಾಣಗಳ ಸಂಪರ್ಕ ಕೊಂಡಿಗಳು ಈ ಬಾರಿಯ ವಿಶೇಷ ಆಕರ್ಷಣೆಯಾಗಿವೆ. 
      ಸ್ಥಳೀಯ ಪತ್ರಿಕಾ ವ್ಯಾಪಾರಿಗಳಲ್ಲಿ ಅಥವಾ ಪುಸ್ತಕಾಲಯಗಳಲ್ಲಿ ಸಿಗುತ್ತಿರುವ ಮನೋರಮಾ ವಾರ್ಷಿಕ ಕೋಶ - 2013 ಅನ್ನು ಫ್ಲಿಪ್‌ಕಾರ್ಟ್‌ ಅಂತರ್ಜಾಲದ ಮಳಿಗೆಯಿಂದಲೂ ಖರೀದಿಸಬಹುದು. ಮನೆಬಾಗಿಲಿಗೇ ತಲುಪಿಸುವುದರ ಜೊತೆ 30% ಡಿಸ್ಕೌಂಟ್‌ ಸೌಲಭ್ಯವೂ ಇದೆ. 
      ರಾಷ್ಟ್ರೀಯ ಗಣಿತ ದಿನ- ಡಿಸೆಂಬರ್‌ 22 
      ಶ್ರೀನಿವಾಸ ರಾಮಾನುಜನ್‌ ಅವರ ಜನ್ಮದಿನವಾದ ಡಿಸೆಂಬರ್‌ 22ರ ದಿನವನ್ನು ರಾಷ್ಟ್ರೀಯ ಗಣಿತ ದಿನವೆಂದು ಆಚರಿಸಲಾಗುತ್ತಿದೆ, ರಾಮಾನುಜನ್‌ರ 125ನೇ ಜನ್ಮಜಯಂತಿಯ ವರ್ಷ 2012ನ್ನು ಭಾರತ ರಾಷ್ಟ್ರೀಯ ಗಣಿತ ವರ್ಷವೆಂದೂ ಘೋಷಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಗಣಿತದ ಹಿರಿಮೆಯನ್ನು ನಮ್ಮ ಯುವಜನರಿಗೆ ತಿಳಿಸಿಕೊಡುವ ಕೆಲಸ ವರ್ಷವಿಡೀ ನಡೆದಿತ್ತು. ಅದಕ್ಕೆಂದೇ ಹಲವು ಗಣಿತಜ್ಞರು ಶ್ರಮಿಸಿ¨ªಾರೆ ಮತ್ತು ಡಿಸೆಂಬರ್‌ನಲ್ಲಿ ರಾಜ್ಯದ ವಿವಿಧ ಶಾಲಾ ಕಾಲೇಜುಗಳಲ್ಲಿ ಸಭೆ, ಸಮಾರಂಭ, ವಿಚಾರ ಸಂಕಿರಣಗಳನ್ನು ಏರ್ಪಡಿಸಿ¨ªಾರೆ. ಗಣಿತವನ್ನು ಸರಳಗೊಳಿಸಿ, ಕಲಿಯುವ ಅಭಿರುಚಿ ಹತ್ತಿಸುವ ನೂರಾರು ಗಣಿತ ಕೃತಿಗಳು ಅಂತರ್ಜಾಲದಲ್ಲಿ ಲಭ್ಯವಿವೆ. 
      ವಿಶ್ವವಿಖ್ಯಾತ ಗಣಿತ ಪ್ರತಿಭೆ 
      ಗಣಿತ ವರ್ಷಾಚರಣೆಯ ನಿಮಿತ್ತ ಇದೇ ಡಿಸೆಂಬರ್‌ 11ರಂದು ಬೆಂಗಳೂರಿನ ಭಾರತೀಯ ವಿದ್ಯಾಭವನದ ವಿಜ್ಞಾನ ಮತ್ತು ಮಾನವೀಯ ಮೌಲ್ಯಗಳ ಗಾಂಧೀ ಕೇಂದ್ರದಲ್ಲಿ ಒಂದು ದಿನದ ಗಣಿತ ಕಾರ್ಯಾಗಾರ ಏರ್ಪಾಡಾಗಿತ್ತು. ಇದೇ ಸಂದರ್ಭದಲ್ಲಿ ಖ್ಯಾತ ಗಣಿತಜ್ಞ ಡಾ. ಎಸ್‌. ಬಾಲಚಂದ್ರರಾವ್‌ (ದೂ: 9741411480)ಅವರ ಶ್ರೀನಿವಾಸ ರಾಮಾನುಜನ್‌- ವಿಶ್ವವಿಖ್ಯಾತ ಗಣಿತ ಪ್ರತಿಭೆ, ಕೃತಿಯನ್ನು ಬಿಡುಗಡೆ ಮಾಡಲಾಯಿತು. (ಪ್ರಕಾಶಕರು : ಭಾರತೀಯ ವಿದ್ಯಾಭವನದ ವಿಜ್ಞಾನ ಮತ್ತು ಮಾನವೀಯ ಮೌಲ್ಯಗಳ ಗಾಂಧೀ ಕೇಂದ್ರ, ಬೆಂಗಳೂರು, ಬೆಲೆ : ರೂ. 60/- ) ಶ್ರೀನಿವಾಸ ರಾಮಾನುಜನ್‌ ಅವರ ಜೀವನ-ಸಾಧನೆಯನ್ನು ಸರಳವಾದ ಭಾಷೆಯಲ್ಲಿ ತಿಳಿಸಿಕೊಡುವ ಈ ಕೃತಿಯನ್ನು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಓದಲೇಬೇಕು.

Tuesday 11 December, 2012

Brain Drain and Brain Gain - Article in Udayavani Josh 11 Dec 2012


Brain Drain and Brain Gain - Article in Udayavani Josh 11 Dec 2012


 Udayavani

  • ಬೀರೂರಿಗೆ ಬಂದ ನಾಸಾ ವಿಜ್ಞಾನಿ ಯಾರು?

  • ಹೊರನಾಡಿನ ಆಕರ್ಷಣೆ ಎಷ್ಟೇ ಇದ್ದರೂ ಮರಳಿ ಮನೆಗೆ ಬರುವ ಮನಸ್ಸುಗಳಿಗೇನೂ ಕೊರತೆ ಇಲ್ಲ. ರಾಮ-ರಾವಣರ ಯುದ್ಧದ ನಂತರ ವಿಭೀಷ

    • Udayavani | Dec 10, 2012
      ಎ ಜೊ ದೇಸ್‌ ಹೈ ತೇರಾ 
      ಸ್ವದೇಸ್‌ ಹೈ ತೇರಾ 
      ತುಜ‚ೇ ಹೈ ಪುಕಾರಾ 
      ಯೇ ವೋ ಬಂಧನ್‌ ಹೈ ಜೊ ಕಭಿ 
      ಟೂಟ್‌ ನಹೀ ಸಕ್ತಾ........ 
      ಸ್ವದೇಸ್‌ ಚಿತ್ರದ ಈ ಹಾಡು ಅದೆಷ್ಟು ಯುವಮನಸ್ಸುಗಳನ್ನು ಮರಳಿ ಭಾರತಕ್ಕೆ ಕರೆತಂದಿದೆಯೋ! 
      ಅಪಿ ಸ್ವರ್ಣಮಯೀ ಲಂಕಾ ನ ಮೆ ಲಕ್ಷಣ ರೋಚತೇ 
      ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ 

      ಹೊರನಾಡಿನ ಆಕರ್ಷಣೆ ಎಷ್ಟೇ ಇದ್ದರೂ ಮರಳಿ ಮನೆಗೆ ಬರುವ ಮನಸ್ಸುಗಳಿಗೇನೂ ಕೊರತೆ ಇಲ್ಲ. ರಾಮ-ರಾವಣರ ಯುದ್ಧದ ನಂತರ ವಿಭೀಷಣನಿಗೆ ಪಟ್ಟಕಟ್ಟಿದ ತರುವಾಯ ಲಂಕೆಯಲ್ಲಿಯೇ ಉಳಿದರೆ ಹೇಗೆ ಎಂಬ ಮಾತು ಬಂದಾಗ ಶ್ರೀರಾಮ ಹೇಳುವ ಈ ಮಾತುಗಳು ಇದನ್ನೇ ಧ್ವನಿಸುತ್ತವೆ. 

      ಚಿಗುರಿದ ಕನಸು ಮತ್ತು ಸ್ವದೇಸ್‌ 
      ಕಡಲತೀರದ ಭಾರ್ಗವ ಶಿವರಾಮ ಕಾರಂತರ ಕಾದಂಬರಿ ಆಧರಿಸಿ ಟಿ.ಎಸ್‌. ನಾಗಾಭರಣರ ನಿರ್ದೇಶನದಲ್ಲಿ ಮೂಡಿಬಂದಿದ್ದ ಚಿಗುರಿದ ಕನಸು ಚಲನಚಿತ್ರ ಮಣ್ಣಿನ ಆಕರ್ಷಣೆಯನ್ನು, ದಿಲ್ಲಿಯ ಸುಪ್ಪತ್ತಿಗೆಯನ್ನು ಬಿಟ್ಟು ತನ್ನ ಹಳ್ಳಿಗಾಗಿ ಏನನ್ನಾದರೂ ಮಾಡಬೇಕು ಎಂಬ ನಾಯಕ ಶಂಕರನ(ಶಿವರಾಜ್‌ಕುಮಾರ್‌) ತುಡಿತವನ್ನು ಎತ್ತಿ ತೋರಿಸಿತ್ತು. ಇದರ ಜಾಡಿನಲ್ಲಿಯೇ ಸಾಗಿದ ಅಶುತೋಷ್‌ ಗೋವಾರಿಕರ್‌ನ ಸ್ವದೇಸ್‌ ದಿಲ್ಲಿಯ ಬದಲಿಗೆ ಅಮೆರಿಕೆಯ ನಾಸಾದ ವಿಜ್ಞಾನಿ ಮೋಹನ್‌ ಭಾರ್ಗವ ಭಾರತದಲ್ಲಿನ ಹಳ್ಳಿಯೊಂದರಲ್ಲಿರುವ ತನ್ನ ಆತ್ಮೀಯರಿಗಾಗಿ ಮರಳುವ, ಹಳ್ಳಿಯ ಉದ್ಧಾರಕ್ಕಾಗಿ ಶ್ರಮಿಸುವ ಕಥೆ ಪ್ರತಿಭಾ ಪುನರಾಗಮನಕ್ಕೆ ಉದಾಹರಣೆಯಾಗಿತ್ತು.

      ಚಿಗುರಿದ ಕನಸು ಚಿತ್ರದಿಂದ ಪ್ರೇರಣೆಯನ್ನೇನೂ ಪಡೆದಿಲ್ಲ ಎಂಬ ಬಡಾಯಿ ಮಾತುಗಳನ್ನಾಡಿದರೂ ಗೋವಾರಿಕರ್‌ನ ಸ್ವದೇಸ್‌ ಚಿತ್ರದಲ್ಲಿ ನಟಿಸಿದ ಹಿರಿಯ ನಟಿ ಕಿಶೋರಿ ಬಳ್‌ ಚಿಗುರಿದ ಕನಸಿನಲ್ಲೂ ನಟಿಸಿದ್ದರು ಮತ್ತು ಕಥೆಗಳ ಮೂಲದಲ್ಲಿ ಎರಡಕ್ಕೂ ಸಾಮ್ಯತೆ ಇದ್ದದ್ದು ವಿಶೇಷವಾಗಿತ್ತು. ಫ್ಲೋರಿಡಾದ ಕೆನಡಿ ಸ್ಪೇಸ್‌ಸೆಂಟರ್‌ನಲ್ಲಿರುವ ನಾಸಾದ ಸಂಶೋಧನಾಲಯ ಮತ್ತು ಲಾಂಚ್‌ಪ್ಯಾಡ್‌ 39-ಎ ಪ್ರಯೋಗಾಲಯದಲ್ಲಿ ಚಿತ್ರೀಕರಿಸಲಾದ ಮೊದಲ ಚಿತ್ರವೆಂಬ ಹೆಗ್ಗಳಿಕೆಯ ಸ್ವದೇಸ್‌ ಬರುವ 2013ರಲ್ಲಿ ಬಾಹ್ಯಾಕಾಶ ಸೇರಲಿರುವ ಗ್ಲೋಬಲ್‌ ಪ್ರಿಸಿಪಿಟೇಷನ್‌ ಮೆಶರ್‌ವೆುಂಟ್‌ ಎಂಬ ಮಳೆಯ ಪ್ರಮಾಣ ಅಳೆಯುವ ಉಪಗ್ರಹದ ಸಿದ್ಧತಾ ಕಾರ್ಯಾಚರಣೆಯ ನೈಜ ಘಟನಾವಳಿಯ ಚಿತ್ರಣವೇ ಆಗಿತ್ತು. ಇಲ್ಲಿಯೇ ಯೇ ದೇಸ್‌ ಹೈ ಮೆರಾ....... ಹಾಡು ಆರಂಭವಾಗುತ್ತದೆ. 

      ಬನ್ನಿ ಬನ್ನಿ ಕನಸುಗಳೇ ಮರಳಿ ಮನೆಗೆ ಬನ್ನಿ! 
      ಇದೇ ಡಿಸೆಂಬರ್‌ 1ರಂದು ಮೊಹಾಲಿಯ ಇಂಡಿಯನ್‌ ಸ್ಕೂಲ್‌ ಆಫ್ ಬ್ಯುಸಿನೆಸ್‌ನಲ್ಲಿ ನಡೆದ ಸಭೆಯೊಂದರಲ್ಲಿ ಭಾಗವಹಿಸಿದ್ದ ಕೇಂದ್ರ ವಿತ್ತಸಚಿವ ಪಿ. ಚಿದಂಬರಂ ಅವರು ಯುವಜನರನ್ನುದ್ದೇಶಿಸಿ ಮಾತನಾಡುತ್ತಾ, ಉತ್ತಮ ಅವಕಾಶಗಳನ್ನು ಅರಸುತ್ತಾ ಅಮೆರಿಕ ಮೊದಲಾದ ದೇಶಗಳತ್ತ ವಲಸೆ ಹೋಗುವ ನಿಮ್ಮ ಬಯಕೆ ಸಹಜವಾದದ್ದೇ. ಆದರೆ ನೆನಪಿಡಿ, ಭಾರತ ದೇಶ ನೀಡುವ ಅವಕಾಶಗಳನ್ನು, ಭದ್ರತೆಯನ್ನು, ಸವಾಲುಗಳನ್ನು ಮತ್ತು ಆತ್ಮೀಯತೆಯನ್ನು ಜಗತ್ತಿನ ಬೇರೆ ಯಾವ ರಾಷ್ಟ್ರವೂ ಒದಗಿಸಲಾರದು. ಒಂದಷ್ಟು ವರ್ಷ ವಿದೇಶಗಳಲ್ಲಿ ಸೇವೆಸಲ್ಲಿಸಿದರೂ ಪರವಾಗಿಲ್ಲ, ಕೊನೆಯದಾಗಿ ನಿಮ್ಮ ಮನೆಗೆ ಬರುವುದನ್ನು ಮರೆಯಬೇಡಿ. 700 ಮಿಲಿಯನ್‌ ಜನರಿಗೆ ಆರೋಗ್ಯ, ನೈರ್ಮಲ್ಯ, ವಿದ್ಯುತ್‌, ಅಗತ್ಯ ಸೇವೆಗಳು ಹೀಗೆ ಏನೆÇÉಾ ಒದಗಿಸಲು ಇರುವ ಅವಕಾಶಗಳು ವಿಶ್ವದ ಬೇರೆ ಯಾವುದೇ ರಾಷ್ಟ್ರಕ್ಕಿಂತ ಭಾರತದಲ್ಲಿಯೇ ಇದೆ ಎನ್ನುವುದನ್ನು ಮರೆಯಬಾರದು, ಎಂದರು. 

      ಅಮೇರಿಕಾದಂತಹ ಮುಂದುವರೆದ ದೇಶದ‌ಲ್ಲಿಯೇ ಆರ್ಥಿಕ ವ್ಯವಸ್ಥೆ ಕುಸಿತ ಕಂಡಿರುವ ಸಂದರ್ಭದಲ್ಲಿ ಉದ್ಯೋಗಾವಕಾಶ ಮತ್ತು ಇತರೆ ಅವಕಾಶಗಳನ್ನು ಅರಸಿ ವಿಶ್ವದ ಪ್ರಮುಖ ದೇಶಗಳಿಗೆ ವಲಸೆ ಹೋಗಿದ್ದ ಯುವಪ್ರತಿಭಾವಂತರು ಭಾರತದ ಸದೃಢ ಆರ್ಥಿಕ ವ್ಯವಸ್ಥೆ ಮತ್ತು ಕೌಟುಂಬಿಕ ವಾತಾವರಣದ ಆಪ್ತತೆಯನ್ನು ತಡವಾಗಿಯಾದರೂ ಮನಗಂಡು ಮರಳಿ ಮನೆಗೆ ಬರುತ್ತಿ¨ªಾರೆ. ಕೇಂದ್ರ ಸಚಿವ ಸಲ್ಮಾನ್‌ ಖುರ್ಷಿದ್‌ ಅವರೂ ಈ ಕುರಿತು ಹೇಳಿಕೆ ನೀಡಿ ಭಾರತೀಯ ಪ್ರತಿಭಾವಂತರ ಪುನರಾಗಮನಕ್ಕಾಗಿ ಭಾರತ ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿದೆ. ಅವರಿಗಾಗಿ ಉತ್ತಮ ಅವಕಾಶಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದಿದ್ದರು. 

      ಪ್ರತಿಭಾ ಪಲಾಯನ- ಲಾಭವೋ ನಷ್ಟವೋ? 
      ವಿವಿಧ ಉದ್ದೇಶಗಳಿಗಾಗಿ, ಅವಕಾಶಗಳನ್ನು ಅರಸುತ್ತಾ, ಭಾರತೀಯ ಪ್ರತಿಭೆಗಳು ವಿದೇಶಗಳಿಗೆ ವಲಸೆ ಹೋಗುತ್ತಿರುವುದರಿಂದ ಭಾರತಕ್ಕೆ ಪ್ರತಿವರ್ಷ ಹತ್ತು ಬಿಲಿಯನ್‌ ಡಾಲರ್‌ಗಳಷ್ಟು ನಷ್ಟವಾಗುತ್ತಿದೆ. ಕಂಪ್ಯೂಟರ್‌ ಕ್ಷೇತ್ರದಲ್ಲಿನ ಅವಕಾಶಗಳನ್ನು ಬೆನ್ನುಹತ್ತಿ ಹೋಗುತ್ತಿರುವವರಿಂದಲೇ ಎರಡು ಬಿಲಿಯನ್‌ ಡಾಲರ್‌ಗಳಷ್ಟು ವಾರ್ಷಿಕ ನಷ್ಟ ಉಂಟಾಗುತ್ತಿದೆ ಎಂದು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ ಸಂಸ್ಥೆಯ ಸಮೀಕ್ಷೆ ತಿಳಿಸಿದೆ. ಆರಂಭದಿಂದ ಪದವಿ, ಸ್ನಾತಕೋತ್ತರ ಪದವಿಯ ಹಂತದವರೆಗೆ ಭಾರತ ಸರ್ಕಾರದ ಖರ್ಚಿನಲ್ಲಿ ಓದಿ ಉತ್ತಮೋತ್ತಮ ಅಂಕಗಳಿಸಿದ ಪ್ರತಿಭಾವಂತರ ಸೇವೆ ನಮ್ಮ ನಾಡಿಗೆ ಲಭ್ಯವಾಗದೇ ಹೊರನಾಡಿಗೆ ಯಾವುದೇ ಖರ್ಚಿಲ್ಲದೇ ಲಭ್ಯವಾಗುತ್ತಿದೆ, ಲಾಭವಾಗುತ್ತಿದೆ. 

      ತೀರಾ ಇತ್ತೀಚೆಗೆ ಈ ಪ್ರತಿಭಾ ಪಲಾಯನ ಪುನರಾಗಮನವಾಗುತ್ತಿದೆ. ವಿದೇಶಗಳಲ್ಲಿ ಕುಸಿಯುತ್ತಿರುವ ಬೇಡಿಕೆ, ಆರ್ಥಿಕ ಕುಸಿತ, ಕಡಿಮೆ ವೇತನಕ್ಕೆ ದುಪ್ಪಟ್ಟು ದುಡಿಮೆ, ಅಲ್ಲಿನ ಯುವಜನರಿಗೇ ನಿರುದ್ಯೋಗ ಸಮಸ್ಯೆ ಕಾಡುತ್ತಿರುವ ಸಂದರ್ಭದಲ್ಲಿ ಇಲ್ಲಿಂದ ಹೋಗಿ ಒ¨ªಾಡುವುದನ್ನು ತಪ್ಪಿ$ಸುವುದು ಮತ್ತು ಸ್ಥಳೀಯವಾಗಿ ಲಭ್ಯವಿರುವ ಅವಕಾಶಗಳನ್ನು ಅರಸುವುದು ಜಾಸ್ತಿಯಾಗುತ್ತಿದೆ. ಒಂದು ಹಂತದಲ್ಲಿ ವಿದೇಶಿ ಪ್ರಜೆಗಳೂ ಕೂಡ ಭಾರತ ಮತ್ತು ಚೀನಾಗಳಿಗೆ ಉದ್ಯೋಗವನ್ನು ಅರಸಿಕೊಂಡು ಬರುತ್ತಿರುವುದು ಕಂಡುಬರುತ್ತಿದೆ. ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಇರುವ ಅವಕಾಶಗಳು, ವೈದ್ಯಕೀಯ, ವಿದ್ಯುತ್‌, ರಸ್ತೆ, ಕಟ್ಟಡಗಳ ನಿರ್ಮಾಣ, ದೂರಸಂಪರ್ಕ ಸೇವೆ, ಸಾರಿಗೆ, ವ್ಯಾಪಾರ-ವಹಿವಾಟು ಎಲ್ಲವೂ ಅಗಾಧ ಪ್ರಮಾಣದಲ್ಲಿ ವಿಸ್ತರಿಸುತ್ತಾ ಹೋಗುತ್ತಿರುವುದರಿಂದ ವಿದೇಶಿ ಕಂಪನಿಗಳೂ ನೇರ ಬಂಡವಾಳ ಹೂಡಲು ಯೋಚಿಸುತ್ತಿವೆ ಮತ್ತು ಅಲ್ಲಿನ ಪ್ರತಿಭಾವಂತರನ್ನು ಇಲ್ಲಿಗೆ ಕರೆತರುವ ಪರಿಪಾಠ ಬೆಳೆಸಿಕೊಂಡಿವೆ. ಇದರಿಂದ ಒಂದುರೀತಿಯಲ್ಲಿ ವಸಾಹತುಶಾಹಿ ಪ್ರವೃತ್ತಿಯ ಪುನಃಪ್ರವೇಶವಾದಂತಿದೆ. ಸಂಸತ್ತಿನಲ್ಲಿ ಕಳೆದವಾರ ಒಪ್ಪಿಗೆ ಪಡೆದಿರುವ ಚಿಲ್ಲರೆ ವ್ಯಾಪಾರ ಮಸೂದೆ ಮುಂಬರುವ ದಿನಗಳಲ್ಲಿ ಹೊಸ ವಸಾಹತುಗಳನ್ನು ಬೆಳೆಸುವ ಬೀಜವೆನಿಸಿದೆ. ಇದರ ಲಾಭ-ನಷ್ಟಗಳನ್ನು, ಉದ್ಯೋಗ ಸೃಷ್ಟಿಯ ಕಥೆಗಳನ್ನು ನಂಬುವುದಕ್ಕಿಂತ ಪರಾಮರ್ಶಿಸುವುದು ಒಳಿತು. 

      ಬೀರೂರಿನಲ್ಲಿ ನಾಸಾದ ವಿಜ್ಞಾನಿ! 
      2012ರ ನವೆಂಬರ್‌ 5ರಂದು ಚಿಕ್ಕಮಗಳೂರು ಜಿÇÉೆಯ ಬೀರೂರಿನ ಬಳಿಯ ಚಟ್ನಹಳ್ಳಿಯ ವಿಕಸನ ಕಟ್ಟಡದಲ್ಲಿ ವಿಜ್ಞಾನ ಶಿಕ್ಷಣ ಕಾರ್ಯಾಗಾರ 2012 ಏರ್ಪಾಡಾಗಿತ್ತು. ಬೀರೂರು ಮತ್ತು ತರೀಕೆರೆಯ ಶೈಕ್ಷಣಿಕ ಬ್ಲಾಕ್‌ಗಳ ಆಯ್ದ ವಿಜ್ಞಾನ ಶಿಕ್ಷಕರಿಗಾಗಿ ವೈಜ್ಞಾನಿಕ ಚಟುವಟಿಕೆಗಳನ್ನು ಮಕ್ಕಳಿಗೆ ಪರಿಣಾಮಕಾರಿಯಾಗಿ ತಲುಪಿಸುವ ವಿಧಾನಗಳನ್ನು ತಿಳಿಸಿಕೊಡುವ ಪ್ರಯತ್ನ ಇದಾಗಿತ್ತು. ನಾಸಾದಲ್ಲಿ ಜೆಟ್‌ ಪ್ರಪಲÒನ್‌ ಲ್ಯಾಬೊರೇಟರಿಯಲ್ಲಿ ವಿಜ್ಞಾನಿಯಾಗಿರುವ ಡಾ. ಗಜಾನನ ಬೀರೂರು ಅವರು ಮಂಗಳನ ಅಂಗಳದಲ್ಲಿ ಇಳಿದಿರುವ ಕ್ಯೂರಿಯಾಸಿಟಿ ನೌಕೆಯ ಬಗ್ಗೆ ಮತ್ತು ಮಂಗಳ ಗ್ರಹದ ಕುರಿತ ಇತ್ತೀಚಿನ ಶೋಧನೆಗಳ ಬಗ್ಗೆ ಉಪನ್ಯಾಸ ನೀಡಿದರು. 5, 6, 7ನೇ ತರಗತಿಯ ಮಕ್ಕಳಿಗೆ ವಿಜ್ಞಾನವನ್ನು ಕಲಿಸಿಕೊಡುವ ಆಸಕ್ತಿದಾಯಕ ಆಟದ ವಿಧಾನಗಳನ್ನು ಕುರಿತು ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್ ಸೈನ್ಸ್‌ನ ಹಿರಿಯ ವಿದ್ಯಾರ್ಥಿ ಹಾಗೂ ಮಕ್ಕಳಿಗೆ ಚಟುವಟಿಕೆಗಳ ಮೂಲಕ ವಿಜ್ಞಾನ ಕಲಿಸಿಕೊಡುವ ಡಾ. ಅರವಿಂದ ಗುಪ್ತಾ ಅವರ ಶಿಷ್ಯ ಪಿ. ಶ್ರೀಧರ್‌ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಅರವಿಂದ ಗುಪ್ತಾ ಅವರ ಮಾಡಿ ಕಲಿ, ಆಹಾ! ಎಷ್ಟೊಂದು ಚಟುವಟಿಕೆಗಳು, ಉದಯ ಪಾಟೀಲರ ಖಗೋಳ ವಿಜ್ಞಾನದ ಕಥೆ ಮತ್ತು ಡಾ.ಬಿ.ಎಸ್‌. ಶೈಲಜಾ ಅವರ ಆಗಸದ ಅಲೆಮಾರಿಗಳು ಕೃತಿಗಳನ್ನು ಆಧರಿಸಿ ಚಟುವಟಿಕೆಗಳನ್ನು ರೂಪಿಸಲಾಗಿತ್ತು. 

      ಬೀರೂರು ಎಜುಕೇಷನ್‌ ಫೌಂಡೇಶನ್‌ ಫಾರ್‌ ಚಿಲ್ಡ$›ನ್‌ 
      ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್ ಸೈನ್ಸ್‌ನಲ್ಲಿ 1971ರಲ್ಲಿ ವೈಮಾಂತರೀಕ್ಷ ಸ್ನಾತಕೋತ್ತರ ಪದವಿ ಪಡೆದು ಪ್ರಸ್ತುತ ಅಮೆರಿಕೆಯ ನಾಸಾದಲ್ಲಿ ಮೂರು ದಶಕಗಳಿಗೂ ಹೆಚ್ಚುಕಾಲದಿಂದ ವಿಜ್ಞಾನಿಯಾಗಿ ದುಡಿಯುತ್ತಿರುವ ಡಾ. ಗಜಾನನ ಬೀರೂರು ನಾಸಾದ ಮಂಗಳಗ್ರಹದ ವಿವಿಧ ಪ್ರಾಜೆಕ್ಟ್ಗಳಲ್ಲಿ ಭಾಗಿಯಾಗಿ¨ªಾರೆ. ಸಧ್ಯ ಕ್ಯುರಿಯಾಸಿಟಿ ಪ್ರಾಜೆಕ್ಟ್‌ನಲ್ಲಿಯೂ ತೊಡಗಿ¨ªಾರೆ. ಅವರು ತಮ್ಮ ಊರಿನÇÉೊಂದು ವಿಜ್ಞಾನ ಚಟುವಟಿಕೆಗಳ ಕೇಂದ್ರವನ್ನು 2004ರ ಏಪ್ರಿಲ್‌ ಆರಂಭಿಸಿ ಬೀರೂರು ಎಜುಕೇಷನ್‌ ಫೌಂಡೇಶನ್‌ ಫಾರ್‌ ಚಿಲ್ಡ$›ನ್‌ ಎಂದು ನಾಮಕರಣ ಮಾಡಿ¨ªಾರೆ. ಮಕ್ಕಳಲ್ಲಿ ವಿಜ್ಞಾನ ಅಧ್ಯಯನದ ಆಸಕ್ತಿ ಕೆರಳಿಸಿ ಏನನ್ನಾದರೂ ಸಾಧಿಸುವಂತೆ ಮಾಡುವ ಕನಸು ಹೊತ್ತಿ¨ªಾರೆ. ಬಾಹ್ಯಾಕಾಶದತ್ತ ಅರಳುವ ಕಣ್ಣುಗಳಿಂದ ನೋಡುವ ಸಮಯದಲ್ಲಿಯೇ ಭೂಮಿಯನ್ನೂ ಅಭ್ಯಾಸ ಮಾಡಬೇಕು, ಪ್ರಕೃತಿಯನ್ನು ಅರಿಯಬೇಕು ಎನ್ನುವುದು ಗಜಾನನ ಅವರ ಕಳಕಳಿ. ಇವರ ಹಿರಿಯ ಸಹೋದರ ಇವರ ಕನಸುಗಳಿಗೆ ಆಸರೆಯಾಗಿ ನಿಂತು ಬೀರೂರಿನ ಫೌಂಡೇಶನ್‌ ಕೆಲಸಗಳಿಗೆ ಕೈಜೋಡಿಸಿ¨ªಾರೆ.

Saturday 8 December, 2012

Manorama Yearbook 2013 with Free Encylopaedia Britannica CD-ROM

Manorama Yearbook 2013 with Free Encylopaedia Britannica CD-ROM

Manorama year book, the largest selling general knowledge update in the country, with a history of success of nearly half a century. It is India's best General Knowledge update covering almost everything, in competitive examinations and a teacher and researcher can use effectively in his pursuit of knowledge. It is undoubtedly the most popular reference book in India and the World, dealing with topics ranging from science, educations and history of sports, literature and entertainment and many more. English Year book this year has 1040 pages encompassing sections as world, India, Science, Information technology, General Knowledge, Sports, Current affairs and culture. The yearbook presents a fabulous world of statistics and new information.
Available at www.flipkart.com

Tuesday 4 December, 2012

Ultra Small Branch and CCRT - Article in Udayavani Josh 04 Dec 2012


Ultra Small Branch and CCRT - Article in Udayavani Josh 04 Dec 2012

Udayavani
http://www.udayavani.com/news/full.aspx?story_id=217934&languageid=15&edition=KAN&catid=2787

  • ಅಲ್ಟ್ರಾ ಸ್ಮಾಲ್‌ ಬ್ರಾಂಚ್‌ ನಿಮ್ಮೂರಿಗೂ ಬರಬಹುದು!

  • ಬ್ಯಾಂಕಿಂಗ್‌ ಸೌಲಭ್ಯ ವಂಚಿತ 5000ಕ್ಕೂ ಹೆಚ್ಚು ಜನವಸತಿ ಇರುವ ಹಳ್ಳಿಗಳಲ್ಲಿ ಹೊಸ ಶಾಖೆಯನ್ನು ತೆರೆಯುವುದು, ಯಾವುದೇ ಪೂ

    • Udayavani | Dec 04, 2012
      ಬ್ಯಾಂಕಿಂಗ್‌ ಸೌಲಭ್ಯ ವಂಚಿತ 5000ಕ್ಕೂ ಹೆಚ್ಚು ಜನವಸತಿ ಇರುವ ಹಳ್ಳಿಗಳಲ್ಲಿ ಹೊಸ ಶಾಖೆಯನ್ನು ತೆರೆಯುವುದು, ಯಾವುದೇ ಪೂರ್ವಪಾವತಿ ಇಲ್ಲದೆ ಎಲ್ಲರಿಗೂ ಖಾತೆ ತೆರೆಯಲು ಅವಕಾಶ, ಎಟಿಎಂ, ಡೆಬಿಟ್‌ ಕಾರ್ಡ್‌ಗಳನ್ನು ಹೊಂದುವ ಅವಕಾಶ ಕಲ್ಪಿಸುವ ಸ್ವಾಭಿಮಾನ್‌ ಆಂದೋಲನ 2009-10ರ ಬಜೆಟ್‌ನಲ್ಲಿ ಪ್ರಸ್ತಾಪವಾಗಿದ್ದು, 2012-13ರ ಬಜೆಟ್‌ನಲ್ಲಿ ಇದನ್ನು ಆಂದೋಲನದ ರೂಪದಲ್ಲಿ ಹಮ್ಮಿಕೊಳ್ಳುವಂತೆ ಕರೆಕೊಡಲಾಗಿದೆ. 

      ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಆರ್ಥಿಕ ಸೇವೆಗಳ ಇಲಾಖೆಯು ಬ್ಯಾಂಕ್‌ಗಳು, ಕೊ-ಆಪರೇಟಿವ್‌ ಬ್ಯಾಂಕ್‌ಗಳು, ಅಭಿವೃದ್ಧಿ ಬ್ಯಾಂಕ್‌ಗಳು, ಆರ್ಥಿಕ ಸಂಸ್ಥೆಗಳು, ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾ, ವಿಮೆ ಮತ್ತು ನಿವೃತ್ತಿ ವೇತನದ ಸುಧಾರಣೆಗಳನ್ನು ಕುರಿತ ವ್ಯವಹಾರಗಳನ್ನು ನೋಡಿಕೊಳ್ಳುತ್ತದೆ. ಇತ್ತೀಚೆಗೆ ಸರ್ಕಾರವು ಪ್ರತಿಯೊಬ್ಬರಿಗೂ ಬ್ಯಾಂಕ್‌ ಖಾತೆ ತೆರೆಯುವ ಅವಕಾಶ ಕಲ್ಪಿಸುತ್ತಿರುವುದು ಮತ್ತು ಅದರ ಮೂಲಕವೇ ಸರ್ಕಾರದ ವಿವಿಧ ಯೋಜನೆಗಳ ಅನುಕೂಲಗಳು ವಿತರಣೆಯಾಗುವಂತೆ ನೋಡಿಕೊಳ್ಳುವುದು, ಸಬ್ಸಿಡಿ ಅಥವಾ ಪ್ರೋತ್ಸಾಹ ಧನವನ್ನು ನೇರವಾಗಿ ಖಾತೆದಾರರಿಗೆ ವರ್ಗಾಯಿಸುವುದು ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ಅನೇಕ ಆರ್ಥಿಕ ಸುಧಾರಣೆಗಳನ್ನು ಪ್ರಕಟಿಸಿರುವ ಹಿನ್ನೆಲೆಯಲ್ಲಿ ಆರ್ಥಿಕ ಸೇವೆಗಳ ಇಲಾಖೆ ತನ್ನ ಕಾರ್ಯವ್ಯಾಪ್ತಿಯನ್ನು ಈ ಎಲ್ಲಾ ವಿಷಯಗಳತ್ತ ವಿಸ್ತರಿಸಿದೆ. 

      ಆಧುನಿಕ ಆರ್ಥಿಕತೆಯು ಉಳಿತಾಯ ಮತ್ತು ಸಾಲಗಳ ಸಮರ್ಪಕ ಹಂಚಿಕೆ ಮತ್ತು ಯಶಸ್ವೀ ಬಳಕೆಯನ್ನು ಅವಲಂಬಿಸಿದೆ. ಬ್ಯಾಂಕುಗಳು, ವಿಮಾ ಕಂಪೆನಿಗಳು ಮತ್ತು ಆರ್ಥಿಕ ಸಂಸ್ಥೆಗಳು ಈ ನಿಟ್ಟಿನಲ್ಲಿ ನಿರ್ಣಾಯಕ ಪಾತ್ರವಹಿಸಿ ಆರ್ಥಿಕತೆಯ ಪ್ರಗತಿಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಕಾರಣವಾಗುತ್ತವೆ. ಭಾರತದಲ್ಲಿ ಆರ್ಥಿಕ ಪ್ರಗತಿಯು ಮುಗ್ಗಟ್ಟಿನ ಸಂದರ್ಭಗಳಲ್ಲಿ ಮತ್ತು ಆನಂತರದಲ್ಲಿಯೂ ಸ್ಥಿರತೆಯನ್ನು ಕಾಯ್ದುಕೊಂಡು ಶೇಕಡಾ 9ರಷ್ಟು ಬೆಳವಣಿಗೆಯನ್ನು ಮುಟ್ಟಿದೆ. ಈ ಬೆಳವಣಿಗೆಗಳನ್ನು ಇನ್ನಷ್ಟು ಸುಸ್ಥಿರಗೊಳಿಸಲು ಎಲ್ಲ ಸ್ತರಗಳಲ್ಲಿ ಆರ್ಥಿಕ ಒಳಗೊಳ್ಳುವಿಕೆ, ಕೃಷಿ ಸಾಲದ ಪ್ರಮಾಣದಲ್ಲಿನ ಹೆಚ್ಚಳ, ಉನ್ನತ ಶಿಕ್ಷಣ ಪಡೆದುಕೊಳ್ಳಲು ಅಲ್ಪ ಸಂಖ್ಯಾತರಿಗೆ ಸಾಲಸೌಲಭ್ಯ ಒದಗಿಸುವುದು, ಪಾವತಿ ಮತ್ತು ಸ್ವೀಕೃತಿಗಳನ್ನು ವಿದ್ಯುನ್ಮಾನ ಮಾಧ್ಯಮ, ಅಂತರ್ಜಾಲದ ಮೂಲಕ ನಿರ್ವಹಿಸುವುದು, ಸಾಲ ಮರುಪಾವತಿ, ಸಕಾಲದಲ್ಲಿ ವಿಮೆಯ ಸೌಲಭ್ಯಗಳು ಮತ್ತು ಪಾವತಿ ತಲುಪುವಂತೆ ನೋಡಿಕೊಳ್ಳುವುದು, ಗ್ರಾಹಕರ ವ್ಯಾಜ್ಯಗಳ ಪರಿಹಾರ, ನಿವೃತ್ತಿ ವೇತನ ಸುಧಾರಣೆಗಳು ಹೀಗೆ ಹತ್ತು ಹಲವು ಯೋಜನೆಗಳನ್ನು ಸರ್ಕಾರ ಹಮ್ಮಿಕೊಳ್ಳುತ್ತಿದ್ದು ಆರ್ಥಿಕ ಸೇವೆಗಳ ಇಲಾಖೆ ಇವೆಲ್ಲವನ್ನೂ ನಿರ್ವಹಿಸುತ್ತಿದೆ. 

      ಸ್ವಾಭಿಮಾನ್‌ ಆಂದೋಲನ 
      ಭಾರತದ ಯಾವುದೇ ಹಳ್ಳಿಯಲ್ಲಿ ಜನಸಂಖ್ಯೆ 2000ಕ್ಕೆ ಮೇಲ್ಪಟ್ಟು ಇದ್ದಲ್ಲಿ(ವಾಯವ್ಯ ರಾಜ್ಯಗಳಿಗೆ ಸಂಬಂಧಿಸಿದಂತೆ 1000) ಅಂತಹ ಕಡೆಗಳಲ್ಲಿ ಬ್ಯಾಂಕಿಂಗ್‌ ವ್ಯವಹಾರಕ್ಕೆ ಅನುಕೂಲತೆ ಕಲ್ಪಿಸುವುದು ಭಾರತೀಯ ಬ್ಯಾಂಕ್‌ಗಳ ಜವಾಬ್ದಾರಿ ಎಂಬುದು ಸರ್ಕಾರದ ನಿಲುವು. ಬ್ಯಾಂಕಿಂಗ್‌ ಸೌಲಭ್ಯ ವಂಚಿತ 5000ಕ್ಕೂ ಹೆಚ್ಚು ಜನವಸತಿ ಇರುವ ಹಳ್ಳಿಗಳಲ್ಲಿ ಹೊಸ ಶಾಖೆಯನ್ನು ತೆರೆಯುವುದು, ಯಾವುದೇ ಪೂರ್ವಪಾವತಿ ಇಲ್ಲದೆ ಎಲ್ಲರಿಗೂ ಖಾತೆ ತೆರೆಯಲು ಅವಕಾಶ, ಎಟಿಎಂ, ಡೆಬಿಟ್‌ ಕಾರ್ಡ್‌ಗಳನ್ನು ಹೊಂದುವ ಅವಕಾಶ ಕಲ್ಪಿಸುವ ಸ್ವಾಭಿಮಾನ್‌ ಆಂದೋಲನ 2009-10ರ ಬಜೆಟ್‌ನಲ್ಲಿ ಪ್ರಸ್ತಾಪವಾಗಿದ್ದು, 2012-13ರ ಬಜೆಟ್‌ನಲ್ಲಿ ಇದನ್ನು ಆಂದೋಲನದ ರೂಪದಲ್ಲಿ ಹಮ್ಮಿಕೊಳ್ಳುವಂತೆ ಕರೆಕೊಡಲಾಗಿದೆ. ಈಗಾಗಲೇ ಇಂತಹ 45,000 ಪ್ರದೇಶಗಳನ್ನು ಗುರುತಿಸಲಾಗಿದ್ದು, ಇದೇ ವರ್ಷ 1237 ಸ್ಥಳಗಳಲ್ಲಿ ಹೊಸದಾಗಿ ಬ್ಯಾಂಕ್‌ ಶಾಖೆಗಳನ್ನು ತೆರೆಯಲಾಗಿದೆ. 

      ವಿದ್ಯಾರ್ಥಿ ವೇತನ, ಪ್ರೋತ್ಸಾಹ ಧನ, ಸಬ್ಸಿಡಿಗಳು, ಆಧಾರ್‌ ಖಾತೆಗೆ ಲಗತ್ತಾಗಿಸಿದ ವಿವಿಧ ಸೌಲಭ್ಯಗಳ ವಿತರಣೆ, ಉದ್ಯೋಗ ಖಾತ್ರಿ ಯೋಜನೆಯ ಕೂಲಿಯ ಬಟಾವಾಡೆ, ಗ್ಯಾಸ್‌ ಸಬ್ಸಿಡಿ, ಸರ್ಕಾರದ ವಿವಿಧ ಯೋಜನೆಗಳ ಫ‌ಲಾನುಭವಿಗಳಿಗೆ ಅನುದಾನಗಳನ್ನು ನೇರವಾಗಿ ಬ್ಯಾಂಕ್‌ ಖಾತೆಯ ಮೂಲಕ ಪಾವತಿಸುವಂತೆ ಮಾಡುವ ಪ್ರಯತ್ನ ಇದಾಗಿದೆ. ಕಡಿಮೆ ಜನ ಇರುವ ಹಳ್ಳಿಗಳಲ್ಲಿಯೂ ಜನರಿಗೆ ಬ್ಯಾಂಕಿಂಗ್‌ ಸೌಲಭ್ಯ ದೊರೆಯುವಂತಾಗಲು ಅಲ್ಟ್ರಾ ಸ್ಮಾಲ್‌ ಬ್ರಾಂಚ್‌ ತೆರೆಯಲಾಗುತ್ತಿದೆ. ಹಾಗೆಯೇ ಬ್ಯುಸಿನೆಸ್‌ ಕರೆಸ್ಪಾಂಡೆಂಟ್‌ಗಳನ್ನು ಮತ್ತು ಬ್ಯುಸಿನೆಸ್‌ ಕರೆಸ್ಪಾಂಡೆಂಟ್‌ ಏಜೆಂಟ್‌ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಜನರ ಮನೆ ಬಾಗಿಲಿಗೇ ಬ್ಯಾಂಕಿಂಗ್‌ ಸೌಲಭ್ಯ ತೆಗೆದುಕೊಂಡುಹೋಗಿ ತಲುಪಿಸುವ ಪ್ರಯತ್ನ ಇದು. 

      ಆರ್ಥಿಕ ಒಳಗೊಳ್ಳುವಿಕೆ 
      ಸಮಾಜದ ವಿವಿಧ ಸ್ತರಗಳ ಜನರನ್ನು ಬ್ಯಾಂಕಿಂಗ್‌, ವಿಮೆ ಮತ್ತು ನಿವೃತ್ತಿ ವೇತನಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳು, ವ್ಯವಹಾರಗಳು ಹಾಗೂ ಸರ್ಕಾರದ ಯೋಜನೆಗಳ ಅನುಕೂಲತೆಗಳು, ಅನುದಾನಗಳನ್ನು ತಲುಪಿಸುವ ನಿಟ್ಟಿನಲ್ಲಿ, ಅತಿಸೂಕ್ಷ¾, ಸೂಕ್ಷ¾, ಮಧ್ಯಮ ಮತ್ತು ಸಣ್ಣಕೈಗಾರಿಕೆಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುವ ಆರ್ಥಿಕ ವ್ಯವಹಾರಗಳು ಹಳ್ಳಿಯಿಂದ ದಿಲ್ಲಿಯವರೆಗೆ ಯಾರನ್ನೂ ಬಿಡದಂತೆ, ಸಮಗ್ರವಾಗಿ ಎಲ್ಲವನ್ನೂ ಒಳಗೊಳ್ಳುವಂತೆ ನೋಡಿಕೊಳ್ಳುವ ಹೊಣೆ ಈ ಆರ್ಥಿಕ ವ್ಯವಹಾರಗಳ ಇಲಾಖೆಯದ್ದು. 

      ಬ್ಯಾಂಕಿಂಗ್‌, ವಿಮೆ ಮತ್ತು ನಿವೃತ್ತಿ ವೇತನ 
      ಆರ್ಥಿಕ ಸೇವೆಗಳ ಇಲಾಖೆಯು ಬ್ಯಾಂಕಿಂಗ್‌, ವಿಮೆ ಮತ್ತು ನಿವೃತ್ತಿ ವೇತನಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಜಾರಿಗೆ ಬಂದಿರುವ ನಿಯಮಗಳು, ನೀತಿ ನಡಾವಳಿಗಳು ಮತ್ತು ಸರ್ಕಾರದ ಯೋಜನೆಗಳ ಅನುಷ್ಠಾನಕ್ಕೆ ಹಮ್ಮಿಕೊಳ್ಳಲಾಗುತ್ತಿರುವ ಕಾರ್ಯಕ್ರಮಗಳನ್ನು ಜನತೆಗೆ ತಿಳಿಸಲು ಇತ್ತೀಚೆಗೆ ತ್ರೆ„ಮಾಸಿಕ ಜರ್ನಲ್‌ ಪ್ರಕಟಿಸಿದೆ. ಇದರ ಮೊದಲ ಸಂಚಿಕೆ ಸೆಪ್ಟೆಂಬರ್‌ 2012ರಂದು ಪ್ರಕಟವಾಗಿದ್ದು, ಆರ್ಥಿಕ ಒಳಗೊಳ್ಳುವಿಕೆಯನ್ನು ಕುರಿತಾಗಿದೆ. ಮುಂದಿನ ಸಂಚಿಕೆ ಜನತೆಗೆ ವಿಮೆ ಮತ್ತು ನಿವೃತ್ತಿ ವೇತನ ವಿಷಯಕ್ಕೆ ಸಂಬಂಧಿಸಿದೆ. 

      ಸಾಂಸ್ಕೃತಿಕ ಸಂಪನ್ಮೂಲ ಮತ್ತು ತರಬೇತಿ ಕೇಂದ್ರ 
      1979ರಲ್ಲಿ ಸ್ಥಾಪಿತವಾದ ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ ಸಾಂಸ್ಕೃತಿಕ ಸಂಪನ್ಮೂಲ ಮತ್ತು ತರಬೇತಿ ಕೇಂದ್ರ ಭಾರತೀಯ ಸಂಸ್ಕೃತಿಯನ್ನು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಮತ್ತು ಉಪನ್ಯಾಸಕರಿಗೆ ಪರಿಚಯಿಸುವ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ. ವರ್ಷವಿಡೀ ಒಂದÇÉಾ ಒಂದು ಸೆಮಿನಾರ್‌, ಓರಿಯಂಟೇಷನ್‌ ಕೋರ್ಸ್‌, ರಿಫ್ರೆಷರ್‌ ಕೋರ್ಸ್‌, ಸಂಗೀತ, ನೃತ್ಯ ಕಲೆಗಳಿಗೆ ಸಂಬಂಧಿಸಿದ ತರಬೇತಿ ಕಾರ್ಯಾಗಾರವನ್ನು ನಡೆಸುತ್ತಲೇ ಇರುತ್ತದೆ. 1970ರಿಂದ ದೆಹಲಿ ವಿಶ್ವವಿದ್ಯಾಲಯದ ಸಂಸ್ಕೃತಿ ವಿಭಾಗ ನಡೆಸಿಕೊಂಡು ಬರುತ್ತಿದ್ದ ಈ ರೀತಿಯ ತರಬೇತಿ ಕಾರ್ಯಕ್ರಮಗಳನ್ನು 1979ರಿಂದ ಸಾಂಸ್ಕೃತಿಕ ಸಂಪನ್ಮೂಲ ಮತ್ತು ತರಬೇತಿ ಕೇಂದ್ರ ಮುಂದುವರೆಸಿಕೊಂಡು ಹೋಗುತ್ತಿದೆ. ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ ಮತ್ತು ಫೆಲೊಶಿಪ್‌ಗ್ಳನ್ನು ನೀಡುತ್ತಿದೆ. 

      ಕಲಾ ಪ್ರಕಾರಗಳು 
      ಭಾರತೀಯ ಕಲಾ ಪ್ರಕಾರಗಳ ಪರಿಚಯವನ್ನು ಅಭಿನಯ ಕಲೆ, ದೃಶ್ಯಕಲೆ ಮತ್ತು ಸಾಹಿತ್ಯ ಎಂಬುದಾಗಿ ಮೂರು ಭಾಗಗಳಲ್ಲಿ ವಿಸ್ತತವಾಗಿ ಮಾಡಿಕೊಡಲಾಗಿದೆ. ಪ್ರಾಚೀನ ಕಾಲದಿಂದ ಅಂದರೆ ವೇದಗಳ ಕಾಲದಿಂದ ಇಲ್ಲಿಯವರೆಗೆ ರಚಿತವಾಗಿರುವ ಸಾಹಿತ್ಯ ರಾಶಿಯನ್ನು ವಿವಿಧ ವಿಭಾಗಗಳಲ್ಲಿ ಅಚ್ಚುಕಟ್ಟಾಗಿ ಟಿಪ್ಪಣಿ ಸಮೇತ ಪರಿಚಯಿಸಲಾಗಿದೆ. 
      ದೃಶ್ಯಕಲೆಗೆ ಸಂಬಂಧಿಸಿದಂತೆ ಭಾರತೀಯ ವಾಸ್ತುಶಿಲ್ಪ, ಭಾರತೀಯ ಶಿಲ್ಪಕಲೆ, ಭಾರತೀಯ ಚಿತ್ರಕಲೆ(ಸಿಂಧೂ ಬಯಲಿನ ನಾಗರಿಕತೆಯ ಕಾಲ, ಬೌದ್ಧರ ಕಾಲ, ಇಂಡೋ-ಇಸ್ಲಾಮಿಕ್‌ ಮತ್ತು ಆಧುನಿಕ ಕಾಲಕ್ಕೆ ಸಂಬಂಧಿಸಿದಂತೆ) ಎಂಬ ವಿಭಾಗಗಳಲ್ಲಿ ಸಚಿತ್ರವಾಗಿ ವಿವರಣೆ ದೊರೆಯುತ್ತದೆ. 
      ಅಭಿನಯ ಕಲೆಗೆ ಸಂಬಂಧಿಸಿದಂತೆ ಭಾರತದ ನೃತ್ಯ ಪ್ರಕಾರಗಳು, (ಶಾಸ್ತ್ರೀಯ ಪ್ರಕಾರ, ಅರೆ ಶಾಸ್ತ್ರೀಯ ಪ್ರಕಾರಗಳು, ಪ್ರಾದೇಶಿಕ ನೃತ್ಯ ಪ್ರಕಾರಗಳು), ಭಾರತೀಯ ಸಂಗೀತ(ಹಿಂದೂಸ್ತಾನಿ, ಕರ್ನಾಟಕಿ, ಪ್ರಾದೇಶಿಕ ಸಂಗೀತ ಮತ್ತು ಸಂಗೀತ ವಾದ್ಯಗಳು), ಭಾರತೀಯ ರಂಗಭೂಮಿ ಮತ್ತು ಭಾರತೀಯ ಗೊಂಬೆ ಆಟ ಪರಂಪರೆಯ ಪರಿಚಯ ಇಲ್ಲಿದೆ. 
      ಇತ್ತೀಚೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾರತೀಯ ಕಲಾ ಪ್ರಕಾರಕ್ಕೆ ಸಂಬಂಧಿಸಿದಂತೆ ಒಂದÇÉಾ ಒಂದು ಪ್ರಶ್ನೆ ಇದ್ದೇ ಇರುತ್ತದೆ ಎನ್ನುವ ಕಾರಣಕ್ಕಾಗಿಯಾದರೂ ಈ ಎÇÉಾ ಪ್ರಕಟಣೆಗಳನ್ನು ಒಮ್ಮೆ ತೆರೆದು ನೋಡಬೇಕಾದ ಅಗತ್ಯವಿದೆ. 

      ಓರಿಯಂಟೇಶನ್‌ ತರಬೇತಿ, ಕಾರ್ಯಾಗಾರಗಳು ಮತ್ತು ರಿಫ್ರೆಷರ್‌ ಕೋರ್ಸ್‌ಗಳು 
      ಶಿಕ್ಷಣದಲ್ಲಿ ಗೊಂಬೆಯಾಟದ ಪಾತ್ರ ನೈಸರ್ಗಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವಲ್ಲಿ ಶಾಲೆಗಳ ಪಾತ್ರ ಮತ್ತು ಸಾಮಾಜಿಕ ಉಪಯುಕ್ತ ಉತ್ಪಾದನಾ ಕಾರ್ಯ, ಕಾರ್ಯಾನುಭವ 
      ಕುರಿತಂತೆ ಹದಿನೈದು ದಿನಗಳ ತರಬೇತಿ ಕಾರ್ಯಾಗಾರಗಳನ್ನು ಸಾಂಸ್ಕೃತಿಕ ಸಂಪನ್ಮೂಲ ಮತ್ತು ತರಬೇತಿ ಕೇಂದ್ರ ಏರ್ಪಡಿಸುತ್ತದೆ. ಈ ಕಾರ್ಯಾಗಾರಗಳಲ್ಲಿ ತರಬೇತಿ ಪಡೆದವರಿಗಾಗಿ ಹತ್ತು ದಿನಗಳ ರಿಫ್ರೆಷರ್‌ ಕೋರ್ಸ್‌ ಕೂಡ ಇರುತ್ತದೆ. 

      ಪ್ರಾಥಮಿಕ, ಮಾಧ್ಯಮಿಕ, ಪ್ರೌಢ ಮತ್ತು ಪದವಿ ಪೂರ್ವ ಹಂತದ ಶಿಕ್ಷಕರಿಗೆ 21 ದಿನಗಳ ಕಾಲ ಮತ್ತು ಶಿಕ್ಷಣ ತರಬೇತಿ ಸಂಸ್ಥೆಯ ಉಪನ್ಯಾಸಕರು ಹಾಗೂ ಅಧ್ಯಾಪಕರಿಗೆ 18 ದಿನಗಳ ಕಾಲ ಓರಿಯಂಟೇಶನ್‌ ತರಬೇತಿಯನ್ನು ದೆಹಲಿ, ಹೈದರಾಬಾದ್‌ ಮತ್ತು ಉದಯಪುರಗಳಲ್ಲಿರುವ ಸಿಸಿಆರ್‌ಟಿ ಕೇಂದ್ರಗಳಲ್ಲಿ ನೀಡಲಾಗುತ್ತಿದೆ. 
      ತರಬೇತಿಯ ಅವಧಿಯಲ್ಲಿ ಬೋಧನೋಪಕರಣಗಳ ತಯಾರಿಕೆ, ಪ್ರಾಜೆಕ್ಟ್ಗಳ ಆಯ್ಕೆ ಮತ್ತು ಸಂಪೂರ್ಣಗೊಳಿಸುವಿಕೆ, ಕ್ವಿಜ‚…, ಶೈಕ್ಷಣಿಕ ಆಟಗಳು, ಸ್ಲೆ„ಡ್‌ ಶೋ, ಕರಕುಶಲ ಕಲೆಯ ಕಲಿಕೆ, ವಿವಿಧ ಭಾಷೆಗಳ ಭಾವೈಕ್ಯತಾ ಗೀತೆಗಳ ಗಾಯನ ಮತ್ತು ಕಲಿಕೆ, ಶೈಕ್ಷಣಿಕ ಪ್ರವಾಸ, ವಿವಿಧ ಶಾಲೆಗಳ ಭೇಟಿ ಮತ್ತು ವಿದ್ಯಾರ್ಥಿಗಳೊಂದಿಗೆ ವಿಚಾರ ವಿನಿಮಯ ಹಾಗೂ ಮೌಲ್ಯಮಾಪನ ಕಾರ್ಯಗಳಿರುತ್ತವೆ. 

      ಸಂಪನ್ಮೂಲಗಳ ದಾಖಲೀಕರಣ 
      ಕೇಂದ್ರದಲ್ಲಿ ತರಬೇತಿಗೆ ಬಳಸಲಾಗುವ ಸಂಪನ್ಮೂಲ ಸಾಮಗ್ರಿಗಳನ್ನು ದಾಖಲಿಸಿ ಇಡುವ ವ್ಯವಸ್ಥೆ ಇದೆ. ಕಲೆ, ಕರಕುಶಲ ಕಲೆ, ದೃಶ್ಯ, ಶ್ರವ್ಯ ಹಾಗೂ ಅಭಿನಯ ಸೇರಿದಂತೆ ವಿವಿಧ ಕಲಾ ಪ್ರಕಾರಗಳ ರೆಕಾರ್ಡಿಂಗ್‌, ಸ್ಲೆ„ಡ್‌ಗಳ ತಯಾರಿಕೆ, ಫೋಟೋಗ್ರಾಫ್ಗಳ ಸಂಗ್ರಹಿಸುವಿಕೆ ಇವೇ ಮೊದಲಾದ ಚಟುವಟಿಕೆಗಳನ್ನು ದಾಖಲಿಸಲಾಗುತ್ತದೆ. 

      ಕಲ್ಚರಲ್‌ ಕಿಟ್‌ 
      ಸಂಸ್ಥೆ ಸಿದ್ದಪಡಿಸಿರುವ ಕಲ್ಚರಲ್‌ ಕಿಟ್‌ನಲ್ಲಿ ಎರಡು ಆಲ್ಬಂಗಳಿದ್ದು ಮೊದಲ ಆಲ್ಬಂನಲ್ಲಿ 520 ಸ್ಲೆ„ಡ್‌ಗಳಿವೆ. ಇವು ಪ್ರಕೃತಿ ಮತ್ತು ಪರಿಸರ, ವಾಸ್ತುಶಿಲ್ಪ, ಚಿತ್ರಕಲೆ ಮತ್ತು ಕರಕುಶಲ ವಸ್ತುಗಳನ್ನು ಕುರಿತಂತೆ ಇರುವ ವರ್ಣ ಹಾಗೂ ಕಪ್ಪು-ಬಿಳುಪಿನ ಸ್ಲೆ„ಡ್‌ಗಳಾಗಿವೆ. ಎರಡನೇ ಆಲ್ಬಂನಲ್ಲಿ 348 ಸ್ಲೆ„ಡ್‌ಗಳಿದ್ದು, ಸಂಗೀತ ವಾದ್ಯಗಳು, ನೃತ್ಯ ಪ್ರಕಾರಗಳು, ಸಾಂಪ್ರದಾಯಿಕ ರಂಗಭೂಮಿ, ಜನಪದ ಮತ್ತು ಬುಡಕಟ್ಟು ಸಂಸ್ಕತಿಗೆ ಸೇರಿದ ಸಂಗೀತ ಕುರಿತಾದ ಸ್ಲೆ„ಡ್‌ಗಳಾಗಿವೆ. ಇದರೊಂದಿಗೆ ಧ್ವನಿಮುದ್ರಿತ ಟೇಪ್‌ ಇದ್ದು ಭಾರತದ ರಾಷ್ಟ್ರೀಯತೆ ಬಿಂಬಿಸುವ ವಿವಿಧ ಭಾಷೆಗಳಲ್ಲಿರುವ ದೇಶಭಕ್ತಿಗೀತೆಗಳಿಂದ ಕೂಡಿದೆ. ಈ ತರಬೇತಿಯಲ್ಲಿ ಭಾಗವಹಿಸುವ ಶಿಕ್ಷಕರು ಕೆಲಸ ಮಾಡುತ್ತಿರುವ ಶಾಲೆಗಳಿಗೆ ಒಂದು ಕ್ಯಾಸೆಟ್‌ ರೆಕಾರ್ಡರ್‌ ಮತ್ತು 35 ಮಿಮೀ ಸ್ಲೆ„ಡ್‌ ಪೊ›ಜೆಕ್ಟರನ್ನು ಈ ಕಿಟ್‌ನ ಜೊತೆಗೆ ಕೇಂದ್ರವೇ ದೊರಕಿಸಿಕೊಡುತ್ತದೆ. 

      ಸಾಂಸ್ಕೃತಿಕ ಪ್ರತಿಭಾ ಶೋಧ ವಿದ್ಯಾರ್ಥಿ ವೇತನ 
      1982ರಿಂದ ಪ್ರತಿ ವರ್ಷವೂ ಸಂಗೀತ, ನೃತ್ಯ, ಕಲೆ, ನಾಟಕ ಇತ್ಯಾದಿ ಪ್ರಕಾರಗಳಲ್ಲಿ ತರಬೇತಿ ಹೊಂದುತ್ತಿರುವ 10 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಸಾಂಸ್ಕತಿಕ ಪ್ರತಿಭಾ ಶೋಧ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಮೊದಲಿಗೆ 100 ಜನರಿಗೆ ಇದ್ದ ಅವಕಾಶ ಈಗ 500 ಜನರನ್ನು ತಲುಪುತ್ತಿದೆ. ಆರಂಭದಲ್ಲಿ ಎರಡು ವರ್ಷಗಳ ಕಾಲ ಈ ಶಿಷ್ಯವೇತನ ದೊರೆಯುತ್ತಿದ್ದು, ಅತ್ಯುತ್ತಮ ಸಾಧನೆ ಮುಂದುವರೆಸಿರುವ ಮಕ್ಕಳಿಗೆ ಇನ್ನೂ ಎರಡು ವರ್ಷ ಹೆಚ್ಚುವರಿಯಾಗಿ ಮುಂದುವರೆಸುವ ಅವಕಾಶವಿದೆ. ಪುಸ್ತಕಗಳು ಮತ್ತು ಇತರೆ ಸಾಮಗ್ರಿಗಳು 
      ಕೇಂದ್ರವು ಅತ್ಯುತ್ತಮ ಗುಣಮಟ್ಟದ ಕಾಗದದ ಮೇಲೆ ಬಹುವರ್ಣದಲ್ಲಿ ಸಾಂಸ್ಕತಿಕ ಸಂಪತ್ತನ್ನು ಬಿಂಬಿಸುವ ಹತ್ತು ಹಲವು ಕೃತಿಗಳನ್ನು, ಕೈಪಿಡಿಗಳನ್ನು, ಭಿತ್ತಿ ಪತ್ರಗಳನ್ನು ಮತ್ತು ಪ್ಲೆಕಾರ್ಡ್‌ಗಳನ್ನು, ಧ್ವನಿಮುದ್ರಿತ ಕ್ಯಾಸೆಟ್‌ ಮತ್ತು ವೀಡಿಯೋ ಸಿಡಿ, ಡಿವಿಡಿಗಳನ್ನು ತಯಾರಿಸಿ ಶಾಲೆಗಳಿಗೆ ನೀಡಿದೆ. ಕೆಲವು ಮಾರಾಟಕ್ಕೂ ಲಭ್ಯ. ಈ ಸಾಮಗ್ರಿಯಲ್ಲಿರುವ ವಿಷಯಗಳನ್ನು ಆಧರಿಸಿ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಶ್ನೆಗಳನ್ನು ಕೇಳಲಾಗುತ್ತದೆ.
      *ಬೇದ್ರೆ ಮಂಜುನಾಥ್‌

Tuesday 27 November, 2012

KAS Mains 2012 and Book by Bipan Chandra - Article in Josh 27 Nov 2012

 KAS Mains 2012 and Book by Bipan Chandra - Article in Josh 27 Nov 2012
  •  Udayavani ಟೈಮ್‌ ಟೇಬಲ್‌ ಬರ್ಕೊಳಿ ಇನ್ನೇನು ಪರೀಕ್ಷೆ ಬಂದೇಬಿಡ್ತು

  • 2012ರ ಡಿಸೆಂಬರ್‌ 15ರಿಂದ 2013ರ ಜನವರಿ 6ರವರೆಗೆ ಕರ್ನಾಟಕ ಲೋಕಸೇವಾ ಆಯೋಗವು ನಡೆಸುವ ಗೆಝೆಟೆಡ್‌ ಪ್ರೊಬೆಷನರ್‌ಗಳ ನೇಮ

    • Udayavani | Nov 26, 2012
      2012ರ ಡಿಸೆಂಬರ್‌ 15ರಿಂದ 2013ರ ಜನವರಿ 6ರವರೆಗೆ ಕರ್ನಾಟಕ ಲೋಕಸೇವಾ ಆಯೋಗವು ನಡೆಸುವ ಗೆಝೆಟೆಡ್‌ ಪ್ರೊಬೆಷನರ್‌ಗಳ ನೇಮಕಾತಿ ಮುಖ್ಯ(ಮೇನ್‌) ಪರೀಕ್ಷೆಯ ವೇಳಾಪಟ್ಟಿ ಪ್ರಕಟವಾಗಿದೆ. ಡಿಸೆಂಬರ್‌ 15ರಂದು ಕನ್ನಡ ಮತ್ತು ಇಂಗ್ಲಿಷ್‌ ಭಾಷೆಗಳ ಕಡ್ಡಾಯ ಪತ್ರಿಕೆಗಳು, 16 ರಂದು ಸಾಮಾನ್ಯ ಅಧ್ಯಯನದ ಎರಡು ಪತ್ರಿಕೆಗಳು ನಿಗದಿಯಾಗಿದ್ದು 17ರಿಂದ ಜನವರಿ 6ರವರೆಗೆ ವಿವಿಧ ಐಚ್ಛಿಕ ವಿಷಯಗಳ ಎರಡೆರಡು ಪತ್ರಿಕೆಗಳು ಇರಲಿವೆ. 

      ಪತ್ರಿಕೆ-3: ಸಾಮಾನ್ಯ ಅಧ್ಯಯನ ಪತ್ರಿಕೆ 1- 300 ಅಂಕಗಳು- 3 ಗಂಟೆ 
      1. ಆಧುನಿಕ ಭಾರತದ ಇತಿಹಾಸ ಮತ್ತು ಸಂಸ್ಕೃತಿ- ಕರ್ನಾಟಕ ಇತಿಹಾಸ ಮತ್ತು ಸಂಸ್ಕೃತಿಗೆ ವಿಶೇಷ ಆದ್ಯತೆ 
      2. ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿನ ಪ್ರಚಲಿತ ಘಟನಾವಳಿಗಳು 
      3. ಅಂಕಿ- ಅಂಶಗಳ ವಿಶ್ಲೇಷಣೆ, ಗ್ರಾಫ್ ಮತ್ತು ಚಿತ್ರಗಳು, ನಕಾಶೆಗಳು 

      ಪತ್ರಿಕೆ-4: ಸಾಮಾನ್ಯ ಅಧ್ಯಯನ ಪತ್ರಿಕೆ 2- 300 ಅಂಕಗಳು- 3 ಗಂಟೆ 
      1. ಭಾರತದ ರಾಜಕೀಯ/ ಆಡಳಿತ ವ್ಯವಸ್ಥೆ- ಕರ್ನಾಟಕ ರಾಜ್ಯದ ರಾಜಕೀಯ/ ಆಡಳಿತ ವ್ಯವಸ್ಥೆಗೆ ವಿಶೇಷ ಆದ್ಯತೆ 
      2. ಭಾರತದ ಆರ್ಥಿಕತೆ ಮತ್ತು ಭಾರತದ ಭೂಗೋಳ- ಕರ್ನಾಟಕ ರಾಜ್ಯದ ಆರ್ಥಿಕತೆ ಮತ್ತು ಭೂಗೋಳಕ್ಕೆ ವಿಶೇಷ ಆದ್ಯತೆ 
      3. ಕರ್ನಾಟಕ ಮತ್ತು ಭಾರತದ ಅಭಿವೃದ್ಧಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಪಾತ್ರ ಹಾಗೂ ಪ್ರಾಮುಖ್ಯತೆ 

      ಆಧುನಿಕ ಭಾರತದ ಇತಿಹಾಸ 
      ಕೇಂದ್ರ ಮತ್ತು ರಾಜ್ಯ ಲೋಕಸೇವಾ ಆಯೋಗಗಳು ಮತ್ತು ನೇಮಕಾತಿ ಮಂಡಳಿಗಳು ನಡೆಸುತ್ತಿರುವ ಸ್ಪರ್ಧಾತ್ಮಕ ಆಯ್ಕೆ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳನ್ನು ಗಮನಿಸಿದಾಗ ಶೇಕಡಾ 5ರಷ್ಟು ಪ್ರಶ್ನೆಗಳು ಆಧುನಿಕ ಭಾರತದ ಇತಿಹಾಸ ಮತ್ತು ಶೇಕಡಾ 15ರಷ್ಟು ಪ್ರಶ್ನೆಗಳು ಭಾರತದ ಸಂವಿಧಾನಕ್ಕೆ ಸಂಬಂಧಿಸಿದ ಪ್ರಶ್ನೆಗಳಾಗಿವೆ. ಭಾರತ ಸ್ವಾತಂತ್ರÂ ಸಂಗ್ರಾಮದ ಇತಿಹಾಸ ಮತ್ತು ಸಂವಿಧಾನ ರಚನೆಯ ಹಿನ್ನೆಲೆ, ಮೂಲಭೂತ ಹಕ್ಕು ಮತ್ತು ಕರ್ತವ್ಯಗಳು, ರಾಜ್ಯ ನಿರ್ದೇಶಕ ತತ್ವಗಳು, ಸಂವಿಧಾನದಲ್ಲಿ ಉÇÉೇಖೀಸಲಾಗಿರುವ ಪ್ರಮುಖ ನಿರ್ಣಾಯಕ ಅಂಶಗಳು ಮತ್ತು ಅದಕ್ಕೆ ಸಂಬಂಧಿಸಿದ ಕಾನೂನುಗಳನ್ನು, ತಿದ್ದುಪಡಿಗಳನ್ನು ಆಧರಿಸಿದ ಪ್ರಶ್ನೆಗಳನ್ನು ಹೆಚ್ಚಾಗಿ ಕೇಳಲಾಗುತ್ತಿದೆ. ಸಾರ್ವಜನಿಕ ಆಡಳಿತ ವಿಷಯದ ಮೂಲಾಧಾರ ಸಂವಿಧಾನವಾಗಿರುವುದರಿಂದ ಭಾರತದ ಆಡಳಿತ ವ್ಯವಸ್ಥೆಯನ್ನು ಕುರಿತ ಪ್ರಶ್ನೆಗಳಿಗೆ ಸಂವಿಧಾನವೇ ಉತ್ತರ ನೀಡುತ್ತದೆ. 

      ಭಾರತ ಸಂವಿಧಾನ ದಿನ- ನವೆಂಬರ್‌ 26 
      ಭಾರತ 1947ರ ಆಗಸ್ಟ್‌ 14ರಂದು ಮಧ್ಯರಾತ್ರಿ ಸ್ವಾತಂತ್ರÂ ಗಳಿಸಿತು. ಡಾ.ಬಾಬು ರಾಜೇಂದ್ರ ಪ್ರಸಾದರ ನೇತೃತ್ವದ ಸಂವಿಧಾನ ರಚನಾ ಸಭೆಯು ವಿಶ್ವದ ಅತ್ಯಂತ ದೊಡ್ಡ, ವ್ಯವಸ್ಥಿತ ಮತ್ತು ವೈಜ್ಞಾನಿಕ ಸಂವಿಧಾನವನ್ನು 1949ರ ನವೆಂಬರ್‌ 26ರಂದು ಸಿದ್ಧಪಡಿಸಿ 1950ರ ಜನವರಿ 26ರಿಂದ ಜಾರಿಗೊಳಿಸಿತು. ಸ್ವತಂತ್ರ ಭಾರತದ ಮೊದಲ ಕಾನೂನು ಸಚಿವರಾಗಿದ್ದ ಡಾ.ಬಾಬಾ ಸಾಹೇಬ್‌ ಅಂಬೇಡ್ಕರ್‌ ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾಗಿದ್ದರು. ಪ್ರಸ್ತಾವನೆ, 395 ವಿಧಿಗಳನ್ನೊಳಗೊಂಡ 22 ಭಾಗಗಳು, 12 ಅನುಸೂಚಿಗಳು, ಅನುಬಂಧ ಮತ್ತು 97 ತಿದ್ದುಪಡಿಗಳನ್ನೊಳಗೊಂಡಿರುವ ಬೃಹತ್‌ ಸಂವಿಧಾನ ನಮ್ಮದು. 2012ರ ನವೆಂಬರ್‌ವರೆಗೆ 117 ತಿದ್ದುಪಡಿಗಳ ಕರಡುಗಳನ್ನು ಮಂಡಿಸಲಾಗಿದ್ದು, 97 ತಿದ್ದುಪಡಿಗಳನ್ನು ಮಾತ್ರ ಸೇರ್ಪಡೆ ಮಾಡಲಾಗಿದೆ.
  •  ಬಿಪಿನ್‌ ಚಂದ್ರರ ಹೊಸ ಪುಸ್ತಕ

  • ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಭಾರತದ ಇತಿಹಾಸವನ್ನು ಕುರಿತಂತೆ ನೂರಾರು ಪುಸ್ತಕಗಳು ಪ್ರಕಟವಾಗಿದ್ದರೂ ಸ್ಪರ್ಧಾತ್ಮಕ ಪರ

    • Udayavani | Nov 26, 2012
      ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಭಾರತದ ಇತಿಹಾಸವನ್ನು ಕುರಿತಂತೆ ನೂರಾರು ಪುಸ್ತಕಗಳು ಪ್ರಕಟವಾಗಿದ್ದರೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನೀಡಬೇಕಿರುವ ವಿಶ್ಲೇಷಣಾತ್ಮಕ ಉತ್ತರಕ್ಕೆ ಸೂಕ್ತ ಮೂಲ ಸಾಮಗ್ರಿ ಒದಗಿಸುವ ಡಾ. ಬಿಪಿನ್‌ ಚಂದ್ರ ಅವರ ಆಧುನಿಕ ಭಾರತದ ಇತಿಹಾಸ ಕೃತಿಯು ಬ್ರಿಟಿಷ್‌ ಇಂಡಿಯಾದ ಇತಿಹಾಸದ ಸ್ಥೂಲ ಪರಿಚಯ ಮಾಡಿಕೊಡುತ್ತದೆ. ಇಲ್ಲಿ ಹದಿನೆಂಟನೆಯ ಶತಮಾನದಲ್ಲಿ ಭಾರತವು ಮೊದಲು ಬ್ರಿಟಿಷ್‌ ಇಂಡಿಯಾ ಕಂಪೆನಿ, ನಂತರ ಬ್ರಿಟನ್‌ ಸಾಮ್ರಾಜ್ಯಕ್ಕೆ ಹೇಗೆ ಬಲಿಯಾಯಿತು ಎಂಬುದನ್ನು ಅಂದಿನ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಪರಿಸ್ಥಿತಿಗಳ ಮೂಲಕ ಪರಿಶೀಲಿಸಲಾಗಿದೆ. 
      ಮುಘಲ್‌ ಸಾಮ್ರಾಜ್ಯದ ಅವನತಿ, 18ನೆಯ ಶತಮಾನದಲ್ಲಿ ಭಾರತೀಯ ಸಂಸ್ಥಾನಗಳು ಮತ್ತು ಸಮಾಜ ಯೂರೋಪಿಯನ್ನರ ಪ್ರವೇಶ ಮತ್ತು ಬ್ರಿಟಿಷರಿಂದ ಭಾರತದ ವಶ, ಭಾರತದಲ್ಲಿ ಬ್ರಿಟಿಷ್‌ ಸಾಮ್ರಾಜ್ಯದ ಆರ್ಥಿಕ ನೀತಿಗಳು ಮತ್ತು ಸರ್ಕಾರದ ಸಂರಚನೆ, ಆಡಳಿತಾತ್ಮಕ ವ್ಯವಸ್ಥೆ ಮತ್ತು ಸಾಮಾಜಿಕ ಹಾಗೂ ಸಾಂಸ್ಕೃತಿಕ ನೀತಿ, 19ನೇ ಶತಮಾನದ ಪೂರ್ವಾಧದಲ್ಲಿ ಸಾಮಾಜಿಕ ಮತ್ತು ಸಾಂಸ್ಕತಿಕ ಜಾಗೃತಿ, 1857ರ ಬಂಡಾಯ, 1858ರ ನಂತರ ಆಡಳಿತದಲ್ಲಿ ಬದಲಾವಣೆಗಳು, ಬ್ರಿಟಿಷ್‌ ಆಳ್ವಿಕೆಯ ಆರ್ಥಿಕ ಪರಿಣಾಮ, ರಾಷ್ಟ್ರೀಯ ಚಳುವಳಿ, 1858ರ ನಂತರ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಣೆಗಳು, ಸ್ವರಾಜ್ಯಕ್ಕಾಗಿ ಹೋರಾಟ, ರೈತರು ಮತ್ತು ಕಾರ್ಮಿಕರ ಚಳುವಳಿಗಳು, ಕಾಂಗ್ರೆಸ್‌ ಮತ್ತು ವಿಶ್ವದ ವಿದ್ಯಮಾನಗಳು, ಸಂಸ್ಥಾನೀ ರಾಜ್ಯಗಳಲ್ಲಿ ಜನರ ಹೋರಾಟ, ಕೋಮುವಾದದ ಬೆಳವಣಿಗೆ ಮತ್ತು ಯುದ್ಧಾನಂತರದ ಹೋರಾಟ ಇವೇ ಮೊದಲಾದ ಅಧ್ಯಾಯಗಳಿಂದ ಕೂಡಿದ 372 ಪುಟಗಳ ಬಿಪಿನ್‌ ಚಂದ್ರ ಅವರ ಈ ಕೃತಿಯನ್ನು ಇತಿಹಾಸ ಅಕಾಡೆಮಿಯ ಕಾರ್ಯದರ್ಶಿಗಳಾಗಿರುವ ಡಾ.ಎಚ್‌.ಎಸ್‌. ಗೋಪಾಲರಾವ್‌ ಅವರು ಕನ್ನಡಕ್ಕೆ ಅನುವಾದಿಸಿದ್ದು, ನವಕರ್ನಾಟಕ ಪ್ರಕಾಶನವು ಇದನ್ನು ಪ್ರಕಟಿಸಿದ್ದು ಇದೇ ನವೆಂಬರ್‌ 25 ರಂದು ಲೋಕಾರ್ಪಣೆಯಾಗಿದೆ. ಕೆಎಎಸ್‌ ಮುಖ್ಯ ಪರೀಕ್ಷೆಯನ್ನು ಕನ್ನಡ ಮಾಧ್ಯಮದಲ್ಲಿ ಬರೆಯುತ್ತಿರುವ ಅಭ್ಯರ್ಥಿಗಳಿಗೆ ಇದು ಅತ್ಯಂತ ಉಪಯುಕ್ತ ಗ್ರಂಥವಾಗಿದೆ. 

      ಹೀಗೊಂದು ಪುಸ್ತಕ 
      ಇಫ‚ಾìನ್‌ ಹಬೀಬ್‌ ಅವರ ರಾಷ್ಟ್ರೀಯ ಆಂದೋಲನ: ಸಿದ್ಧಾಂತದ ಮತ್ತು ಇತಿಹಾಸದ ಅಧ್ಯಯನಗಳು (ಪುಟಗಳು 144, ಬೆಲೆ : ರೂ.90-00, ಪ್ರಕಾಶಕರು: ನವಕರ್ನಾಟಕ ಪ್ರಕಾಶನ) ಇಂಗ್ಲಿಷ್‌ ಕೃತಿಯಲ್ಲಿ ಗಾಂಧೀಜಿ: ಬದುಕು, ಗಾಂಧೀ ಮತ್ತು ರಾಷ್ಟ್ರೀಯ ಆಂದೋಲನ, ಜವಾಹರಲಾಲ್‌ ನೆಹರುರವರ ಐತಿಹಾಸಿಕ ಅಂತದೃìಷ್ಟಿ, ಕಾಯ್ದೆ ಭಂಗ ಚಳುವಳಿ 1930-31, ಎಡಪಂಥ ಮತ್ತು 
      ರಾಷ್ಟ್ರೀಯ ಆಂದೋಲನ ಎಂಬ ಐದು ಪ್ರಬಂಧಗಳಿದ್ದು ಬ್ರಿಟಿಷ್‌ ಆಳ್ವಿಕೆ ಮತ್ತು ಅದನ್ನು ಕಿತ್ತೂಗೆಯಲು ಹುಟ್ಟಿ ಬೆಳೆದ ರಾಷ್ಟ್ರೀಯ ಅಂದೋಲನದಲ್ಲಿ ಎಡಪಂಥದ ಕೊಡುಗೆಯ ಅಧ್ಯಯನವಿದ್ದು, ಸಾಂಪ್ರದಾಯಿಕ ಇತಿಹಾಸ ಅಧ್ಯಯನಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಕೊರತೆಗಳನ್ನು ತುಂಬುವ ಒಂದು ಪ್ರಯತ್ನ ಇದಾಗಿದೆ. ಅಬ್ದುಲ್‌ ರೆಹಮಾನ್‌ ಪಾಷಾ ಅವರು ಇದನ್ನು ಕನ್ನಡಕ್ಕೆ ಅನುವಾದಿಸಿ¨ªಾರೆ.

Udayavani

Monday 26 November, 2012

Competitive Examination Preparation - Article in Vijaykarnataka 26 Nov 2012





ಸ್ಪರ್ಧಾತ್ಮಕ ಪರೀಕ್ಷೆ ಸಿದ್ಧತೆ: ಮೂರು ಮೊಳ ನೇಯೋದ್ಯಾಕೆ?


0
ಸ್ಪರ್ಧಾತ್ಮಕ ಪರೀಕ್ಷೆ ಸಿದ್ಧತೆ: ಮೂರು ಮೊಳ ನೇಯೋದ್ಯಾಕೆ?
* ಯಾಜ್ಞವಲ್ಕ್ಯ
ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ತುಂಬಾ ಸುಲಭದ ಸಬ್ಜೆಕ್ಟ್ ಕಣ್ರೀ. ಹಾಲಪ್ಪ ಅವರ ಪುಸ್ತಕ ಓದಿದ್ರೆ ಸಾಕು. ಒಂದಷ್ಟು ನೋಟ್ಸ್ ರೆಡಿ ಮಾಡಿಟ್ಕೊಂಡ್ರೂ ನಡೆಯುತ್ತೆ, ಅಂತಾರೆ ಹೊಳಲ್ಕೆರೆಯ ತಿಪ್ಪೇಸ್ವಾಮಿ. ಓದಿರುವುದು ಫಿಸಿಕ್ಸ್ ಎಂಎಸ್ಸಿ. ಆದರೂ ತೆಗೆದುಕೊಂಡಿರುವುದು ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಜಿಯಾಗ್ರಫಿ.

ಕೋಚಿಂಗ್ ಸೆಂಟರ್ ಬಾಜೂಕಿನ ಝೆರಾಕ್ಸ್ ಸೆಂಟರ್‌ದಾಗ ಕೇಳ್ರೀ, ನಿಮಗೆ ಯಾವ ಸಬ್ಜೆಕ್ಟಿಂದು ಬೇಕೋ ಆ ಸಬ್ಜೆಕ್ಟಿಂದು ನೋಟ್ಸ್ ಝೆರಾಕ್ಸ್ ಸಿಕ್ಕುತ್ತಂತೇರಿ. ಗ್ರಾಮೀಣ ಅಭಿವೃದ್ಧಿ ಸಬ್ಜೆಕ್ಟಿಂದು ಬರೇ 150 ಪುಟ ನೋಟ್ಸ್ ಇದೇರಿ. ಚುಲೋ ಐತಿ. ಅಷ್ಟೇ ಓದಿದ್ರೆ ಸಾಕಂತಾರ‌್ರಿ ಗೆಳ್ಯಾರು. ಇದು ಧಾರವಾಡದ ಅಂಬುಕೇಶನ ಅಂಬೋಣ.

ಇದೇ ಡಿಸೆಂಬರ್ 15 ರಿಂದ 2013ರ ಜನವರಿ 06ರವರೆಗೆ ಕರ್ನಾಟಕ ಲೋಕಸೇವಾ ಆಯೋಗವು ನಡೆಸುವ ಗೆಝೆಟೆಡ್ ಪ್ರೊಬೆಷನರ್‌ಗಳ ನೇಮಕಾತಿ ಮುಖ್ಯ (ಮೇನ್) ಪರೀಕ್ಷೆಯ ವೇಳಾಪಟ್ಟಿ ಪ್ರಕಟವಾಗಿದ್ದು ಡಿಸೆಂಬರ್ 15 ರಂದು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳ ಕಡ್ಡಾಯ ಪತ್ರಿಕೆಗಳು, 16 ರಂದು ಸಾಮಾನ್ಯ ಅಧ್ಯಯನದ ಎರಡು ಪತ್ರಿಕೆಗಳು ನಿಗದಿಯಾಗಿವೆ. 17 ರಿಂದ ಜನವರಿ 6 ರವರೆಗೆ ವಿವಿಧ ಐಚ್ಛಿಕ ವಿಷಯಗಳ ಎರಡೆರಡು ಪತ್ರಿಕೆಗಳು ಇರಲಿವೆ. (ವಿವರಗಳಿಗೆ ನೋಡಿ: http://kpsc.kar.nic.in) ಆಗಸ್ಟ್ -ಸೆಪ್ಟೆಂಬರ್‌ನಲ್ಲಿ ನಡೆಯಬೇಕಿದ್ದ ಈ ಪರೀಕ್ಷೆಗಳು ಇಷ್ಟು ತಡವಾಗಿ ಆರಂಭವಾಗುತ್ತಿದ್ದು ಸಿದ್ಧತೆಗೆ ಸಾಕಷ್ಟು ಸಮಯ ಇದ್ದಾಗಲೂ ಯಾವುದೋ ಒಂದು ಪುಸ್ತಕ, ಮತ್ಯಾವುದೋ ನೋಟ್ಸ್‌ಗೆ ಜೋತುಬೀಳುವ ಪ್ರವೃತ್ತಿ ಈ ಸ್ಪರ್ಧಾರ್ಥಿಗಳಲ್ಲಿ ಏಕೆ ಬೆಳೆಯುತ್ತಿದೆ?

ಎಸ್‌ಡಿಎ, ಎಫ್‌ಡಿಎ, ಕೆಇಎಸ್, ಕೆಎಎಸ್, ಐಎಎಸ್ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸುತ್ತಿರುವ ಅಭ್ಯರ್ಥಿಗಳು ಸಂತೆಗೆ ಮೂರು ಮೊಳದಂತೆ ನೇಯ್ದಿರುವ, ಅರೆಬರೆ ಮಾಹಿತಿ ಪೂರೈಸುವ, ನೂರಾರು ಮುದ್ರಣ ದೋಷಗಳಿಂದ ಕೂಡಿದ ವಿವಿಧ ಗೈಡ್‌ಗಳನ್ನು ಓದುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಆದರೆ ಕಂಕುಳಲ್ಲಿ ಕುರಿ ಇಟ್ಟುಕೊಂಡು ಊರೆಲ್ಲಾ ಹುಡುಕಿದಂತೆ ತಮ್ಮ ಮನೆಯಲ್ಲಿಯೇ ಇರುವ ಅದ್ಭುತ ಮಾಹಿತಿ ಮೂಲಗಳನ್ನು ಬಿಟ್ಟು ಸಂತೆಯ ಸರಕಿಗೆ ಹುಡುಕುವುದು ಎಷ್ಟು ಸರಿ? ಅದರ ಬದಲಿಗೆ ಪ್ರತಿನಿತ್ಯ ಕನಿಷ್ಠ ಒಂದು ಕನ್ನಡ ಮತ್ತು ಒಂದು ಇಂಗ್ಲಿಷ್ ದಿನಪತ್ರಿಕೆ ಓದುವ ಹವ್ಯಾಸ ಇದ್ದು, ಪ್ರತ್ಯೇಕವಾಗಿ ಟಿಪ್ಪಣಿ ಪುಸ್ತಕದಲ್ಲಿ ಆಯಾಯ ದಿನದ ಮುಖ್ಯ ಅಂಶಗಳನ್ನು, ಮಾಹಿತಿಯನ್ನು ಬರೆದಿಟ್ಟು ಕೊಂಡಲ್ಲಿ ಅದೇ ಒಂದು ಅತ್ಯುತ್ತಮವಾದ ಸಾಮಾನ್ಯ ಜ್ಞಾನ ಕೈಪಿಡಿ ಆಗುವುದರಲ್ಲಿ ಸಂಶಯವೇ ಇಲ್ಲ.

ಹಾಗೆಯೇ ಪ್ರತಿ ತಿಂಗಳು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಪ್ರಕಟವಾಗುವ ಮಾಸಿಕಗಳನ್ನು ನಿಯಮಿತವಾಗಿ ಅಭ್ಯಾಸ ಮಾಡುವವರಿಗೆ ಅಂಕಿ-ಅಂಶಗಳು, ಪ್ರಚಲಿತ ಘಟನೆಗಳ ಮಾಹಿತಿ ಅಂಗೈ ನೆಲ್ಲಿಕಾಯಿಯಾಗಿರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಪ್ರಾಥಮಿಕ ಐದನೇ ತರಗತಿಯಿಂದ ಹತ್ತನೇ ತರಗತಿಯವರೆಗಿನ ಪಠ್ಯಪುಸ್ತಕಗಳನ್ನು ಒಮ್ಮೆ ಕೂಲಂಕಷವಾಗಿ ಓದುವುದು, ಕೇಂದ್ರೀಯ ವಿದ್ಯಾಲಯಗಳಿಗೆ ನಿಗದಿಗೊಳಿಸಿರುವ ಸಿಬಿಎಸ್‌ಸಿ ಪಠ್ಯಕ್ರಮದ ಅನುಸಾರ ಸಿದ್ಧವಾಗಿ, ಎನ್‌ಸಿಇಆರ್‌ಟಿ ಯಿಂದ ಪ್ರಕಟವಾಗಿರುವ 6 ರಿಂದ 12ನೇ ತರಗತಿಯವರೆಗಿನ ಪಠ್ಯ ಪುಸ್ತಕಗಳನ್ನು ಓದುವುದರಿಂದ ವಿಜ್ಞಾನ, ಸಮಾಜ ವಿಜ್ಞಾನ, ಭಾಷೆ, ಗಣಿತ, ಬೌದ್ಧಿಕ ಸಾಮರ್ಥ್ಯದ ಪ್ರಶ್ನೆಗಳನ್ನು ಬಿಡಿಸುವುದು ಸುಲಭವಾಗುತ್ತದೆ. ಹಾಗೆಯೇ ಕನ್ನಡ ವಿಶ್ವಕೋಶ (ಪುಸ್ತಕ ಹಾಗೂ ಸಿ.ಡಿ.), ಎನ್‌ಸೈಕ್ಲೋಪಿಡಿಯಾ ಆಫ್ ಬ್ರಿಟಾನಿಕ, ಎನ್‌ಕಾರ್ಟ, ವರ್ಲ್ಡ್‌ಬುಕ್ ಸಿ.ಡಿಗಳನ್ನು ಗಮನಿಸುವುದು, ವಿಶ್ವವ್ಯಾಪಿ ಅಂತರ್ಜಾಲದಲ್ಲಿ ಲಭ್ಯವಿರುವ ಹಲವು ಜಾಲತಾಣ (ವೆಬ್‌ಸೈಟ್)ಗಳನ್ನು ಭೇಟಿಮಾಡುವುದು, ಮಾಹಿತಿ ಸಂಗ್ರಹಿಸುವ ಹವ್ಯಾಸ ಹೆಚ್ಚು ಅಂಕಗಳಿಸಿ ಆಯ್ಕೆಯಾಗಲು ನೆರವಾಗುತ್ತದೆ.

ಆದ್ರೆ ಆಡೋದು, ಆಗ್ದಿದ್ರೆ ನೋಡೋದು
ಇದೊಂಥರಾ ಫ್ಯಾಶನ್ ಆಗ್ಬಿಟ್ಟಿದೆ ಈಗ. ಪದವಿ/ಸ್ನಾತಕೋತ್ತರ ಪದವಿ ಮುಗಿಸಿದ ನಂತರ ಕೆಲಸಕ್ಕೆಂದು ಹುಡುಕಾಡುತ್ತಲೇ ಜತೆಗೆ ಇರಲಿ ಅಂತ ಸಿವಿಲ್ ಸರ್ವೀಸ್ ಪರೀಕ್ಷೆ ತೆಗೆದುಕೊಳ್ಳುವವರೂ ಜಾಸ್ತಿಯಾಗ್ತಿದ್ದಾರೆ. ಸೀರಿಯಸ್ ಆಗಿ ಅಟೆಂಪ್ಟ್ ಮಾಡೋರು ಸಿಗ್ತಾ ಇಲ್ಲ. ಆದ್ರೆ ಆಡೋಕ್ಬಂದೆ, ಆಗ್ದಿದ್ರೆ ನೋಡೋಕ್ಬಂದೆ ಅನ್ನೋರಿಗೆ ಈ ಕಾಂಪಿಟಿಟಿವ್ ಎಗ್ಸಾಂ ಒಲಿಯೋಲ್ಲರೀ. ಡೈ ಹಾರ್ಡ್ ಮನೋಭಾವದವರು, ಮಾಡಿಯೇ ತೀರ‌್ತೇನೆ ಅನ್ನೋರು ಇಲ್ಲಿ ಯಶಸ್ವಿಯಾಗ್ತಾರೆ' ಎನ್ನುತ್ತಾರೆ ಸಿವಿಲ್ ಸರ್ವೀಸಸ್ ಪರೀಕ್ಷೆಗಳಿಗೆ ತರಬೇತಿ ನೀಡುತ್ತಿರುವ ಛಾಯಾಪತಿ.

ಯೋಗ್ಯ ಅಭ್ಯರ್ಥಿಗಳ ಕೊರತೆ!
ಮಧುರ ಧ್ವನಿ, ಮೃದು ಮಾತು, ಸ್ಪಷ್ಟ ಉಚ್ಚಾರ, ಸರಳ ಇಂಗ್ಲಿಷ್ ಭಾಷೆ ಮತ್ತು ಸಂವಹನ ಕೌಶಲಗಳ ಸಮರ್ಥ ಬಳಕೆ, ನಸುನಗುತ್ತಾ ಎಲ್ಲರೊಂದಿಗೆ ಬೆರೆಯುವ ಸ್ವಭಾವದ, ಅಗತ್ಯಕ್ಕೆ ತಕ್ಕಷ್ಟು ಸಂಖ್ಯೆಯ ಅರ್ಹ ಉದ್ಯೋಗಿಗಳು ದೊರೆಯದೇ ಇರುವ ಪರಿಸ್ಥಿತಿ ಒಂದೆಡೆ ಇದ್ದರೆ, ಇನ್ನೊಂದೆಡೆ ನಿರುದ್ಯೋಗಿಗಳ ಮಹಾಪೂರವೇ ಇದೆ! ದಿ ಇಂಡಿಯಾ ಲೇಬರ್ ರಿಪೋರ್ಟ್ 2009 ರ ಅನ್ವಯ ಉದ್ಯೋಗಕ್ಕೆ ಆಯ್ಕೆಯಾಗುತ್ತಿರುವ ಶೇ 53 ರಷ್ಟು ಯುವಜನರಿಗೆ ಅಗತ್ಯ ಕೌಶಲದ ಕೊರತೆ ಇದೆ. 2010ರ ಫಿಕ್ಕಿ ಸಮೀಕ್ಷೆಯ ಪ್ರಕಾರ ಲಕ್ಷ ಲಕ್ಷ ಸಂಖ್ಯೆಯಲ್ಲಿ ಕಾಲೇಜುಗಳಿಂದ ಹೊರಬರುತ್ತಿರುವ ಪದವೀಧರರಲ್ಲಿ ಶೇ 75 ರಷ್ಟು ಮಂದಿಗೆ ಪ್ರಾಥಮಿಕ ಸಂವಹನ ಕೌಶಲಗಳಲ್ಲಿ ಪರಿಣತಿಯ ಕೊರತೆ ಇದೆ. ಉಳಿದ ಶೇ 25 ರಷ್ಟು ಮಂದಿಗೆ ಸೂಕ್ತ ತರಬೇತಿಯ ಅಗತ್ಯವಿದೆ.

ಅಭ್ಯರ್ಥಿಗಳು ಹೇಗಿರಬೇಕು?
ಉದ್ಯೋಗದಾತರು, ಉದ್ದಿಮೆದಾರರು ಎಂತಹ ಅಭ್ಯರ್ಥಿಗಳನ್ನು ಬಯಸುತ್ತಾರೆ? ಅಭ್ಯರ್ಥಿಗಳಲ್ಲಿ ಯಾವ ಯಾವ ಗುಣಗಳನ್ನು ಹುಡುಕುತ್ತಾರೆ? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುವುದು ಸ್ವಲ್ಪ ಕಷ್ಟ. ಯಾರಿಗೆ ಯಾವ ರೀತಿಯ ಉದ್ಯೋಗಿಗಳ ಅಗತ್ಯವಿದೆಯೋ ಆ ರೀತಿಯ ಉದ್ಯೋಗ ನಿರ್ವಹಿಸುವ ಸಾಮರ್ಥ್ಯವುಳ್ಳ ಅಭ್ಯರ್ಥಿಗಳನ್ನು ಹುಡುಕುವುದು ಸಹಜ. ಬುದ್ಧಿ ಸೂಚ್ಯಂಕ (ಐಕ್ಯು-Intelligence Quotient) ಭಾವ ಸೂಚ್ಯಂಕ (ಇಕ್ಯು-Emotional Quotient) ಇಚ್ಛಾಶಕ್ತಿ ಸೂಚ್ಯಂಕ (ವಿಕ್ಯುVolition Quotient) ಜ್ಞಾನ/ತಿಳಿವಳಿಕೆ ಸೂಚ್ಯಂಕ (ಕೆಕ್ಯು/ಜಿಕೆಕ್ಯು-Knowledge Quotient/GK Quotient), ಸಮಕಾಲೀನತೆ ಸೂಚ್ಯಂಕ (ಸಿಕ್ಯು-Contemporary Quotient) ಆಧ್ಯಾತ್ಮ ಸೂಚ್ಯಂಕ (ಎಸ್‌ಕ್ಯು-Spiritual Quotient) ಗಳ ಜೊತೆ ಇತ್ತೀಚೆಗೆ ಉದ್ಯೋಗಾರ್ಹತೆಯ ಸೂಚ್ಯಂಕ (ಇಕ್ಯು- Employability Quotient) ಮೊದಲಾದವು ಸೂಕ್ತ ಅಭ್ಯರ್ಥಿಯ ಹುಡುಕಾಟದಲ್ಲಿ ಬಳಕೆಯಾಗುತ್ತಿದೆ. ಮನಸ್ಸಿಟ್ಟು ಅಧ್ಯಯನದಲ್ಲಿ ತೊಡಗಿ, ಅಗತ್ಯ ಕೌಶಲಗಳನ್ನು ಈ ಯುವಜನತೆ ಬೆಳೆಸಿಕೊಳ್ಳಬೇಕು.

ಉದ್ಯೋಗಾರ್ಹತೆಯ 25 ಕೌಶಲಗಳು
1. ಮೌಖಿಕ ಸಂವಹನ ಕೌಶಲಗಳು
2. ಬರಹದ ಸಂವಹನ ಕೌಶಲಗಳು
3. ಪ್ರಾಮಾಣಿಕತೆ
4. ಟೀಂವರ್ಕ್/ಕೆಲಸಗಾರರೊಂದಿಗೆ ಹೊಂದಿಕೊಂಡು ಕೆಲಸಮಾಡುವ ಸಾಮರ್ಥ್ಯ
5. ಸ್ವಯಂ ಪ್ರೇರಣೆಯಿಂದ ಹೊಣೆಗಾರಿಕೆ ವಹಿಸಿಕೊಳ್ಳಲು ಮುಂದಾಗುವ ಸಾಮರ್ಥ್ಯ
6. ಜವಾಬ್ದಾರಿಯುತ ನಡವಳಿಕೆ /ವೃತ್ತಿಧರ್ಮ ಪಾಲನೆಯ ಸಾಮರ್ಥ್ಯ
7. ಸೃಜನಾತ್ಮಕವಾಗಿ /ವಸ್ತುನಿಷ್ಠವಾಗಿ ಆಲೋಚಿಸುವ ಸಾಮರ್ಥ್ಯ
8. ಸವಾಲನ್ನು ಎದುರಿಸುವ ಸಾಮರ್ಥ್ಯ
9. ಹೊಂದಾಣಿಕೆಯ ಮನೋಭಾವ/ಸಾಮರ್ಥ್ಯ
10. ನಾಯಕತ್ವದ ಗುಣಗಳು
11. ಇಂಟರ್‌ಪರ‌್ಸನಲ್ ಸ್ಕಿಲ್ಸ್
12. ಒತ್ತಡದ ಸನ್ನಿವೇಶದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯ
13. ಪ್ರಶ್ನೆ ಮಾಡುವ ಸಾಮರ್ಥ್ಯ
14. ಸೃಜನಶೀಲತೆ
15. ಪ್ರಭಾವ ಬೀರುವ ಸಾಮರ್ಥ್ಯ
16. ಸಂಶೋಧನಾ ಕೌಶಲಗಳು
17. ಸಾಮಾನ್ಯ ಜ್ಞಾನ ಮತ್ತು ಔದ್ಯೋಗಿಕ ರಂಗದ ಮಾಹಿತಿ
18. ಸಮಸ್ಯಾ ನಿರ್ವಹಣ ಸಾಮರ್ಥ್ಯ
19. ಬಹುಸಂಸ್ಕೃತಿಯ ಕೌಶಲಗಳು
20. ಕಂಪ್ಯೂಟರ್ ಪರಿಣತಿ / ತಾಂತ್ರಿಕ ಪರಿಣತಿ
21. ಶೈಕ್ಷಣಿಕ / ಕಲಿಕಾ ಸಾಮರ್ಥ್ಯ
22. ವಿವರವಾಗಿ ಅರಿಯುವ ಸಾಮರ್ಥ್ಯ
23. ಕ್ವಾಂಟಿಟೇಟಿವ್ ಸಾಮರ್ಥ್ಯ
24. ಬೋಧನೆ / ತರಬೇತಿ ನೀಡುವ ಸಾಮರ್ಥ್ಯ
25. ಸಮಯ ನಿರ್ವಹಣಾ ಸಾಮರ್ಥ್ಯ.
Competitive Examination Preparation - Article in Vijaykarnataka 26 Nov 2012

08 Kinder Katha Books for Children (Senior) - Introduction by Bedre Manjunath in Vishwavani 26.02.2023

    08 Kinder Katha Books for Children (Senior) - Introduction by Bedre Manjunath in Vishwavani 26.02.2023 - Thank you Editors, Shashidhara...