Sunday 20 December, 2015

Manorama Year Book 2016




Manorama Year Book 2016
by Mammen Mathew (Author), Malayala Manorama

“From the Publisher: 2016 Manorama English Yearbook, in 1040 pages, is the largest-selling General Knowledge Compendium (update) in the country, is used by students, teachers, researchers, media persons, planners, and lay-people alike. It is the most sought-after book for youngsters preparing for various competitive exams ranging from Civil services, Banks, Railways, UPSC and PSC exams and Quiz Competition across the country. It also serves reference purpose covering varied topics besides Science and Medicine, Environment, Literature, Entertainment, History, 1000 Quiz and Sports, policies of government, census reports, election results, economic indicators, art forms, etc. It also features more than 20 articles by people of eminence such as former President APJ Abdul Kalam, Nobel Peace Prize winner Kailash Satyarthi, Philip Min, Dr Valson Thampu and many others. Manorama Yearbook also offers free Concise Britannica Encyclopedia, a set of 4 ebooks, Learner's Dictionary on CD and free online subscription to Britannica Online."
http://www.amazon.in/Manorama-Yearbook-2016-Mammen-Mathew/dp/9383197900?tag=googinhydr18418-21&tag=googinkenshoo-21&ascsubtag=4858d174-83a5-454c-a5f3-346706b2d790

Wednesday 14 October, 2015

Olympiad for Teachers 2015 - Article in Vijayavani Masth Section 14 Oct 2015

ಶಿಕ್ಷಕರಿಗಾಗಿ ಒಲಿ೦ಪಿಯಾಡ್ - Bedre Manjunath
ಭಾರತದ ಏಳು ನಗರಗಳಲ್ಲಿ ಡಿಸೆ೦ಬರ್ 5ರ೦ದು ಇದೇ ಮೊದಲಬಾರಿಗೆ ಶಿಕ್ಷಕರಿಗಾಗಿ ಒಲಿ೦ಪಿಯಾಡ್ (CENTA Teaching Professionala olympiad - TPO 2015) ನಡೆಯಲಿದೆ. ಬೆ೦ಗಳೂರು, ಅಹಮದಾಬಾದ್, ಚೆನ್ನೆ„, ದೆಹಲಿ, ಹ್ಯೆದರಾಬಾದ್, ಕೋಲ್ಕತ ಮತ್ತು ಮು೦ಬ್ಯೆ ನಗರಗಳ ಆಯ್ದ ಶಾಲೆಗಳಲ್ಲಿ ಇದು ನಡೆಯಲಿದೆ. ಪರೀಕ್ಷೆ, ಪ್ರಾತ್ಯಕ್ಷಿಕೆ ಮತ್ತು ಸ್ಪಧೆ೯ಯಲ್ಲಿ ಪ್ರಶಿಕ್ಷಣಾಥಿ೯ಗಳು, ಹೊಸದಾಗಿ ಸೇವೆಗೆ ಸೇರಿದವರು, ನುರಿತ, ಹಿರಿಯ ಶಿಕ್ಷಕರು ಭಾಗವಹಿಸಬಹುದು. ಪ್ರಾಥಮಿಕ (ಎಲ್ಲ ವಿಷಯಗಳು), ಮಾಧ್ಯಮಿಕ (ಇ೦ಗ್ಲಿಷ್, ಗಣಿತ, ವಿಜ್ಞಾನ) ಮತ್ತು ಪ್ರೌಢಶಾಲೆ (ಇ೦ಗ್ಲಿಷ್, ಗಣಿತ, ಭೌತಶಾಸOಉ, ರಸಾಯನಶಾಸOಉ, ಜೀವಶಾಸOಉ) ಈ ಮೂರು ವಿಭಾಗಳಲ್ಲಿ ಬೋಧನಾ ವೈಶಿಷ್ಟé ಪ್ರದಶ೯ನ ಸ್ಪಧೆ೯ ನಡೆಯಲಿದೆ. ಮೊದಲ ರ್ಯಾ೦ಕ್ ಗಳಿಸಿದವರಿಗೆ 1 ಲಕ್ಷ ರೂಪಾಯಿ, ಎರಡು ಮತ್ತು ಮೂರನೇ ರ್ಯಾ೦ಕ್ ಗಳಿಸಿದವರಿಗೆ 50 ಸಾವಿರ ರೂ., ನಾಲ್ಕರಿ೦ದ ಹತ್ತನೇ ರ್ಯಾ೦ಕ್‍ನವರಿಗೆ 10 ಸಾವಿರ, 11ರಿ೦ದ 30ನೇ ರ್ಯಾ೦ಕ್‍ವರೆಗೆ 5 ಸಾವಿರ ನಗದು ನೀಡಲಾಗುವುದು.
   ಮೊದಲ ಎರಡು ಸ್ಥಾನ ಗಳಿಸಿದವರಿಗೆ ದುಬ್ಯೆನಲ್ಲಿ ನಡೆಯಲಿರುವ ಅ೦ತಾರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸುವ ಅವಕಾಶವಿದೆ. ಮೊದಲ 50 ಸ್ಥಾನ ವಿಜೇತರಿಗೆ ವಿಶೇಷ ಪುರಸ್ಕಾರ, ವಿದ್ಯುನ್ಮಾನ ಬೋಧನಾ ಉಪಕರಣಗಳು, ವೃತ್ತಪತ್ರಿಕೆಯ ಉಚಿತ ಸದಸ್ಯತ್ವ, ಮತ್ತಿತರ ವಿಶೇಷ ಬಹುಮಾನಗಳು ಸಿಗಲಿವೆ.
ಹೊಸ ಸ೦ಚಲನದ ಉದ್ದೇಶ
 ಸೆ೦ಟರ್ ಫಾ ರ್ ಟೀಚರ್ ಅಕ್ರೆಡಿಷನ್ (CENTA) ಸ೦ಸ್ಥೆಯು ವಿವಿಧ ಕಾಪೋ೯ರೇಟ್ ಸ೦ಸ್ಥೆಗಳ ಸಹಯೋಗದೊ೦ದಿಗೆ ಏಪ೯ಡಿಸಿರುವ ಒಲಿ೦ಪಿಯಾಡ್, ಶಿಕ್ಷಣ ಕ್ಷೇತ್ರದಲ್ಲಿ ಹೊಸ ಸ೦ಚಲನ ಮೂಡಿಸುವ ಉದ್ದೇಶ ಹೊ೦ದಿದೆ. ಕ್ಷೇತ್ರವನ್ನು ಅಗಾಧವಾಗಿ ಪ್ರೀತಿಸುವ ಶಿಕ್ಷಕರನ್ನಷ್ಟೇ ಅಲ್ಲದೆ ಆಸಕ್ತ ಯುವ ಶಿಕ್ಷಕರನ್ನೂ ಹುರಿದು೦ಬಿಸುವ ಸಲುವಾಗಿ ಸ್ಪಧೆ೯ ಏಪ೯ಡಿಸಲಾಗಿದ್ದು, ಬಹುಮಾನಗಳ ಜತೆ ವಿಶೇಷ ಗುಣಮಟ್ಟದ ಮಾನಕ ಪ್ರಮಾಣಪತ್ರ ಪಡೆಯುವ ಅವಕಾಶವನ್ನು ಕಲ್ಪಿಸಿದೆ. ಇದಕ್ಕಾಗಿ ಸ೦ಸ್ಥೆಯ ವೆ ಬ್‍ಸೈಟ್‍ನಲ್ಲಿ ಸುದೀಘ೯ ವಿವರಗಳನ್ನು ನೀಡಲಾಗಿದ್ದು, ಸೆ೦ಟಾದ ಗುಣಮಟ್ಟ ಸೂಚ್ಯ೦ಕ ಪತ್ರವೂ ಇಲ್ಲಿದೆ.
ಯಾವ್ಯಾವುದಕ್ಕೆ ಎಷ್ಟು ಅ೦ಕ?
 ಎರಡು ಗ೦ಟೆ ಅವ˜ಯ, ಬಹು ಆಯ್ಕೆ ಮಾದರಿಯ ಆಯ್ದ ವಿಷಯವಾರು ಪತ್ರಿಕೆಯಲ್ಲಿ ಒಟ್ಟು ಮೂರು ವಿಭಾಗಗಳನ್ನು ಮಾಡಲಾಗಿದೆ. ಬೋಧನಾ ವಿಷಯಕ್ಕೆ ಸ೦ಬ೦˜ಸಿದ ಜ್ಞಾನ ಪರೀಕ್ಷೆಗೆ 16 ಪ್ರಶ್ನೆಗಳಿದ್ದು, 25ಅ೦ಕಗಳನ್ನು ನಿಗದಿಮಾಡಲಾಗಿದೆ. ಸ೦ವಹನ ಹಾಗೂ ತಾಕಿ೯ಕ ಕೌಶಲಕ್ಕೆ 25ಅ೦ಕಗಳ 16 ಪ್ರಶ್ನೆಗಳಿರುತ್ತವೆ. ತರಗತಿಯನ್ನು ಆಸಕ್ತದಾಯಕವಾಗಿ, ಉಲ್ಲಸಿತವಾಗಿ ಇಟ್ಟುಕೊಳ್ಳುವ ಮತ್ತು ಪರಿಣಾಮಕಾರಿಯಾಗಿ ಬೋಧನೆ ಮಾಡುವ ಶಿಕ್ಷಣಕ್ಕೆ 32 ಪ್ರಶ್ನೆಗಳು ಮೀಸಲಾಗಿದ್ದು, 50 ಅ೦ಕಗಳಿರುತ್ತವೆ. ಒಟ್ಟು 64 ಪ್ರಶ್ನೆಗಳು, 100 ಅ೦ಕಗಳಿರುತ್ತವೆ. ಭಾಗವಹಿಸುವವರು ಅಜಿ೯ಯಲ್ಲಿ ವೈಯಕ್ತಿಕ ವಿವರ, ಶಿಕ್ಷಕರಾಗಿ ಸೇವೆ ಸಲ್ಲಿಸಿದ ವಿವರ, ಸ್ಪಧೆ೯ಗಾಗಿ ಆಯ್ಕೆ ಮಾಡಿಕೊಳ್ಳುವ ನಗರ ಮತ್ತು ವಿಷಯಗಳನ್ನು ಸ್ಪಷ್ಟವಾಗಿ ನಮೂದಿಸಿ ಆನ್‍ಲ್ಯೆನ್ ಮೂಲಕ ಸಲ್ಲಿಸಬೇಕು. ಅಕ್ಟೋಬರ್ 25 ಅಜಿ೯ ಸಲ್ಲಿಕೆಗೆ ಕೊನೇ ದಿನ.
  ಶಿಕ್ಷಣ ಕ್ಷೇತ್ರದ ಗುಣಮಟ್ಟವನ್ನು ಹೆಚ್ಚಿಸಲು ಯುಜಿಸಿಯ ನ್ಯಾಕ್ ಮಾನದ೦ಡದ೦ತೆ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಗುಣಮಟ್ಟ ಹೆಚ್ಚಿಸಲು ಸೆ೦ಟಾದ ಪ್ರತ್ಯೇಕ ಮಾನದ೦ಡ ಸಿದ್ಧಗೊ೦ಡಿದೆ. ಅದರ ಅನ್ವಯ ಶಾಲೆಯಲ್ಲಿ ಮೂಲ ಸೌಕಯ೯ಗಳ ಜತೆ ಉತ್ತಮ ಮಟ್ಟದ ಶಿಕ್ಷಣವನ್ನು ಕೊಡಲು ಪ್ರಯತ್ನಿಸುವ, ಕಲಿಕೆಯಲ್ಲಿ ವಿನೂತನ ಕ್ರಮವನ್ನು ಅಳವಡಿಸುವ ಶಿಕ್ಷಕರನ್ನು ಪ್ರೊೀತ್ಸಾಹಿಸಲು ಈ ಒಲಿ೦ಪಿಯಾಡ್ ನಡೆಸಲಾಗುತ್ತಿದೆ.
ಹೆಚ್ಚಿನ ವಿವರಗಳಿಗೆ ಈ ವೆ ಬ್‍ಸೈಟ್‍ಗಳನ್ನು ಭೇಟಿ ಮಾಡಿ · WWW.tpo-india.org

Monday 21 September, 2015

Wheel Cart for Paralysed Animals- Article by Bedre Manjunath - 26 Aug 2015 Vijayavani Daily - Masth Section

ಪಾರ್ಶ್ವವಾಯು ಪೀಡಿತ ಸಾಕುಪ್ರಾಣಿಗಳಿಗೆ ವರದಾನ 
Wheel Cart for Paralysed Animals
ಬೇದ್ರೆ ಮಂಜುನಾಥ - 26 Aug 2015 Vijayavani Daily - Masth Section
 
ಹಿಂದಿನ ಎರಡೂ ಕಾಲುಗಳು ಸ್ವಾಧಿನ ಇಲ್ಲದ ಬೀದಿ ನಾಯಿಯೊಂದನ್ನು ಪಶುವೈದ್ಯಕೀಯ ಕಾಲೇಜಿನ ಗೇಟಿನ ಬಳಿ ಯಾರೋ ಬಿಟ್ಟುಹೋಗಿದ್ದರು. ಗಾಯಗೊಂಡು ತೆವಳುತ್ತಿದ್ದ ಮರಿಯನ್ನು ನಿತಿನ್ ಮತ್ತು ಸ್ನೇಹಿತರು ಕಾಲೇಜಿಗೆ ಒಯ್ದು, ಚಿಕಿತ್ಸೆ ನೀಡಿದರು. ಫಿಜಿಯೋಥೆರಪಿ, ಔಷಧೋಪಚಾರಗಳಿಂದ ಗುಣಕಾಣದೆ ಇದ್ದಾಗ ಅದರ ತೆವಳುವಿಕೆಯನ್ನು ತಪ್ಪಿಸಲು ಆಟದ ಸಾಮಾನುಗಳ ಗಾಲಿಗಳನ್ನು ಬಳಸಿ ಪುಟ್ಟ ಟ್ರಾಲಿಯನ್ನು ರೂಪಿಸಿದರು. ಇದೇ ಹೊಸ ಸಂಶೋಧನೆಗೆ ನಾಂದಿಯಾಯಿತು.
ಪ್ರಾಣಿಗಳಿಗೆ ಅಪಘಾತವಾದ ಸಂದರ್ಭದಲ್ಲಿ ಅಥವಾ ನರದೌರ್ಬಲ್ಯದಿಂದ ಕಾಣಿಸಿಕೊಳ್ಳುವ ಪಾರ್ಶ್ವವಾಯುವಿನಿಂದಾಗಿ ಕಾಲುಗಳನ್ನು ಅಲುಗಾಡಿಸಲೂ ಸಾಧ್ಯವಾಗದು. ಅಂತಹ ಪ್ರಾಣಿಗಳನ್ನು ಸಾಮಾನ್ಯವಾಗಿ ದೂರ ಅಟ್ಟುವುದು, ತಮ್ಮಷ್ಟಕ್ಕೇ ನರಳಿ ಸಾಯಲು ಬಿಡುವುದು ಇಲ್ಲವೇ ವೈದ್ಯರ ಸಹಾಯದಿಂದ ದಯಾಮರಣ ದಯಪಾಲಿಸುವುದು ನಡೆಯುತ್ತಲೇ ಇದೆ.
ಸಾಕುಪ್ರಾಣಿಗಳ ವಿಷಯದಲ್ಲಿ ಅಲ್ಪ ಸ್ವಲ್ಪ ಔಷಧೋಪಚಾರ ನಡೆದರೂ ಬಹಳ ಕಾಲ ಸಹಿಸಿಕೊಳ್ಳುವವರು ವಿರಳ. ಬೀಡಾಡಿ ನಾಯಿ, ದನಕರುಗಳು ಯಾವ ಚಿಕಿತ್ಸೆಯ ಸೌಲಭ್ಯವೂ ದೊರೆಯದೆ ನರಳುತ್ತಲೇ ಕೊನೆಯುಸಿರೆಳೆಯುತ್ತವೆ. ಪ್ರಾಣಿದಯಾ ಸಂಘದವರ ಕಣ್ಣಿಗೆ ಬಿದ್ದ ಪ್ರಾಣಿಗಳ ಸ್ಥಿತಿ ಸ್ವಲ್ಪ ಆಶಾದಾಯಕ ಎನ್ನಬಹುದು. ಇಂತಹ ಪ್ರಾಣಿಗಳಿಗೆ ಸಹಜವಾದ ಜೀವನ ನಡೆಸಲು ಅನುವಾಗುವಂತೆ ನೆರವು ನೀಡುವ ಹಲವು ವೈದ್ಯ-ಉಪಕರಣಗಳು ಆವಿಷ್ಕಾರಗೊಳ್ಳುತ್ತಲೇ ಇವೆ.
ಅವುಗಳ ಲಾಭ ನೂರಾರು ಪ್ರಾಣಿಗಳಿಗೆ ತಲುಪುತ್ತಲೂ ಇವೆ. ಇಂತಹ ಒಂದು ಅಪರೂಪದ ಗಾಲಿ ಉಪಕರಣ ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಪ್ರಥಮ ಬಹುಮಾನಕ್ಕೆ ಪಾತ್ರವಾಗಿದೆ.
ಕಡಿಮೆ ವೆಚ್ಚದಲ್ಲಿ ಎಲ್ಲರೂ ನಿರ್ಮಿಸಬಹುದಾದ ಸರಳ ಉಪಕರಣವೆಂದು ಅಂತಾರಾಷ್ಟ್ರೀಯಮಟ್ಟದ ಪಶುವೈದ್ಯ ತಜ್ಞರಿಂದ ಪ್ರಶಂಸಿಸಲ್ಪಟ್ಟಿದೆ. ಹಾಸನದ ಪಶುವೈದ್ಯಕೀಯ ಕಾಲೇಜಿನ ಅಂತಿಮ ಪಶುವೈದ್ಯ ಪದವಿ ವಿದ್ಯಾರ್ಥಿ ಕೆ. ನಿತಿನ್ ಈ ಸಾಧನೆ ಮಾಡಿದ್ದಾರೆ.
ಡಾ. (ಮೇಜರ್) ಸುಧೀಶ್ ನಾಯರ್, ಡಾ. ಎನ್. ನಾಗರಾಜ್ ಹಾಗೂ ಡಾ. ಡಿ.ಆರ್. ಮಂಜುನಾಥ ಅವರ ತಜ್ಞ ಮಾರ್ಗದರ್ಶನದಲ್ಲಿ ರೂಪಿಸಿದ ಗಾಲಿ ಉಪಕರಣ, ಪಾರ್ಶ್ವವಾಯು ಪೀಡಿದ ಸಾಕುಪ್ರಾಣಿಗಳಿಗೆ ಮತ್ತು ಜಾನುವಾರುಗಳಿಗೆ ವರದಾನವಾಗಲಿದೆ.
ಗಾಲಿ ಬಂಡಿ ರೂಪಿತವಾಗಿದ್ದು ಹೇಗೆ?
ಹಿಂದಿನ ಎರಡೂ ಕಾಲುಗಳು ಸ್ವಾಧಿನ ಇಲ್ಲದ ಬೀದಿ ನಾಯಿಯೊಂದನ್ನು ಪಶುವೈದ್ಯಕೀಯ ಕಾಲೇಜಿನ ಗೇಟಿನ ಬಳಿ ಯಾರೋ ಬಿಟ್ಟುಹೋಗಿದ್ದರು. ಗಾಯಗೊಂಡು ತೆವಳುತ್ತಿದ್ದ ಮರಿಯನ್ನು ನಿತಿನ್ ಮತ್ತು ಸ್ನೇಹಿತರು ಕಾಲೇಜಿಗೆ ಒಯ್ದು, ಚಿಕಿತ್ಸೆ ನೀಡಿದರು.
ವಾರಸುದಾರರು ಯಾರೂ ಇಲ್ಲದ್ದರಿಂದ ವೆಟಿಕೊ ನಿತಿನ್ ತಮ್ಮ ಮನೆಗೇ ಅದನ್ನು ಕರೆದೊಯ್ದು ಸಾಕಿದರು. ಫಿಜಿಯೋಥೆರಪಿ, ಔಷಧೋಪಚಾರಗಳಿಂದ ಗುಣಕಾಣದೆ ಇದ್ದಾಗ ಅದರ ತೆವಳುವಿಕೆಯನ್ನು ತಪ್ಪಿಸಲು ಆಟದ ಸಾಮಾನುಗಳ ಗಾಲಿಗಳನ್ನು ಬಳಸಿ ಪುಟ್ಟ ಟ್ರಾಲಿಯನ್ನು ರೂಪಿಸಿದರು.
ಬೆಲ್ಟ್ ಸಹಾಯದಿಂದ ಬಂಡಿಯನ್ನು ನಾಯಿಯ ಹಿಂದಿನ ಕಾಲುಗಳಿಗೆ ಬಿಗಿದು ನೆಟ್ಟಗೆ ನಿಲ್ಲಿಸಿದರು. ಮುಂದಿನ ಕಾಲುಗಳಿಂದ ನಡೆಯಲು ಪ್ರಯತ್ನಿಸಿದಂತೆಲ್ಲ ಹಿಂದಿನ ಕಾಲುಗಳು ಗಾಲಿ ಬಂಡಿಯ ಸಹಾಯದಿಂದ ತೊಂದರೆ ಇಲ್ಲದಂತೆ ಸ್ವತಂತ್ರವಾಗಿ ಓಡಾಡಲು ಸಾಧ್ಯವಾಯಿತು.
ಗಾಲಿ ಬಂಡಿಯ ಎತ್ತರ, ತೂಕ, ಉದ್ದ, ಅಗಲಗಳನ್ನು ನಾಯಿಯ ಹಿಂಭಾಗಕ್ಕೆ ಗಾಯವಾಗದ ರೀತಿ ಮತ್ತೆ ಮತ್ತೆ ಪುನರ್‌ರೂಪಿಸಿ, ತಜ್ಞ ವೈದ್ಯರ ಮಾರ್ಗದರ್ಶನದಲ್ಲಿ ಸುಧಾರಣೆ ಮಾಡಿ, ಕೊನೆಗೆ ಅದರ ಯಶಸ್ವೀ ಮಾದರಿಯನ್ನು ಕಾಲೇಜಿನಲ್ಲಿ ಪ್ರದರ್ಶಿಸಲಾಯಿತು. ಅದನ್ನೇ ಅಂತಾರಾಷ್ಟ್ರೀಯ ಪಶುವೈದ್ಯಕೀಯ ಸಮಾವೇಶದಲ್ಲಿ ಪ್ರದರ್ಶಿಸಿ, ಪ್ರಾತ್ಯಕ್ಷಿಕೆ ನೀಡಿದಾಗ ದೊರೆತದ್ದು ಅಭಿನಂದನೆಗಳ ಸುರಿಮಳೆ.
ಗಾಲಿ ಬಂಡಿಗೆ ಪ್ರಥಮ ಬಹುಮಾನ
ಸಾಕುಪ್ರಾಣಿಗಳು, ಮುದ್ದಿನ ಪ್ರಾಣಿ-ಪಕ್ಷಿಗಳು ಮತ್ತು ಜಾನುವಾರುಗಳ ಆರೋಗ್ಯಕ್ಕೆ ಸಂಬಂಧಿಸಿದ 7ನೇ ಅಂತಾರಾಷ್ಟ್ರೀಯ ಸಮಾವೇಶ ಇದೇ ಆಗಸ್ಟ್ 13 ಮತ್ತು 14ರಂದು ತಮಿಳುನಾಡಿನ ನಾಮಕ್ಕಲ್‌ನಲ್ಲಿ ಏರ್ಪಾಡಾಗಿತ್ತು. ತಮಿಳುನಾಡು ಪಶುವೈದ್ಯಕೀಯ ಮತ್ತು ಪಶು ವಿಜ್ಞಾನಗಳ ವಿಶ್ವವಿದ್ಯಾಲಯ (ತನುವಾಸ್), ಔಷಧ ತಯಾರಿಕಾ ಸಂಸ್ಥೆಗಳಾದ ಇಂಟಸ್ ಮತ್ತು ಮಾರ್ಸ್ ಇಂಟರ್‌ನ್ಯಾಷನಲ್ ಸಂಸ್ಥೆಗಳ ಸಹಯೋಗದಲ್ಲಿ ನಾಮಕ್ಕಲ್‌ನ ಪಶುವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಆವರಣದಲ್ಲಿ ಏರ್ಪಡಿಸಿದ್ದ 7th International Clinical Case on Farm and Companion Animal Practice for Veternery Students ಸಮಾವೇಶದಲ್ಲಿ ಭಾರತದ ವಿವಿಧ ರಾಜ್ಯಗಳಿಂದ ಮತ್ತು ಅಕ್ಕಪಕ್ಕದ ದೇಶಗಳಿಂದ ಆಗಮಿಸಿದ್ದ ಪಶುವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಿಗೆ ತಾವು ಹೊಸದಾಗಿ ರೂಪಿಸಿದ ಪ್ರಾಜೆಕ್ಟ್‌ಗಳನ್ನು ಪವರ್ ಪಾಯಿಂಟ್ ಮೂಲಕ ಪ್ರದರ್ಶಿಸಿ, ವಿವರಿಸಿ, ಬಹುಮಾನ ಗಳಿಸಿಕೊಳ್ಳುವ ಅಪರೂಪದ ಅವಕಾಶವಿತ್ತು. ಸುಮಾರು 400 ಪ್ರಾಜೆಕ್ಟ್‌ಗಳು ಸಲ್ಲಿಸಲ್ಪಟ್ಟಿದ್ದವು.
ಸಾಕುಪ್ರಾಣಿ, ಮುದ್ದಿನ ಪ್ರಾಣಿ, ಜಾನುವಾರು, ವನ್ಯಜೀವಿ ಮೊದಲಾದ ವಿಭಾಗಗಳಲ್ಲಿ ಚಿಕಿತ್ಸೆ, ಶಸಚಿಕಿತ್ಸೆ, ಶಸಚಿಕಿತ್ಸಾ ನಂತರದ ನಿರ್ವಹಣೆ, ಔಷಧೋಪಚಾರಕ್ಕೆ ಪೂರಕವಾದ ಉಪಕರಣಗಳ ಬಳಕೆ, ಹೀಗೆ ವಿವಿಧ ವಿಷಯಗಳ 294 ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸಲು ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಕರ್ನಾಟಕದ ಪರವಾಗಿ ಭಾಗವಹಿಸಿದ್ದ ಹಾಸನದ ಪಶುವೈದ್ಯಕೀಯ ಕಾಲೇಜಿನ ಒಂಭತ್ತು ಪ್ರಾಜೆಕ್ಟ್‌ಗಳಲ್ಲಿ ಕೆ. ನಿತಿನ್ ರೂಪಿಸಿದ ಪಾರ್ಶ್ವವಾಯುಪೀಡಿತ ನಾಯಿಗಳ ನಿರ್ವಹಣೆಯ ಗಾಲಿಬಂಡಿಗೆ ಪ್ರಥಮ ಬಹುಮಾನ ಹಾಗೂ ಜಿ. ಅರ್ಚನಾ ಪ್ರದರ್ಶಿಸಿದ ರೋಗನಿದಾನ ವಿಧಾನಕ್ಕೆ ಮೂರನೇ ಬಹುಮಾನ ದೊರೆತಿದೆ. ಉಳಿದ ವಿದ್ಯಾರ್ಥಿಗಳು ಸಲ್ಲಿಸಿದ ಇತರೆ ಪ್ರಾಜೆಕ್ಟ್‌ಗಳೂ ಪ್ರಶಂಸೆಗೆ ಪಾತ್ರವಾದವು.
ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಪ್ರಥಮ ಬಹುಮಾನ ಗಳಿಸಿರುವ ಕೆ. ನಿತಿನ್‌ರ ಸಂಪರ್ಕ ಸಂಖ್ಯೆ: 9448424020. 



Wheel Cart for Paralysed Animals by Nithin of Hassan Veterinary College - Vijayavani Daily 26.08.2015

08 Kinder Katha Books for Children (Senior) - Introduction by Bedre Manjunath in Vishwavani 26.02.2023

    08 Kinder Katha Books for Children (Senior) - Introduction by Bedre Manjunath in Vishwavani 26.02.2023 - Thank you Editors, Shashidhara...